01 ಏಪ್ರಿಲ್ 2018

*ಉಕ್ಕಿನ ಮನುಷ್ಯ* (ಸರದಾರ್ ವಲ್ಲಭ ಬಾಯ್ ಪಟೇಲ್ ರವರಿಗೆ ನುಡಿನಮನ)

*ಉಕ್ಕಿನ ಮನುಷ್ಯ*
(ಸರದಾರ್ ವಲ್ಲಭ ಬಾಯ್ ಪಟೇಲ್ ರವರಿಗೆ ನುಡಿನಮನ)

ಇವರೇ ನಮ್ಮ ಉಕ್ಕಿನ ಮನುಷ್ಯ
ಬರೆದರು  ನವಭಾರತದ ಭವಿಷ್ಯ
ಸಾರಿದರು ಏಕತೆಯ ಮಂತ್ರ
ಪಾಲಿಸಿದರು ರಾಷ್ಟ್ರೀಯತೆ ತಂತ್ರ

ದೇಶದ ಮೊದಲ ಉಪಪ್ರಧಾನಿ
ಆಡಳಿತದಲ್ಲಿ ದೊಡ್ದ ದಣಿ
ಮಾಡಿದರು ದೇಶದ ಏಕೀಕರಣ
ಮಾಡಲಿಲ್ಲ ಕೀಳು ರಾಜಕಾರಣ

ಬಾರ್ಡೋಲಿ ಸತ್ಯಾಗ್ರಹ ರೂವಾರಿ
ಸ್ವಾತಂತ್ರ್ಯ ಕ್ಕೆ ಬಾರಸಿದರು ರಣಭೇರಿ
ಸರಳ ಸಜ್ಜನ ಶಿಸ್ತಿನ ಸಿಪಾಯಿ  ನೀವು
ನಿಮ್ಮ ಆದರ್ಶ ಪಾಲಿಸುವೆವು ನಾವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

31 ಮಾರ್ಚ್ 2018

ಪ್ರಜಾಪ್ರಭುತ್ವ ಉಳಿಸೋಣ (ಭಾವಗೀತೆ) ಮತದಾರರ ಜಾಗೃತಿ ಗೀತೆ

*ಪ್ರಜಾಪ್ರಭುತ್ವ ಉಳಿಸೋಣ*

ಆರಿಸೋಣ  ಉತ್ತಮ ನಾಯಕರ
ಮಾಡಿಕೊಳ್ಳೋಣ ಜೀವನ ಶುಭಕರ
ಮಾಡೋಣ  ಎಲ್ಲರು ಮತದಾನ
ನಿರಾಕರಿಸೋಣ   ನೀಡಿದರೆ ಧನ

ಮರುಗದಿರಿ ಮೊಸಳೆ ಕಣ್ಣೀರಿಗೆ
ಕೊರಗದಿರಿ ಮೈಮರೆತು ಅರೆಘಳಿಗೆ
ಓಟಿನ ದಿನ ಬದಿಗೊತ್ತಿ ನಿಮ್ಮ ಕೆಲಸ
ಸರ್ಕಾರ ರಚಿಸುವುದು ನಮ್ಮ ಕೆಲಸ

ಬೇಡಿಕೆ ಇಡದಿರಿ ಸ್ವಾರ್ಥದಿ ನಿಮಗಾಗಿ
ಹಕ್ಕು ಚಲಾವಣೆ ಮಾಡಿ ದೇಶಕ್ಕಾಗಿ
ಮಾರಿಕೊಳ್ಳದಿರಿ ನಿಮ್ಮ ಮತ
ಒಳ್ಳೆಯ ನಾಯಕಗಿರಲಿ ಸಹಮತ

ಮತಗಟ್ಟೆಗೆ ಎಲ್ಲರೂ ಹೋಗೋಣ
ಓಟು ಮಾಡುವ ಪಣ ತೊಡೋಣ
ನಮ್ಮಯ ಸೇವಕರ ಆರಿಸೋಣ
ಪ್ರಜಾಪ್ರಭುತ್ವವನ್ನು ಉಳಿಸೋಣ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

30 ಮಾರ್ಚ್ 2018

ತಿಥಿ ವಡೆ ( ಹನಿಗವನ ವಿಶ್ವ ಇಡ್ಲಿದಿನ ಹಾಗೂ ಗುಡ್ ಪ್ರೈಡೆ ನಿಮಿತ್ತ)

