This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
21 ನವೆಂಬರ್ 2017
20 ನವೆಂಬರ್ 2017
ಸ್ವಗತ (ಕವನ)ಹನಿ ಹನಿ ಇಬ್ಬನಿ ಬಳಗದಿಂದ ಬಹುಮಾನಿತ ಕವನ
*ಸ್ವಗತ*
ಜೀವನದ ಯಾತ್ರೆಗೆ ನಾನು ಬಂದಿಹೆನಿಲ್ಲಿ
ನಾಲ್ಕು ದಿನದ ಜಾತ್ರೆಗೆ ಬಂದಿರುವೆನಿಲ್ಲಿ|
ಹಲವು ನಿಲ್ದಾಣ ತಲುಪಿ ತಂಗಿರುವೆ
ಕೆಲವು ಅನುಭವ ಅಲ್ಲಿ ಪಡೆದಿರುವೆ
ಪಯಣದಿ ಏರು ಪೇರು ನೋಡಿರುವೆ
ಹಿಗ್ಗದೇ ಕುಗ್ಗದೇ ಮುನ್ನುಗ್ಗುತಿರುವೆ ||
ಜೀವನ ಹಲವಾರು ಪಾಠ ಕಲಿಸಿದೆ
ಇನ್ನೂ ಕೆಲ ಅಧ್ಯಾಯ ಅರ್ಥವಾಗಬೇಕಿದೆ
ಮಿತ್ರರು ಶತೃಗಳಾದ ನೋವಿನ ನೆನಪಿದೆ
ಅಪರಿಚಿತರ ಸಹಾಯ ಪಡೆದ ಧನ್ಯತೆಯಿದೆ||
ಸಂಬಂಧಗಳಲಿ ಮುಖವಾಡ ಕಂಡೆನಿಲ್ಲಿ
ಹಣ ಅಂತಸ್ತಿಗೆ ಹೆಚ್ಚು ಬೆಲೆ ಇಲ್ಲಿ
ಬದಲಾಗಬೇಕೆ ನಾನು ಸಮಯಸಾಧಕರಂತೆ
ಮನಸು ಹೇಳುತಿದೆ ಬಾಳು ನೀ ಸಾಧಕರಂತೆ||
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
19 ನವೆಂಬರ್ 2017
ಹನಿಗವನಗಳು (ಭಗ್ನಪ್ತೇಮಿ)
ಹನಿಗವನಗಳು
*ಗಮಾರ*
ಮಧುಚಂದ್ರಕೆ ಬಂದೆ
ಮಧು ಹೋರಟುಹೋದಳು
ಬರೀ ಚಂದಿರ
ಅಣಕಿಸುತಿಹನು ಅವನು
ಎಲ್ಲಿ ಹೋಯಿತು ನಿನ್ನ ಪ್ರೀತಿ
ನಾ ಹೇಳಿದೆ
ಅವಳೊಂದು ಕೋತಿ
ಇಂದು ಈ ಮರ
ನಾಳೆ ಆ ಗಮಾರ
*ಕಾಯುತಿಹೆನು*
ನಾನೊಬ್ಬ ಭಗ್ನ ಪ್ರೇಮಿ
ಅವಳು ಕೇಳಿದಳು
ನಿನ್ನ ಕಾಯಕವೇನು
ನಾನು ಹೇಳಿದೆ
ಕವನ ಬರೆಯುವೆನು
ಹೇಳಿ ಹೋದಳು
ಈಗ ಬರುವೆನು
ಇಂದಿಗೂ ಬಂದಿಲ್ಲ
ಹಾಗೆಯೇ ಕಾಯುತಿಹೆನು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಗಮಾರ*
ಮಧುಚಂದ್ರಕೆ ಬಂದೆ
ಮಧು ಹೋರಟುಹೋದಳು
ಬರೀ ಚಂದಿರ
ಅಣಕಿಸುತಿಹನು ಅವನು
ಎಲ್ಲಿ ಹೋಯಿತು ನಿನ್ನ ಪ್ರೀತಿ
ನಾ ಹೇಳಿದೆ
ಅವಳೊಂದು ಕೋತಿ
ಇಂದು ಈ ಮರ
ನಾಳೆ ಆ ಗಮಾರ
*ಕಾಯುತಿಹೆನು*
ನಾನೊಬ್ಬ ಭಗ್ನ ಪ್ರೇಮಿ
ಅವಳು ಕೇಳಿದಳು
ನಿನ್ನ ಕಾಯಕವೇನು
ನಾನು ಹೇಳಿದೆ
ಕವನ ಬರೆಯುವೆನು
ಹೇಳಿ ಹೋದಳು
ಈಗ ಬರುವೆನು
ಇಂದಿಗೂ ಬಂದಿಲ್ಲ
ಹಾಗೆಯೇ ಕಾಯುತಿಹೆನು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಗಜ಼ಲ್ ೯(ಕವಿತೆ)
ಗಜ಼ಲ್ ೯
ಭಾವನೆಗಳ ವ್ಯಕ್ತ ಪಡಿಸಲು ಬರೆಯುವೆ ಕವಿತೆ
ನನ್ನ ಆತ್ಮ ತೃಪ್ತಿಗಾಗಿ ಸೃಷ್ಟಿ ಮಾಡುವೆ ಕವಿತೆ
