24 ಜೂನ್ 2018

ಕಲಿಯುಗ (ಸಂಗ್ರಹ ಲೇಖನ )

🍁☘🍁☘🍁☘🍁☘🍁☘🍁☘🍁☘  *ಕಲಿಯುಗ!*
       ಒಮ್ಮೆ ನಾಲ್ಕು ಜನ ಪಾಂಡವರು ಯುಧಿಷ್ಠಿರನನ್ನು ಹೊರತುಪಡಿಸಿ (ಅವನಾಗ ಅಲ್ಲಿರಲಿಲ್ಲ) ಕೃಷ್ಣನನ್ನು ಪ್ರಶ್ನಿಸಿದರು, " *ಕಲಿಯುಗವೆಂದರೇನು ಮತ್ತು ಕಲಿಯುಗದಲ್ಲಿ ಏನು ಜರುಗುತ್ತದೆ?"*

       ಕೃಷ್ಣನು ಮುಗುಳ್ನಕ್ಕು, "ನಾನು ನಿಮಗೆ ಕಲಿಯುಗದ ಪರಿಸ್ಥಿತಿ ಹೇಗಿರುತ್ತದೆಂದು ತೋರಿಸುತ್ತೇನೆ"  ಎಂದು  ಹೇಳಿದ. ಶ್ರೀ ಕೃಷ್ಣನು ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಾಲ್ಕು ಬಾಣಗಳನ್ನು ನಾಲ್ದೆಸೆಗಳಿಗೆ ಹೊಡೆದು ಆ ನಾಲ್ಕು ಜನ ಪಾಂಡವರಿಗೆ ಆ ಬಾಣಗಳನ್ನು ತೆಗೆದುಕೊಂಡು ಬರಲು ಹೇಳಿದ.
 ಆ ನಾಲ್ವರೂ ಬಾಣಗಳನ್ನು ಹುಡುಕಲು ತಲಾ ಒಂದೊಂದು ದಿಕ್ಕಿಗೆ ತೆರಳಿದರು.

       *ಅರ್ಜುನನು* ತನಗೆ ಸಿಕ್ಕ ಬಾಣವನ್ನು ಕೈಗೆತ್ತಿಕೊಳ್ಳುತ್ತಿದ್ದಾಗ ಅವನಿಗೆ ಒಂದು ಮಧುರವಾದ ಸ್ವರವು ಕೇಳಿಸಿತು. ಅವನು ತಿರುಗಿ ನೋಡಿದಾಗ ಒಂದು ಕೋಗಿಲೆಯು ಸಮ್ಮೋಹನಗೊಳಿಸುವ ಸ್ವರದಲ್ಲಿ ಹಾಡುತ್ತಿತ್ತು. ಅದರೊಂದಿಗೆ ಜೀವಂತವಿದ್ದ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದ ಒಂದು ಮೊಲದ ಮಾಂಸವನ್ನು ಆ ಕೋಗಿಲೆಯು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಅಂತಹ ದಿವ್ಯ ಪಕ್ಷಿಯು ಮಾಡುತ್ತಿದ್ದ *ಹೇಯವಾದ* ಕಾರ್ಯವನ್ನು ನೋಡಿ ಅದನ್ನು ಭರಿಸಲಾಗದೆ *ಅರ್ಜುನನು* ಜಿಗುಪ್ಸೆಗೊಂಡು ಅಲ್ಲಿಂದ ತಕ್ಷಣವೇ ಹೊರಟುಹೋದ.

      *ಭೀಮನು* ಐದು ಬಾವಿಗಳಿರುವಂತಹ ಒಂದು ಸ್ಥಳದಿಂದ ಬಾಣವನ್ನು ಎತ್ತಿಕೊಂಡ. ನಾಲ್ಕು ಬಾವಿಗಳು ಒಂದು ಬಾವಿಯ ಸುತ್ತಲೂ ಇದ್ದವು. ಆ ನಾಲ್ಕೂ ಬಾವಿಗಳು ಸಿಹಿಯಾದ ನೀರಿನಿಂದ ತುಂಬಿ ತುಳುಕುತ್ತಾ ತಮ್ಮಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಉಕ್ಕಿ ಹರಿಯುತ್ತಿದ್ದವು, ಆದರೆ ಆಶ್ಚರ್ಯಕರವಾಗಿ ಮಧ್ಯದಲ್ಲಿರುವ ಬಾವಿಯು ಸಂಪೂರ್ಣವಾಗಿ ಬರಿದಾಗಿತ್ತು. *ಭೀಮನೂ* ಸಹ ಆ ದೃಶ್ಯವನ್ನು ನೋಡಿ *ಸೋಜಿಗಗೊಂಡ* .

