This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
26 ಜುಲೈ 2020
ನಡೆದಾಡುವ ದೇವರು
ಸಿದ್ದರ ನಾಡಲಿ ಸಿದ್ದಿಯ
ಮಾರ್ಗವ ತೋರಿದ ದೇವ
ಗಂಗೆಯಂತೆ ನಮ್ಮ ಮಲಿನವ
ತೊಳೆದು ಮರೆಸಿದಿರಿ ನೋವ.
ಬಡವರ ಪಾಲಿಗೆ ಬದುಕುವ
ದಾರಿಯನು ತೋರಿದಿರಿ
ನರನ ಸೇವೆಯೇ ನಾರಾಯಣ
ಸೇವೆಯೆಂಬ ನೀತಿಯ ಸಾರಿದಿರಿ .
ನಡೆಯ ತಪ್ಪಿದವರಿಗೆ ಬುದ್ದಿ
ಕಲಿಸಿದ ನಡೆದಾಡುವ ದೇವರು
ಸಿದ್ದಗಂಗೆಯಾಯಿತು ಇಂದು
ಜ್ಞಾನ ಅನ್ನ ,ವಿದ್ಯೆಯ ತವರು .
ಮಾನವ ರೂಪದಿ ಬಂದ
ಧರೆಗವತರುಸಿದ ಶಿವಪ್ಪನೇ ನೀವು
ಸಕಲರ ಮನದಲಿ ಎಂದಿಗೂ
ಇರುವಿರಿ ಮರೆಯುವುದಿಲ್ಲ ನಾವು .
*ಸಿ ಜಿ ವೆಂಕಟೇಶ್ವರ*
*ತುಮಕೂರು*
೯೯೦೦೯೨೫೫೨೯
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




