03 ಮೇ 2019

ಶ್ರೀದೇವಿ ತನಯನ ವಚನಗಳು

*ಶ್ರೀದೇವಿ ತನಯನ ವಚನಗಳು*

*ವಚನ೧*

ನೂರೂರು ಸುತ್ತಿ
ನೂರ್ಕಾಸು ಕಳೆದು
ನದಿಗಳಲಿ ಮಿಂದು
ದೇವ ದೇವತೆಗಳ
ನೋಡುವ ಬದಲು
ನಿನ್ನ ಅಂತರಂಗದ
ರಂಗನ ನೆನೆಯೆಂದ
ಶ್ರೀದೇವಿತನಯ

*ವಚನ೨*

ನಾನು ನನ್ನದು
ನಮ್ಮವರು ಎಂಬ
ಬಂಧನದಿ ಬಿದ್ದು
ನರಳದಿರು ನೀ
ಬನ್ನಪಡುವಾಗ
ಬಂಧುಗಳ ಸದ್ದಿಲ್ಲ
ಕರೆಯದೇ ಬಂದು
ಕಾಪಾಡುವ ನಮ್ಮ
ಹರಿಯಲಿ ಮನಸಿಡು
ಎಂದ ಶ್ರೀದೇವಿತನಯ

*ವಚನ೩*

ವಂಚಕರಿಹರು ಜಗದಲಿ
ಸಂಚುಮಾಡಿ ಮೆರೆವರು
ಕೊಂಚವೂ ವಿಚಲಿತನಾಗಬೇಡ
ಮಿಂಚಿನಂತೆ ಕಾರ್ಯಮಾಡುತ
ಅಂಜದಲೆ  ಮುನ್ನಡೆ
ನಂಜನುಂಡ ಹರ ಕಾಯವನು
ಶ್ರೀದೇವಿತನಯನ ದಯವಿವುದು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ವಚನ (ಗೋವಿಂದ)

*ವಚನ*

ವ್ಯಸನವಾಗಲಿ ಹರಿಯ
ನಾಮಸ್ಮರಣೆ
ಹಸಿವು ನಿದಿರೆಯ ಪರಿವೆಯಿರದೆ
ನೆನಯಬೇಕವನ
ಬಸಿದರೆ ಭಕ್ತಿಯ ಜಲ
ಹಸಿದಿರುವೆಯಾ ಶ್ರೀದೇವಿತನಯ
ಎಂದು ಬರದಿರನು ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಏಪ್ರಿಲ್ 2019

ವಚನ ೧ ( earth day)

           *ವಚನ೧*

ಮರಗಿಡ ಕಡಿದು
ಕಟುಕರಾಗದೆ
ಪರಿಸರ ಉಳಿಸಲು
ಕಟಿಬದ್ದರಾದರೆ
ಧರೆಯೆ ಸ್ವರ್ಗವು
ನೋಡು ಶ್ರೀದೇವಿತನಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
(ಇಂದು ವಿಶ್ವ ಭೂ ದಿನ)



16 ಏಪ್ರಿಲ್ 2019

ಬೆವರು (ಹನಿ)

               *ಬೆವರು*

ಒಂದೇ ದಿನದಲ್ಲಿ ಹೊರಹೊಮ್ಮಲಿಲ್ಲ
ಬಿಲ್ ಗೇಟ್ಸ್, ಟಾಟಾ, ಅಂಬಾನಿಯವರು.
ಎಲ್ಲಾ ಸಿರಿ ಸಂಪತ್ತು ಐಶ್ವರ್ಯದ ತವರು
ನಮ್ಮ ಆತ್ಮವಿಶ್ವಾಸ, ಪ್ರಾಮಾಣಿಕ ಬೆವರು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


07 ಏಪ್ರಿಲ್ 2019

ಆರೋಗ್ಯ (ಹನಿ)

*ಆರೋಗ್ಯ*

ಯುಗಾದಿಗೆ ಬೇಳೆ
ನಂತರದ ದಿನ ಮೂಳೆ
ಏನೇ ತಿನ್ನಿ ನಾಳೆ
ತಿನ್ನಲು ಯೋಗ್ಯವಾಗಿರಲಿ
ಪೌಷ್ಟಿಕ ಆಹಾರವಾಗಿರಲಿ
ನಿಮ್ಮ ಬಾಳು ಆರೋಗ್ಯವಾಗಿರಲಿ

*ಸಿ.ಜಿ.ವೆಂಕಟೇಶ್ವರ*
(ಇಂದು ವಿಶ್ವ ಆರೋಗ್ಯ ದಿನ)