06 ಜನವರಿ 2018

ಮರೆಯಲಾರೆ (ಭಾವಗೀತೆ)

ಭಾವಗೀತೆ

*ಮರೆಯಲಾರೆ*

ಕೋಪವೇಕೆ ನನ್ನ ನಲ್ಲೆ
ಬಳಿ ಬಾರೆ ಈಗಲೆ ಇಲ್ಲೆ|ಪ|

ಹೂಅರಳಿ ನಲಿಯುತಿದೆ
ತಂಗಾಳಿ ಸುಳಿಯುತಿದೆ
ಹಸಿ ಕೋಪ ನಿನಗೆ ತರವೆ
ಬಾ ನನ್ನ ಮದ್ದಿನ  ಒಲವೆ|೧|

ನನ್ನ ಮನವ ನಿನಗೊಪ್ಪಿಸಿಹೆ
ನೀ ಹುಸಿ ಮುನಿಸ  ತೋರಿಹೆ
ಶಶಿಮುಖಿಯೆ ಶಾಂತಳಾಗು
ನನ್ನ ಕತ್ತಲ ಮನಕೆ ಬೆಳಕಾಗು|೨|

ಸೌಂದರ್ಯದ ಖನಿ ನೀನು
ಸದ್ಗುಣಗಳ ಗಣಿ ನೀನು
ತೊರೆಯದಿರು ನೀ ನನ್ನ
ಮರೆಯಲಾರೆ ನಾ ನಿನ್ನ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 ಜನವರಿ 2018

ಡ್ರೈವರ್ ಉದ್ದಟತನ ( ಸಂಪಾದಕರಿಗೆ ಪತ್ರ)

ಡ್ರೈವರ್ ಉದ್ತಟತನ
ದಿನಾಂಕ ೪ -೧ ೨೦೧೮ ರಂದು ನಾನು ಬೆಂಗಳೂರಿಗೆ ಪ್ರಯಾಣ ಬೆಳೆಸಲು
ಕೆ ಎ ೪೦
ಎಪ್ ೯೫೩
ನಂಬರ್ ನ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಬಸ್ ನಿಲ್ದಾಣದಲ್ಲಿ ೬- ೩೦ ಕ್ಜೆ ಬಸ್ ಹತ್ತಿ ಕುಳಿತು ಒಂದು ಗಂಟೆಯಾದರೂ ಡ್ರೈವರ್ ಪತ್ತೆ ಇಲ್ಲ ಕೊನೆಗೆ ೭ - ೩೦ ಕ್ಕೆ ಬಂದ ಡ್ರೈವರ್ ಗೆ ಬಸ್ ನ ಪ್ರಯಾಣಿಕರೊಬ್ಬರು  ಸಮಯಕ್ಕೆ ಸರಿಯಾಗಿ ಹೊರಡಿ ನಮಗೆ ಕಛೇರಿ ಕೆಲಸವಿದೆ ಎಂದರೆ .ಉದ್ದಟತನದಿಂದ "ನಾನು ಕರೆದು ಕೊಂಡು ಹೋದಾಗ ಹೋಗಬೇಕು ಇನ್ನೂ ಮಾತಾಡಿದರೆ ಇನ್ನೂ ಲೇಟು ಮಾಡುವೆ ಎಂದರು"ಇಂತಹ ಮನಸ್ಥಿತಿ ಇರುವುದರಿಂದ ಸಂಸ್ಥೆಯ ಗೌರವಕ್ಕೆ ಮತ್ತು ಸಾರ್ವಜನಿಕರ ಘನತೆಗೆ ಧಕ್ಕೆಯಾಗುತ್ತದೆ ಸಂಬಂಧಿಸಿದ ಅಧಿಕಾರಿಗಳು ಇವರಿಗೆ ಬುದ್ದಿ ಹೇಳಬೇಕು.
ರಾಷ್ಟ್ರ ಮಟ್ಟದಲ್ಲಿ  ಹಲವಾರು ಪ್ರಶಸ್ತಿ ಪಡೆದ ಕೆ ಎಸ್ ಆರ್ ಟಿ ಸಿ ಗೆ ತನ್ನದೇ ಆದ ಹೆಸರಿದೆ.ಇದಕ್ಕೆ ಪೂರಕವಾಗಿ ಸೇವಾ ಮನೋಭಾವವನ್ನು ಹೊಂದಿರುವ ಉತ್ತಮ ಡ್ರೈವರ್ ಮತ್ತು ಕಂಡಕ್ಟರ್ ಗಳಿದ್ದಾರೆ.
ಆದರೆ ಇಂತಹ ಕೆಲವೆ ಉದ್ದಟ  ನೌಕರರಿಂದ ಅದು ಮಣ್ಣು ಪಾಲಾಗುವುದು ಬೇಡ
ಇನ್ನೂ ಮುಂದಾದರು ಜನರ ಸೇವೆಯೇ ನಮ್ಮ ಗುರಿ ಎಂಬ ದ್ಯೇಯವಾಕ್ಯ ಪಾಲಿಸಲು ಆ ದೇವರು ಇಂತವರಿಗೆ ಬುದ್ದಿ ನೀಡಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

03 ಜನವರಿ 2018

ಮುಖಪುಸ್ತಕ (ಹನಿಗವನ)

