20 ಜನವರಿ 2018

ಯುವಕರು ಮತ್ತು ಉದ್ಯೋಗ (ಲೇಖನ)

*ಯುವಕರು ಮತ್ತು ಉದ್ಯೋಗ*

ಇಂದಿನ ಯುವ ಜನತೆಯು ಎಷ್ಟೇ ಓದಿದರೂ  ನಿರುದ್ಯೋಗದಿಂದ ಬಳಲುತಿರುತ್ತಾರೆ.ಇದಕ್ಕೆ ಹಲವಾರು ಕಾರಣಗಳಿವೆ, ಉದ್ಯೋಗದ ಕೊರತೆ ಇರಬಹುದು.ಕೆಲವೊಮ್ಮೆ ಉದ್ಯೋಗ ಲಬ್ಯವಿದ್ದರೂ  ಈಗಿನ ಕೆಲ  ಯುವಕರಲ್ಲಿ ಕೆಲಸ ಮಾಡುವ ಆಸಕ್ತಿಯು ಕಡಿಮೆ ಆಗಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ , ಹಾಗೂ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇರದೆ ಇರುವುದು ಸಹ ಕಾರಣವಾಗಿರುತ್ತೆ. ಇದರ ನಡುವೆ ತಮ್ಮ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗಗಳನ್ನು ಹುಡುಕುವುದರಲ್ಲೆ ಯುವಕರು ಕಾಲಹರಣ ಮಾಡುತ್ತಿದ್ದಾರೆ.
    ಉದ್ಯೋಗಂ ಪುರುಷ ಲಕ್ಷಣಂ,ಎನ್ನುವುದು ಹಳೆಯದಾದ ಮಾತು ಈಗ ಉದ್ಯೋಗಂ ಮಾನವ ಲಕ್ಷಣಂ ಎನ್ನುವಂತಾಗಿದೆ   ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಕ  ಮಾಡಿದರೆ ನಮ್ಮ ಬಾಳು ಹಸನಾಗುವುದು ಬಹಳ ಯುವಕರು  ತಮಗೆ ಸಿಗುವ ಕೆಲಸಗಳಲ್ಲಿ ತೃಪ್ತಿಗೊಳ್ಳುವುದು ಬಿಟ್ಟು,ಬೇರೆ ಶಾಶ್ವತ ಉದ್ಯೋಗಿಗಳಿಗೆ ಪರದಾಡುತ್ತಾರೆ. ಇದು ತಪ್ಪಲ್ಲ ಆದರೆ ಕ್ರಮೇಣ ಕೆಲಸ ಮಾಡುತ್ತಾ ಹುನ್ನತ ಹುದ್ದೆಗಳ ಪಡೆದರೆ ಉತ್ತಮ
   
       ಕೆಲ ಯುವಕರು ತಾವು ಎಷ್ಟೇ ಸಂದರ್ಶನದಲ್ಲಿ ಗ ಭಾಗವಹಿಸಿದರೂ ಕೂಡ ಕೆಲಸ ಸಿಗದೆ ಖಿನ್ನತೆಯಿಂದ ಬಳಲುತಿರುತ್ತಾರೆ, ಅದರ ಬದಲು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಇಂದಿಲ್ಲಾ ನಾಳೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ ಅನ್ನೋ ಆತ್ಮ ಬಲ ಹೊಂದಿರಬೇಕು.
ಮರಳಿ ಯತ್ನ ಮಾಡು ಎಂಬಂತೆ  ಸರ್ಕಾರಿ ಅಥವಾ ಖಾಸಗಿ ಯಾವದೇ ಕೆಲಸ ಮಾಡಲು ಸಿದ್ದರಿರಬೇಕು
       ಇತ್ತೀಚಿಗೆ ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಮೇಕ್ ಇನ್ ಇಂಡಿಯಾ ಮುಂತಾದ ಕಾರ್ಯ ಕ್ರಮಗಳ ಮೂಲಕ ಯುವಕರು ಹೆಚ್ಚಾಗಿ ಕೆಲಸವನ್ನು ಪಡೆಯಲು ತರಬೇತು ನೀಡುತ್ತಿದೆ
ಮುದ್ರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲದ ನೆರವು ನೀಡುತ್ತಿದೆ ಇವನ್ನೆಲ್ಲಾ ಬಳಸಿಕೊಂಡು ನಮ್ಮ ಯುವ ಸಮೂಹ ಉದ್ಯೋಗ ಮಾಡಬೇಕು ತನ್ಮೂಲಕ ಭವ್ಯ ಭಾರತದ ನಿರ್ಮಾಣದ ಪಣ ತೊಡಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 ಜನವರಿ 2018

*ಪ್ರಜಾತಂತ್ರ ಗಣರಾಜ್ಯದಲ್ಲಿ ನಮ್ಮ ಜವಾಬ್ದಾರಿ*(ಲೇಖನ)

