30 ಮೇ 2020

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗವನ

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗವನ

ರವಿಚಂದ್ರನ್ ಹುಟ್ಟು ಹಬ್ಬಕ್ಕೆ ಹಾಯ್ಕುಗಳು

*ಕ್ರೇಜಿ ಸ್ಟಾರ್ ಗೆ ಹಾಯ್ಕುಗಳ ಶುಭಾಶಯಗಳು*



ಪ್ರೇಮಲೋಕದ
ಹಠವಾದಿ ನಾಯಕ
ಕನಸುಗಾರ




ರವಿ ಚಂದಿರ
ಒಂದೆಡೆಯೆ ಇದ್ದರೆ
ರವಿಚಂದ್ರನ್



ಚಿತ್ರಗಳಲ್ಲಿ
ಹಂಸ ರವಿ ಮಿಲನ
ಸಂಗೀತೋತ್ಸವ


*ಸಿ‌ ಜಿ ವೆಂಕಟೇಶ್ವರ*
*ತುಮಕೂರು*

29 ಮೇ 2020

ಅಂಬಿ ಹುಟ್ಟು ಹಬ್ಬಕ್ಕೆ ಹಾಯ್ಕುಗಳು


#ಕಲಿಯುಗ_ಕರ್ಣನ
ಹುಟ್ಟು ಹಬ್ಬಕ್ಕೆ
#ಸಿಹಿಜೀವಿಯ_ಹಾಯ್ಕುಗಳು
ಚಿತ್ರ ಕೃಪೆ: ಎಸ್ ತಿಪ್ಪೇಸ್ವಾಮಿ ಅಣ್ಣ
೧೪
ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.
೧೫.
ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .
೧೬
ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.
೧೭
ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.
೧೮
ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?
ಸಿ‌ ಜಿ ವೆಂಕಟೇಶ್ವರ
ತುಮಕೂರು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಕವನ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಕವನ 

27 ಮೇ 2020

ರಕ್ಷಕರು ( ಕವನ)


*ರಕ್ಷಕರು*


ರಕ್ಷಕರು ನಾವು
ಆರಕ್ಷಕರು ನಾವು||

ಕಣ್ಣಿಗೆ ಕಾಣುವ ಕಳ್ಳರ
ದುರುಳರ ಹಿಡಿಯುವೆವು
ಕಣ್ಣಿಗೆ ಕಾಣದ ಅಣುಗಳ
ಮಣಿಸಲು ಹೋರಾಡುವೆವು||

ಹಗಲಿರುಳೆನ್ನದೆ ಜನಗಳ
ಸೇವೆಗೆ ಸಿದ್ದರು ನಾವು
ಕಾನೂನು ಸುವ್ಯವಸ್ಥೆ
ಕಾಪಾಡಲು ಬದ್ದರು ನಾವು||

ವೈರಾಣು ಮಣಿಸಲು
ಮನೆಯನು ತೊರೆದಿಹೆವು
ನಮ್ಮನೆ ಹೊಸ್ತಿಲಿ ನಿಂತು
ಹೆಂಡತಿ ಮಕ್ಕಳ ನೋಡುವೆವು.||

ತ್ಯಾಗವ ಮಾಡಿರುವೆವು ನಮ್ಮ
ಸುಖವ ನಿಮ್ಮೊಳಿತಿಗೆ
ಕೈ ಜೋಡಿಸಿ ನಮ್ಮೊಂದಿಗೆ
ನೀವು ಸಕಲರ  ಒಳಿತಿಗೆ.||

*ಸಿ ಜಿ ವೆಂಕಟೇಶ್ವರ*