16 ಡಿಸೆಂಬರ್ 2017

ಹೊಸ ವರ್ಷದ ನಿರ್ಧಾರಗಳು(ಲೇಖನ)

ಹೊಸ ವರ್ಷದ ನಿರ್ಧಾರಗಳು

೨೦೧೮ ರ ಹೊಸ ವರ್ಷದ ನನ್ನ ನಿರ್ದಾರಗಳು ಈ ಕೆಳಗಿನಂತಿವೆ

೧ ಶಿಕ್ಷಕನಾದ ನಾನು ಈ ವರ್ಷ ಬರುವ ವಿವಿಧ ಹೊಸ ತಂತ್ರಜ್ಞಾನದ ಮೂಲಕ ,ಹಾಗೂ ಹೊಸ ವಿಷಯಗಳ ಕಲಿತು ,ನನ್ನ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡಲು ಮತ್ತು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡುವ  ನಿರ್ದಾರ ಕೈಗೊಳ್ಳುವೆ .

೨ ನನ್ನ ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡುವೆನು

೩ ವೈಯಕ್ತಿಕ ವಾಗಿ ನನ್ನ ಹವ್ಯಾಸಗಳಾದ ಕವನ ,ಹನಿಗವನ, ಲೇಖನ, ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳ ಮೂಲಕ ವಿರಾಮ ಕಾಲ ಸದುಪಯೋಗ ಪಡಿಸಿಕೊಂಡು ಕನಿಷ್ಟ ಒಂದು ಕವನ ಸಂಕಲನ ಬಿಡುಗಡೆ ಮಾಡುವ ಗುರಿ ಹೊಂದಿರವೆ .

೪ ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದರೆ ನನ್ನ ಹೆಂಡತಿ. ಮಕ್ಕಳು. ಮತ್ತು ಸಂಬಂದಿಕರೊಂದಿಗೆ ಗುಣಮಟ್ಟದ ಹೆಚ್ಚು ಸಮಯ ಕಳೆದು ನನ್ನ ಇರುವಿಕೆ ಮಹತ್ವದ ಬಗ್ಗೆ ಅರಿಯುವೆನು

೫ ಸಮಾಜದಲ್ಲಿ ನಡೆವ ವಿವಿಧ ಕಾರ್ಯಕ್ರಮ ಗಳಲ್ಲಿ ಸಕ್ರೀಯ ವಾಗಿ ಪಾಲ್ಗೊಂಡು ಸಹಬಾಳ್ವೆ, ಸಹಕಾರ,, ಸಹಾಯ ಮುಂತಾದವುಗಳ ಬೆಳವಣಿಗಗೆ ಮತ್ತು ನಮ್ಮ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣ ತೊಡುವೆ .

*ಸಿ.ಜಿ‌ ವೆಂಕಟೇಶ್ವರ*
*ಗೌರಿಬಿದನೂರು*

ಒಂದು‌ ಕೋಟಿ‌ಹಣ ಸಿಕ್ಕರೆ(ಲೇಖನ)

