03 ಜನವರಿ 2018

ಮುಖಪುಸ್ತಕ (ಹನಿಗವನ)

ಹನಿಗವನ

*ಮುಖಪುಸ್ತಕ*

ಮುಖ ಪುಸ್ತಕ ಕ್ಕೂ
ಆದಾರ್ ಖಡ್ಡಾಯ?
ಆಧಾರವಿರದ ಮುಖಗಳು
ಹೆಚ್ಚಾಗಿ ಮಾಡದಿರಲು
ವಿಕಾರ ಮತ್ತು ಗೊಂದಲ
ಇನ್ನೂ ಮುಂದಾದರೂ
ಆಗಲಿ ನಕಲಿ‌ ಖಾತೆಗಳಿಗೆ
ವಿದಾಯ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ಜನವರಿ 2018

ನಗದಿರು ( ಭಾವಗೀತೆ )

ಭಾವಗೀತೆ

*ನಗದಿರು*


ಮನಸೆ ಹೀಗೇಕೆ ನಗುವೆ
ನನ್ನೇಕೆ ಹೀಗೆ ಹಂಗಿಸುವೆ|ಪ|

ಅವಳ ನೆನಪುಗಳ ಮಧುರ
ಕ್ಷಣಗಳ ನೆನದು ನಗದಿರು
ಅವಳ ಮೋಸದ ವೇಷದ
ಮಾತು ನೆನಪಿಸಿ ನಗದಿರು|೧|

ಕೊನೆತನಕ ಇರವೆ ಎಂದು
ಭಾಷೆಕೊಟ್ಟವಳ ಹಂಗಿಸದಿರು
ಅವಳ ತೆಕ್ಕೆಯಲಿ ಮೈಮರೆತ
ನನ್ನ ದಡ್ಡತನ ಹಂಗಿಸದಿರು |೨|

ನಗದು ಇರದವನ ತೊರೆದಳೆಂದು
ಚುಚ್ಚಿ ಗಹಗಹಿಸಿ ನಗದಿರು
ಚಿನ್ನದ ಮನಸಿನ ರನ್ನ ನಂತಹ
ಹುಡಗನ ಮತ್ತೆ ಹಂಗಿಸದಿರು |೩|

ಕೈಕೊಟ್ಟ ಮೋಸಗಾತಿ ನೆನದು
ನೋವನ್ನು ನೀಡಲು ನಗದಿರು
ಬಿಟ್ಟೋದವಳ ಮರೆಯಲಾಗದ
ಹೇಡಿಯೆಂದು ನನ್ನ ಹಂಗಿಸದಿರು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಜನವರಿ 2018

ಹೊಸ ಕ್ಯಾಲೆಂಡರ್ ವರ್ಷದ ನನ್ನ ನಿರ್ಧಾರಗಳು (ಲೇಖನ)

ಹೊಸ ವರ್ಷದ ನಿರ್ಧಾರಗಳು


೨೦೧೮ ರ ಹೊಸ ವರ್ಷದ ನನ್ನ ನಿರ್ದಾರಗಳು ಈ ಕೆಳಗಿನಂತಿವೆ
೧ ಶಿಕ್ಷಕನಾದ ನಾನು ಈ ವರ್ಷ ಬರುವ ವಿವಿಧ ಹೊಸ ತಂತ್ರಜ್ಞಾನದ ಮೂಲಕ ,ಹಾಗೂ ಹೊಸ ವಿಷಯಗಳ ಕಲಿತು ,ನನ್ನ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡಲು ಮತ್ತು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡುವ  ನಿರ್ದಾರ ಕೈಗೊಳ್ಳುವೆ .
೨ ನನ್ನ ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡುವೆನು
೩ ವೈಯಕ್ತಿಕ ವಾಗಿ ನನ್ನ ಹವ್ಯಾಸಗಳಾದ ಕವನ ,ಹನಿಗವನ, ಲೇಖನ, ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳ ಮೂಲಕ ವಿರಾಮ ಕಾಲ ಸದುಪಯೋಗ ಪಡಿಸಿಕೊಂಡು ಕನಿಷ್ಟ ಒಂದು ಕವನ ಸಂಕಲನ ಬಿಡುಗಡೆ ಮಾಡುವ ಗುರಿ ಹೊಂದಿರವೆ .
೪ ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದರೆ ನನ್ನ ಹೆಂಡತಿ. ಮಕ್ಕಳು. ಮತ್ತು ಸಂಬಂದಿಕರೊಂದಿಗೆ ಗುಣಮಟ್ಟದ ಹೆಚ್ಚು ಸಮಯ ಕಳೆದು ನನ್ನ ಇರುವಿಕೆ ಮಹತ್ವದ ಬಗ್ಗೆ ಅರಿಯುವೆನು
೫ ಸಮಾಜದಲ್ಲಿ ನಡೆವ ವಿವಿಧ ಕಾರ್ಯಕ್ರಮ ಗಳಲ್ಲಿ ಸಕ್ರೀಯ ವಾಗಿ ಪಾಲ್ಗೊಂಡು ಸಹಬಾಳ್ವೆ, ಸಹಕಾರ,, ಸಹಾಯ ಮುಂತಾದವುಗಳ ಬೆಳವಣಿಗಗೆ ಮತ್ತು ನಮ್ಮ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣ ತೊಡುವೆ .