ಹನಿಗವನ

*ಮುಖಪುಸ್ತಕ*

ಮುಖ ಪುಸ್ತಕ ಕ್ಕೂ
ಆದಾರ್ ಖಡ್ಡಾಯ?
ಆಧಾರವಿರದ ಮುಖಗಳು
ಹೆಚ್ಚಾಗಿ ಮಾಡದಿರಲು
ವಿಕಾರ ಮತ್ತು ಗೊಂದಲ
ಇನ್ನೂ ಮುಂದಾದರೂ
ಆಗಲಿ ನಕಲಿ‌ ಖಾತೆಗಳಿಗೆ
ವಿದಾಯ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ಜನವರಿ 2018

ನಗದಿರು ( ಭಾವಗೀತೆ )

ಭಾವಗೀತೆ

*ನಗದಿರು*


ಮನಸೆ ಹೀಗೇಕೆ ನಗುವೆ
ನನ್ನೇಕೆ ಹೀಗೆ ಹಂಗಿಸುವೆ|ಪ|

ಅವಳ ನೆನಪುಗಳ ಮಧುರ
ಕ್ಷಣಗಳ ನೆನದು ನಗದಿರು
ಅವಳ ಮೋಸದ ವೇಷದ
ಮಾತು ನೆನಪಿಸಿ ನಗದಿರು|೧|

ಕೊನೆತನಕ ಇರವೆ ಎಂದು
ಭಾಷೆಕೊಟ್ಟವಳ ಹಂಗಿಸದಿರು
ಅವಳ ತೆಕ್ಕೆಯಲಿ ಮೈಮರೆತ
ನನ್ನ ದಡ್ಡತನ ಹಂಗಿಸದಿರು |೨|

ನಗದು ಇರದವನ ತೊರೆದಳೆಂದು
ಚುಚ್ಚಿ ಗಹಗಹಿಸಿ ನಗದಿರು
ಚಿನ್ನದ ಮನಸಿನ ರನ್ನ ನಂತಹ
ಹುಡಗನ ಮತ್ತೆ ಹಂಗಿಸದಿರು |೩|

ಕೈಕೊಟ್ಟ ಮೋಸಗಾತಿ ನೆನದು
ನೋವನ್ನು ನೀಡಲು ನಗದಿರು
ಬಿಟ್ಟೋದವಳ ಮರೆಯಲಾಗದ
ಹೇಡಿಯೆಂದು ನನ್ನ ಹಂಗಿಸದಿರು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಜನವರಿ 2018

ಹೊಸ ಕ್ಯಾಲೆಂಡರ್ ವರ್ಷದ ನನ್ನ ನಿರ್ಧಾರಗಳು (ಲೇಖನ)

ಹೊಸ ವರ್ಷದ ನಿರ್ಧಾರಗಳು


೨೦೧೮ ರ ಹೊಸ ವರ್ಷದ ನನ್ನ ನಿರ್ದಾರಗಳು ಈ ಕೆಳಗಿನಂತಿವೆ
೧ ಶಿಕ್ಷಕನಾದ ನಾನು ಈ ವರ್ಷ ಬರುವ ವಿವಿಧ ಹೊಸ ತಂತ್ರಜ್ಞಾನದ ಮೂಲಕ ,ಹಾಗೂ ಹೊಸ ವಿಷಯಗಳ ಕಲಿತು ,ನನ್ನ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡಲು ಮತ್ತು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡುವ  ನಿರ್ದಾರ ಕೈಗೊಳ್ಳುವೆ .
೨ ನನ್ನ ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡುವೆನು
೩ ವೈಯಕ್ತಿಕ ವಾಗಿ ನನ್ನ ಹವ್ಯಾಸಗಳಾದ ಕವನ ,ಹನಿಗವನ, ಲೇಖನ, ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳ ಮೂಲಕ ವಿರಾಮ ಕಾಲ ಸದುಪಯೋಗ ಪಡಿಸಿಕೊಂಡು ಕನಿಷ್ಟ ಒಂದು ಕವನ ಸಂಕಲನ ಬಿಡುಗಡೆ ಮಾಡುವ ಗುರಿ ಹೊಂದಿರವೆ .
೪ ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದರೆ ನನ್ನ ಹೆಂಡತಿ. ಮಕ್ಕಳು. ಮತ್ತು ಸಂಬಂದಿಕರೊಂದಿಗೆ ಗುಣಮಟ್ಟದ ಹೆಚ್ಚು ಸಮಯ ಕಳೆದು ನನ್ನ ಇರುವಿಕೆ ಮಹತ್ವದ ಬಗ್ಗೆ ಅರಿಯುವೆನು
೫ ಸಮಾಜದಲ್ಲಿ ನಡೆವ ವಿವಿಧ ಕಾರ್ಯಕ್ರಮ ಗಳಲ್ಲಿ ಸಕ್ರೀಯ ವಾಗಿ ಪಾಲ್ಗೊಂಡು ಸಹಬಾಳ್ವೆ, ಸಹಕಾರ,, ಸಹಾಯ ಮುಂತಾದವುಗಳ ಬೆಳವಣಿಗಗೆ ಮತ್ತು ನಮ್ಮ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣ ತೊಡುವೆ .

*ಸಿ.ಜಿ‌ ವೆಂಕಟೇಶ್ವರ*
*ಗೌರಿಬಿದನೂರು*