*ಹೇಳುವರಾರು?*
ಈ ದರ್ಮದವರ ಕಂಡರೆ
ಅವರಿಗಾಗದು
ಆ ಧರ್ಮದವರ ಕಂಡರೆ ಇವರಿಗೆ
ಕಣ್ಣು ಕೆಂಪು|
ಇವರಿಗೆ ಬಿಡಿಸಿ ಹೇಳುವರಾರು
ಎಲ್ಲರ ರಕ್ತವೂ ಕೆಂಪು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಹೇಳುವರಾರು?*
ಈ ದರ್ಮದವರ ಕಂಡರೆ
ಅವರಿಗಾಗದು
ಆ ಧರ್ಮದವರ ಕಂಡರೆ ಇವರಿಗೆ
ಕಣ್ಣು ಕೆಂಪು|
ಇವರಿಗೆ ಬಿಡಿಸಿ ಹೇಳುವರಾರು
ಎಲ್ಲರ ರಕ್ತವೂ ಕೆಂಪು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸೈನಿಕ*
ಬಿಸಿಲು, ಮಳೆ
ಚಳಿಯೆನ್ನದೇ
ನಮ್ಮ ರಕ್ಷಣೆ
ಮಾಡುತಿಹನು
ಸೈನಿಕ |
ಗೌರವ ಸಲ್ಲಿಸೋಣ
ನಾವೆಲ್ಲ ಅವನಿಗೆ
ಬಗ್ಗಿಸಿ ನಮ್ಮ
ಮಸ್ತಕ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಸಿಹಿಜೀವಿಯ ಹನಿ
ಕಾಡು ಹರಟೆಯಲಿ
ಕಾಲಹರಣ ಮಾಡುತ
ಪೋಲಾಗುತಲಿದೆ
ಯುವಕರ ಅನಂತ ಶಕ್ತಿಯ ಅಮೂಲ್ಯವಾದ ದಿನಗಳು|
ಇಂತಹ ಮೂಢ
ಮತಿಗಳಿಗೆ
ಆದರ್ಶವಾಗಲಿ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು