09 ಮಾರ್ಚ್ 2020

ಇಂದಿನ *ವಿಜಯವಾಣಿ ಪ್ರಜಾವಾಣಿ, ನನ್ನ ಲೇಖನ



ಇಂದಿನ *ವಿಜಯವಾಣಿ * ಪತ್ರಿಕೆಯಲ್ಲಿ ನನ್ನ ಲೇಖನ

ಇಂದಿನ ಪ್ರಜಾವಾಣಿ,* ಪತ್ರಿಕೆಯಲ್ಲಿ ನನ್ನ ಲೇಖನ



ಇಂದಿನ ಪ್ರಜಾವಾಣಿ,  ಪತ್ರಿಕೆಯಲ್ಲಿ ನನ್ನ ಲೇಖನ

ಇಂದಿನ ವಿಜಯ ಕರ್ನಾಟಕ* ಪತ್ರಿಕೆಯಲ್ಲಿ ನನ್ನ ಲೇಖನ


ಇಂದಿನ  ವಿಜಯ ಕರ್ನಾಟಕ* ಪತ್ರಿಕೆಯಲ್ಲಿ ನನ್ನ ಲೇಖನ

08 ಮಾರ್ಚ್ 2020

ಮಾರುತಿ - ಮೂರುತಿ(ಕವನ)

ಮಾರುತಿ- ಮೂರುತಿ (ಕವನ)

ನಾನು ಕೋತಿ
ನಾನು ಮಾರುತಿ
ಕಡಿಮೆಯೇನಿಲ್ಲ
ನನ್ನ ಕೀರುತಿ
ಪೂಜಿಸುವರು ನನ್ನ
ಮೂರುತಿ.

ಚೇಷ್ಟೆಗೆ ಮಾಡುವೆನು ಆಗಾಗ
ಕೆಡುಕಿಗೆ ನನ್ನಲಿಲ್ಲ ಜಾಗ
ನಾನು ಜಗದ ಅವಿಭಾಜ್ಯ ಭಾಗ
ನಾನಿರಲು ವನವು ಸೊಗ
ನನ್ನ ನೋಡುವುದೇ ನಿಮಗೆ ಸೋಜಿಗ.

ಕಟ್ಟಿಹರು ಊರಿಗೊಂದು
ಸುಂದರ ಗುಡಿ
ನನ್ನ ಕಂಡರೆ
ಕಿರುಚುವರು ಹೊಡಿ ಬಡಿ
ನಾಡು ಬೇಡವೆಂದು
ಕಾಡಿಗೋಡಿದರೆ
ಹಚ್ಚುವಿರಿ ಬೆಂಕಿಯ ಕಿಡಿ
ದಯವಿಟ್ಟು ನನ್ನ ಪಾಡಿಗೆ
ನನ್ನ ಬಿಡಿ.

ಸಿ.ಜಿ ವೆಂಕಟೇಶ್ವರ


ಸಂವಿಧಾನವೇ ಸಾರ್ವಭೌಮ (ಕವನ)





ಸಂವಿಧಾನವೇ ಸಾರ್ವಭೌಮ

ಬದುಕಲು ಬೇಕೊಂದು ಸುವಿಧಾನ
ನಮ್ಮ ಆಡಳಿತಕೆ ಬೇಕು ಸಂವಿಧಾನ
ಪೂರ್ವಪೀಠಿಕೆ ಬಹು ಗುಣಗಳ ಗಣಿ
ಶೋಷಿತರ ಪಾಲಿನ ಪರಶು ಮಣಿ.

ಆಡಳಿತ ನಡೆಸಲು ಮಾರ್ಗದರ್ಶಕ
ಸರ್ವರ ಹಕ್ಕುಗಳ ಮಹಾರಕ್ಷಕ
ಎತ್ತಿಹಿಡಿವುದು ನಮ್ಮ ಕಾಯಕ
ಇದನು ಪಾಲಿಸಿದರೆ ಸಿಗುವುದುನಾಕ.

ಸಮಾನತೆ ಜಾತ್ಯಾತೀತ‌ ತತ್ವವಿದೆ 
ಪ್ರಜಾಪ್ರಭುತ್ವದ ಸತ್ವವಿದೆ
ಸಮಾಜವಾದದ ಪ್ರತಿಪಾದನೆಯಿದೆ
ಸಾರ್ವತ್ರಿಕ ಚುನಾವಣೆಗಳ ಹಬ್ಬವಿದೆ.

ತೊಲಗಲಿ ಜನರಲಿ ತಮ
ಬೇಡ ಎಂದಿಗೂ ತರತಮ
ನಾವೂ ನೀವು ಎಲ್ಲರೂ ಸಮ
ಸಂವಿಧಾನವೇ‌ ಸಾರ್ವಭೌಮ.

*ಸಿ ಜಿ‌ ವೆಂಕಟೇಶ್ವರ*