10 ಜನವರಿ 2018

ನೀನಾಗು ಮನುಜ (ಕವನ) "ಕವಿ ಬಳಗ " ವಾಟ್ಸಪ್ ಗುಂಪಿನಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ


*ನೀನಾಗು ಮನುಜ*

ಬಾಳ ದಾರಿಯು ಅನಿಶ್ಚಿತ
ಇಲ್ಲಿ ಕಷ್ಟ ಸುಖವು ನಿಶ್ಚಿತ
ತುಂಬಿದ ಕಡಲು ಒಂದೆಡೆ
ನೀರಿಗೆ ಬರ ಮತ್ತೊಂದೆಡೆ

ಮರಳುಗಾಡ ಒಂಟೆಯಂತೆ
ಕಡಲ  ಈಜುವ ಮೀನಂತೆ
 ಸಂಪರ್ಕ ಸೇತುವೆಯಂತೆ
ನೀ ತೋರು ಸದಾ ಮಾನವತೆ

ಒಮ್ಮೆ ನಳನಳಿಪ ಪರಿಸರ
ಮತ್ತೊಮ್ಮೆ ಬೋಳುಮರ
ನಗು ಅಳು ಬಾಳಲಿ ಸಹಜ
ಎದರಿಸಿ ನೀನಾಗು ಮನುಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 ಜನವರಿ 2018

ಸಹಬಾಳ್ವೆ (ಹನಿಗವನ)



*ಹನಿಗವನ*

*ಸಹಬಾಳ್ವೆ*

ಹುಟ್ಟು ಹಾಕು ನೀನು
ಹಿಡಿವೆ ನಾನು ಮೀನು
ಸಾಗರವೆ ನಮ್ಮ ತಾಯಿ
ಅನ್ನ ನೀಡುವ ಮಾಯಿ
ಬೀಸುವೆನೀಗ ಬಲೆಯ
ಕಲಿಸುವೆ ನಿನಗೆ ಕಲೆಯ
ಜೊತೆಗೆ ನಾವು ದುಡಿವ
ಜೊತೆಗೆ ನಾವು ಬಾಳುವ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಜನವರಿ 2018

ಖಚಿತ (ಹನಿಗವನ)

*ಹನಿಗವನ*

*ಖಚಿತ*

ಹಿಂದೊಮ್ಮೆ
ಸಿಗುತ್ತಿತ್ತು ,
ಜ್ಞಾನ, ಆರೋಗ್ಯ ,ಶಿಕ್ಷಣ
ಉಚಿತ
ಈಗ ಇವೆಲ್ಲವೂ ಸಿಗಲು
ನೀಡಲೇಬೇಕು ಹಣ
ಖಚಿತ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

06 ಜನವರಿ 2018

ಮರೆಯಲಾರೆ (ಭಾವಗೀತೆ)

ಭಾವಗೀತೆ

*ಮರೆಯಲಾರೆ*

ಕೋಪವೇಕೆ ನನ್ನ ನಲ್ಲೆ
ಬಳಿ ಬಾರೆ ಈಗಲೆ ಇಲ್ಲೆ|ಪ|

ಹೂಅರಳಿ ನಲಿಯುತಿದೆ
ತಂಗಾಳಿ ಸುಳಿಯುತಿದೆ
ಹಸಿ ಕೋಪ ನಿನಗೆ ತರವೆ
ಬಾ ನನ್ನ ಮದ್ದಿನ  ಒಲವೆ|೧|

ನನ್ನ ಮನವ ನಿನಗೊಪ್ಪಿಸಿಹೆ
ನೀ ಹುಸಿ ಮುನಿಸ  ತೋರಿಹೆ
ಶಶಿಮುಖಿಯೆ ಶಾಂತಳಾಗು
ನನ್ನ ಕತ್ತಲ ಮನಕೆ ಬೆಳಕಾಗು|೨|

