This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
11 ಡಿಸೆಂಬರ್ 2017
10 ಡಿಸೆಂಬರ್ 2017
06 ಡಿಸೆಂಬರ್ 2017
ನನ್ನ ಕನ್ನಡ ಮೇಷ್ಟ್ರು ( ಲೇಖನ)
ನನ್ನ ಕನ್ನಡ ಮೇಷ್ಟ್ರು
ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಟಿ.ಎನ್ ತಿಪ್ಪೇಸ್ವಾಮಿ ಸರ್ ರವರು ಅಂದು ನಮಗೆ ಕನ್ನಡ ಪದ್ಯಗಳನ್ನು ಪ್ರತಿ ಶನಿವಾರ ರಾಗವಾಗಿ "ವಸಂತ ಬಂದ. ಋತುಗಳ ರಾಜ..." ಕನ್ನಡಕೆ ಹೋರಾಡು ಕನ್ನಡದ ಕಂದ ......." ಈಗೆ ಹಾಡಿ ನಮಗೂ ಹೇಳಿಕೊಡುವ ರೀತಿ ಹಾಗೂ ನಮಗೆ ಅವರು ಮಾಡುವ ರೀತಿ ಆಸಕ್ತಿ ಕೆರಳಿಸುವ ಬೋಧನ ಕ್ರಮ ನೋಡಿ ಅಂದೆ ನಾನು ಶಿಕ್ಷಕನಾಗಲು ತೀರ್ಮಾನಕ್ಕೆ ಬಂದೆ ಗುರುಗಳ ಆಶೀಉರ್ವಾದದಿಂದ ಇಂದು ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷನಾಗಿ ಹದಿನೆಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ .ನಾನು ಕನ್ನಡದಲ್ಲಿ ಪ್ರಬಂಧ, ಪತ್ರಲೇಖನ ದಿನಚರಿ ಬರೆಯಲು ಅಂದು ಪ್ರೇರೇಪಣೆ ನೀಡಿದ್ದರಿಂದ ಇಂದು ಕವನ,ಕಥೆ,ಲೇಖನ ಬರೆಯುತ್ತಿದ್ದೇನೆ ಈಗಾಗಲೇ ಒಂದು ಕವನ ಸಂಕಲನ ಬಿಡುಗಡೆಯಾಯಿತು ಮತ್ತೋಂದರ ಬಿಡುಗಡೆಗೆ ಸಿದ್ದತೆ ಆರಂಭವಾಗಿದೆ . ನಾನು ಈ ಮಟ್ಟಿಗೆ ಬೆಳೆಯಲು ಸಾದ್ಯವಾದ ಹೊಳಲ್ಕೆರೆ ತಾಲ್ಲೂಕಿನ ಚೌಡಗೋಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಗುರುಗಳಾದ ಟಿ
ಎನ್ ತಿಪ್ಪೇಸ್ವಾಮಿ ಸರ್ ರವರನ್ನು ಹೇಗೆ ಮರೆಯಲಿ?
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಟಿ.ಎನ್ ತಿಪ್ಪೇಸ್ವಾಮಿ ಸರ್ ರವರು ಅಂದು ನಮಗೆ ಕನ್ನಡ ಪದ್ಯಗಳನ್ನು ಪ್ರತಿ ಶನಿವಾರ ರಾಗವಾಗಿ "ವಸಂತ ಬಂದ. ಋತುಗಳ ರಾಜ..." ಕನ್ನಡಕೆ ಹೋರಾಡು ಕನ್ನಡದ ಕಂದ ......." ಈಗೆ ಹಾಡಿ ನಮಗೂ ಹೇಳಿಕೊಡುವ ರೀತಿ ಹಾಗೂ ನಮಗೆ ಅವರು ಮಾಡುವ ರೀತಿ ಆಸಕ್ತಿ ಕೆರಳಿಸುವ ಬೋಧನ ಕ್ರಮ ನೋಡಿ ಅಂದೆ ನಾನು ಶಿಕ್ಷಕನಾಗಲು ತೀರ್ಮಾನಕ್ಕೆ ಬಂದೆ ಗುರುಗಳ ಆಶೀಉರ್ವಾದದಿಂದ ಇಂದು ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷನಾಗಿ ಹದಿನೆಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ .ನಾನು ಕನ್ನಡದಲ್ಲಿ ಪ್ರಬಂಧ, ಪತ್ರಲೇಖನ ದಿನಚರಿ ಬರೆಯಲು ಅಂದು ಪ್ರೇರೇಪಣೆ ನೀಡಿದ್ದರಿಂದ ಇಂದು ಕವನ,ಕಥೆ,ಲೇಖನ ಬರೆಯುತ್ತಿದ್ದೇನೆ ಈಗಾಗಲೇ ಒಂದು ಕವನ ಸಂಕಲನ ಬಿಡುಗಡೆಯಾಯಿತು ಮತ್ತೋಂದರ ಬಿಡುಗಡೆಗೆ ಸಿದ್ದತೆ ಆರಂಭವಾಗಿದೆ . ನಾನು ಈ ಮಟ್ಟಿಗೆ ಬೆಳೆಯಲು ಸಾದ್ಯವಾದ ಹೊಳಲ್ಕೆರೆ ತಾಲ್ಲೂಕಿನ ಚೌಡಗೋಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಗುರುಗಳಾದ ಟಿ
ಎನ್ ತಿಪ್ಪೇಸ್ವಾಮಿ ಸರ್ ರವರನ್ನು ಹೇಗೆ ಮರೆಯಲಿ?
