31 ಮಾರ್ಚ್ 2020

ಪ್ರಜಾಪ್ರಗತಿ ಕರೋನ ರಜೆಯಲ್ಲಿSSLC ಪೋಷಕರ ಪಾತ್ರ

ಕರೋನ ರಜೆಯಲ್ಲಿSSLC ಪೋಷಕರ ಪಾತ್ರ

ವಿಜಯ ಕರ್ನಾಟಕ ( ಯುಗಾದಿ ಸಂಭ್ರಮ)


ವಿಶ್ವ ವಾಣಿ (ಕರೋನ ಕಳವಳ ಪೋಷಕರ ಪಾತ್ರ)


ಶಾಂತಿ (ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ನ್ಯಾನೋ ಕಥೆ ಎಂಬ ಪುರಸ್ಕಾರ ಪಡೆದ ಕಥೆ


*ಶಾಂತಿ*

(ನ್ಯಾನೋ ಕಥೆ)

"ಮಗ ಎಂ. ಬಿ .ಬಿ.ಎಸ್. ಮುಗಿಸಿ ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾನೆ ನನ್ನ ಇಚ್ಚೆಯಂತೆ ಎಂ ಡಿ ಸೀಟ್ ಸಿಗುವುದೋ ಇಲ್ಲವೋ ಎಂಬ ಚಿಂತೆ, ಬೇಸರ, ಮಗಳು ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಹೋಗುತಿಹಳು,ಅವಳಿಗೆ ನನ್ನಿಚ್ಚೆಯ ವರ ಸಿಗುವನೆ? ಎಂಬ‌  ಚಿಂತೆ.ಹದಿನೈದು ಕೋಟಿ ಆಸ್ತಿಯಿದ್ದರೂ ಮನಸ್ಸಿಗೆ ಶಾಂತಿಯಿಲ್ಲ ನೆಮ್ಮದಿಯಿಲ್ಲ ಮನಃಶಾಂತಿ ಪಡೆಯುವುದು ಹೇಗೆ? ಪರಿಹಾರ ಸೂಚಿಸಿ ಸ್ವಾಮಿ."
ಮುಗುಳ್ನಕ್ಕು ಸ್ವಾಮೀಜಿಯವರು ಹೇಳಿದರು.
"ಭಕ್ತ, ನಿನಗೆ ಶಾಂತಿಯಿಂದ ಇರಬೇಕೆಂದು
ಇಚ್ಛೆ ಇದೆಯೇ? ಹಾಗಾದರೆ ನಿನ್ನ ಇಚ್ಛೆಗಳನ್ನು
ಶಾಂತಗೊಳಿಸು".

*ಸಿ ಜಿ ವೆಂಕಟೇಶ್ವರ*
*ತುಮಕೂರು*

30 ಮಾರ್ಚ್ 2020

ವಿಮರ್ಶೆ


ಲಾಕ್ ಡೌನ್ ನ ಸದುಪಯೋಗ

ಕರೋನ ಪ್ರಯುಕ್ತ ಲಾಕ್ ಡೌನ್‌‌ ಇರುವ ಈ ಸಂಧರ್ಭದಲ್ಲಿ ನಾನು ನನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನನಗೆ ವರವಾಗಿದೆ ಎಂದು ಭಾವಿಸಿರುವೆ.
ಈ ಮೊದಲು ತಂದಿಟ್ಟು ಓದಲಾಗದ ಪುಸ್ತಕಗಳನ್ನು ಓದಲು ಆರಂಬಿಸಿ "ಸ್ವಾಮಿಜಗದಾತ್ಮಾನಂದಜಿ" ಅವರ ಬರೆದ "ಬದುಕಲು ಕಲಿಯಿರಿ" ಪುಸ್ತಕ ಓದಿ ಮುಗಿಸಿ ಈಗ  ರಿಚರ್ಡ್ ಕಾರ್ಲಸನ್ ಬರೆದಿರುವ "ಎಷ್ಟೊಂದು ಸೊಗಸು ಈ ಬದುಕು ಎಂಬ ಪುಸ್ತಕ ಓದುತ್ತಿದ್ದೇನೆ".ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು , ಜೊತೆಗೆ  ಕವಿಯೂ ಆಗಿದ್ದು ಹಾಗೂ ಹವ್ಯಾಸಿ  ಬ್ಲಾಗರ್ ಆಗಿರುವುದರಿಂದ ನನ್ನ ಬ್ಲಾಗ್ ನಲ್ಲಿ  ಕವನ, ನ್ಯಾನೋ ಕಥೆ,ಶೈಕ್ಷಣಿಕ ಲೇಖನ, ಗಜ಼ಲ್, ಶಿಶುಗೀತೆ,ಹನಿಗವನ,ಮುಂತಾದ ಸಾಹಿತ್ಯದ ರಚನೆ ಮಾಡಲು ನನಗೆ ಈ ಕಾಲ ಬಹಳ ಅನುಕೂಲವಾಯಿತು.ಲಾಕ್ ಡೌನ್ ನ ಈವರೆಗಿನ ಐದು ದಿನದಲ್ಲಿ ದಿನಕ್ಕೆ ಸರಾಸರಿ ಎರಡು ಸಾಹಿತ್ಯದ ರಚನೆ ಮಾಡಿರುವುದು, ಮತ್ತು ಇದಕ್ಕೆ ಪ್ರಪಂಚಾದ್ಯಂತ ಇರುವ ಓದುಗರು ಓದಿ ಆಸ್ವಾದಿಸಿ ಮೆಚ್ಚುಗೆ ಸೂಚಿಸಿರುವುದು  ಬಹಳ ಸಂತಸ ನೀಡಿದೆ.ನೀವು ಲಾಕ್ ಡೌನ್ ಸಮಯದಲ್ಲಿ ನನ್ನ ಬ್ಲಾಗ್ ಗೆ ಭೇಟಿ ನೀಡಿ ನನ್ನ ಬರಹಗಳನ್ನು ಓದಬಹುದು.
ಬ್ಲಾಗ್ ವಿಳಾಸ sridevitanya.blogspot. com
ವಂದನೆಗಳೊಂದಿಗೆ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529