17 ಡಿಸೆಂಬರ್ 2017

ಸೂತ್ರಧಾರ (ಭಾವಗೀತೆ.ಕನ್ನಡ ಸಾಹಿತ್ಯ ಬಳಗ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ)



*ಭಾವಗೀತೆ*

*ಸೂತ್ರಧಾರ*


ಜೀವನವೆಂಬುದು ಒಂದು ನಾಟಕ
ಇಲ್ಲೇ ಇರುವುದು  ನರಕ ನಾಕ

ಸೂತ್ರದ ಬೊಂಬೆಗಳು ನಾವು
ಸಾಮಾನ್ಯ ಇಲ್ಲಿ ನಲಿವು ನೋವು
ಮೇಲಿರುವ ಸೂತ್ರದಾರ ಅವನು
ಸದಾ ನಮ್ಮ ಪಾಲಿಸುತಿಹನು

ನ್ಯಾಯ ಸಲ್ಲಿಸಬೇಕು ನಮ್ಮ ಪಾತ್ರಕೆ
ಬದ್ದರಾಗಿರಬೇಕು ಅವನ ಸೂತ್ರಕೆ
ನಾವಂದು ಕೊಂಡಂತೆ  ಏನೂ ಆಗದಿಲ್ಲಿ
ಅವನಾಡಿಸಿದಂತೆ ಆಡುವೆವು ನಾವಿಲ್ಲಿ

ನಾವಿರುವೆವು ಇಲ್ಲಿ ನಾಲ್ಕು ದಿನ
ತೀರಿಸಬೇಕು ಈ ನೆಲದ ಋಣ
ಅವನಾಡಿಸಿದಂತೆ ಆಡಬೇಕು
ಕರೆ ಬಂದಾಗ ಹೋಗುತಿರಬೇಕು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೩ (ಕೊನೆಯೆಲ್ಲಿ)

ಗಜ಼ಲ್ ೧೩ (ಕೊನೆಯೆಲ್ಲಿ)

ಸ್ವಾರ್ಥವಿರದ ಕೇಡಿರದ ನಮ್ಮ ಸ್ನೇಹಕೆ ಕೊನೆಯೆಲ್ಲಿ
ಚಿರಸ್ಥಾಯಿ ಚಿರನೂತನ ನಿರಂತರ ಗೆಳತನಕೆ ಕೊನಯೆಲ್ಲಿ

ಹಗಲಿನಲಿ ಇಳೆಗೆ ದಿನಕರನ ಗೆಣೆತನ ಇರುಳತಮಕೆ
ಧರಣಿಗೆ ತಿಂಗಳ ಬೆಳಕಿನ ಜೊತೆ ಇರುವ ಬಂಧಕೆ ಕೊನೆಯೆಲ್ಲಿ

ಹನಿ ಹನಿಗಳ ಕೂಡಿ ಹಳ್ಳವಾಗುವ ಹಾಗೆ ನದಿಗೆ ಸಾಗರ
ಸೇರುವ ತವಕ ಇವೆಲ್ಲದರ ಮೂಲ ಮುಗಿಲಿನ ಮೂಲಕೆ ಕೊನೆಯೆಲ್ಲಿ


ಹಸುವಿಗೆ ಕರುವಿನ ಮೇಲೆ ಮಮತೆ ತಾಯಿಗೆ ಮಡಿಲ ಕಂದನ
ಮೇಲೆ ಪ್ರೀತಿಯು ಇವರ ಮುಗಿಯದ  ಬಾಂಧವ್ಯಕೆ ಕೊನೆಯೆಲ್ಲಿ

ಜಗದಿ ಇರುವ ಸಕಲಚರಾಚರ ಜೀವಿಗಳ
ಮೇಲೆ ಸೀಜೀವಿಗಿರುವ ಅನುಬಂಧಕೆ ಕೊನೆಯೆಲ್ಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

16 ಡಿಸೆಂಬರ್ 2017

ಹನಿಗವನಗಳು (ಪಂಜರ ಮತ್ತು ಜೀವನ)

