29 ನವೆಂಬರ್ 2017

ಗಜ಼ಲ್ ೧೧ ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ಗಜ಼ಲ್ ಬಹುಮಾನ ಪಡೆದ ಗಜ಼ಲ್. (ಮಧುರ) ನನ್ನ ಬ್ಲಾಗ್ ನ 150 ಪೋಸ್ಟ್ ಸಂಭ್ರಮ

*ಗಜ಼ಲ್  ೧೧*

ಬಾಲ್ಯದ ಮರೆಯಲಾಗದ  ಅವಿನಾಭಾವ ನೆನಪುಗಳು ಮಧುರ
ಮನದಲಿ ಬಂದು ಆಗಾಗ ಕಾಡುವ ಭಾವನೆಗಳು ಮಧುರ


ಎಮ್ಮೆಯೇರಿ ಯಮಧರ್ಮನಂತೆ ಹೆಮ್ಮೆಯ
ದನಕರು ಮೇಯಿಸಿದ ನೆನಪುಗಳು ಮಧುರ

ಮೇಲೀರಿದರೂ ಚಿಕ್ಕವನಾಗಿರು ಎಂಬ ತತ್ವ
ಸಾರಿದ ಗಾಳಿಪಟ ಹಾರಿಸಿದ ಆಟಗಳು ಮಧುರ

ಅಪ್ಪ ಅಮ್ಮನಾಟ, ನಾಟಕಗಳನ್ನು ಅಭಿನಯಿಸಿ
ಅವ್ಯಕ್ತ ಜವಾಬ್ದಾರಿ ಹೊತ್ತಿದ್ದ ಸಂಬಂಧಗಳು ಮಧುರ

ಕಾಡು ಮೇಡುಗಳಲೆದು ಹೆಜ್ಜೇನು ದಾಳಿಯಿಟ್ಟಾಗ
ಕುಗ್ಗದೆ ಜಗ್ಗದೆ ಪಶುಗಳಿಗೆ ಮೇವು ತಂದ ಕಷ್ಟಗಳು ಮಧುರ

ಸೀಜೀವಿ ತಣಿಸಿದ ಜೀರ್ಜಿಂಬೆ  ಗುಯ್ ಗುಡುವ ನಾದ
ಎಳೆಗರು,ಮಗುವಿನ ಅಳುವಿನ ಸಂಗೀತಗಳು ಮಧುರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ನವೆಂಬರ್ 2017

ಹನಿಗವನಗಳು (ಸರಸ)

ಹನಿಗವನಗಳು
*೧*

*ವಿರಸ*

ನವರಸದಲಿ ಶೃಂಗಾರ
ಹೆಚ್ಚಾದರೆ ಖಂಡಿತ
ಸರಸ
ರೌದ್ರ ಅತಿಯಾದರೆ
ತಪ್ಪಿದ್ದಲ್ಲ
ವಿರಸ

*೨*

*ಬಿರಬಿರನೆ*


ನನ್ನವಳಿಗೆ ನಾನಂದೆ
ಸರಸಕೆ ಬಾರೆ
ಸರಸರನೆ
ಅವಳೆಂದಳು ,ಉಪ್ಪು
ಬೆಲ್ಲ,ಬೇಳೆ ಇಲ್ಲ
ಮೊದಲು ತನ್ನಿ
ಬಿರಬಿರನೆ

*೩*

 *ಮನೋರಮೆ*

ಸರಸ ಸಲ್ಲಾಪಕೆ ಮಾದರಿ
ಮುದ್ದಣ ಮನೋರಮೆ
ನಾವು ಈಗಲೇ
ಸರಸವಾಡೋಣವೇ ಅಂದೆ
ಸಿಡುಕಿನಿಂದ ಅವಳೆಂದಳು
ವತ್ತಾರೆ ಏನೂ ಇಲ್ವ
ನಿಮಗೆ ಕ್ಯಾಮೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ನವೆಂಬರ್ 2017

ಪ್ರೇರಣೆ (ಕವನ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಧಾಟಿಯಲ್ಲಿ)

*೧*

*ಪ್ರೇರಣೆ*

(ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಧಾಟಿಯಲ್ಲಿ)

ಮನವು ಹೇಳುತೈತೆ ಮತ್ತೆ ಹೇಳುತೈತೆ
ನೀನೆ ಧನ್ಯನು ಎಂದು.||೨||

ಹನಿಯನು ಸೇರಿ ಮಾನವನು ತಣಿದು
ಹಿರಿಯರ ಸ್ನೇಹ ಪ್ರೀತಿಯ ಪಡೆದು
ಕಲಿಯುತಲಿರುವೆ ನಲಿಯುವತಲಿರುವೆ
ನಾನು ಧನ್ಯನು|
ಕವನಗಳೆ ಇರಲಿ ಗೀತೆಗಳೆ ಇರಲಿ
ಎಂದೂ ಬರೆವೆನು ನಾನು ಎಂದೂ ಬರೆವನು .|