      *ನಕುಲನೂ* ಸಹ ತನಗೆ ಸಿಕ್ಕ ಬಾಣವನ್ನು ಎತ್ತಿಕೊಂಡು ಹಿಂದಿರುಗಿ ಬರುತ್ತಿದ್ದ. ಒಂದು ಸ್ಥಳದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡುತ್ತಿದ್ದ ಸ್ಥಳದಲ್ಲಿ ನಿಂತುಕೊಂಡ. ಕರು ಹಾಕಿದ ತಕ್ಷಣ ಆ ಹಸುವು ತನ್ನ ಕಂದನ ಮೈಯನ್ನು ನೆಕ್ಕತೊಡಗಿತು. ಹಾಗೆ ನೆಕ್ಕುವ ಮೂಲಕ ಕರುವಿನ ಶರೀರವು ಸ್ವಚ್ಛಗೊಂಡ ಬಳಿಕವೂ ಹಸುವು ಕರುವನ್ನು ನೆಕ್ಕುವುದನ್ನು ಮುಂದುವರೆಸಿತು. ಅದರಿಂದಾಗಿ ಆ ಕರುವಿನ ಚರ್ಮ ಕಿತ್ತುಹೋಗುವಂತಾಯಿತು, ಆದರೂ ಸಹ ಆ ತಾಯಿ ಹಸು ಕರುವನ್ನು ನೆಕ್ಕುವುದನ್ನು ಬಿಡಲಿಲ್ಲ. ಅದನ್ನು ಗಮನಿಸಿದ ಕೆಲವು ಜನ ಬಹಳ ಕಷ್ಟಪಟ್ಟು ಆ ಹಸು ಕರುಗಳನ್ನು ಬೇರ್ಪಡಿಸಿದರು. *ನಕುಲನಿಗೂ* ಸಹ ಹಸುವಿನಂತಹ ಸಾಧು ಪ್ರಾಣಿಯ ವರ್ತನೆಯು *ಆಶ್ಚರ್ಯವನ್ನುಂಟು* ಮಾಡಿತು.

      *ಸಹದೇವನು* ತನ್ನ ಬಾಣವನ್ನು ಪರ್ವತವೊಂದರ ಹತ್ತಿರದಿಂದ ಎತ್ತಿಕೊಂಡ. ಅಲ್ಲಿ ಮೇಲಿನಿಂದ ಕೆಳಗೆ ಉರುಳುತ್ತಿದ್ದ ಬೃಹತ್ ಬಂಡೆಯೊಂದನ್ನು ನೋಡಿದ. ಉರುಳುತ್ತಿದ್ದ, ಆ ಹೆಬ್ಬಂಡೆಯು ತನ್ನ ಅಡಿಗೆ ಸಿಕ್ಕ ದೊಡ್ಡ ದೊಡ್ಡ ಬಂಡೆಗಳನ್ನು ಸಹ ಪುಡಿಪುಡಿ ಮಾಡುತ್ತಾ, ಬೃಹದಾಕಾರದ ಮರಗಳನ್ನು ನೆಲಕ್ಕೆ ಒರಗುವಂತೆ ಮಾಡುತ್ತಿತ್ತು, ಅಂತಹ ಬಂಡೆಯು ಒಂದು ಚಿಕ್ಕ ಗಿಡವು ಅಡ್ಡ ಬಂದುದರಿಂದ ನಿಂತುಕೊಂಡಿತು. ಸಹಜವಾಗಿಯೇ *ಸಹದೇವನೂ* ಸಹ ಈ ಸೋಜಿಗವನ್ನು ನೋಡಿ *_ಅಚ್ಚರಿಗೊಂಡ_* .

     ಎಲ್ಲ *ಪಾಂಡವರೂ* ತಾವು ಕಂಡ ಸಂಗತಿಗಳ ಕುರಿತು *ಕೃಷ್ಣನಿಗೆ* ಹೇಳಿ ಅವನಿಂದ ವಿವರಣೆಯನ್ನು ಬಯಸಿದರು.  *ಕೃಷ್ಣನು* ನಸುನಕ್ಕು ಅವುಗಳನ್ನು ವಿವರಿಸತೊಡಗಿದ...