ಹನಿಗವನಗಳು

*೧*

*ಇಳಿ*

ನನ್ನವಳು ಹೇಳಿದಳು
 ನನಗೆ ಸ್ವತಂತ್ರ ಇಲ್ಲ
ನಾನು ಪಂಜರದ ಗಿಳಿ
ನಾನಂದೆ ನೀನು ನನ್ನ
ತಲೆಯ ಮೇಲೆ ಕುಳಿತಿರುವೆ
ಮೊದಲು ಇಳಿ

*೨*

ಮದುವೆ

ಜೀವನದಲ್ಲಿ ನಾನು ಪಂಜರದಲಿ
ಸಿಲುಕಿಲ್ಲ ಎನ್ನುವವರು ಇಲ್ಲ
ಏಕೆಂದರೆ ಬಹುತೇಕರಿಗೆ
ಮದುವೆಯಾಗಿದೆಯಲ್ಲ

*೩*
*ಮಾಲೆ*

ಜೀವನದಲಿ ಇದ್ದಿದ್ದೇ
 ಏಳು ಬೀಳಬೀಳುಗಳ
ಸರಮಾಲೆ
ಅದಕ್ಕೆ ಉದಾಹರಣೆ
ಮದುವೆಯ ದಿನ
ನನ್ನವಳಿಗೆ ಹಾಕಿದ
ಮಾಲೆ

*೪*

*ಅನ್ಯೋನ್ಯತೆ*

ದಾಂಪತ್ಯ ಜೀವನ ಸುಗಮವಾಗಿರಲು
ಅನ್ಯೋನ್ಯತೆ ಇರಬೇಕು ಪರಸ್ಪರ
ಇಲ್ಲದಿದ್ದರೆ ತಪ್ಪಿದ್ದಲ್ಲ
ಕರೆದುಕೊಳ್ಳುವುದು ಪರಪರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಹೊಸ ವರ್ಷದ ನಿರ್ಧಾರಗಳು(ಲೇಖನ)

ಹೊಸ ವರ್ಷದ ನಿರ್ಧಾರಗಳು

೨೦೧೮ ರ ಹೊಸ ವರ್ಷದ ನನ್ನ ನಿರ್ದಾರಗಳು ಈ ಕೆಳಗಿನಂತಿವೆ

೧ ಶಿಕ್ಷಕನಾದ ನಾನು ಈ ವರ್ಷ ಬರುವ ವಿವಿಧ ಹೊಸ ತಂತ್ರಜ್ಞಾನದ ಮೂಲಕ ,ಹಾಗೂ ಹೊಸ ವಿಷಯಗಳ ಕಲಿತು ,ನನ್ನ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡಲು ಮತ್ತು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡುವ  ನಿರ್ದಾರ ಕೈಗೊಳ್ಳುವೆ .

೨ ನನ್ನ ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡುವೆನು

೩ ವೈಯಕ್ತಿಕ ವಾಗಿ ನನ್ನ ಹವ್ಯಾಸಗಳಾದ ಕವನ ,ಹನಿಗವನ, ಲೇಖನ, ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳ ಮೂಲಕ ವಿರಾಮ ಕಾಲ ಸದುಪಯೋಗ ಪಡಿಸಿಕೊಂಡು ಕನಿಷ್ಟ ಒಂದು ಕವನ ಸಂಕಲನ ಬಿಡುಗಡೆ ಮಾಡುವ ಗುರಿ ಹೊಂದಿರವೆ .

೪ ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದರೆ ನನ್ನ ಹೆಂಡತಿ. ಮಕ್ಕಳು. ಮತ್ತು ಸಂಬಂದಿಕರೊಂದಿಗೆ ಗುಣಮಟ್ಟದ ಹೆಚ್ಚು ಸಮಯ ಕಳೆದು ನನ್ನ ಇರುವಿಕೆ ಮಹತ್ವದ ಬಗ್ಗೆ ಅರಿಯುವೆನು

೫ ಸಮಾಜದಲ್ಲಿ ನಡೆವ ವಿವಿಧ ಕಾರ್ಯಕ್ರಮ ಗಳಲ್ಲಿ ಸಕ್ರೀಯ ವಾಗಿ ಪಾಲ್ಗೊಂಡು ಸಹಬಾಳ್ವೆ, ಸಹಕಾರ,, ಸಹಾಯ ಮುಂತಾದವುಗಳ ಬೆಳವಣಿಗಗೆ ಮತ್ತು ನಮ್ಮ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣ ತೊಡುವೆ .