ಲೇಖನ

*ಪ್ರಜಾತಂತ್ರ ಗಣರಾಜ್ಯದಲ್ಲಿ
ನಮ್ಮ ಜವಾಬ್ದಾರಿ*

ನಾಲ್ಕಾರು ಜನ‌ ಒಂದೆಡೆ ಸೇರಿದರೆ ಮುಗಿಯಿತು "ಈ ಸರ್ಕಾರ ಸರಿಯಿಲ್ಲ ಆ ಸರ್ಕಾರ ಸರಿಯಿಲ್ಲ ಈ ಮುಖ್ಯಮಂತ್ರಿ ಸರಿ ಇಲ್ಲ ಆ ಮಂತ್ರಿ ಉಪಯೊಗ ಇಲ್ಲ ಈ ಎಂ ಎಲ್ ಎ ಬರೀ ಆಶ್ವಾಸನೆ ಕೊಡೋದೆ ಆಯ್ತು " ಈಗೆ ಪುಂಕಾನುಪುಂಕವಾಗಿ ಮಾತನಾಡಿ ವೀರಾವೇಶ ತೋರುವಲ್ಲಿ ಎಲ್ಲರೂ ನಾ ಮುಂದು ತಾ ಮುಂದು ಎಂದು‌  ಬೇರೆಯವರ ತೆಗಳಲು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವ ತೋರುವರ ಸಂಖ್ಯೆ ಹೆಚ್ಚಾಗಿದೆ.

ಪ್ರಜಾತಂತ್ರ ಗಣರಾಜ್ಯ ದಲ್ಲಿ  ಪ್ರಜೆಗಳ ಜವಾಬ್ದಾರಿ ಅಗಾಧ. ಅದು ಚುನಾವಣಾ ಕಾರ್ಯದಿಂದ ಹಿಡಿದು ನೀತಿ ನಿರೂಪಣೆಯ ವರೆಗೂ ವಿಸ್ತರಿಸಿದೆ .

ಚುನಾವಣಾ ಸಂದರ್ಭದಲ್ಲಿ ದೇಶದಲ್ಲಿ ಶೇಕಡಾವಾರು ನೂರು ಮತದಾನ ಸ್ವಾತಂತ್ರ್ಯ ಬಂದಾಗಿನಿಂದ ಆಗಿಲ್ಲ .ಶೇಕಡಾ ಎಪ್ಪತ್ತು ಮತದಾನವಾದರೆ ಅದೇ ದಾಖಲೆ  ಉಳಿದ ಮತದಾರರಿಗೆ ಜವಾಬ್ದಾರಿ ಇಲ್ಲವೆ ?ಇಂತವರು ನಾಯಕರ ರಾಜಕಾರಣಿಗಳ ಸರ್ಕಾರಗಳನ್ನು ಯಾವ ನೈತಿಕತೆಯಿಂದ ಟೀಕಿಸುತ್ತಾರೆ.?

ಇನ್ನೂ ಮತದಾನ ಮಾಡುವ ಮಹಾಪ್ರಭುಗಳ ಕಥೆ ಬೇರೆಯೇ ಇದೆ ಮತದಾನಕ್ಕೆ ಮುನ್ನ ಹಣ ಹೆಂಡ ಸೀರೆ ಮುಂತಾದ  ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಮೊದಲ ಬಾರಿಗೆ ಭ್ರಷ್ಟಾಚಾರ ಬೆಳೆಯಲು ಕಾರಣರಾಗಿ ಮುಂದೆ ಇದೇ ಮತದಾರರು ತಮ್ಮ ನೇತಾರರ ತೆಗಳುವುದೆಷ್ಟು ಸರಿ?

*ಹಾಗಾದರೆ ನಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿ ಯಾಗಿ ನಿಭಾಯಿಸುವುದು ಹೇಗೆ*

* ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸುವ ಪ್ರತಿಜ್ಞೆ ಮಾಡೋಣ

* ಆಮಿಷಕ್ಕೆ  ಬಲಿಯಾಗದೇ ಮತ ಚಲಾಯಿಸೋಣ

* ಶಾಸನ ಮಾಡುವಾಗ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು  ನಮ್ಮ ನೀತಿ ನಿಯಮಗಳನ್ನು ನಾವೆ ರೂಪಿಸಿಕೊಳ್ಳಲು ಪಣ ತೊಡೋಣ

* ಸರಿಯಾಗ ಕಾರ್ಯ ನಿರ್ವಿಸದ ನಮ್ಮ ಪ್ರತಿನಿಧಿ ಗಳ ಹಿಂದಕ್ಕೆ ಕರೆಯುವ ಚಳುವಳಿ ರೂಪಿಸೋಣ

* ಕಾರ್ಯಾಂಗದ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡಿ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲು ಪ್ರಯತ್ನ ಮಾಡೋಣ