*ಹನಿಗವನ*

(ವಿಶ್ವ ಇಡ್ಲಿ ದಿನ ಮತ್ತು ಗುಡ್ ಪ್ರೈಡೆ ನಿಮಿತ್ತ)

*ತಿಥಿ ವಡೆ*

ಇಂದು ವಿಶ್ವ ಇಡ್ಲಿ ದಿನ
ತಿಂತಾರೆ ಪಿಜ್ಹಾ ದಿನ
ಇಂದು‌ ಗುಡ್ ಪ್ರೈಡೆ
ಯೇಸು ತತ್ವ ಸಮಾಧಿ
ಮಾಡಿ ತಿನ್ನುತ್ತಿದ್ದಾರೆ
ಮರೆಯದೆ ತಿಥಿ ವಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್೩೬ (ಮಾಡಬಹುದಿತ್ತು)

*ಗಜ಼ಲ್ ೩೬*

ಓ ದೇವಾ ಧರೆಯನು ನಂದನವನವನಾಗಿ  ಮಾಡಬಹುದಿತ್ತು
ಧರಣಿಯನು ಸುಂದರ ಸ್ವರ್ಗವನಾಗಿ ಮಾಡಬಹುದಿತ್ತು

ಅತಿ ವೃಷ್ಟಿ ಅನಾವೃಷ್ಟಿ ಬರಗಾಲ ಭೂಕಂಪಗಳೇಕೆ ಮಾಡಿಸುವೆ
ಕಾಲ ಕಾಲಕೆ ಮಳೆ ಬೆಳೆನೀಡಿ ಸುಭಿಕ್ಷ  ನಾಡಾಗಿ ಮಾಡಬಹುದಿತ್ತು

ಮೋಸ ಕೊಲೆ ಸುಲಿಗೆ ಸುಳ್ಳು ಪೊಳ್ಳು ಮನಸುಗಳನೇಕಿತ್ತೆ
ನಿಷ್ಕಲ್ಮಶ ಮನಸುಗಳ ಸೃಷ್ಟಿಸಿ ರಾಮರಾಜ್ಯವಾಗಿ ಮಾಡಬಹುದಿತ್ತು

ಮೇಲು ಕೀಳು ಬಡವ ಬಲ್ಲಿದ ಜಾತಿ ಮತಗಳು ಏಕೆ ಬೇಕು
ಎಲ್ಲರಿಗೆ ಸಮಬಾಳು ನೀಡಿ ಏಕತೆಯ ಗೂಡಾಗಿ ಮಾಡಬಹುದಿತ್ತು

ಪರಿಸರ ಅಸಮತೋಲನ ಪರಿಸರ ಮಾಲಿನ್ಯ ಬೇಕೆ
ಸೀಜೀವಿಯ ಕನಸಿನ  ಆದರ್ಶ ಇಳೆಯಾಗಿ ಮಾಡಬಹುದಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಮಾರ್ಚ್ 2018

ದಿನ (ಭಾವಗೀತೆ)

*ದಿ‌ನ*

ದಿನವ ಬೆಳಗೊ ದಿನವು ನೀನು
ದಿನಕರನೆಂದೆನುವೆ ನಾನು
ನೀನು ಬರದೆ ದಿನವು ಇಲ್ಲ
ನೀನಿರದೇ ನಮ್ಮ ಜೀವನವಿಲ್ಲ

ತಮವ ತೊರೆದು ಬೆಳಕ ನೀಡುವೆ
ರಾತ್ರಿ ಚಂದಿರನಿಗೆ ಜಾಗ ಬಿಡುವೆ
ಥಳ  ಥಳ   ಹೊಳೆಸುವೆ  ಜಗವ
ನೀಡುತಲಿರುವೆ  ಶಕ್ತಿಯ ಮೂಲವ

ಹಳಿಯುವುದಿಲ್ಲ ಇತರರ ಕೆಲಸವ
ಮರೆಯುವುದಿಲ್ಲ ಬೆಳಗುವ ಕಾರ್ಯವ
ನನ್ನ  ಹಳೆಯ ದಿನಗಳ  ಮರೆಸುವೆ
ಹೊಸತು ಹುರುಪು ನೀಡಿ ಮೆರೆಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*