22 ನವೆಂಬರ್ 2017

ಗಜ಼ಲ್ ೧೦(ನಿನ್ನ ಬಿಡೆನು)

*ಗಜ಼ಲ್೧೦*

ಆ ಬಾನು ಇಳೆಯ ಮೇಲೆ ಬಿದ್ದರೂ ನಿನ್ನ ಬಿಡೆನು
ಈ ಧರೆಯು ಇಲ್ಲೇ  ಬಾಯ್ತೆಗೆದರೂ ನಿನ್ನ ಬಿಡೆನು|

ಕಷ್ಟಗಳು ದಟೈಸಿ ಬಂದರೂ ಸಾಗರ ಬೋರ್ಗರೆದರೂ
ಸಹಸ್ರ ಅಪಾದನೆಗಳು ಬಂದರೂ ನಿನ್ನ ಬಿಡೆನು|

ರಂಭೆ ಊರ್ವಶಿ ಅಪ್ಸರೆಯರ ಚೆಲವು
 ಬೇಕಿಲ್ಲ
ಸಕಲ ಸಂಪತ್ತು ಐಶ್ವರ್ಯದ ಆಮಿಷವೊಡ್ಡಿದರೂ ನಿನ್ನ ಬಿಡೆನು|

ನಿನ್ನಧರದ ಸಿಹಿಜೇನ ಮರೆತಿಲ್ಲ ಸವಿನೆನಪು ಕಳೆದಿಲ್ಲ
ಎದುರಿಗಾವ ಸ್ವರ್ಗತಂದಿರಿಸಿದರೂ ನಿನ್ನ ಬೆಡೆನು|

ಸೀಜೀವಿಯ ಅಂತರಂಗದ ರಾಣಿ ಒಲವಿನ ವಾಣಿ
ಒಲ್ಲೆಯೆಂದು ನೀನನ್ನ ದೂರತಳ್ಳಿದರೂ ನಿನ್ನ ಬಿಡೆನು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ನವೆಂಬರ್ 2017

*ಕರ್ಮ* ಆದ್ಯಾತ್ಮ ಚಿತ್ರ ಕವನ

*ಕರ್ಮ* ಆದ್ಯಾತ್ಮ ಚಿತ್ರ ಕವನ

ಬೀಸಬೇಕು ನಾವೆಲ್ಲರು ರಾಗಿಯ
ಸೋಸಬೇಕು ಅನ್ಯ  ಕಸಕಡ್ಡಿಯ
ಕಾಯಕವೆ ಕೈಲಾಸ ಪಾಲಿಸಬೇಕು
ಪಾಯಸವು ಜೀವನ ಸವಿಯಬೇಕು

ಬೀಸು ಕಲ್ಲಿನಂತಹ ಜೀವನದಿ
ಬೀಸುತಿರಬೇಕು ನಿರಂತರ
ಈಸೀಸೇ ಧಾನ್ಯ ಹಾಕಬೇಕು
ಇಲ್ಲಿ ಮಿತ ಆಸೆಗಳಿರಬೇಕು

ತಾಳ್ಮೆಯಿಂದ ಏಕಾಗ್ರತೆಯಲಿ ಬೀಸಿದರೆ
ಬರುವುದು ಭಕ್ತಿ ಯೆಂಬ ಹಿಟ್ಟು
ಅದ ನೋಡಿ ನಮಗಾಗುವುದು
ಆತ್ಮಾನಂದ ಸ್ವಯಂ ತೃಪ್ತಿ

ನಮ್ಮ ಕರ್ಮ ನಾವು ಮಾಡಬೇಕು
ಫಲಾಫಲ  ಭಗವಂತಗೆ ಬಿಡಬೇಕು
ನಾಳಿನ ಕೂಳಿಗೆ ಇಂದು ದುಡಿಬೇಕು
ಕೊನೆಗೆ ಪರಮಾತ್ಮನಲಿ ಲೀನವಾಗಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ದೋಣಿ)

*ಹನಿಗವನಗಳು*

*೧*

*ಇಂದೇ*

ಅವಳ ಸೌಂದರ್ಯಕ್ಕೆ ಮರುಳಾಗಿ
ನನ್ನ ಬಾಳ ದೋಣಿಯ ಪಯಣಿಗಳಾಗುವೆಯಾ
ಅಂದೆ
ಅವಳೆಂದಳು ಕರೆದು ಕೊಂಡ ಬರಲೇ
ನನ್ನ ಗಂಡ ಮಕ್ಕಳನ್ನು
ಇಂದೇ ?

