*ಸುಸಂಸ್ಕಾರ*
ಸಂಪೂರ್ಣ ಜಗವನ್ನೇ
ಗೆಲ್ಲಬಹುದು
ನಮ್ಮಲ್ಲಿ ಇದ್ದರೆ
ಸುಸಂಸ್ಕಾರ|
ಗೆದ್ದ ಸರ್ವವನ್ನು
ಕಳೆದುಕೊಳ್ಳುವೆವು
ಸುಳಿದರೆ ಸ್ವಲ್ಪ
ಅಹಂಕಾರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸುಸಂಸ್ಕಾರ*
ಸಂಪೂರ್ಣ ಜಗವನ್ನೇ
ಗೆಲ್ಲಬಹುದು
ನಮ್ಮಲ್ಲಿ ಇದ್ದರೆ
ಸುಸಂಸ್ಕಾರ|
ಗೆದ್ದ ಸರ್ವವನ್ನು
ಕಳೆದುಕೊಳ್ಳುವೆವು
ಸುಳಿದರೆ ಸ್ವಲ್ಪ
ಅಹಂಕಾರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕುರ್ಚಿಗಳು _ ಭಾವನೆಗಳು
ಮದುವೆಯ ಸಂಭ್ರಮದಿ
ಮಸಣ ಯಾತ್ರೆಯ ನೋವಿನಲಿ
ದೇವರ ಜಾತ್ರೆಯ ಭಕ್ತಿಯಲಿ
ಅವೇ ಶಾಮಿಯಾನ ಕುರ್ಚಿಗಳು|
ಸಮಯ ಸನ್ನಿವೇಶದಲ್ಲಿ
ನಮಗೆ ಅರಿವಿಲ್ಲದೆ
ಬೇರೆಯಾಗುವವು ಭಾವನೆಗಳು||
೧
*ಮಣ್ಣಿಗೆ*
ನಮ್ಮೆಲ್ಲರ ಪಯಣ
ಮಣ್ಣಿನಿಂದ ಮಣ್ಣಿಗೆ
ಮರಳಿ ಮಣ್ಣಿಗೆ|
ಅದನ್ನರಿತೂ ನಾವು
ಹಪಹಪಿಸುತಿಹೆವು
ಹೆಣ್ಣು, ಹೊನ್ನು ಮಣ್ಣಿಗೆ||
೨
*ಪರಿಣಾಮ*
ಕಲುಷಿತ ಮಾಡುತಿಹೆವು
ನಮ್ಮ ಪವಿತ್ರ ಮಣ್ಣನ್ನು|
ಸಂರಕ್ಷಣೆ ಮಾಡದಿದ್ದರೆ
ತಿನ್ನಬೇಕಾದೀತು ಮಣ್ಣನ್ನು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
https://quizzory.com/id/5fd0d987c66cf808ee739bea
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ
ಆಂಗ್ಲ ಮಾಧ್ಯಮದಲ್ಲಿ ( English medium) 10 ಪ್ರಶ್ನೆಗಳ ರಸಪ್ರಶ್ನೆ. ರಾಜ್ಯದ ಯಾವುದೇ ಶಾಲೆಯ ಯಾವುದೇ ತರಗತಿಯ ವಿದ್ಯಾರ್ಥಿಗಳು ಉತ್ತರಿಸಬಹುದು. ವಿದ್ಯಾರ್ಥಿಗಳು ಪೂರ್ಣ ಹೆಸರು, ಶಾಲೆಯ ಹೆಸರು, ವರ್ಗ ಕಡ್ಡಾಯವಾಗಿ ನಮೂದಿಸಬೇಕು. ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ share ಮಾಡಿ 🙏.
ರಚನೆ: ಸಿ ಜಿ ವೆಂಕಟೇಶ್ವರ
ಸಹಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ
ತುಮಕೂರು .
ಬಂದು_ ಬಂದ್
ಮಾತುಕತೆ ಮೂಲಕ
ಬಗೆಹರಿಸುವುದ ಬಿಟ್ಟು
ಮಾತೆತ್ತಿದರೆ ಕೆಲವರು
ಬಡಬಡಿಸುವರು
ಬಂದು, ಬಂದು |
ದಿನಗೂಲಿ ಕೆಲಸಗಾರರ,
ಸಣ್ಣವ್ಯಾಪಾರಿಗಳ
ಕಷ್ಟ ಕೋಟಲೆಗಳ
ನೀವು ಒಮ್ಮೆ
ನೋಡಬಾರದೆ ಬಂದು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು