25 ನವೆಂಬರ್ 2017

*ಕಿರು ಕಥೆ* ದಾನಿ (ನೈಜ ಘಟನೆ ಆದಾರಿತ)

*ಕಿರು ಕಥೆ*(ನೈಜ ಘಟನೆ ಆದಾರಿತ)

ರಾಜ್ಯದ ಆಗರ್ಭ ಶ್ರೀಮಂತರಾದ ಹನುಮಂತರಾಜು ಅವರು ದೇವಾಲಯಕ್ಕೆ ಬರುವ ಸುದ್ದಿ ತಿಳಿದು ದೇವಾಲಯದ ಆಡಳಿತ ಮಂಡಳಿಯ ಎಲ್ಲಾ ಪದಾದಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡು , ದೇವಾಲಯದ ಮುಂದಿರುವ ಭಿಕ್ಷುಕರು ,ಹಣ್ಣು,ಹೂ ಮಾರುವವರು ,ಎಲ್ಲರನ್ನೂ ಜಾಗ ಖಾಲಿ ಮಾಡಿಸಿ ಅತಿಥಿ ಆಗಮನಕ್ಕೆ ಕಾದರು.
ಪೂಜೆ ಮುಗಿದ ನಂತರ ಆಡಳಿತ ಮಂಡಳಿಯ ಸದಸ್ಯರು ದೇವಾಲಯದ ಜೀರ್ಣೋದ್ದಾರಕ್ಕೆ ಹನುಂತರಾಜು ಅವರಿಗೆ ಬೇಡಿಕೆ ಸಲ್ಲಿಸುತ್ತಾ "ದೇವಾಲಯದ ಗರ್ಭಗುಡಿಯು ಮಳೆ ಬಂದರೆ ಸೋರುತ್ತದೆ ಆದ್ದರಿಂದ ದಯಮಾಡಿ ಒಂದು ಲಕ್ಷ ನೆರವು ನೀಡಿದರೆ ಅನುಕೂಲಕರ ಆಗುವುದು" ಎಂದರು ಈ ಮಾತನ್ನು ಕೇಳಿ "ಆಯಿತು ನೋಡೋಣ "ಎಂದು ಕಾರು ಏರಿ ಹೊರಟೇ ಬಿಟ್ಟರು ಪುಣ್ಯಾತ್ಮರು.
ದೂರದಲ್ಲಿ ಇದನ್ನೆಲ್ಲಾ ಗಮನಿಸುತ್ತಿದ್ದ ಶ್ರೀದೇವಮ್ಮ ಎಂಬ ೮೦ ವರ್ಷದ ವೃದ್ದೆ ಒಂದು ತುಂಬಿದ ಗೋಣಿ ಚೀಲ ತಂದು ಆಡಳಿತ ಮಂಡಳಿಯ ಮುಂದಿಟ್ಟರು. ಇದನ್ನು ನೋಡಿ ಮುಖ ಸಿಂಡರಿಸಿಕೊಂಡ ಅವರು" ಏ ಮುದುಕಿ ಆಚೆ ಹೋಗು "ಎಂದು ಗದರಿದರು .ಆ ಮುದುಕಿ ವಿನಮ್ರತೆಯಿಂದ ಈ ಚೀಲದಲ್ಲಿ ಹಣವಿದೆ ಆಂಜನೇಯಸ್ವಾಮಿ ಗರ್ಭಗುಡಿಯ ರಿಪೇರಿ ಮಾಡಿಸಿ ಎಂದಾಗ ಎಲ್ಲಾ ತಬ್ಬಿಬ್ಬಾಗಿ ಆಶ್ಚರ್ಯಕರವಾಗಿ "ಈ ಭಿಕ್ಷುಕಿಯ ಬಳಿ ಎಷ್ಟು ಮಹಾ ಹಣವಿರಬಹುದು?" ಎಂದು ಮಾತಾಡಿಕೊಂಡು ಎಣಿಸಿದಾಗ ೨ಲಕ್ಷ ಆಗಿತ್ತು ಅದನ್ನು ದೇವಾಲಯಕ್ಕೆ ಸಮರ್ಪಿಸಿ ಧನ್ಯತಾ ಭಾವದಿಂದ ದೇವರ ಪ್ರಸಾದ ಸ್ಚೀಕರಿಸಿ ಹೊರನಡೆದಳು ಅಲ್ಲಿದ್ದವರು ಪ್ರಶ್ನಿಸಿ ಕೊಂಡರು "ಯಾರು ಭಿಕ್ಷುಕರು?" ಇದನ್ನು ನೋಡಿ ದೇವಾಲಯದಲ್ಲಿ ಆಂಜನೇಯಸ್ವಾಮಿ ನಸುನಕ್ಕರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನ್ಯಾನೋ ಕಥೆ (ಮುಗುಳ್ನಗು)