*೨*

*ಬೋಣಿ*

ನಾನಂದೆ ಪ್ರಿಯೆ ಬಾ ಹತ್ತು ನನ್ನ
ಜೀವನದ ದೋಣಿ
ಅವಳು ಮಾಡೇ ಬಿಟ್ಟಳು
ನನ್ನ ಕೆನ್ನೆಗೆ ಬೋಣಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 ನವೆಂಬರ್ 2017

ಸ್ವಗತ (ಕವನ)ಹನಿ ಹನಿ ಇಬ್ಬನಿ ಬಳಗದಿಂದ ಬಹುಮಾನಿತ ಕವನ



*ಸ್ವಗತ*

ಜೀವನದ ಯಾತ್ರೆಗೆ ನಾನು ಬಂದಿಹೆನಿಲ್ಲಿ
ನಾಲ್ಕು ದಿನದ ಜಾತ್ರೆಗೆ ಬಂದಿರುವೆನಿಲ್ಲಿ|

ಹಲವು ನಿಲ್ದಾಣ ತಲುಪಿ ತಂಗಿರುವೆ
ಕೆಲವು ಅನುಭವ ಅಲ್ಲಿ ಪಡೆದಿರುವೆ
ಪಯಣದಿ ಏರು ಪೇರು ನೋಡಿರುವೆ
ಹಿಗ್ಗದೇ ಕುಗ್ಗದೇ ಮುನ್ನುಗ್ಗುತಿರುವೆ ||

ಜೀವನ ಹಲವಾರು ಪಾಠ ಕಲಿಸಿದೆ
ಇನ್ನೂ ಕೆಲ ಅಧ್ಯಾಯ ಅರ್ಥವಾಗಬೇಕಿದೆ
ಮಿತ್ರರು ಶತೃಗಳಾದ ನೋವಿನ ನೆನಪಿದೆ
ಅಪರಿಚಿತರ ಸಹಾಯ ಪಡೆದ ಧನ್ಯತೆಯಿದೆ||

ಸಂಬಂಧಗಳಲಿ ಮುಖವಾಡ ಕಂಡೆನಿಲ್ಲಿ
ಹಣ ಅಂತಸ್ತಿಗೆ ಹೆಚ್ಚು ಬೆಲೆ ಇಲ್ಲಿ
ಬದಲಾಗಬೇಕೆ ನಾನು ಸಮಯಸಾಧಕರಂತೆ
ಮನಸು ಹೇಳುತಿದೆ ಬಾಳು ನೀ ಸಾಧಕರಂತೆ||

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ನವೆಂಬರ್ 2017

ಹನಿಗವನಗಳು (ಭಗ್ನಪ್ತೇಮಿ)

ಹನಿಗವನಗಳು

*ಗಮಾರ*

ಮಧುಚಂದ್ರಕೆ ಬಂದೆ
ಮಧು ಹೋರಟುಹೋದಳು
ಬರೀ ಚಂದಿರ
ಅಣಕಿಸುತಿಹನು ಅವನು
ಎಲ್ಲಿ ಹೋಯಿತು ನಿನ್ನ ಪ್ರೀತಿ
ನಾ ಹೇಳಿದೆ
ಅವಳೊಂದು ಕೋತಿ
ಇಂದು ಈ ಮರ
ನಾಳೆ ಆ ಗಮಾರ

*ಕಾಯುತಿಹೆನು*

ನಾನೊಬ್ಬ ಭಗ್ನ ಪ್ರೇಮಿ
ಅವಳು ಕೇಳಿದಳು
ನಿನ್ನ ಕಾಯಕವೇನು
ನಾನು ಹೇಳಿದೆ
ಕವನ ಬರೆಯುವೆನು
ಹೇಳಿ ಹೋದಳು
ಈಗ ಬರುವೆನು
ಇಂದಿಗೂ ಬಂದಿಲ್ಲ
ಹಾಗೆಯೇ ಕಾಯುತಿಹೆನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*