10 ಫೆಬ್ರವರಿ 2021

ವಿಧಿ

 ನಿಯಮ

ಯಮ

ಕ್ರೂರಿ

ನಿಶ್ಚಿತ

ಅನಿಶ್ಚಿತ

ಶಿಕ್ಷಕ

ಆಟಗಾರ

ಮಾಟಗಾರ

ಊಹಿಸಲಾರದ್ದು

ತಪ್ಪಿಸಲಾರದ್ದು


ಅದುವೇ....


ವಿಧಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಅಪ್ಪ .ಅಮ್ಮ

 ನಾಗಪ್ಪನ

ಕಾರಣದಿಂದ

ರೆಕ್ಕೆ ಬಲಿಯುವ

ಮೊದಲೆ " ಗೋವಿಂದ"

ನ ಪಾದ ಸೇರಿದ 



ಅಪ್ಪ



ಅಪ್ಪನಿಲ್ಲದ

ಕೊರಗ ನೀಗಿ

"ಶ್ರೀದೇವಿ" ಯಂತೆ

ಸಾಕಿ ಸಲಹಿದಳು


ಅಮ್ಮ 



*ಸಿಹಿಜೀವಿ*

ಗೋವಿಂದಪ್ಪ ಶ್ರೀದೇವಮ್ಮನ ತನಯ 

ಸಿ ಜಿ ವೆಂಕಟೇಶ್ವರ


09 ಫೆಬ್ರವರಿ 2021

ಎಚ್ಚರವಿರಲಿ ಹನಿ

 *ಸಿಹಿಜೀವಿಯ ಹನಿ*


*ಎಚ್ಚರವಿರಲಿ!*


ಏನೆಂದರೆ ಅದನ್ನು ತೆರೆಯದಿರಿ

ಎಲ್ಲೆಂದರಲ್ಲಿ ಒತ್ತದಿರಿ 

ಕಳ್ಳಗಣ್ಣುಗಳಿವೆ,ಕಳ್ಳಗಿವಿಗಳಿವೆ

ನಿಮ್ಮ ಮಾನ ಹರಾಜಾಗಬಹುದು

ನಿಮ್ಮ ಹಣ ಸಂಪತ್ತು

ಮಂಗಮಾಯವಾಗಬಹುದು.

ಎಲ್ಲೆಲ್ಲೂ ಹರಡಿದೆ 

ಮೋಸದ ಜಾಲ |

ಮೈಮರೆತರೆ ವರವಾಗಿರುವುದೇ

ಶಾಪವಾಗುವುದು

ಎಚ್ಚರವಿರಲಿ! ಇದು

ಅಂತರ್ಜಾಲ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

(ಇಂದು ವಿಶ್ವ ಅಂತರ್ಜಾಲ ಸುರಕ್ಷತಾ ದಿನ)

04 ಫೆಬ್ರವರಿ 2021

ನನ್ನ ಬಂಧು .ಹನಿ

 *ನನ್ನ ಬಂಧು*


ಅಸಹಾಯಕತೆಯಿಂದ ನಿಂತಿದ್ದೆ

ಕೈಹಿಡಿದು ಮುನ್ನೆಡೆಸಿದ

ಸಾಂತ್ವನ ನೀಡಿ ಹೋದ

ಧೈರ್ಯವಾಗಿರೆಂದು ಹೇಳಿದ

ಸರಳತೆಯ ಮೈಗೂಡಿಸಿದ

ಆಡಂಬರವ ತೊರೆ ಎಂದ 

ದಿಟ್ಟತನವನು ಕಲಿಸಿದ 


ಅವನೇ ನನ್ನ ಬಂಧು ಮುಕುಂದ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 ಫೆಬ್ರವರಿ 2021

ಸ್ವಚ್ಚ ಮನೆ . ಸ್ವಚ್ಚ ನಗರ ? ಕವನ


 *ಸ್ವಚ್ಛ ಮನೆ ಸ್ವಚ್ಛ ನಗರ?*


(ಇಂದೋರ್ ನಲ್ಲಿ ವೃದ್ದರನ್ನು ಲಾರಿ ಯಲ್ಲಿ ತುಂಬಿಕೊಂಡು ಪಶುಗಳಂತೆ ರಸ್ತೆಯಲ್ಲಿ ಬಿಸಾಡಿ ಬಂದ ಘಟನೆ ನೋಡಿ ಮನ ನೊಂದು ಬರೆದ ಕವನ)


ಹೌದು ನಮ್ಮದು

ಸ್ವಚ್ಛ ನಗರ, ಸ್ವಚ್ಛ ಮನೆ,

ಇದು ನಮಗೆ ಹೆಮ್ಮೆಯ ವಿಷಯ.


ನಮ್ಮ ಮನೆಯಲ್ಲಿ 

ನಾನು ನಮ್ಮವರು ಮಾತ್ರ

ನಮ್ಮ ಜನ್ಮದಾತರನ್ನು 

ಮಹಾನಗರ ಮಾಲಿಕೆಗೆ

ಒಪ್ಪಿಸಿ ನಮ್ಮ ಮನೆಯನ್ನು

ಸ್ವಚ್ಛ ಮಾಡಿಕೊಂಡಿರುವೆವು.


ಅವರೂ ಅಷ್ಟೇ ನಗರದಲ್ಲಿ

ಸೌಂದರ್ಯವನ್ನು ಕಾಪಾಡಿಕೊಳ್ಳಲು

ವಯಸ್ಸಾದವರನ್ನೆಲ್ಲಾ ಒಂದು ಕಸದ

ಲಾರಿ ಯಲ್ಲಿ ತುಂಬಿಕೊಂಡು

ನಗರದ ಹೊರವಲಯದ ರಸ್ತೆಗೆ 

ಎಸೆದು ಬಂದಿದ್ದಾರೆ.


ಮುಂದಿನ ವಾರ ನಮ್ಮ 

ಮನೆಗೆ ನಮ್ಮ ನಗರಕ್ಕೆ ರಾಷ್ಟ್ರದ ಮಟ್ಟದ

ಸ್ವಚ್ಛ ಮನೆ ಸ್ವಚ್ಛ ನಗರ ಬಹುಮಾನ

ಕೊಡುವರಂತೆ ನಾವೂ 

ಸಜ್ಜಾಗಿದ್ದೇವೆ ಇನ್ನೂ ಸ್ವಚ್ಛವಾಗಲೂ

ಮಾನವೀಯತೆ ,ಮೌಲ್ಯಗಳ ತೊರೆದು.


ನಮ್ಮ ಮಕ್ಕಳು ,ನಮ್ಮನ್ನು 

ಗಮನಿಸುತ್ತಿದ್ದಾರೆ 

ಅಂತರರಾಷ್ಟ್ರೀಯ ಮಟ್ಟದ ಸ್ವಚ್ಛತಾ ಬಹುಮಾನ ಪಡೆಯಲು.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