ಒಂದು‌ ಕೋಟಿ‌ಹಣ ಸಿಕ್ಕರೆ*

ನನಗೆ ಒಂದು ಕೋಟಿ ಹಣ ಸಿಕ್ಕರೆ ಸ್ವಲ್ಪ ಹಣದಲ್ಲಿ ಮನೆಯಿಲ್ಲದ ಕೆಲವರು ಈ ಚಳಿಗಾಲದಲ್ಲಿ ರಾತ್ರಿ ಚಳಿಯಿಂದ ನರಳುವವರಿಗೆ ಉಚಿತವಾಗಿ ಬೆಚ್ಚನೆಯ ರಗ್ಗುಗಳ ವಿತರಿಸುವೆ . ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಡಿಮೆ ಬೆಲೆಗೆ ತಾವು ಬೆಳೆದ  ವಸ್ತುಗಳ ಮಾರಾಟ ಮಾಡುವರು ಇದರಿಂದ ಅವರಿಗೆ ನಷ್ಟ ಆಗುತ್ತದೆ, ಅಂತಹ ಕಡೆ "ಆಹಾರ ಸಂರಕ್ಷಣಾ ಘಟಕಗಳ" ಆರಂಭಿಸಿ ಮೌಲ್ಯವರ್ದನೆ ಕಾರ್ಯ ಮಾಡಿ ಬೇರೆಯವರಿಗೆ ಸ್ಪರ್ತಿಯಾಗುವೆನು. ಕೆಲ ಭಾಗ ಹಣವನ್ನು ವಿಶೇಷ ಚೇತನ ರ ಸಬಲೀಕರಣಕ್ಕೆ ಮೀಸಲಿಡುವೆನು  ದೇಶ ಕಾಯುವ ಯೋಧನ ಒಳಿತಿಗೆ ಸ್ವಲ್ಪ ಹಣ ನೀಡುವೆನು .ಉಳಿದ ಹಣವನ್ನು ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಲು ಆಧುನಿಕ ರೀತಿಯ ಕಲಿಕೆ ಉತ್ತೇಜಿಸಲು ಸೂಕ್ತ ಸಾಮಗ್ರಿಗಳಾದ ಕಂಪ್ಯೂಟರ್, ಪ್ರೊಜೆಕ್ಟರ್ ಮುಂತಾದ ಪರಿಕರಗಳನ್ನು ಕೊಳ್ಳಲು ಬಳಸಿ ಆ ಶಾಲೆಗಳ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡುವೆ .ಕನ್ನಡ ಭಾಷೆಯ ಪ್ರೋತ್ಸಾಹ ಮಾಡಲು ಉತ್ತಮ ಕನ್ನಡದ ಸೇವೆ ಮಾಡಿದ ವ್ಯಕ್ತಿಗಳ ಗುರ್ತಿಸಿ ಹಳ್ಳಿ. ಹೋಬಳಿ,ತಾಲ್ಲೂಕು ಮಟ್ಟದಲ್ಲಿ "ನಮ್ಮ ಕನ್ನಡಿಗ " ಪ್ರಶಸ್ತಿ ನೀಡಲು ಯೋಜನೆ ರೂಪಿಸುವೆನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಡಿಸೆಂಬರ್ 2017

ಹನಿಗವನಗಳು(ಕಲ್ಪನೆ)

*ಹನಿಗವನಗಳು*

*೧*

*ಪ್ರಶ್ನೆ*

ಅವಳಂದಳು
ಕೈತುಂಬ ಹಣ
ಮೈತುಂಬ ಒಡವೆ
ಹಾಕಿಕೊಂಡ ಕಲ್ಪನೆ
ಸುಂದರವಲ್ಲವೆ ?
ಅವನುತ್ತರಿಸಿದ
ಮಲಗು ಸಾಕು ರಾತ್ರಿ
ಹನ್ನೆರಡಾಗಿಲ್ಲವೆ ?

*೨*

*ಸಾದ್ಯತೆ*

ನನ್ನವಳೆಂದಳು ರೀಹಾಗೇ ಕಲ್ಪಿಸಿಕೊಳ್ಳಿ
ನಾವೊಂದು ಬಂಗಲೆ ಕಟ್ಟಿಸಿದ್ದೇವೆಂದು
ನಾನು ಶಾಂತವಾಗಿ ಉತ್ತರಿಸಿದೆ
ಹೌದು ಹಾಗೆಯೇ ಕಲ್ಪಿಸಿಕೊಳ್ಳೋಣ
ನಮ್ಮ ಮಾವ ಕಟ್ಟಿಸಿಕೊಟ್ಟರೆಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸಂಬಂಧಗಳಲ್ಲಿ ಮೇಲುಗೈ ಸಾಧಿಸುವ ಚಿಹ್ನೆಗಳು(ಲೇಖನ)