      " *ಕಲಿಯುಗ* ದಲ್ಲಿ ಪುರೋಹಿತರು ಬಹಳ ಮಧುರವಾದ ಧ್ವನಿಯನ್ನು ಹೊಂದಿರುತ್ತಾರೆ ಮತ್ತು ಬಹಳ ಉನ್ನತವಾದ ಜ್ಞಾನವನ್ನೂ ಹೊಂದಿರುತ್ತಾರೆ; ಆದರೂ ಸಹ ಆ ಕೋಗಿಲೆಯು ಮೊಲವನ್ನು ಕಿತ್ತು ತಿಂದಂತೆ ಅವರು ಭಕ್ತರನ್ನು ಸುಲಿದು, ಪೀಡಿಸುತ್ತಾರೆ.

     ಕಲಿಯುಗದಲ್ಲಿ ಬಡವರು ಶ್ರೀಮಂತರ ಮಧ್ಯೆಯೇ ಬದುಕುತ್ತಾರೆ ಮತ್ತು ಆ ಶ್ರೀಮಂತರು ತುಂಬಿ ತುಳುಕುವಷ್ಟು ಧನಕನಕಗಳನ್ನು ಹೊಂದಿರುತ್ತಾರೆ; ಆದರೂ ಸಹ ಅವರು ಬಡವರಿಗೆ ಬಿಡಿಗಾಸನ್ನೂ ಕೊಡುವುದಿಲ್ಲ, ಆ ತುಂಬಿ ಹರಿಯುತ್ತಿದ್ದ ನಾಲ್ಕು ಬಾವಿಗಳಂತೆ ಬರಿದಾದ ಬಾವಿಗೆ ಅವರು ನೀರುಣಿಸುವುದಿಲ್ಲ.

      ಕಲಿಯುಗದಲ್ಲಿ ತಾಯ್ತಂದೆಯರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಅವರ ಮಮಕಾರವು ಮಕ್ಕಳನ್ನು ಹಾಳುಮಾಡುವುದಷ್ಟೇ ಅಲ್ಲ ಅವರ ಜೀವನವನ್ನೂ ನಾಶಮಾಡುತ್ತದೆ; ಆ ಆಕಳು ತನ್ನ ಕರುವಿನ ಮೇಲೆ ತೋರಿಸಿದ ಮಮತೆಯಂತೆ.

       ಕಲಿಯುಗದಲ್ಲಿ ಪರ್ವತದ ಮೇಲಿಂದ ಬೀಳುವ ಹೆಬ್ಬಂಡೆಯಂತೆ ಜನರು ತಮ್ಮ ಸುಗುಣಗಳನ್ನು ಕಳಚಿಕೊಂಡು ಅಧಃಪತನಕ್ಕೆ ಬೀಳುತ್ತಾರೆ ಮತ್ತು ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ; ಆದರೆ ಅಂತಿಮವಾಗಿ ಭಗವನ್ನಾಮ ಸ್ಮರಣೆ ಮಾತ್ರ ಅವರನ್ನು ಆ ಪುಟ್ಟ ಗಿಡದಂತೆ ಕೆಳಗೆ ಜಾರದಂತೆ ಹಿಡಿದು ರಕ್ಷಿಸುತ್ತದೆ".

~*ಶ್ರೀಮದ್ಭಾಗವತದಿಂದ ಆಯ್ದ ಉದ್ಧವ ಗೀತೆಯ ಭಾಗ.*
🙏🙏🙏🙏🏼🙏🏼🙏🏼🙏🏼☘🍁☘🍁☘🍁☘

15 ಜೂನ್ 2018

ವಿವೇಚನೆಯಿಂದ ಮೊಬೈಲ್ ಬಳಸೋಣ ( ಲೇಖನ)



*ವಿವೇಚನೆಯಿಂದ ಮೊಬೈಲ್ ಬಳಸೋಣ*

ಅಸಾದ್ಯವಾದುದನ್ನು ಸಾದ್ಯವಾಗಿಸಿ ,ಸಕಲ ಕಾರ್ಯಗಳನ್ನು ಮಾಡಿ ಇನ್ನೂ ಏನಾದರೂ ಮಾಡಬೇಕು,ಎಂದು ತುಡಿಯುತ್ತಿರುವ ನಮ್ಮ ಸೇವೆಗಾಗಿ ಸಿದ್ದವಾಗಿರುವ,ಕೆಲ ಅವಾಂತರಗಳಿಗೂ ಸಾಕ್ಷಿಯಾಗಿರುವ ಸಾಧನವೇ ಮೊಬೈಲ್.
ಆರಂಭದಲ್ಲಿ ಕೇವಲ ಮಾತು ಮತ್ತು ಸಂದೇಶಗಳನ್ನು ಕಳಿಸಲು ಮೀಸಲಾಗಿದ್ದ ಮೊಬೈಲ್ ಇಂದು ಜಾಗತೀಕರಣದ ಪರಿಣಾಮ ,ಇಂಟರ್ನೆಟ್‌ ಕ್ರಾಂತಿಯ ಪ್ರಭಾವದಿಂದಾಗಿ ಮೊಬೈಲ್ ಹಲವಾರು ಸಾಧನಗಳನ್ನು ನುಂಗಿ ನೀರು ಕುಡಿದು ಇನ್ನೂ ಕೆಲವು ಸಾಧನಗಳನ್ನು ಆಪೋಷನ ತೆಗೆದುಕೊಳ್ಳುವ ಹಂತದಲ್ಲಿದೆ  ಟೇಪ್ ರೆಕಾರ್ಡರ್, ಅಲಾರಾಂ,ಕ್ಯಾಲ್ಕುಲರೆಟರ್, ಸ್ಟಾಪ್ವಾಚ್ ,ಗಡಿಯಾರ, ಕಂಪ್ಯೂಟರ್, ಟಾರ್ಚ್, ಬ್ಯಾಕಿಂಗ್, ಟೈಪಿಂಗ್  ಮುಂತಾದವುಗಳ ಕಾರ್ಯವನ್ನು ಮಾಡುತ್ತಾ ಸಾಧನ ಒಂದು ಕಾರ್ಯಗಳು ನೂರಾರು ಎಂಬಂತೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ
ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಗಳಾದ ವಾಟ್ಸಪ್ ,ಪೇಸ್ಬುಕ್ ಮುಂತಾದವುಗಳ ಮೂಲಕ ಸಾಮಾನ್ಯ ಜ್ಞಾನ, ಮನರಂಜನಾ, ಸಂಗೀತ, ವ್ಯವಹಾರ, ಸಾಹಿತ್ಯದ ಇತ್ಯಾದಿ ಗುಂಪುಗಳ ಮೂಲಕ ಸೃಜನಶೀಲತೆ ಬೆಳೆಯಲು‌ ಮತ್ತು ವ್ಯವಹಾರ ವೃದ್ದಿಸಲು ಮೊಬೈಲ್ ಸಹಕಾರಿಯಾಗಿದೆ.
.ಇಂತಿಪ್ಪ ಈ ಮೊಬೈಲ್ ಕೆಲವು ಅನಾನುಕೂಲ ಅವಘಡಗಳಿಗೂ ಕಾತಣವಾಗಿರುವುದು ಆತಂಕಕಾರಿಯಾದುದು.
ಕ್ಷುಲ್ಲಕ ಕಾರಣಗಳಿಗಾಗಿ ವಾಟ್ಸಪ್ ಮತ್ತು ಇತರೆ ಸಂದೇಶಗಳನ್ನು ನೋಡಿ ಅನುಮಾನಿಸಿ ಸಂಸಾರದಲ್ಲಿ ಜಗಳಗಳಾಗಿ ವಿಚ್ಚೇದನಗಳಾಗಿರುವುದು ಕಂಡಿದ್ದೇವೆ.ಕೆಲ ಯುವಕರು ಸಮಯ ಕಳೆವ ಸಾಧನವಾಗಿ ಮೊಬೈಲ್ ಬಳಕೆ ಮಾಡುತ್ತಿರುವುದು ದುರದೃಷ್ಟಕರ.
ಮೊಬೈಲ್ ಆಧುನಿಕ ತಂತ್ರಜ್ಞಾನದ ಒಂದು ಉತ್ತಮ ಕೊಡುಗೆ ಇದನ್ನು ವಿವೇಚನೆಯಿಂದ ಬಳಸಿದರೆ ಮನುಕುಲಕ್ಕೆ ಕೆಡುಕಿಗಿಂತ ಒಳಿತೇ ಆಗುವುದು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
9900925529

14 ಜೂನ್ 2018

ಹಬ್ಬ (ಹನಿಗವನ)

*ಹಬ್ಬ*

ಮದುವೆಯ ಸಮಯದಲ್ಲಿ
ಬಂಧು ಬಾಂಧವರು ಬಂದು
ಅಕ್ಕಪಕ್ಕದಲಿ‌ ನಿಂತು
ಪಟ ತೆಗೆಸಿಕೊಳ್ಳುವರು
ನವ ವಧು ವರರು ತಿಳಿಯುವರು
ಇವರು ನಮ್ಮ ಹಾರೈಸುವರು ಎಂದು
ಬಾಂಧವರು ಒಳಗೊಳಗೆ ನಗುವರು
ಇರುವುದು ಮಾರಿ ಹಬ್ಬ ಮುಂದೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಮೇ 2018

ಪರುಷ (ಭಾವಗೀತೆ)

*ಪರುಷ*
 ಭಾವಗೀತೆ

ಮುಗಿಯಲಿದೆ ದುಃಖದ ಸಂಕೋಲೆ
ಬರಲಿದೆ ನಮ್ಮ ಬಾಳಿಗೆ  ಹರುಷ
ನಾವಾಗುವೆವು  ಅಪ್ಪ ಅಮ್ಮ
ಬರಲಿದೆ ನೋವ ಕಳೆವ ಪರುಷ

ಹತ್ತು ವರ್ಷದ ಕಾಯುವಿಕೆಗೆ
ಇಂದು ಫಲ ಸಿಕ್ಕಿದೆ
ಮನೆಯಲ್ಲಿ ಮಗುವಿನ
ಕಿಲ ಕಿಲ ಕಲರವ ಕೇಳಬೇಕಿದೆ

ದೇವರ ವರವೋ ಹಿರಿಯರ
ಆಶೀರ್ವಾದವೋ ಫಲಿಸಿದೆ
ನಮ್ಮ ಮನೆಯಲಿ ಬೀಸಣಿಗೆ
ಗಾಳಿಯು ಸುಳಿಯಲಿದೆ

ನನ್ನವಳ ಬಂಜೆಯೆಂಬುವ
ಶಾಪ ವಿಮೋಚನೆಯಾಗಲಿದೆ
ಮನ ಮನೆ ಬೆಳಗುವ ದೀಪ
ಶೀಘ್ರ ಆಗಮನವಾಗಲಿದೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮೇ 2018

*ಕಾಲಯ ತಸ್ಮೈ ನಮಃ*(ಅಂದು ,ಇಂದು ಮುಂದೆ)



             ಕಾಲಯ ತಸ್ಮೈ ನಮಃ

             *ಅಂದು*

ಕಾಲಕ್ಕೆ ಸರಿಯಾಗಿ ಮಳೆಬೆಳೆ
ವರತೆಗಳಲ್ಲಿ ನೀರು
ಮಲಿನ ರಹಿತ ಗಾಳಿ
ಕಾನನಗಳಲಿ‌ ವನಮೃಗಗಳ
ಸ್ವೇಚ್ಛೆಯಾಗಿ ವಿಹಾರ
ಅನ್ನ ವಿದ್ಯೆ ಅರೋಗ್ಯ
ಉಚಿತವಾಗಿ ಲಬ್ಯ
ಸಮರಸದ ಜೀವನ ಎಲ್ಲೆಡೆ

*ಇಂದು*

ಮಳೆಗಾಲದಲ್ಲಿ ಉರಿ ಬಿಸಿಲು
ಚಳಿಗಾಲದಲ್ಲಿ ಮಳೆ
ಉರಿಯುತ್ತಿದೆ ಇಳೆ
ಸಿಲಿಂಡರ್ ಗಳಲ್ಲಿ ಗಾಳಿ ಬಂದಿ
ಕೊಂಡು ಕುಡಿಯಬೇಕು ನೀರು
ಕಡಿದ ಕಾಡು ತೊರೆದ
ವನ್ಯಜೀವಿಗಳಿಂದ ನಾಡ ಮುತ್ತಿಗೆ
ಅನ್ನ ಛತ್ರ ದ ಬದಲಿಗೆ
ಇನ್,ಹೋಟಲ್ ದರ್ಶಿನಿಗಳ ದರ್ಶನ
ಗುರುಕುಲದ ಬದಲಿಗೆ ಗುರುಗಳ
ವಿದ್ಯೆ ಮಾರಾಟದ ಸರಕು
ಜನರ ಅನಾರೋಗ್ಯ ಬಂಡವಾಳ
ಮಾಡಿಕೊಂಡ ಕಾರ್ಪೊರೇಟ್ ಆಸ್ಪತ್ರೆಗಳು
ಒಂದೇ ಎರಡೆ ಮುಂದುವರೆಯುತ್ತವೆ...

*ಮುಂದೆಯೂ*

ಸಮಯದ ಮುಂದೆ ನಾವು
ಬಹಳ ಕುಬ್ಜರು
ನಾವೆಲ್ಲರೂ ಸಮಯದ ಗೊಂಬೆಗಳು
ಗತ ವೈಭವ ನೆನದು ಭವಿಷ್ಯ
ಊಹಿಸಿದರೆ ಭಯವಾಗುತ್ತದೆ
ಯಾರೂ ಹೆದರಬೇಕಿಲ್ಲ ಏಕೆಂದರೆ
ಕಾಲಾಯ ತಸ್ಮೈ ನಮಃ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*