* ನ್ಯಾಯಾಂಗ ಮತ್ತು  ಕಾನೂನು ಗಳನ್ನು ಗೌರವಿಸೋಣ

*ಸರ್ಕಾರದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ವನ್ನು ಸಮಾಜದ ಅಭಿವೃದ್ಧಿ ಗೆ ಬಳಸಿ ಬೆಳೆಸೋಣ

ಈ ಮೇಲಿನ‌ ಸಂಕಲ್ಪ ದೊಂದಿಗೆ ಎಲ್ಲಾ ಭಾರತೀಯರು ಮುನ್ನೆಡದರೆ ಆಗ ಪರಿಣಾಮಕಾರಿ ಗಣತಂತ್ರದ ಮೂಲಕ ನಮ್ಮ ದೇಶ ಪ್ರಪಂಚದಲ್ಲಿ ಮಾದರಿ ಆಗುವುದರಲ್ಲಿ  ಸಂದೇಹವಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಜನವರಿ 2018

ಭಾವಗೀತೆ (ಪ್ರಾರ್ಥನೆ)

ಭಾವಗೀತೆ

*ಪ್ರಾರ್ಥನೆ*

ರವಿ ನೀನು ಬಾರೋ
ನಿನ್ನ ಮೊಗ ತೋರೋ

ಕಾಯತಿಹೆ ನಿನಗಾಗಿ
ಪೂಜಿಸುವೆ ಶಾಂತಿಗಾಗಿ
ಉದಯಿಸು ಕಾದಿರುವೆ
ಅರ್ಘ್ಯವನು ನೀಡಿರುವೆ

ಜಗದ ಶಕ್ತಿಯು ನೀನು
ಯುಗದ ಸಾಕ್ಷಿಯು ನೀನು
ಈಗಲೇ ದಯಮಾಡು
ಜೀವಿಗಳಿಗೆ ಕಳೆ ನೀಡು

ನಿನ್ನ ಬರುವಿಕೆಗಾಗಿ ಕಾದು
ಸಹನೆಯಿಂದಲಿ ನಿಂದು
ಕಣ್ತುಂಬಿಕೊಳ್ಳುವೆ ಈಗ
ಬಾ ತೋರೋ ನಿನ್ನ ಮೊಗ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 ಜನವರಿ 2018

ಹನಿಗವನಗಳು (ಸೌಂದರ್ಯ)

ಹನಿಗವನಗಳು

*ಲಾವಣ್ಯವತಿ*

ನನ್ನವಳು
ಸೌಂದರ್ಯವತಿ
ಲಾವಣ್ಯವತಿ
ಅನುರೂಪವತಿ
ಅಂತೆಯೇ
ಖರ್ಚೂ ಅತಿ

*ಬೇಕು*

ಆ   ಬ್ರಹ್ಮದೇವನು ತನ್ನ
ಸೌಂದರ್ಯವನ್ನು ಒಟ್ಟುಗೂಡಿಸಿ
ನನ್ನವಳ ನಿರ್ಮಿಸಿರಬೇಕು
ಅದಕ್ಕೆ ಇವಳು  ಕೇಳುವಳು
ಅದೂ ಬೇಕು
ಇದೂ ಬೇಕು
ಕಂಡಿದ್ದೆಲ್ಲಾ ಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಜನವರಿ 2018

ಸುಗ್ಗಿ (ಕವನ)

*ಸುಗ್ಗಿ*

ಬಂದಿದೆ ಮಕರ  ಸಂಕ್ರಮಣ
ಹೊರಟ ರವಿ ಉತ್ತರದತ್ತ
ಮಾನವನ ಮುಖ ದಕ್ಷಿಣದತ್ತ
ಅವನ ನಡಿಗೆ ವಿನಾಶದತ್ತ

ಎಳ್ಳು ತಿಂದು ಒಳ್ಳೆ ಮಾತೆಲ್ಲಿ
ಬಾಯಿಬಿಟ್ಟರೆ ಬಣ್ಣಗೇಡು
ಇವರ ಅವ ತೆಗಳುವನು
ಅವರ ಇವ ಬಿಡುವನೆ ?

ಸಂಕ್ರಾಂತಿ ಎಂದರೆ ಸುಗ್ಗಿ
ಬೆಳೆದ ಫಸಲಿಗೆ ಪೂಜೆ
ಈಗ ನಮ್ಮನಾಳುವರಿಗೆ ಸುಗ್ಗಿ
ನಮ್ಮ ಹಣ ಕೊಳ್ಳೆ ಹೊಡೆವ ಸುಗ್ಗಿ

ರಾಸುಗಳಿಗೆ ಕಿಚ್ಚು ಹಾಯಿಸುವ ಕಾಲ
ಈಗೇನಿದ್ದರೂ ಕೆಸರೆರೆಚಾಟಕ್ಕೆ ಸಕಾಲ
ಸೂರ್ಯನ ಪಥ ಬದಲಾಗಿದೆ
ನಮ್ಮದು  ಯಾವಾಗ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು*💐💐💐