*ನ್ಯಾನೋ ಕಥೆ*

*ಮುಗುಳ್ನಗು*

ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಬುದ್ದಿ ಜೀವಿಯೊಬ್ಬರು "ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ ನಾವೆಲ್ಲರೂ ಕಚ್ಚಾಡುತ್ತಿದ್ದೇವೆ...."ಹೀಗೆ ಒಂದು ಗಂಟೆ ಭಾಷಣ ಮಾಡಿದರು. ನಿರೂಪಕಿ "ಈಗ ವೇಷಭೂಷಣ ಸ್ಪರ್ಧೆ ಮೊದಲಿಗೆ ಶ್ರೀ ರಾಮನ ಪಾತ್ರದಲ್ಲಿ ಇಸ್ಮಾಯಿಲ್ ಜಬೀಉಲ್ಲಾ .ಎ.ಪಿ.ಜೆ ಅಬ್ದುಲ್ ಕಲಾಂ ಪಾತ್ರದಲ್ಲಿ ಸುರೇಶ್...."ಕೊನೆಯದಾಗಿ ಬಂದ ಗೌತಮ ಬುದ್ದನ ಪಾತ್ರದಾರಿಯು ಮುಗುಳ್ನಗುತ್ತಿದ್ದನು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 ನವೆಂಬರ್ 2017

ನಾವೂ ಸಾಧಿಸಬಹುದು ..!!(ಸಂಗ್ರಹ ಲೇಖನ)

ತಿಳಿದಿರಲಿ.

ಒಂದು ಯುದ್ಧದಿಂದಾಗಿ ತಿಮ್ಮಪ್ಪ ನಾಯಕ ಕನಕದಾಸನಾಗಿ ಬದಲಾದ....

ನಾರದನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ ವಾಲ್ಮೀಕಿಯಾದ....

ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ ಬಸವಣ್ಣ ಜಗಜ್ಯೋತಿಯಾದ....

ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾದ....

ತನ್ನ ಅದ್ಬುತ ವಿಚಾರದಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕನಂದನಾದ....

ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರನಾದ....

ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ....

ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ. ಎಸ್.ಆರ್.ಕಂಠಿಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ ""ಭರತ"ನಾದ....

ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ದಾರ, ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿಯಾದರು.....

ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ ರತ್ನನಾದ....

ಎಂಟನೇ ತರಗತಿ ಫೇಲ್ ಆದ ಸಚಿನ್ ಇಂದು ಕ್ರಿಕೇಟ್ ಲೋಕದ ದೇವರಾದ....

ಪೆಟ್ರೋಲ್ ಹಾಕುತ್ತಿದ್ದ ಮುಖೇಶ್ ಅಂಬಾನಿ ಇಂದು ಭಾರತದ ನಂಬರ್ ಒನ್ ಶ್ರೀಮಂತನಾದ.....

ಗೋಪಾಲ್ ಕೃಷ್ಣ ರೋಲಂಕಿ ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
ಹಿಂದಿ ಬರದಿದ್ದರೂ ಐಎಎಸ್ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಬಂದ....

ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ ಅಬ್ರಹಾಂ ಲಿಂಕನ್ ಸತತ ಸೋಲು ಕಂಡರು ಕೊನೆಗೆ ಅಮೆರಿಕದ ಅಧ್ಯಕ್ಷನಾದ....

ಎನ್. ಅಂಬಿಕಾ ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ ಐಪಿಎಸ್ ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ ಮಿಸ್ ಮಾಡದೆ ತಿಳಿದುಕೊಳ್ಳಿ).

ನಮ್ಮ ಜಿಲ್ಲೆಯವನೊಬ್ಬ
ಐಎಎಸ್ ಅಧಿಕಾರಿಯಾದ....
ನಮ್ಮ ತಾಲೂಕಿನವನೊಬ್ಬ
ಕೆ.ಎ.ಎಸ್ ಅಧಿಕಾರಿಯಾದ....
ನಮ್ಮ ಊರಿನವನೊಬ್ಬ
ಪಿ.ಎಸ್.ಐ. ಆದ.
ನಮ್ಮ ಓಣಿಯವನೊಬ್ಬ
ಎಫ್.ಡಿ.ಎ. ಆದ.
ನಮ್ಮ ಮನೆಯ ಪಕ್ಕದವನೊಬ್ಬ
ಎಸ್.ಡಿ.ಎ ಆದ.

ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...??!! ಏಕೆಂದರೆ ನಮ್ಮಲ್ಲಿ ಸಾಧಿಸುವ ಛಲವೇ ಸತ್ತು ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.

ಕಷ್ಟ ಯಾರಿಗಿಲ್ಲಾ...?
ಅವಮಾನ ಯಾರಿಗಾಗಿಲ್ಲ...??
ಸೊಲನ್ನ ಯಾರು ನೋಡಿಲ್ಲ...??