|ಮನವು ಹೇಳುತೈತೆ|

ಗೀತೆಯ ಹೇಳಿದ ಕೃಷ್ಣನು ಇಲ್ಲಿ ಸಾರಥಿಯಾಗಿಯನು .
ನಮ್ಮ ಸ್ನೇಹಿತನಾಗಿಹನು
ತಂಪನ್ನೀವ ಚಂದಿರನಿಲ್ಲಿ ಬೆಳಕ ನೀಡುವನು
ನಮಗೆ ಬಲವ ನೀಡಿಹನು .
ಎಲ್ಲಾ ಸೇರಿ ಬಳಗ ಕಟ್ಟಿ ಸೇವೆಗೆ ನಿಂತಿಹರು
ತಾನು ಬೆಳೆದು ಇತರರು ಬೆಳೆಯಲು
ಪಣವ ತೊಟ್ಟಿಹರು
ಜೊತೆಗಿರಿ ನೀವು ಹಿರಿಯರ ಹಾಗೆ
ಬೆಳೆವೆವು ನಿಮ್ಮ ನೆರಳಲೆ ಹಾಗೆ ,
ಹನಿಯನು ಸೇರಿದ ನಾನು ಪುನೀತ ,
ಬರೆಯುವೆ ನಗು ನಗುತಾ ||

|ಮನವು ಹೇಳುತೈತೆ|

ತಾವು ಬರೆದು ಇತರರು ಬರೆಯಲು
ಸ್ಪೂರ್ತಿಯ ನೀಡಿಹರು .
ನಮಗೆ ಸ್ಪೂರ್ತಿಯಾಗಿಹರು.
ಚಿಂತಕರಿಂದ ಕೂಡಿರುವಂತಹ ಚಾವಡಿ ಇಲ್ಲಿದೆ
ಚಿಂತನ ಮಂತನ ನಡೆದಿದೆ .
ಒಂದು ಹನಿಯು ಮತ್ತೊಂದು ಹನಿಗೆ
ಪ್ರೇರಣೆ ನೀಡಿಹವು ,
ವಿವಿಧ ಪ್ರಕಾರದ ಸಾಹಿತ್ಯ ಕೃಷಿಯು ನಡೆದಿಹುದಿಲ್ಲಿ ,
ಹನಿಯನು ಅಂದು ಸೇರಿದೆ ನಾನು
ಮನದ ಭಾವನೆ ಹಂಚಿದೆ ಇಲ್ಲಿ
ಕೃಷ್ಣ, ಚಂದಿರ ಇರುವವರಗೆ ಹನಿಯನು ತೊರೆಯೆನು ನಾ
ಹನಿಹನಿಇಬ್ಬನಿ ತೊರೆಯನು ನಾ |

ಕವನಗಳೆ ಇರಲಿ ಗೀತೆಗಳೆ ಇರಲಿ
ಎಂದೂ ಬರೆವೆನು ನಾನು ಎಂದು ಬರೆವೆನು |

|ಮನವು ಹೇಳುತೈತೆ|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ನವೆಂಬರ್ 2017

ಹನಿಗವನ (ಸಾಲುಮರದ ತಿಮ್ಮಕ್ಕ)

ಚಿತ್ರ ಹನಿಗವನ

*ಪೂಜೆ*

ಮಾಡೋಣ ಪೂಜೆ ಪರಿಸರ ಮಾತೆಗೆ
ತೋರೋಣ ಕಾಳಜಿ ಪ್ರತಿ  ಜೀವಿಗೆ
ಬರೀ ಮಾಡಿದರೆ ಸಾಲದು ಪೂಜೆ
ಆಗೋಣ ಪ್ರಜ್ಞಾವಂತ  ಪ್ರಜೆ
ಇಂದು ನಾವು ಸಸಿ ನೆಡೋಣ
ಮುಂದೆ ನಮ್ಮ ರಕ್ಷಿಸಿಕೊಳ್ಳೋಣ
ಕೇಳಿ ನಾ ಹೇಳುವೆ ನಿಮ್ಮಕ್ಕ
ನಿಮ್ಮ ಸಾಲುಮರದ ತಿಮ್ಮಕ್ಕ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಹೆಜ್ಜೆ)

ಹನಿಗವನಗಳು
*೧*
*ಗಂಟು*

ನಮ್ಮ ಮದುವೆಯಲ್ಲಿ
ಏಳು ಹೆಜ್ಜೆ ಬೇಡ ನಲ್ಲೆ
ಏಳು ಬೀಳು
ಇರಲಿ ಎಂಟು
ಅವಳೆಂದಳು
ಬೇಡ ನನಗೆ ಎಂಟು
ನನಗೆ ಗೊತ್ತು ಯಾವಾಗಲೂ
ನಿಮ್ಮ ಮುಖ ಗಂಟು

*೨*
*ಗುಂಡು*

ತಿರುಪತಿಯಲ್ಲಿ ಹೆಜ್ಜೆ ಹೆಜ್ಜಗೆ
ಕಂಡಲ್ಲಿ ಗುಂಡು
ನಮ್ಮೂರ ದಾರಿಯಲೂ
ಎಡತಾಗುವನು
ಗುಂಡಿನ ಗಂಡು

*೩*
*ವಿಶ್ರಾಂತಿ*

ನಿಂತಹೆಜ್ಹೆಯಲಿ ನಿಂತಿರುವೆ
ಎಷ್ಟೋ ವರ್ಷಗಳಿಂದ
ಕುಳಿತುಕೊಂಡು ವಿಶ್ರಾಂತಿ
ತೆಗೆದುಕೊ ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*