ಸಂಬಂಧಗಳಲ್ಲಿ ಮೇಲುಗೈ ಸಾಧಿಸುವ ಚಿಹ್ನೆಗಳು

ಯಾವುದೇ ಸಂಬಂಧಗಳು ಪರಸ್ಪರ ನಂಬಿಕೆ, ಗೌರವ ,ಪ್ರೀತಿ ಮತ್ತು ವಿಶ್ವಾಸಗಳಿಂದ ಗಟ್ಟಿಯಾಗಿ ಮುಂದುವರೆಯುತ್ತವೆ .ಪ್ರೀತಿಯ ಕೊಡು ಕೊಳ್ಳುವ ಮೂಲಕ ಸಂಬಂಧಗಳು ಗಟ್ಟಿಯಾಗಿ ನಮ್ಮಲ್ಲಿ ನಂಬಿಕೆ ಬೆಳೆದು ಅದು ಮುಂದಿನ ನಮ್ಮ ಜೀವನದ ಭದ್ರ ಬುನಾದಿಯಾಗುತ್ತದೆ .ಆದರೆ ಕೆಲವೊಮ್ಮೆ ನಮ್ಮ ದೇಶದ ಪುರುಷ ಪ್ರಧಾನ ಕುಟುಂಬದ ಮುಂದುವರೆದ ಭಾಗವಾಗಿ ಕೆಲ ಹುಡುಗರು ಹುಡುಗಿಯರ ಅರಿವಿಗೆ ಬಾರದೇ ಅವರ ಮೇಲೆ ಹಿಡಿತ ಸಾಧಿಸಿ ನಿಯಂತ್ರಿಸುವ ಪ್ರಯತ್ನ ಮಾಡುವರು .
ನಿಮ್ಮ ಸಂಬಂಧಗಳಲ್ಲಿ ನಿಮ್ಮ ಗೆಳೆಯ ಈ ಕೆಳಗಿನಂತೆ ವರ್ತಿಸಿದಾಗ ಅವನು ನಿಮ್ಮ ಮೇಲೆ ನಿಯಂತ್ರಣ ಮಾಡುವ ಕಾರ್ಯ ಮಾಡುತ್ತಿದ್ದಾನೆ ಎಂದು ತಿಳಿಯಬಹುದು.

1 ಮೇಲುಗೈ ಸಾಧಿಸಲು ಯತ್ನ

ಕೆಲ ವಿಚಾರದಲ್ಲಿ ಅಭಿಪ್ರಾಯ ತಿಳಿಸಿ ನಿಮ್ಮ ಅಭಿಪ್ರಾಯ ಹೇಳುವ ಮೊದಲೆ ಅವನ ಎತ್ತರದ ದ್ವನಿ ಮತ್ತು ಕಣ್ಣಿನ ತೀಕ್ಷ್ಣ ನೋಟದ ಮೂಲಕ ನೀವು ಅವನು ಹೇಳಿದ ವಿಚಾರಗಳನ್ನು ನಿಮಗಿಷ್ಟವಿಲ್ಲದಿದ್ದರೂ ಒಪ್ಪುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡುವನು ಈ ರೀತಿ ಪದೇ ಪದೇ ಆದರೆ ನಿಮ್ಮ ಮೇಲೆ ನಿಮ್ಮ ಹುಡುಗ ನಿಮಗರಿವಿಲ್ಲದೇ ಮೇಲುಗೈ ಸಾಧಿಸಿರುತ್ತಾನೆ .

2,ಅಪರಾಧಿ ಭಾವ ಕಾಡುವಂತೆ ಮಾಡುವುದು

ಕೆಲವೊಮ್ಮೆ ನೀವು ತಪ್ಪು ಮಾಡದಿದ್ದರೂ ಪದೇ ಪದೇ ನೀವು ತಪ್ಪು ಮಾಡಿರುವಿ ರೆಂದು ಬಿಂಬಿಸಿ ನಿಮ್ಮನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿಮಗೆ ನೀವೇ ತಪ್ಪಿತಸ್ಥರೆಂದು ಸಾಬೀತುಪಡಿಸಲು ಕೆಲ ಹುಡುಗರು ಪ್ರಯತ್ನ ಮಾಡುವರು .

