*ಜೀವನ*
ಯಾರಿಗೂ ಸಾದ್ಯವಿಲ್ಲ
ಜೀವನ ನಡೆಸಲು
ಬರೆದಿಟ್ಟಂತೆ|
ಸನ್ಮಾರ್ಗದಿ ನಡೆದು
ಸಾಧಿಸಿದರೆ ಜೀವಿಸಬಹುದು
ಬರೆದಿಡುವಂತೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಜೀವನ*
ಯಾರಿಗೂ ಸಾದ್ಯವಿಲ್ಲ
ಜೀವನ ನಡೆಸಲು
ಬರೆದಿಟ್ಟಂತೆ|
ಸನ್ಮಾರ್ಗದಿ ನಡೆದು
ಸಾಧಿಸಿದರೆ ಜೀವಿಸಬಹುದು
ಬರೆದಿಡುವಂತೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ವಿಜ್ಞಾನವೇ ಬದಲಾವಣೆಗೆ ಕಾರಣ
ಜ್ಞಾನ ಅದರ ಬೇರು
ಎಂಬುದನ್ನು ನೆನಪಿನಲ್ಲಿಡೋಣ
ವಿಜ್ಞಾನವನ್ನು ಸದುಪಯೋಗ
ಪಡಿಸಿಕೊಳ್ಳೋಣ
ಅಜ್ಞಾನವನ್ನು ತೊಲಗಿಸೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಓ ಗಿಳಿರಾಮ*
ಓ ಗಿಳಿರಾಮ ....
ಎಲ್ಲಿರುವನು ನನ್ನ ರಾಮ
ತಿಳಿಸಿಬಿಡು ಸಲ್ಲಿಸುವೆ
ನಿನಗೆ ನನ್ನ ಪ್ರಣಾಮ .
ದಿನಪ ಬರುವ ಮೊದಲೇ
ದಿನವೂ ಬಂದು
ಕದ್ದು ನೋಡುತ್ತಿದ್ದ, ಈಗೀಗ
ಅವನ ಸುದ್ದಿಯಿಲ್ಲ ನೀನೇ ಹೇಳು
ನಲ್ಲನಿಲ್ಲದೆ ಹೇಗಿರಲಿ?
ಮಣಿ ಸರವ ನೀಡಿ
ಹಣೆಗೊಂದು ಮುತ್ತನಿತ್ತು
ಸ್ವರ್ಗಕ್ಕೆ ಕರೆದೊಯ್ದಿದ್ದನು
ಕಣಿ ಹೇಳು ನನಗಿಂದು
ಅವನೆಂದು ಬರುವನು ?
ಅಕ್ಕರೆಯ ಮಾತನಾಡಿ
ಸಕ್ಕರೆಯ ಸವಿ ನೀಡಿ
ಪ್ರೇಮ ಲೋಕ ಸೃಷ್ಟಿಸಿದ್ದ ನನಗಾಗಿ
ಸಿಕ್ಕರೆ ನನ್ನ ಮಾರನಿಗೇಳು
ಕಾಯುತಿಹಳು ನಿನ್ನರಸಿ ನಿನಗಾಗಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ನ್ಯಾನೊ ಕಥೆ*
*ಗುರುದಕ್ಷಿಣೆ*
"ನಾನು ಆರ್ಥಿಕವಾಗಿ ಸಮಸ್ಯೆಯಲ್ಲಿರುವೆ ಅಂತ ತಿಳಿದು ನನಗೆ ಈ ಸಹಾಯ ಮಾಡಲು ಬರಬೇಡಿ , ನಿಮ್ಮ ಅಭಿಮಾನ ಸಾಕು ,ಇದೆಲ್ಲಾ ಬೇಡ ಇಂತಹ ದುಬಾರಿ ಉಡುಗೊರೆ ಬೇಡ, ದಯವಿಟ್ಟು ಹೊರಡಿ "ಎಂದು ತಮ್ಮ ದಪ್ಪನೆಯ ಕನ್ನಡಕವನ್ನು ಸರಿಪಡಿಸಿಕೊಂಡು ಕೋಲನಿಡಿದು ಎದ್ದು ಹೊರಗೆ ಹೋಗಲು ಸಿದ್ದರಾದರು." ತಿಪ್ಪೇಸ್ವಾಮಿ ಗಳು " ಗುರುಗಳೆ ನೀವು ಕಲಿಸಿದ ವಿದ್ಯೆಯಿಂದ ನಾವೆಲ್ಲರೂ ಇಂದು ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದೇವೆ , ದಯವಿಟ್ಟು ನಮ್ಮ ಉಡುಗೊರೆ ಸ್ವೀಕರಿಸುಲೇ ಬೇಕು ಇದನ್ನು ಗುರುದಕ್ಷಿಣೆ ಎಂದು ಸ್ವೀಕರಿಸಿ " ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದಾಗ ,ಅವರ ಬಲವಂತಕ್ಕೆ ಕಾರಿನಲ್ಲಿ ಕುಳಿತು, ಒಂದು ಹೊಸ ಮನೆಯ ಮುಂದೆ ನಿಂತರು .ಎಲ್ಲಾ ಶಿಷ್ಯರು ಗುರುಗಳ ಕೈಗೆ ಮನೆಯ ಬೀಗದ ಕೀಯನ್ನು ನೀಡಿದರು.
ಹೊಸ ಮನೆಯ ಬಾಗಿಲ ತೆರೆದ ಗುರುಗಳ ಕಣ್ಣಿನಿಂದ, ಹೊಸಿಲ ಮೇಲೆ ನಾಲ್ಕು ಹನಿಗಳು ಉದುರಿದವು....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು