08 ಏಪ್ರಿಲ್ 2018

ಹಲ್ಲು ಸೆಟ್ (ಹನಿಗವನ)

ಹನಿಗವನ

*ಹಲ್ಲು ಸೆಟ್*

ಚಿಂತಿಸದಿರು ನಲ್ಲೆ
ಆತುರಪಡದಿರು ಹೀಗೆ
ಖಂಡಿತ ನಿನ್ನ ಮೊಗದಲಿ
ನಗು ತರಿಸುವೆನು
ಶೀಘ್ರದಲ್ಲೇ ಕೊಡಿಸುವೆನು
ನಿನಗೆ ಹಲ್ಲು ಸೆಟ್ಟನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಏಪ್ರಿಲ್ 2018

ಹನಿಗವನಗಳು (ಚಂಚಲ)


*೧*

*ಅಧಿಕಾರ*

ಇದು ಚುನಾವಣೆ ಕಾಲ
ಜಿಗಿತವೀರರಿಗೆ ಸಕಾಲ
ಮನವಾಗಿದೆ  ಚಂಚಲ
ಒಮ್ಮೆ ಬೇಕು ಕಮಲ
ಮತ್ತೊಮ್ಮೆ ಚೆಂದ ದಳ
ನೆಪಮಾತ್ರ  ಕರಕಮಲದಳ
ಇವರಿಗೆ ಹಣ ಅಧಿಕಾರ ಸಕಲ

*೨*

*ಮುಂದಿನ ಸಲ*

ಯಾರಿಗೆ ಮತ ಹಾಕಲಿ
ಯಾರನ್ನು ಆರಿಸಲಿ
ಮತದಾರನ ಮನವಾಗಿದೆ ಚಂಚಲ
ಸೇವೆ ಮಾಡುವವರು ಬೇಕಿಲ್ಲ
ಒಳ್ಳೆಯ ಪ್ರತಿನಿಧಿ  ಬೇಕಿಲ್ಲ
ಕೊಟ್ಟರೆ ಸಾಕು ಹಣ ತುಂಬಿದ ಕೈಚೀಲ
ಮತ ಮಾರಿಕೊಂಡು
ಬೈಯ್ದುಕೊಳ್ಳುವನು
ನೋಡಿಕೊಳ್ಳುವೆನು   ಮುಂದಿನ ಸಲ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಏಪ್ರಿಲ್ 2018

ಹನಿಗವನಗಳು (ಬಂಗಾರ)


*ಹನಿಗವನಗಳು*

*೧*

      *ಏರುಪೇರು*

ನನ್ನವಳು ಅಪ್ಬಟ
ಬಂಗಾರ ಅವಳ
ಪ್ರೀತಿ ಕೆಲವೊಮ್ಮೆ
ಅತಿಯಾಗಿರುತ್ತದೆ
ಕೆಲವೊಮ್ಮೆ ಕೋಪ
ತಾರಕ್ಕೇರುತ್ತಿರುತ್ತದೆ
ಕಾರಣ
ಬಂಗಾರದ ಬೆಲೆ ಯಾವಾಗಲೂ
ಏರುಪೇರಾಗುತ್ತಿರುತ್ತದೆ

*೨*

*ಮೆರೆದಾಡುತ್ತಿವೆ*

ಬಂಗಾರ ಬೆಳ್ಳಿ ವಜ್ರ
ಗಣಿಗಳಲ್ಲಿ ಖಾಲಿಯಾಗುತ್ತಿವೆ
ಹುಡುಕಲು ಹೊರಟರೆ
ಭಾರತೀಯ ನಾರಿಯರ
ಮೈಮೇಲೆ ಮೆರೆದಾಡುತ್ತಿವೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 ಏಪ್ರಿಲ್ 2018

ಹನಿಗವನಗಳು

ಹನಿಗವನಗಳು

*೧*

*ಗುರುತು*

ನನ್ನವಳು ಸನಿಹವಿದ್ದರೆ
ನನಗೆ ಆನೆ ಬಲ
ಇವಳ ಗುರುತು
ಹಿಡಿಯಲಾರೆ ನಿಂತರೆ
ಆನೆಯ ಎಡ ಬಲ

*೨*

*ಗಜ*

ಪ್ರಿಯೆ
ನೀ ಸನಿಹ ಇದ್ದರೆ
ಮರೆಯುವೆನು
ಜಗ
ಅಲ್ಲಲ್ಲ
ಗಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಏಪ್ರಿಲ್ 2018

*ಬೆಕ್ಕು ಇರಬೇಕು?* (ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ



*ಬೆಕ್ಕು ಇರಬೇಕು?* (ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ)



"ಬೆಳಿಗ್ಗೆ ಉಪ್ಪಿಟ್ಟು ತಿಂದಿರೋದು ಈಗಲೂ ಹೊಟ್ಟೆ ಗುಡ ಗುಡ ಅನ್ತಾ ಇದೆ ಅದೇನು ಮನುಷ್ಯ ರು ತಿನ್ನೋ ತರ ಇತ್ತೆ ದನನೂ ತಿನ್ನತಿರಲಿಲ್ಲ " ಎಂದು ಪರಮೇಶಿ ಒಂದೇ ಸಮನೆ ಹೆಂಡತಿಯನ್ನು ಇಳಿಹೊತ್ತಿನಲ್ಲೂ ಏರುಭಾಷೆಯಲ್ಲಿ ಬೈಯುವದನ್ನು ಅರ್ದಕ್ಕೆ ತಡೆದ ಅರ್ದಾಂಗಿ "ಅದಕ್ಕೆ ಏನೋ ಎರಡು ತಟ್ಟೆ ಚೆನ್ನಾಗಿ ಕತ್ಕರಿಸಿದ್ದು" ಎಂದು ಖಾರವಾಗಿಯೇ ನುಡಿದಳು.

 ಇವರಿಬ್ಬರ ಸಂಭಾಷಣೆ ಕೇಳುತ್ತಾ ಕೆಲವೊಮ್ಮೆ ನಗುಬಂದರೂ ತಡೆದು ಕೆಲವೊಮ್ಮೆ ಬೇಸರವಾಗಿ ಮಗ ಸತೀಶ್ ಹೋಮ್ ವರ್ಕ್ ಮಾಡುವಲ್ಲಿ ತಲ್ಲೀನವಾಗಿದ್ದ
ಬರ ಬರ ಬಂದ ಸುಲೋಚನ ಗಂಡನ ಮುಂದೆ ಕಾಫಿಯ ಕಪ್ಪು ಕುಕ್ಕಿ ಹೊರಟು ಹೋದಳು ಕಾಪಿಯ ಒಂದು ಗುಕ್ಕು ಸೊರ್ ಎಂದು ಎಳೆಯುತ್ತಲೇ"ಅದೇನ್ ಎಮ್ಮೆ ಸೊರ್ ಸೊರ್ ಅಂದಂಗೆ ಕಾಪಿ ಕುಡಿಯೋದು ನೀನು ಕಾಪಿ ಕುಡಿಯೋದು  ಪಕ್ಷದ ಮನೆಗೆ ಕೇಳುತ್ತೆ" ಅಂದಿದ್ದೆ ತಡ "ಏ ಮುಚ್ಚೆ ಬಾಯಿ ತಲೆ ಎಲ್ಲಾ ಮಾತಾಡ್ತಾಳೆ ನೆಟ್ಟಗೆ ಕಾಪಿ ಮಾಡೋಕೆ ಬರಲ್ಲ ಕುಡುದ್ ನೋಡೆ ಕಾಪಿಯಾ" ಎಂದು ಪರಮೇಶ್ ರೇಗಿದ

ತನ್ನ ತಪ್ಪಿನ ಅರಿವಾದರೂ ಸಮರ್ಥಿಸುತ್ತಾ
"ಅಯ್ಯೋ ಪಕ್ಷದ ಮನೆ ತಿಮ್ಮಣ್ಣಗೆ ಮೂವತ್ತು  ವರ್ಷಕ್ಕೆ ಶುಗರ್ ಬಂದೈತಂತೆ ಅದಕ್ಕೆ ಸಕ್ಕರೆ ಕಡಿಮೆ ಹಾಕಿದ್ದೇನೆ" ಎಂದಳು "ಏ ಸಕ್ಕರೆನೇ ಹಾಕಿಲ್ಲ ವಾದ ಮಾಡ್ತಿಯಾ ಇದನ್ನೇ ಕಲಿಸಿರೋದು ನಿಮ್ಮ ಅಪ್ಪ ಅಮ್ಮ" ಎಂದ ತಕ್ಣಣ ಸುಲೋಚನ ಉಗ್ರ ರೂಪ ತಾಳಿ