3 ನಿಮ್ಮನ್ನು ನೀವೇ ಅನುಮಾನಿಸುವಿಕೆ

ಮೊದಲಿಗೆ ನೀವು ಆತ್ಮವಿಶ್ವಾಸವನ್ನು ಹೊಂದಿದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಗುಣ ಹೊಂದಿರುವಿರಿ , ಕ್ರಮೇಣ  ನಿಮ್ಮ ಚಿಕ್ಕ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ನೀವು ಅನವಶ್ಯಕವಾಗಿ ನಿಮ್ಮ ಹುಡುಗನ ಮೇಲೆ ಅವಲಂಬಿತವಾದರೆ ಇದು ಸಹ ನಿಮ್ಮ ಮೇಲೆ ನಿಮ್ಮ ಹುಡುಗನ ಮೇಲುಗೈ ಸಾಧಿಸುವ ಲಕ್ಷಣವಾಗಿರಬಹುದು

4 ಅವಕಾಶವಾದಿತನ

ನಿಮಗೆ ನಿಮ್ಮ ಕುಟುಂಬದ, ಮತ್ತು ಸ್ನೇಹಿತರ ಜೊತೆಗೆ ಬಹುಮುಖ್ಯ ಕೆಲಸ ಕಾರ್ಯ ಇದ್ದಾಗ ನಿಮ್ಮ ಹುಡುಗ ನಿಮ್ಮ ಉಪಸ್ಥಿತಿಯನ್ನು ಬಲವಂತ ಪಡಿಸುವದು,ಇದಕ್ಕೆ ತದ್ವಿರುದ್ಧವಾಗಿ ಅವನ ಮನೆಯ ಕೆಲಸ,ಸ್ನೇಹಿತರ ಕಾರ್ಯದಲ್ಲಿ ನಿಮಗೆ ತಿಳಿಸದೇ ಅನವಶ್ಯಕ ಕಾಯಿಸುವುದು ಇವು ಆ ಹುಡುಗ ಮೇಲುಗೈ ಸಾಧಿಸುವ ಸೂಚನೆ.

5 ಬಲಿಪಶು ನಾಟಕ

ಕೆಲ ವಿಷಯಗಳಲ್ಲಿ ಅನವಶ್ಯಕ ವಾಗಿ ಗೊಂದಲ ಉಂಟಾದಾಗ ಎಲ್ಲಾ ಸಮಯದಲ್ಲಿ ಹುಡುಗ ನಾನು ನಿನಗಾಗಿ ಎಲ್ಲಾ ತ್ಯಾಗ ಮಾಡಿದ್ದೇನೆ, ನನ್ನ ಎಲ್ಲಾ ನೋವುಗಳಿಗೆ ನೀನು ಹಾಗೂ ನಿನ್ನ ಪ್ರೀತಿಯೇ ಕಾರಣ ಎಂದು ಪದೇ ಪದೇ ಹೇಳುತ್ತಿದ್ದರೆ ಹಾಗೂ  ಹುಡುಗಿ ಕ್ಷಮೆ ಕೇಳುವಂತೆ ಮಾಡುವ ಮೂಲಕ ನೀವು ಅವರ ನಾಟಕಕ್ಕೆ ಮನ್ನಣೆ ನೀಡಿದರೆ ಹುಡಗನ ಮೇಲುಗೈ ಒಪ್ಪಿಕೊಂಡಂತೆಯೇ ಸರಿ .

 ,6 ಎಮೋಷನಲ್ ಬ್ಲಾಕ್‌ ಮೇಲ್

ಹುಡುಗ ಪದೇ ಪದೇ "ನೀನಿಲ್ಲದಿದ್ದರೆ ನಾನು ಬದುಕುವುದಿಲ್ಲ, ಸಾಯತ್ತೇನೆ" "ನನ್ನ ಕೈ ಕೊಯ್ದು ಕೊಳ್ಳವೆ" ಇತ್ಯಾದಿ ಮಾತುಗಳನ್ನು ಹೇಳುತ್ತಿದ್ದರೆ ಅವನಿಗೆ ನಿನ್ನ ಪ್ರೀತಿಯ ಬದಲಾಗಿ ನಿನ್ನನ್ನು ಭಾವನಾತ್ಮಕವಾಗಿ ಕರುಣೆ ಗಿಟ್ಟಿಸಿ ಎಮೋಷನಲ್ ಬ್ಲಾಕ್‌ ಮೆಲ್ ಮಾಡುವನು ಆಗ ಅವನು ಹೇಳಿದಂತೆ ಕೇಳಲು ನಿಮ್ಮನ್ನು  ಅಣಿಗೊಳಿಸುವನು.