ನವರಸಗಳ ಬಳಕೆಯಿಲ್ಲದಿದ್ದರೂ ರಸವತ್ತಾದ
ಸಮರಸ ತತ್ವ ಸಾರುವ ರಚನೆ ಅದುವೆ ಕವಿತೆ
ಭಾವನೆಗಳ ತಾಕಲಾಟ ಬರೆವ ಪೀಕಾಲಾಟ
ಮುಗಿಸಿ ಮಗು ಪಡೆವಂತೆ ಹಡೆಯುವೆ ಕವಿತೆ
ಪ್ರಾಸ ತ್ರಾಸಗಳ ಅರಿವಿಲ್ಲದ ನೋವು ನಲಿವ ಮರೆಯದ
ಸರಿ ತಪ್ಪುಗಳ ಸಂಘರ್ಷ ಮುಗಿಸಿ ಪಡೆಯುವೆ ಕವಿತೆ
ಸೀಜೀವಿಯ ಹೃದಯ ಭಾಷೆಯನು ಸಹೃದಯರಿಗೆ
ತಲುಪಿಸಲು ಅನವರತ ನಾ ರಚಿಸುವೆ ಕವಿತೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಭಾವನೆಗಳ ವ್ಯಕ್ತ ಪಡಿಸಲು ಬರೆಯುವೆ ಕವಿತೆ
ನನ್ನ ಆತ್ಮ ತೃಪ್ತಿಗಾಗಿ ಸೃಷ್ಟಿ ಮಾಡುವೆ ಕವಿತೆ
ನವರಸಗಳ ಬಳಕೆಯಿಲ್ಲದಿದ್ದರೂ ರಸವತ್ತಾದ
ಸಮರಸ ತತ್ವ ಸಾರುವ ರಚನೆ ಅದುವೆ ಕವಿತೆ
ಭಾವನೆಗಳ ತಾಕಲಾಟ ಬರೆವ ಪೀಕಾಲಾಟ
ಮುಗಿಸಿ ಮಗು ಪಡೆವಂತೆ ಹಡೆಯುವೆ ಕವಿತೆ
ಪ್ರಾಸ ತ್ರಾಸಗಳ ಅರಿವಿಲ್ಲದ ನೋವು ನಲಿವ ಮರೆಯದ
ಸರಿ ತಪ್ಪುಗಳ ಸಂಘರ್ಷ ಮುಗಿಸಿ ಪಡೆಯುವೆ ಕವಿತೆ
ಸೀಜೀವಿಯ ಹೃದಯ ಭಾಷೆಯನು ಸಹೃದಯರಿಗೆ
ತಲುಪಿಸಲು ಅನವರತ ನಾ ರಚಿಸುವೆ ಕವಿತೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
18 ನವೆಂಬರ್ 2017
ವೈದ್ಯರ ಮುಷ್ಕರ ಕುರಿತ ಹನಿಗವನಗಳು
ವೈದ್ಯರ ಮುಷ್ಕರ ಕುರಿತ ಹನಿಗವನಗಳು
*೧*
*ನಿಂತಿದೆ*
ಅಂತೂ ವೈದ್ಯರ ಮುಷ್ಕರ ನಿಂತಿದೆ
ಅದಕ್ಕೂ ಮದಲೇ ೬೬ ಅಮಯಕ
ಜನರ ಉಸಿರು ನಿಂತಿದೆ
*೨*
*ಹರೊಹರ*
ವೈದ್ಯರು ಮಾಡಿದರು ಮುಷ್ಕರ
ರೋಗಿಗಳ ಪಾಡು
ಹರೋಹರ
*೩*
*ನಡೆ*
ವೈದ್ಯರ ಮುಷ್ಕರ ಎಲ್ಲೆಡೆ
ಸರ್ಕಾರ, ವೈದ್ಯರು ನೀ ಕೊಡೆ, ನಾಬಿಡೆ
ಸರಿಯಲ್ಲ ಈ ನಡೆ
ಎಷ್ಟೋ ರೋಗಿಗಳಿಗೆ ಖಾತ್ರಿಯಾಯಿತು
ತಿಥಿ ವಡೆ
*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*
*೧*
*ನಿಂತಿದೆ*
ಅಂತೂ ವೈದ್ಯರ ಮುಷ್ಕರ ನಿಂತಿದೆ
ಅದಕ್ಕೂ ಮದಲೇ ೬೬ ಅಮಯಕ
ಜನರ ಉಸಿರು ನಿಂತಿದೆ
*೨*
*ಹರೊಹರ*
ವೈದ್ಯರು ಮಾಡಿದರು ಮುಷ್ಕರ
ರೋಗಿಗಳ ಪಾಡು
ಹರೋಹರ
*೩*
*ನಡೆ*
ವೈದ್ಯರ ಮುಷ್ಕರ ಎಲ್ಲೆಡೆ
ಸರ್ಕಾರ, ವೈದ್ಯರು ನೀ ಕೊಡೆ, ನಾಬಿಡೆ
ಸರಿಯಲ್ಲ ಈ ನಡೆ
ಎಷ್ಟೋ ರೋಗಿಗಳಿಗೆ ಖಾತ್ರಿಯಾಯಿತು
ತಿಥಿ ವಡೆ
*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