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
04 ಡಿಸೆಂಬರ್ 2017
ಅಕ್ಷರ ರಾಮಾಯಣ (ಸಂಗ್ರಹ ಲೇಖನ)
Great Ramayana composer using
Kannada Akshara
Jai Shri Sita Rama Lakshmana Bharata Shatrugnya Hanuman parivar ki
*ಅಕ್ಷರ ರಾಮಾಯಣ*
*ಅ*ಯೋಧ್ಯೆಯರಸನು ದಶರಥನು
*ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
*ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
*ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು
*ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
*ಊ*ಟವ ಮಾಡಲು ಪಡೆದರು ನಾಲ್ವರನು
*ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
*ೠ*ಕ್ಷ ಜನರನು ಶಿಕ್ಷಿಸಲು ರಾಮನನು
*ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ
*ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
*ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
*ಓ*ಲಗದಲಿ ರಾಮನು ಶಿವಧನುವ ಮುರಿದು
*ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
*ಅಂ*ಬಾ ಸೀತಾ ಸ್ವಯಂವರ ಸಂಭ್ರಮವು
*ಅಃ*ಅಃ ಶ್ರೀರಾಮ ಸೀತಾ ವಿವಾಹ ವೈಭವವು
*ಕ*ಟುವರ ಬೇಡಿದಳು ಕೈಕೇಯಿ ದಶರಥನ
*ಖ*ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
*ಗ*ಮನ ಕಾನನಕೆ ಉಟ್ಟು ನಾರುಮಡಿ
*ಘ*ಟಸಂಭವನಿತ್ತನು ಹರಿಚಾಪವನು
*ಙ* ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ
*ಚ*ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
*ಛ*ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
*ಜ*ಯಜಯ ರಾಘವ ಎನ್ನುತ ಭರತನು ಬಂದು
*ಝ*ಗಮಗಿಸುವ ರಾಮಪಾದುಕೆಗಳ ಪಡೆಯಲು
*ಜ್ಞಾ*ನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು
*ಟ*ವುಳಿಯಾಡದೆ ರಾಜ್ಯವ ನೀಯುವೆನು
*ಠ*ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
*ಡ*ನಿಯುಳಿಯಲು ಪಾದುಕೆಗಳ ಕೈಗೊಂಡು
*ಢ*ಕ್ಕೆಯ ಬಾರಿಸುವನೆ ಭರತನು
*ಣ*ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು
*ತ*ರುಣಿಯ ಮಾತನು ಲೆಕ್ಕಿಸಿ ರಾಘವ
*ಥ*ಳಥಳಿಪ ಜಿಂಕೆಯ ಹಿಂದೋಡಿದನು
*ದ*ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
*ಧ*ಣಿಗಳಾಶ್ರಮ ಸೇರುವ ಮೊದಲೆ
*ನ*ಲ್ಲೆಯನಪಹರಿಸಿದ ದಶಶಿರ ರಾವಣನು
*ಪ*ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
*ಫ*ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
*ಬ*ಲಿಷ್ಟ ಜಟಾಯುವಿಂದ ಉಪಕೃತ ರಾಘವ
*ಭ*ವಭಾದೆಯ ಕಳೆಯಲು ಹರಸಿದನು
*ಮ*ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು
*ಯ*ಮಪುರಿಗಟ್ಟಿದ ರಾಮನು ವಾಲಿಯನು
*ರ*ಮಣೀಯ ವಾರ್ತೆ ತಂದನು ಮಾರುತಿಯು
*ಲ*ವಣಾಂಬುಧಿಗೈ ತಂದರು ವಾನರರು
*ವ*ತ್ಸಲನಾಶ್ರಯವಿತ್ತು ವಿಭೀಷಣನಿಗೆ
*ಶ*ರಧಿಯ ದಾಟಿ ಯುದ್ದವ ಹೂಡಿದರು
*ಷ*ಡ್ಗುಣ ಸಹಿತನು ರಾವಣನ ಕೊಂದು
*ಸ*ತಿಯೊಡಗೂಡಿ ಅಯೋಧ್ಯೆಗೆ ಹೊರಡಲು
*ಹ*ನುಮನು ಭರತಗೆ ವಿಷಯವ ತಿಳುಹಿದನು
*ಳ*ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
*ಕ್ಷ*ಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...
(ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ. ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ.
Kannada Akshara
Jai Shri Sita Rama Lakshmana Bharata Shatrugnya Hanuman parivar ki
*ಅಕ್ಷರ ರಾಮಾಯಣ*
*ಅ*ಯೋಧ್ಯೆಯರಸನು ದಶರಥನು
*ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
*ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
*ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು
*ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
*ಊ*ಟವ ಮಾಡಲು ಪಡೆದರು ನಾಲ್ವರನು
*ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
*ೠ*ಕ್ಷ ಜನರನು ಶಿಕ್ಷಿಸಲು ರಾಮನನು
*ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ
*ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
*ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
*ಓ*ಲಗದಲಿ ರಾಮನು ಶಿವಧನುವ ಮುರಿದು
*ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
*ಅಂ*ಬಾ ಸೀತಾ ಸ್ವಯಂವರ ಸಂಭ್ರಮವು
*ಅಃ*ಅಃ ಶ್ರೀರಾಮ ಸೀತಾ ವಿವಾಹ ವೈಭವವು
*ಕ*ಟುವರ ಬೇಡಿದಳು ಕೈಕೇಯಿ ದಶರಥನ
*ಖ*ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
*ಗ*ಮನ ಕಾನನಕೆ ಉಟ್ಟು ನಾರುಮಡಿ
*ಘ*ಟಸಂಭವನಿತ್ತನು ಹರಿಚಾಪವನು
*ಙ* ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ
*ಚ*ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
*ಛ*ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
*ಜ*ಯಜಯ ರಾಘವ ಎನ್ನುತ ಭರತನು ಬಂದು
*ಝ*ಗಮಗಿಸುವ ರಾಮಪಾದುಕೆಗಳ ಪಡೆಯಲು
*ಜ್ಞಾ*ನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು
*ಟ*ವುಳಿಯಾಡದೆ ರಾಜ್ಯವ ನೀಯುವೆನು
*ಠ*ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
*ಡ*ನಿಯುಳಿಯಲು ಪಾದುಕೆಗಳ ಕೈಗೊಂಡು
*ಢ*ಕ್ಕೆಯ ಬಾರಿಸುವನೆ ಭರತನು
*ಣ*ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು
*ತ*ರುಣಿಯ ಮಾತನು ಲೆಕ್ಕಿಸಿ ರಾಘವ
*ಥ*ಳಥಳಿಪ ಜಿಂಕೆಯ ಹಿಂದೋಡಿದನು
*ದ*ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
*ಧ*ಣಿಗಳಾಶ್ರಮ ಸೇರುವ ಮೊದಲೆ
*ನ*ಲ್ಲೆಯನಪಹರಿಸಿದ ದಶಶಿರ ರಾವಣನು
*ಪ*ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
*ಫ*ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
*ಬ*ಲಿಷ್ಟ ಜಟಾಯುವಿಂದ ಉಪಕೃತ ರಾಘವ
*ಭ*ವಭಾದೆಯ ಕಳೆಯಲು ಹರಸಿದನು
*ಮ*ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು
*ಯ*ಮಪುರಿಗಟ್ಟಿದ ರಾಮನು ವಾಲಿಯನು
*ರ*ಮಣೀಯ ವಾರ್ತೆ ತಂದನು ಮಾರುತಿಯು
*ಲ*ವಣಾಂಬುಧಿಗೈ ತಂದರು ವಾನರರು
*ವ*ತ್ಸಲನಾಶ್ರಯವಿತ್ತು ವಿಭೀಷಣನಿಗೆ
*ಶ*ರಧಿಯ ದಾಟಿ ಯುದ್ದವ ಹೂಡಿದರು
*ಷ*ಡ್ಗುಣ ಸಹಿತನು ರಾವಣನ ಕೊಂದು
*ಸ*ತಿಯೊಡಗೂಡಿ ಅಯೋಧ್ಯೆಗೆ ಹೊರಡಲು
*ಹ*ನುಮನು ಭರತಗೆ ವಿಷಯವ ತಿಳುಹಿದನು
*ಳ*ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
*ಕ್ಷ*ಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...
(ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ. ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ.
03 ಡಿಸೆಂಬರ್ 2017
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)