29 ಡಿಸೆಂಬರ್ 2017

ರಸ ಋಷಿಗೆ ನಮನ ( ಕುವೆಂಪುರವರು ಹುಟ್ಟು ಹಬ್ಬದ ಮತ್ತು ನನ್ನ ಬ್ಲಾಗ್ನ 20೦ ನೇ ಪೋಸ್ಟ್ ಸಂಭ್ರಮ)

*ರಸ ಋಷಿಗೆ ನಮನ*

ರಸಋಷಿಗೆ ನಮನ  ಕವಿರಾಜ ಇದೋ
ನಿಮ್ಮಾತ್ಮಕೆ ಸವಿಯ ನಮನ

ಕುಪ್ಪಳ್ಳಿ ನೆಲದಿ  ನಲಿಯುತಲಿ ಉದಿಸಿ
ಸಾಹಿತ್ಯದ ಸುಧೆಯ ನೀಡಿ
ಸಮರಸದ ಕವನ ಪ್ರಕೃತಿಯ ಶಿವನ
ವರ್ಣಿಸಿದೆ ಕಾಲ ಕಾಲಕೆ

ಬೋಧಕರ ಕಾರ್ಯ ಕವಿತೆಗಳ ರಚನೆ
ಎಡೆಬಿಡದೆ ಮಾಡುತ ನೀವು
ರಚಿಸಿದಿರಿ ಕಾವ್ಯ ಸೃಜಿಸಿದಿರಿ ನಾಟಕ
ಕಾದಂಬರಿ ಕತೃವು  ನೀವೆ

ಮಲೆನಾಡ ಕವಿಯೆ ಮದುಮಗಳ ಬರೆದೆ
ಮಹಾಕವಿ ರಾಮನ ನೆನೆದು
ತೇಜಸ್ವಿ ಪಿತನೆ ಓಜಸ್ಸು ಪಡೆದ
ಕನ್ನಡದ ಆಸ್ತಿ ನೀವು

ಯುಗದಕವಿ ತಾವು ಜಗದಕವಿ ನೀವು
ಅನಿಕೇತನ ಸಂದೇಶ ಕೊಟ್ಟು
ಜ್ಞಾನ ಪೀಠವ ಪಡೆದ ಜ್ಞಾನಿಗಳು ನೀವು
ವಿಶ್ವಮಾನವ ಸಂದೇಶ ಕೊಟ್ಟಿರಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




28 ಡಿಸೆಂಬರ್ 2017

ಜಲವೆಲ್ಲಿ?(ಹನಿಗವನ)

ಜಲವೆಲ್ಲಿ
ನೀರಿಲ್ಲ ಊರಿನಲಿ ಹೇಗಿರಲಿ ನಾ
ಹೊರಟಿರುವೆ ಹಿಡಿದು ಕೊಡಪಾನಾ
ವರತೆಯಲಿ ನೀರಿದ್ದ ಕಾಲವೊಂದಿತ್ತು
ಸಕಲಜೀವಿಗಳು ನಲಿದಾಡುತಿತ್ತು
ಅಂತರ್ಜಲವಿಂದು ಪಾತಾಳ ಸೇರಿದೆ
ಹಗ್ಗವಿಡಿದು ನೀರ ತರಲು ನಾ ಸಾಗಿದೆ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು
9900925529

ಹನಿಗವನ

ಹನಿಗವನ

*ಬೇಡಿಕೆ*

ಒಡಲ ಕೊಟ್ಟೆ  ನೀ ನನಗೆ ದೇವ
ಅನ್ನ ನೀಡದೆ ಕೊಟ್ಟೇಕೆ  ನೋವ
ನಾಯೀಗೀವ ಆಹಾರ  ನನಗಿಲ್ಲ
ಹಸುವಿನ  ಅನ್ನ ನನ್ನ ಹಸಿವಿಗಿಲ್ಲ
ನರರು ನನ್ನಸಿವ  ಹಂಗಿಸುತಿಹರು
ಸುರರು ನನಗೆಂದು ಅನ್ನವೀವರು?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
೯೯೦೦೯೨೫೫೨೯
Venkatesh.c.g9@gmail. Com

ಮೂರು ಶಾಯಿರಿಗಳು


ಶಾಯಿರಿಗಳು

*೧*

*ಕಾರಣ*

ಮನಸೇ ಏಕೆ ಅಳುವೆ
ಸುಮ್ಮನಿರು
ನನ್ನರಸಿ ನನ್ನ ಬಿಟ್ಟು ಹೋಗಿರುವುದು
ನನಗೆ ನೋವು ನೀಡಲು ಅಲ್ಲ
ಬದಲಿಗೆ ನೋವುಂಡ ಹೃದಯಕೆ
ಮುಲಾಮು ತರಲು

*೨*

*ಫಸಲು*

ನೀನು ಹೋದ ಮೇಲೆ
ನನ್ನ ಬದುಕು ಹದಗೆಟ್ಟಿದೆ
ಗೆಳತಿ
ಮುಂಗಾರು ಮಳೆಯಂತೆ
ಬಂದು ನನ್ನದೆಯ ಹದಗೊಳಿಸು
ಬೆಳೆವ ನಾವು  ಪ್ರೀತಿ ಪ್ರೇಮದ
ಫಸಲು‌

*೩*

*ನಗು*


ತರಬೇಡ ಗೆಳತಿ ನೀನು
ಸೂಜಿದಾರ ಹೊಲಿಯಲು
ನನ್ನ ಹರಿದ ಹೃದಯ
ಮರಿಬೇಡ ಗೆಳತಿ ನೀನು
ಬೀರಲು ಮುಗಳ್ನಗೆಯ
ಅದೇ ನಲಿವಲಿ ಮರೆವೆ
ನನ್ನ ಹೃದಯದ ಗಾಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಡಿಸೆಂಬರ್ 2017

ಮೂರು ಹನಿಗವನಗಳು

*ಹನಿಗವನಗಳು*
*೧*

*ಆಕರ್ಷಣೆ*

ನಾನವಳಿಗಂದೆ
ನಿನ್ನ ತುಂಟ ಕಣ್ಗಳ
ಆಕರ್ಷಣೆಗೆ ನಿನ್ನನ್ನು
ಹಿಂಬಾಲಿಸುತ್ತಿರುವೆ
ಅವಳೆಂದಳು ಹೀಗೆ
ಹೌದು ಹಿಂದೆ ನೋಡು
ನಮ್ಮಪ್ಪನೂ ನಿನ್ನನ್ನೇ
ಹಿಂಬಾಲಿಸುತ್ತಿರುವ

*೨*

*ಜಟಾಪಟಿ*

ಮದುವೆಯ ಮೊದಲು
ಅವಳು ಕೋಮಲೆ  ತುಂಟಿ
ಮದುವೆಯ ನಂತರ
ಅವಳು ಜಗಳಗಂಟಿ
ನಿಲ್ಲುತ್ತಿಲ್ಲ ನಮ್ಮ ಜಾಟಾಪಟಿ


*೩*

*ಪ್ರಶ್ನೆ*

ಅವನಂದ ಈ ತುಂಟ ಮಕ್ಕಳ
ನೋಡಿಕೊಳ್ಳಲು
ನನಗಾಗುವುದಿಲ್ಲ.
ಅವಳೆಂದಳು ಈ ಮಾತನ್ನು
ನಾನು ಏಕಾಂತ ದಲ್ಲಿ ಇದ್ದಾಗ
ನನ್ನೊಂದಿಗೆ ತುಂಟಾಟ ಆಡುವಾಗ
ಏಕೆ ಹೇಳಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*