04 ಮಾರ್ಚ್ 2018

ಹರಿ ಓಂ ಸ್ವಸ್ತಿ (ಹನಿಗವನ)



*ಹರಿ ಓಂ ಸ್ವಸ್ತಿ*

ಶುಭ ಕಾರ್ಯದ ರಂಗೋಲಿ
ಆಗಿದೆ ಬಣ್ಣಗಳ ಹೋಲಿ
ಜೋಡಿಸಿದೆ ಫಲ ತಾಂಬೂಲ
ನೀಡಲಿದೆಮಗೆ   ಶುಭ ಫಲ
ಅಲಂಕಾರ ಆಗಿಲ್ಲ ಜಾಸ್ತಿ
ಹೇಳೋಣ ಹರಿ ಓಂ  ಸ್ವಸ್ತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮೂತಿ (ಹನಿಗವನ)


ಹನಿಗವನ

*ಮೂತಿ*

ವರ್ಷಗಳಿಂದ ಅವಳ ಹಿಂದೆ
ಅಲೆದಾಡಿ ಪ್ರೀತಿಯ ನಾಟಕವಾಡಿ
ಮದುವೆಯಾಗು ಎಂದು ಅವಳೆಂದಾಗ
ಅವನು ಉತ್ತರಿಸಿದ ನಮ್ಮದು
ಬೇರೆ ಜಾತಿ
ಸಿಟ್ಟಿಗೆದ್ದ ಅವಳು ಜಾಡಿಸಿದಳು
ಊದಿಕೊಂಡಿದೆ
ಈಗ ಮೂತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೭ (ತೆರೆದಿರಲಿ ಬಾಗಿಲು) ಕನ್ನಡ ಕಾವ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆ ಯಲ್ಲಿ ಉತ್ತಮ ಗಜ಼ಲ್ ಎಂದು ‌ಪುರಸ್ಕೃತ ಗಜ಼ಲ್



*ಗಜ಼ಲ್ ೨೭*
ಅಜ್ಞಾನದಿಂದ ಸುಜ್ಞಾನ ಪಡೆಯಲು ತೆರೆದಿರಲಿ ಬಾಗಿಲು
ಅಂಧಕಾರವನಳಿಸಿ ಬೆಳಕು ಪಸರಿಸಲು ತೆರೆದಿರಲಿ ಬಾಗಿಲು 

ಅಸೂಯೆ ದ್ವೇಷ ಸ್ವಜನ ಪಕ್ಷಪಾತ ಕಲುಷಿತ ಮನಗಳು
ಸರ್ವರ ಬೆಳೆಸಲು  ಪ್ರೀತಿಸಲು ತೆರೆದಿರಲಿ ಬಾಗಿಲು

ಕರಕಲು ಕೊಳೆತ ಕಲುಷಿತ ಕರ್ಮಟ ವಾಸನೆ ಎಲ್ಲೆಡೆ
ಸುಗಂಧ ಹೃದಯವ ಹೊಂದಲು ತೆರೆದಿರಲಿ ಬಾಗಿಲು

ದೇಶ ಭಾಷೆ ಬಣ್ಣ  ಜಾತಿ ಮತಗಳ ಹೆಸರಲಿ ಕಿತ್ತಾಟ
ಸಹಮತ ಸಮನ್ವಯ ಸಹಬಾಳ್ವೆ ನಡೆಸಲು ತೆರೆದಿರಲಿ ಬಾಗಿಲು

ನಾನು ನನ್ನದೆಂಬ ಸ್ವಾರ್ಥತೆ ತೊರೆಯಲು ಸೀಜೀವಿಯ ಆಶಯ
ಸಂಕುಚಿತತೆ ತೊರೆದು ವೈಶಾಲ್ಯತೆ  ಬೆಳೆಸಲು ತೆರೆದಿರಲಿ ಬಾಗಿಲು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಮಾರ್ಚ್ 2018

ಪ್ರೇಮ ಬರಹ (ಹನಿಗವನ)

*ಹನಿಗವನ*

*ಪ್ರೇಮ ಬರಹ*

ನಾನೊಂದು  ತೀರ
ನೀನೊಂದು ತೀರ
ಮಗಿಯದ ವಿರಹ
ಹೋಗದಿರು ದೂರ
ಸನಿಹಕೀಗ  ಬಾರ
ಬರೆವ ಪ್ರೇಮ ಬರಹ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಬದುಕಲು ಬಿಡಿ* (ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)

*ಬದುಕಲು ಬಿಡಿ*
(ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)


ನಮಗೂ ಹಕ್ಕಿದೆ ಬಾಳಲು
ಭುವಿ ನಮಗೂ ಸೇರಿದ್ದು
ನಮ್ಮನೆಲ್ಲ  ಕೊಲ್ಲಲು
ಯಾರು ನಿಮಗೆ ಹೇಳಿದ್ದು

ನಾವಿರುವೆವು ಕಾಡಲಿ
ಅದಕೆ ಕೊಡಲಿ ಬೀಸುವಿರಿ
ನಾವು ನಾಡಿಗೆ ಬಂದರೆ
ಬೊಬ್ಬೆ ಹೊಡೆಯುವಿರಿ

ಚರ್ಮ ಹಲ್ಲು ದಂತಕೆ
ನಮ್ಮೆಲ್ಲರ ಕೊಲ್ಲುವಿರಿ
ನಮ್ಮ ಸಂತತಿ ಉಳಿಸಲು
ಯೋಜನೆ  ಮಾಡುವಿರಿ

ಅತಿಯಾಸೆ ಏಕೆ ನಿಮಗೆ
ನಮ್ಮ ಪಾಡಿಗೆ ನಮ್ಮ ಬಿಡಿ
ನಿಮ್ಮ ಆಸೆಗೆ ಮಿತಿ ಇರಲಿ
ನಮಗೂ ಬದುಕಲು ಬಿಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*