27 ಜುಲೈ 2020

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಹನಿಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಹನಿಗಳು

ಸಿಹಿಜೀವಿಯ ಹನಿ( ಮುಗೀತಾ?)


*ಮುಗೀತಾ?*

ನಾನು ತನ್ಮಯದಿಂದ
ಹಾಡಲು ಶುರುಮಾಡಿದೆ
ಸಂಗೀತ |
ಹಾಡಿ ಮುಗಿಸಿದಾಗ
ನಮ್ಮ ಮನೆಯವರು
ನಿಧಾನವಾಗಿ ಕಿವಿಯಿಂದ
ಹತ್ತಿಯ ತೆಗೆದು ಕೇಳಿದಳು
ಮುಗೀತಾ? ||

*ಸಿ ಜಿ ವೆಂಕಟೇಶ್ವರ*

26 ಜುಲೈ 2020

ನಡೆದಾಡುವ ದೇವರು


*ನಡೆದಾಡುವ ದೇವರು* 

ಸಿದ್ದರ ನಾಡಲಿ ಸಿದ್ದಿಯ
ಮಾರ್ಗವ ತೋರಿದ ದೇವ
ಗಂಗೆಯಂತೆ ನಮ್ಮ ಮಲಿನವ
ತೊಳೆದು ಮರೆಸಿದಿರಿ ನೋವ.

ಬಡವರ ಪಾಲಿಗೆ ಬದುಕುವ
ದಾರಿಯನು ತೋರಿದಿರಿ
ನರನ ಸೇವೆಯೇ ನಾರಾಯಣ
ಸೇವೆಯೆಂಬ ನೀತಿಯ ಸಾರಿದಿರಿ .

ನಡೆಯ ತಪ್ಪಿದವರಿಗೆ ಬುದ್ದಿ
ಕಲಿಸಿದ ನಡೆದಾಡುವ ದೇವರು
ಸಿದ್ದಗಂಗೆಯಾಯಿತು ಇಂದು
ಜ್ಞಾನ  ಅನ್ನ ,ವಿದ್ಯೆಯ ತವರು .

ಮಾನವ ರೂಪದಿ ಬಂದ
ಧರೆಗವತರುಸಿದ ಶಿವಪ್ಪನೇ ನೀವು
ಸಕಲರ ಮನದಲಿ ಎಂದಿಗೂ
ಇರುವಿರಿ ಮರೆಯುವುದಿಲ್ಲ ನಾವು .

*ಸಿ ಜಿ ವೆಂಕಟೇಶ್ವರ*
*ತುಮಕೂರು*
೯೯೦೦೯೨೫೫೨೯

ಸಿಹಿಜೀವಿಯ ಹಾಯ್ಕುಗಳು


*ಸಿಹಿಜೀವಿಯ ಹಾಯ್ಕುಗಳು*
(ಕಾರ್ಗಿಲ್ ವಿಜಯ ದಿನದ ನೆನಪಿಗಾಗಿ ಧೀರ ಯೋಧರಿಗೆ ಅರ್ಪಣೆ)
೮೨
ನಮ್ಮುಸಿರಿಗೆ
ತಮ್ಮುಸಿರನಿತ್ತರು
ಸಿಪಾಯಿಗಳು.
೮೩
ವೀರ ಯೋಧರು
ಜಯವ ತಂದಿತ್ತರು
ಕಾರ್ಗಿಲ್ ದಿನ
೮೪
ಯೋಧರ ಶಕ್ತಿ
ವಿಜಯದ ದಿವಸ
ಮಾತೆಗೆ ಜಯ .
೮೫
ಯೋಧರ ಬಲ
ಪಾಕಿಗಳಿಗೆ ಸೋಲು
ಜಯಭಾರತ .
*ಸಿ ಜಿ ವೆಂಕಟೇಶ್ವರ*