12 ನವೆಂಬರ್ 2018

ಹೊಸ ಜಗವ ಕಟ್ಟೋಣ ( ಕವನ)

*ಹೊಸ ಜಗ ಕಟ್ಟೋಣ*

 ದೀಪದ ಹಬ್ಬದಿ  ಮೆರೆಯುವುದಿಲ್ಲ
ಪರಿಸರ ಕಾಳಜಿ ಮರೆಯುವುದಿಲ್ಲ

ಪಟಾಕಿ ಚಟಾಕಿ ಹೊಡೆಯುವುದಿಲ್ಲ
ಸಿಹಿ ಹಂಚುವುದು ಮರೆಯುವುದಿಲ್ಲ
ಭೂಚಕ್ರಗಳನು ಹಚ್ಚವುದಿಲ್ಲ
ಚಕ್ರಪಾಣಿಯ ಸ್ಮರಣೆ ಮರೆಯುವುದಿಲ್ಲ

ಬಿರುಸು   ಬಾಣಗಳ ಬಳಸುವುದಿಲ್ಲ
ದಿರಿಸು ಧರಿಸಿ ಮಿಂಚುವೆವವು ಎಲ್ಲ
ಆಕಾಶಬುಟ್ಡಿ ಕಟ್ಟಲು ಮರೆಯಲ್ಲ
ಮಾಲಿನ್ಯವನು ನಾವು ಮಾಡುವುದಿಲ್ಲ

ಬೊಗಸೆಯಲಿ ದೀಪದಳ ಬೆಳಗಿಸುವೆವು
ದೀಪದಿಂದಲಿ ದೀಪಗಳ  ಹಚ್ಚುವೆವು
ಕತ್ತೋಲೋಡಿಸಿ ಬೆಳಕು ಮೂಡಿಸುವೆವು
ಹೊಸ ಜಗವ ಕಟ್ಡಲು ಪಣತೊಡುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ನವೆಂಬರ್ 2018

*ವರ ಬರ*

           *ವರ ಬರ*

ವಿಜ್ಞಾನ ತಂತ್ರಜ್ಞಾನ
ಜಾಗತೀಕರಣ ಆಧುನೀಕರಣ
ಮನುಕುಲಕ್ಕೆ ಕೆಲವೊಮ್ಮೆ
ವರವಾಗಿದೆ
ಜೊತೆಗೆ ಪ್ರೀತಿ ವಿಶ್ವಾಸ
ಆಚಾರ,ವಿಚಾರ ಸಂಸ್ಕೃತಿ
ಮಾನವೀಯತೆಯ ಬರ ತಂದಿದೆ 

ಮಹಾಬಲಿ (ಕವನ)

                     *ಮಹಾಬಲಿ*

ಪರಿಸರ ಮಾಲಿನ್ಯ
ದುರಾಸೆಗಿಡಿದ ಕನ್ನಡಿ
ಸುಸ್ಥಿರ ಅಭಿವೃದ್ಧಿಯ ಕಡೆಗಣಿಸಿ
ಅಸ್ಥಿರ ಗೊಳಿಸಿರುವೆವು ಭುವಿಯ
ವ್ಯಗ್ರಗೊಂಡಳು  ಭೂಮಾತೆ

ಅತಿವೃಷ್ಟಿ ಅನಾವೃಷ್ಡಿ  ಬರ
ಉಬ್ಬರ ಜಾಗತಿಕ ತಾಪಮಾನ
ಎಲ್‌ ನೀನೋ  ಲಾ  ನೀನೋ
ಏನೇನೋ
ಚಂಡಿಯಂತಹ ಚಂಡಮಾರುತ
ಜ್ಬಾಲೆಯುಗುಳುವ ಜ್ವಾಲಾಮುಖಿ
ಬಾಯಿತೆಗೆವ ಭೂಕಂಪ
ಪ್ರಕೃತಿ ಕ್ರಮೇಣ ಸಣ್ಣ ಪುಟ್ಟ
ಬಲಿ ಪಡೆದು ಎಚ್ಚರಿಕೆ ನೀಡಿಯಾಯಿತು
ಬುದ್ದಿ ಕಲಿತಿಲ್ಲ ನಾವು
ಮುಂದುವರೆಸಿದ್ದೇವೆ ಅದೇ ದುರ್ವರ್ತನೆ
ಮಹಾಬಲಿ ಗಾಗಿ ಕಾದಿದ್ದಾಳೆ
ಪ್ರಕೃತಿ ಮಾತೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


06 ನವೆಂಬರ್ 2018

ಕನಸ ದೀಪಾವಳಿ ( ಹನಿಗವನ)

              *ಕನಸ ದೀಪಾವಳಿ*

ಒಂದು ದಿನ ಮೊದಲೇ
ಆರಂಭವಾಗಿದೆ ದೀಪಾವಳಿ
ನಮ್ಮ ಗೃಹದಲಿ
ಓದಲು ಹೋದ ನನ್ನ
ಕನಸು ಹಿಂದಿರುಗಿದಳು
ಇಂದು ಮನೆಗೆ
ಆನೆ ಪಟಾಕಿಯಂತೆ ಚಟಪಟ
ಮಾತನಾಡುತ್ತಾ ಬಾಯಲಿ
ನಗುವೆಂಬ ಸುರ್ ಸರ್ ಬತ್ತಿಯ
ಬೆಳಕು ನೀಡುತ  ಮೊಗದಲಿ
ಗಲ್ ಗಲ್ ಎಂದು ಸದ್ದುಮಾಡಿ
ನಡೆದಾಡುತ್ತಿದ್ದಾಳೆ ಮನೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*