*ಸಿ.ಜಿ‌ ವೆಂಕಟೇಶ್ವರ*
*ಗೌರಿಬಿದನೂರು*

ಮರಿಬೇಡ ( ಭಾವಗೀತೆ)

ಭಾವಗೀತೆ

*ಮರಿಬೇಡ*

ಕುಣಿಯೋಣ ಬಾ ಗೆಳತಿ
ನಲಿಯೋಣ  ಬಾ  ಗೆಳತಿ |ಪ|

ನೀ ನನ್ನ ಬಾಳಸಂಗಾತಿ
ನೀಡುವೆ ಬಾ ಸಂಪ್ರೀತಿ
ನೋವಿರಲಿ ನಲಿವಿರಲಿ
ಪ್ರೀತಿಯು ಉಕ್ಕುತಿರಲಿ |೧|

ಕಷ್ಟ ಬಂದರೆ  ನನಗಿರಲಿ
ಸುಖ ನಿನಗೆ ಮೀಸಲಿರಲಿ
ಸಖನ ಸಂಗವ ಮರಿಬೇಡ
ಸಖಿ ನನ್ನನ್ಮೇ ನೀ ನೋಡ |೨|

ಲೋಕದ ಗೊಡವೆ ಬೇಕಿಲ್ಲ
ಶೋಕದ ಮಾತೇ ತಿಳಿದಿಲ್ಲ
ಟಾಕುಟೀಕಾಗಿ ಬಾಳೋಣ
ಏಕತೆಯಲಿ ನಾವು ಸಾಗೋಣ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಶೃಂಗಾರ ಶಿವ (ಭಾವಗೀತೆ.ಹೊಸ ಕ್ಯಾಲೆಂಡರ್ ವರ್ಷದ ಮೊದಲ ಪೋಸ್ಟ್ ಶಿವನಿಗೆ ಅರ್ಪಣೆ)



ಭಾವಗೀತೆ

*ಶೃಂಗಾರ ಶಿವ*

ಮಾರನ ಸುಟ್ಟವನಿಗೆ  ಶಿವೆ ಮಾರುಹೋದಳು
ಮೈ ಮನ ಅವನಿಗೊಪ್ಪಿಸಿ   ಜಾರಿಹೋದಳು|ಪ|

ಬಿಸಿಯುಸಿರು ತಾಗಿ ಏನೋ ರೋಮಾಂಚನ
ಇಬ್ಬರ ದೇಹದಿ ಬೆವರೂಪದಿ ಗಂಗೆಆಗಮನ
ವಶಪಡಿಸಿಕೊಳ್ಳಲು ಹರನು ಪರವಶನಾದನು
ಊಳಿಟ್ಟ ಘೀಳಿಟ್ಟ ಹರ ಮದ್ದಾನೆಯಾದನು|೧|

ಶಿವಲೋಕದಲಿ ಹೊಸ ಲೋಕ ನೋಡಿದರು
ವಾತ್ಸಯಾನನಿಗೆ  ಕಾಮಾಸೂತ್ರ ಹೇಳಿದರು
ಅತಿಕಾಲ ಮೈಮರೆತು ರತಿಮನ್ಮಥರಾದರು
ರಸಗಳಲಿ ಶೃಂಗಾರ ಶ್ರೇಷ್ಠವೆಂದು ತೋರಿದರು|೨|

ಅಧರಾಮೃತ ಸವಿದು ಉದರ ಬಿಸಿಯಾಯಿತು
ಇಬ್ಬರ ಮೈಶಾಖದಲಿ  ನಾಗ ಬುಸ್ ಎಂದಿತು
ಶಿವನು ಮನ್ಮಥನ  ಬಾಣವ  ಬಿಟ್ಟೇ ಬಿಟ್ಟನು
ಶೃಂಗಾರದ ರಸ ತೊಟ್ಟಿಕ್ಕಿಸುತ  ಮೊರೆದನು|೩|

*ಸಿ.ಜಿ .ವೆಂಕಟೇಶ್ವರ*
*ಗೌರಿಬಿದನೂರು*