"ನಮ್ಮ ಅಪ್ಪ ಅಮ್ಮ ನ ಬಗ್ಗೆ ಮಾತಾಡ್ಬೇಡಿ ಹೊಸದಾಗಿ ಮದುವೆ ಆಗಿ ಅಡುಗೆ ಮಾಡಿದಾಗ ಉಪ್ಪು ಇಲ್ಲದಿದ್ದರೂ ಒಹೋ ಸೂಪರ್ ಚಿನ್ನು ಎಂದು ಚಪ್ಪರಿಸ್ಕೊಂಡು ತಿಂದಿದ್ದರಿ. ಇಬ್ಬರಿಗೆ ಎರಡು ಲೋಟ ಸಾಂಬರ್ ಗೆ ಅರ್ದಲೋಟ ಖಾರ ಹಾಕಿದ್ದರೂ ಎಲ್ಲಾ ಕಡೆ ಉರಿ ಕಿತ್ತುಕೊಂಡು ಬಂದು ಕಣ್ಣಲ್ಲಿ ನೀರು ಬಂದರೂ ಬಂಗಾರ ಈ ಸಾರು ನಿನ್ನಷ್ಟೆ ಸಿಹಿ ಇದೆ ಎಂದು ಬಂಡಲ್ ಬಿಟ್ಟು  ತಿನ್ತಾ ಇದ್ರಿ ಈಗ ನನಗೆ ಅಡುಗೆ ಮಾಡ ಕ್ಕೆ ಬರಲ್ಲ ಅಂತೀರಾ" ಎಂದು ಹೇಳುತ್ತಲೆ "ಹೌದು ಕಣೇ ನಿನ್ನ ಪಾಕ ಪಾಂಡಿತ್ಯ ನನಗೆ ಗೊತ್ತಿಲ್ವೆ ?ಮದುವೆಯಾದ ಹೊಸದರಲ್ಲಿ ಉಪ್ಪಿಟ್ಟು ಮಾಡಲು ಹೋಗಿ ಅರ್ದ ಕೆ.ಜಿ ರವೆಗೆ ಕಾಲ್ ಕೆ.ಜಿ.ಉಪ್ಪು ಹಾಕಿ ಉಪ್ಪಿಟ್ಟು ಅಂದರೆ ಉಪ್ಪಿಂದ ಮಾಡೋದು ಅನ್ನೋ ನಿನ್ನ ಜನರಲ್ ನಾಲೆಡ್ಜ್ ನನಗೆ ಗೊತ್ತಿಲ್ಲವೆ" ಒಹೋ ಬಂದು ಬಿಟ್ಟಳು ಹೇಳೋಕೆ ಎಂದ
ಕೋಣೆಯಲ್ಲಿ ಇದೆಲ್ಲಾ ಕೇಳಿಸಿಕೊಂಡ ಪರಮೇಶಿ ತಾಯಿ "ಸಾಕು ಸುಮ್ಮನಿರಿ ಅಕ್ಕ ಪಕ್ಕದೋರು ಕೇಳಿಸಿಕೊಂಡರೆ ನಗಲ್ವೆ ಎಂದು ಪರಮೇಶಿ ಮುಂದಿದ್ದ ಆರಿದ ಕಾಫಿಗೆ ಸ್ವಲ್ಪ ಸಕ್ಕರೆ ಹಾಕಿ ಬಿಸಿ ಮಾಡಿ ಕೊಟ್ಟಳು ಸೊಸೆಗೂ ನೀಡಿದಳು ತಾನೂ ಕುಡಿದು ರೂಮ್ ಗೆ ಹೋದಳು .

"ಎನೇ ಅದು ಎಡ ಕೈಯಲ್ಲಿ ಕಪ್ಪನೆ ಕಲೆ" ಎಂದು ಸಂಜೆ ಏನೂ ಅಗಿಲ್ಲವೇನೋ ಎಂಬಂತೆ ರಾತ್ರಿ ಹತ್ತಕ್ಕೆ ಗಂಡ ಕೇಳಿದರೂ ಹೆಂಡತಿ ಮುಖ ತಿರುಗಿಸಿ ಸುಮ್ಮನಿದ್ದಳು ಅವನೆ ಹತ್ತಿರ ಹೋಗಿ ನೋಡಿದರೆ ಚಿಕ್ಕ ಸುಟ್ಟಗಾಯ ಕೂಡಲೆ ಆಯಿಂಟ್ಮೆಂಟ್ ಹಚ್ಚಲು ಕೈ ಸೋಕಿದಾಗ ಎಷ್ಟೋ ಬಾರಿ ಮುಟ್ಟಿದ್ದರೂ ಇಂದು ಸಹ ಪರಮೇಶಿಗೆ ಅದೇ ರೋಮಾಂಚಕಾರಿ ಅನುಭವ .
ಪಕ್ಕದ ಕೋಣೆಯಲ್ಲಿ ಮಲಗಿದ್ದ ಅಜ್ಜಿಗೆ ಮೊಮ್ಮಗ ಕೇಳಿದ "ಅಜ್ಜಿ ಅಪ್ಪನ ರೂಮಲ್ಲಿ ಏನದು ಶಬ್ದ"
"ಎ ಏನು ಇಲ್ಲ ಬೆಕ್ಕು ಇರಬೇಕು ಮಲ್ಕೋ" ಎಂದು ಅಜ್ಜಿ ಮಗುವನ್ನು ತಟ್ಟಿ ಮಲಗಿಸಿದಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*