*ಸಿ.ಜಿ‌ ವೆಂಕಟೇಶ್ವರ*
*ಗೌರಿಬಿದನೂರು*

ಒಂದು‌ ಕೋಟಿ‌ಹಣ ಸಿಕ್ಕರೆ(ಲೇಖನ)

ಒಂದು‌ ಕೋಟಿ‌ಹಣ ಸಿಕ್ಕರೆ*

ನನಗೆ ಒಂದು ಕೋಟಿ ಹಣ ಸಿಕ್ಕರೆ ಸ್ವಲ್ಪ ಹಣದಲ್ಲಿ ಮನೆಯಿಲ್ಲದ ಕೆಲವರು ಈ ಚಳಿಗಾಲದಲ್ಲಿ ರಾತ್ರಿ ಚಳಿಯಿಂದ ನರಳುವವರಿಗೆ ಉಚಿತವಾಗಿ ಬೆಚ್ಚನೆಯ ರಗ್ಗುಗಳ ವಿತರಿಸುವೆ . ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಡಿಮೆ ಬೆಲೆಗೆ ತಾವು ಬೆಳೆದ  ವಸ್ತುಗಳ ಮಾರಾಟ ಮಾಡುವರು ಇದರಿಂದ ಅವರಿಗೆ ನಷ್ಟ ಆಗುತ್ತದೆ, ಅಂತಹ ಕಡೆ "ಆಹಾರ ಸಂರಕ್ಷಣಾ ಘಟಕಗಳ" ಆರಂಭಿಸಿ ಮೌಲ್ಯವರ್ದನೆ ಕಾರ್ಯ ಮಾಡಿ ಬೇರೆಯವರಿಗೆ ಸ್ಪರ್ತಿಯಾಗುವೆನು. ಕೆಲ ಭಾಗ ಹಣವನ್ನು ವಿಶೇಷ ಚೇತನ ರ ಸಬಲೀಕರಣಕ್ಕೆ ಮೀಸಲಿಡುವೆನು  ದೇಶ ಕಾಯುವ ಯೋಧನ ಒಳಿತಿಗೆ ಸ್ವಲ್ಪ ಹಣ ನೀಡುವೆನು .ಉಳಿದ ಹಣವನ್ನು ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಲು ಆಧುನಿಕ ರೀತಿಯ ಕಲಿಕೆ ಉತ್ತೇಜಿಸಲು ಸೂಕ್ತ ಸಾಮಗ್ರಿಗಳಾದ ಕಂಪ್ಯೂಟರ್, ಪ್ರೊಜೆಕ್ಟರ್ ಮುಂತಾದ ಪರಿಕರಗಳನ್ನು ಕೊಳ್ಳಲು ಬಳಸಿ ಆ ಶಾಲೆಗಳ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡುವೆ .ಕನ್ನಡ ಭಾಷೆಯ ಪ್ರೋತ್ಸಾಹ ಮಾಡಲು ಉತ್ತಮ ಕನ್ನಡದ ಸೇವೆ ಮಾಡಿದ ವ್ಯಕ್ತಿಗಳ ಗುರ್ತಿಸಿ ಹಳ್ಳಿ. ಹೋಬಳಿ,ತಾಲ್ಲೂಕು ಮಟ್ಟದಲ್ಲಿ "ನಮ್ಮ ಕನ್ನಡಿಗ " ಪ್ರಶಸ್ತಿ ನೀಡಲು ಯೋಜನೆ ರೂಪಿಸುವೆನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*