ಕಷ್ಟಗಳನ್ನ ಮನುಷ್ಯ ಮೌನವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ ಪುಸ್ತಕ ಎಂದಿಗೂ ಮಾಡಲಾರದು.

ಎದೆಗೆ ಬಿದ್ದ ಅಕ್ಷರ..
ಭೂಮಿಗೆ ಬಿದ್ದ ಬಿಜ..ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.

ಪುಸ್ತಕಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.

ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆಯೊಂದಿದ್ದರೆ ಏನನ್ನಾದರೂ ಸಾದಿಸಬಹುದು.

ಇಂತಹ ಸಂದೇಶಗಳು ಹಲವರಿಗೆ ಸ್ಫೂರ್ತಿಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ..
ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.
ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು ಗಾರ್ಲ ವರ್ದಿರವರು ಹೇಳುತ್ತಾರೆ.

*ಸಂಗ್ರಹ: ಸಿ.ಜಿ.ವೆಂಕಟೇಶ್ವರ*
ಕೃಪೆ: ವಾಟ್ಸಪ್

ಸವಾರಿ (ಕವನ)

*ಸವಾರಿ*

ಪ್ರಿಯೆ ಹೋಗೋಣ  ಸವಾರಿ
ನನ್ನ ಹೃದಯದಂಬಾರಿ ಏರಿ
ನನ್ನಂಬಾರಿಯಲಿ ಬಂಗಾರವಿಲ್ಲ
ಬೆಲೆಬಾಳುವ  ಮುತ್ತು ರತ್ನಗಳಿಲ್ಲ


ದುಬಾರಿ ಅಲಂಕಾರಗಳಿಲ್ಲ
ಸವಿಯಾದ  ಪ್ರೀತಿಗೆ ಬರವಿಲ್ಲ
ಆಡಂಬರದ ಅಲಂಕಾರ ಬೇಕಿಲ್ಲ
ಸಡಗರದ ಒಲುಮೆ ಸಾಕಲ್ಲ

ಮೇಲು ಕೀಳುಗಳ ಗೊಡವೆಯಿಲ್ಲ
ತಾಳ ಮೇಳಗಳಿಗೆ ಕೊನೆಯಿಲ್ಲ
ಕಪಟ ಕೇಡುಗಳಿಗೆ ಜಾಗವಿಲ್ಲ
ಹೃದಯದ ಭಾಷೆಗೆ ಮಿತಿಯಿಲ್ಲ

ಸಾಗುತ ಮುಂದೆ ಹೋಗೋಣ
ಪ್ರೀತಿಯ ಸಂದೇಶ ಸಾರೋಣ
ಪ್ರೀತಿಯ ರಾಯಬಾರಿಗಳಾಗೋಣ
ಪ್ರೀತಿಗೆ ಗೆಲುವು ಎನ್ನೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 ನವೆಂಬರ್ 2017

ಹನಿಗವನಗಳು (ಚಲುವೆ)

*ಹನಿಗವನಗಳು*
*೧*

*ವರದಕ್ಷಿಣೆ*

ಮದುವೆ ಆದ ನಂತರ
ನಾನೂ ಪಡೆದಿರುವೆ ವರದಕ್ಷಿಣೆ
ಚೆಲುವಾದ ಹೆಂಡತಿ ಚಿನ್ನ
ಮುದ್ದಾದ ಮುತ್ತಿ ನಂತಹ
ಎರಡು ಮಕ್ಕಳನ್ನ

*೨*

*ನಗಣ್ಯ*

ಅವನಿಗೆ ಮದುವೆಯಾಗಲು
ಹುಡುಗಿಯ ಚೆಲುವು
ನಗಣ್ಯ
ಕಾರಣ ಅವನಿಗೆ
ನಗವೇ ಗಣ್ಯ

*೩*
*ಬಿಲ್ಲು*
ಮದುವೆಯಾಗಲು ಹುಡುಗಿ
ಚೆಲುವೆಯೇ ಆಗಬೇಂದಿಲ್ಲ
ಕಟ್ಟಲು ಸಿದ್ದವಿರಬೇಕು
ಇವನ ಬಾರಿನ ಬಿಲ್ಲು

*೪*
*ಬರೆಯುವೆ*

ನಲ್ಲೆ ನಿನ್ನ ಚೆಲುವು
ಬಣ್ಣಿಸಲಸದಳ
ನಿನ್ನ ಮೇಲೆ ಕವಿತೆ
ಬರೆಯುವೆ
ಮುಚ್ಚು ಬಾಯಿ
ಮೊನ್ನೆ ಗೀತಾಗೂ ಹೀಗೇ
ಹೇಳಿರುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*