17 ಜನವರಿ 2021

ಹೇಳುವರಾರು? .ಹನಿ

 

*ಹೇಳುವರಾರು?*

ಈ ದರ್ಮದವರ ಕಂಡರೆ
ಅವರಿಗಾಗದು
ಆ ಧರ್ಮದವರ ಕಂಡರೆ ಇವರಿಗೆ
ಕಣ್ಣು ಕೆಂಪು|
ಇವರಿಗೆ ಬಿಡಿಸಿ ಹೇಳುವರಾರು
ಎಲ್ಲರ ರಕ್ತವೂ ಕೆಂಪು||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

16 ಜನವರಿ 2021

ಸೈನಿಕ

 *ಸೈನಿಕ*


ಬಿಸಿಲು, ಮಳೆ 

ಚಳಿಯೆನ್ನದೇ 

ನಮ್ಮ ರಕ್ಷಣೆ

ಮಾಡುತಿಹನು

ಸೈನಿಕ |

ಗೌರವ ಸಲ್ಲಿಸೋಣ

ನಾವೆಲ್ಲ ಅವನಿಗೆ

ಬಗ್ಗಿಸಿ ನಮ್ಮ

ಮಸ್ತಕ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

12 ಜನವರಿ 2021

ಸ್ವಾಮಿ ವಿವೇಕಾನಂದ . ಹನಿ


 *ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ*



ಸಿಹಿಜೀವಿಯ ಹನಿ



ಕಾಡು ಹರಟೆಯಲಿ 

ಕಾಲಹರಣ ಮಾಡುತ

ಪೋಲಾಗುತಲಿದೆ

ಯುವಕರ ಅನಂತ ಶಕ್ತಿಯ ಅಮೂಲ್ಯವಾದ ದಿನಗಳು|

ಇಂತಹ ಮೂಢ 

ಮತಿಗಳಿಗೆ 

ಆದರ್ಶವಾಗಲಿ  ಸ್ವಾಮಿ ‌ವಿವೇಕಾನಂದರ  ಉದಾತ್ತ ಚಿಂತನೆಗಳು||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು