13 ಏಪ್ರಿಲ್ 2021

ಯುಗಾದಿ ಹಬ್ಬದ ಶುಭಾಶಯಗಳು


 


ಕಳೆದು ಹೋಗಿರುವ 
ಶಾರ್ವರಿ ನಾಮ ಸಂವತ್ಸರದಿ
ಬೇವಿಗಿಂತ ಬೆಲ್ಲವನೇ
ಹೆಚ್ಚು ನೀಡಿ ಕೊರೋನದೊಂದಿಗೆ
ಬಾಧಿಸಿತು ಎಲ್ಲರ |
ಬರುವ ನೀನಾದರೂ 
ಸಕಲರಿಗೆ ನೆಮ್ಮದಿಯ ಕರುಣಿಸು
ಓ  ಪ್ಲವನಾಮಸಂವತ್ಸರ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

10 ಏಪ್ರಿಲ್ 2021

ಲಸಿಕೆ.


 



*ಲಸಿಕೆ*


ಆಧಾರವಿಲ್ಲದ ವದಂತಿಗಳನ್ನು

ನಂಬಿ ಮುಂಜಾಗ್ರತಾ ಕ್ರಮಕ್ಕೆ

ಏಕೆ ಹಿಂಜರಿಕೆ|

ನಮ್ಮ ಜೀವ ಮತ್ತು

ಜೀವನವನ್ನು ಉಳಿಸಿಕೊಳ್ಳಲು

ಇಂದೇ ಹಾಕಿಸಿಕೊಳ್ಳೋಣ

ಕೊರೋನ ಲಸಿಕೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮಾದರಿ ಮಾನವ .ಹನಿ


 


*ಮಾದರಿ ಮಾನವ*


ನಾವೂ ಮಾದರಿ

ಮಾನವನಾಗಬೇಕಾದರೆ

ಯಜಮಾನನಾಗಿದ್ದರೂ 

ಇರಬೇಕು

ಕ್ಷಮಾಗುಣ|

ಬಡವನಾಗಿದ್ದರೂ

ಇರಬೇಕು

ದಾನಗುಣ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