ಈಗೆ ಸಂಬಂಧಗಳು ಪರಸ್ಪರ ನಂಬಿಕೆ. ಮೆಚ್ಚುಗೆ, ಗೌರವ ಹೊಂದಿ ಮುಂದುವರೆಯಬೇಕು ಇಲ್ಲಿ ಯಾರೂ ಮೇಲಲ್ಲ  ಯಾರೂ  ಕೀಳಲ್ಲ ಕೆಲವೊಮ್ಮೆ ಈ ಮೇಲ್ಕಂಡ ಕಾರಣದಿಂದಾಗಿ ಯಾರೇ ಸಂಬಂಧಗಳಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ಪಟ್ಟರೆ ಅಂತಹ ಸಂಬಂದದಿಂದ ಹೊರ ಬರುವ ಸ್ವಾತಂತ್ರ್ಯ ನಿಮ್ಮದಾಗಿರಬೇಕು ಏಕೆಂದರೆ ನಿಮ್ಮ ಸುಂದರ ಜೀವನ ನಿಮ್ಮ ಕೈಯಲ್ಲಿದೆ ಅಲ್ಲವೇ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 ಡಿಸೆಂಬರ್ 2017

ಕಿರುಗಥೆ (ಸಂಬಂಧಗಳು)

ಕಿರುಗಥೆ
,ಸಂಬಂಧಗಳು

ಸಾಹುಕಾರ್ ತಿಮ್ಮಯ್ಯ ವಯೋಸಹಜ ಖಾಯಿಲೆಯಿಂದ ಮರಣಹೊಂದಿದಾಗ ಅವರ ಇಬ್ಬರು ಹೆಂಡತಿಯರು ಮತ್ತು ಮಕ್ಕಳು ಅವರ ಕೋಟಿಗಟ್ಟಲೆ  ಆಸ್ತಿಯ ಹಂಚಿಕೊಳ್ಳಲು ಶವ ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದ ಕಂಡು ಊರ ಹಿರಿಯ ಜುಂಜಣ್ಣ " ಇದು ಕಿತ್ತಾಡುವ ಸಮಯವೆ ? ಮೊದಲು ಕಾರ್ಯ ಮಾಡಿ ಆಮೇಲೆ ನಿಮ್ಮ ವ್ಯವಹಾರ" ಎಂದು ಗದರಿದಾಗ ಅಂತ್ಯ ಸಂಸ್ಕಾರಕ್ಕೆ ಮುಂದಾದರು.
ಒಂದು ವಾರದ ಬಳಿಕ ರಾಜಿ ಪಂಚಾಯತಿ ಬಳಿಕ ಉಭಯ ಪತ್ನಿ ಮತ್ತು ಮಕ್ಕಳು ಸಂತಸದಿಂದ ತಿಮ್ಮಯ್ಯನವರ ಮರೆತು ಆನಂದದಿಂದ ಮೈಮರೆತಿದ್ದರು. ನಾಲ್ಕು ವರ್ಷದ "ರವಿ ಅಮ್ನ ಈ ನಾಯಿ ಏನೂ ತಿನ್ನುತ್ತಿಲ್ಲ" ಎಂದಾಗ ಅವರ ಗಮನಕ್ಕೆ ಬಂದಿದ್ದು. ವಾರದಿಂದ ಆ ನಾಯಿ ತನ್ನ ಮಾಲಿಕನ ನೆನೆದು ಕಣ್ಣೀರುಡುತ್ತ ಆಹಾರ ನೀರು ಸೇವಿಸದೇ ಒಂದು ಮೂಲೆಯಲ್ಲಿ ಮುದುರಿತ್ತು .