ಸೌಂದರ್ಯದ ಖನಿ ನೀನು
ಸದ್ಗುಣಗಳ ಗಣಿ ನೀನು
ತೊರೆಯದಿರು ನೀ ನನ್ನ
ಮರೆಯಲಾರೆ ನಾ ನಿನ್ನ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 ಜನವರಿ 2018

ಡ್ರೈವರ್ ಉದ್ದಟತನ ( ಸಂಪಾದಕರಿಗೆ ಪತ್ರ)

ಡ್ರೈವರ್ ಉದ್ತಟತನ
ದಿನಾಂಕ ೪ -೧ ೨೦೧೮ ರಂದು ನಾನು ಬೆಂಗಳೂರಿಗೆ ಪ್ರಯಾಣ ಬೆಳೆಸಲು
ಕೆ ಎ ೪೦
ಎಪ್ ೯೫೩
ನಂಬರ್ ನ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಬಸ್ ನಿಲ್ದಾಣದಲ್ಲಿ ೬- ೩೦ ಕ್ಜೆ ಬಸ್ ಹತ್ತಿ ಕುಳಿತು ಒಂದು ಗಂಟೆಯಾದರೂ ಡ್ರೈವರ್ ಪತ್ತೆ ಇಲ್ಲ ಕೊನೆಗೆ ೭ - ೩೦ ಕ್ಕೆ ಬಂದ ಡ್ರೈವರ್ ಗೆ ಬಸ್ ನ ಪ್ರಯಾಣಿಕರೊಬ್ಬರು  ಸಮಯಕ್ಕೆ ಸರಿಯಾಗಿ ಹೊರಡಿ ನಮಗೆ ಕಛೇರಿ ಕೆಲಸವಿದೆ ಎಂದರೆ .ಉದ್ದಟತನದಿಂದ "ನಾನು ಕರೆದು ಕೊಂಡು ಹೋದಾಗ ಹೋಗಬೇಕು ಇನ್ನೂ ಮಾತಾಡಿದರೆ ಇನ್ನೂ ಲೇಟು ಮಾಡುವೆ ಎಂದರು"ಇಂತಹ ಮನಸ್ಥಿತಿ ಇರುವುದರಿಂದ ಸಂಸ್ಥೆಯ ಗೌರವಕ್ಕೆ ಮತ್ತು ಸಾರ್ವಜನಿಕರ ಘನತೆಗೆ ಧಕ್ಕೆಯಾಗುತ್ತದೆ ಸಂಬಂಧಿಸಿದ ಅಧಿಕಾರಿಗಳು ಇವರಿಗೆ ಬುದ್ದಿ ಹೇಳಬೇಕು.
ರಾಷ್ಟ್ರ ಮಟ್ಟದಲ್ಲಿ  ಹಲವಾರು ಪ್ರಶಸ್ತಿ ಪಡೆದ ಕೆ ಎಸ್ ಆರ್ ಟಿ ಸಿ ಗೆ ತನ್ನದೇ ಆದ ಹೆಸರಿದೆ.ಇದಕ್ಕೆ ಪೂರಕವಾಗಿ ಸೇವಾ ಮನೋಭಾವವನ್ನು ಹೊಂದಿರುವ ಉತ್ತಮ ಡ್ರೈವರ್ ಮತ್ತು ಕಂಡಕ್ಟರ್ ಗಳಿದ್ದಾರೆ.
ಆದರೆ ಇಂತಹ ಕೆಲವೆ ಉದ್ದಟ  ನೌಕರರಿಂದ ಅದು ಮಣ್ಣು ಪಾಲಾಗುವುದು ಬೇಡ
ಇನ್ನೂ ಮುಂದಾದರು ಜನರ ಸೇವೆಯೇ ನಮ್ಮ ಗುರಿ ಎಂಬ ದ್ಯೇಯವಾಕ್ಯ ಪಾಲಿಸಲು ಆ ದೇವರು ಇಂತವರಿಗೆ ಬುದ್ದಿ ನೀಡಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು