14 ನವೆಂಬರ್ 2017

ಪ್ರೇಮ ತೋರಣ (ಚಿತ್ರ ಕವನ)



*ಪ್ರೇಮ ತೋರಣ*

ಕುಣಿಯುತ  ನಲಿಯುವ ಬಾರೆ
 ನನ್ನೊಲವಿನ  ಸುಂದರ ನೀರೆ
ಜಗದ ಗೊಡವೆ ಮರೆಯೋಣ
ಇಬ್ಬರೂ ಒಂದಾಗಿ ನಲಿಯೋಣ/

ಮುಂದೆ ಬರದೀ ಶುಭ  ಘಳಿಗೆ
ಮಧುವ  ಸವಿಯೋಣ ಮೆಲ್ಲಗೆ
ಕತ್ತಲಾಗಲಿ ಬೇಗ ಎನ್ನೊಣ
ಬೆಳಕಾಗದಿರಲಿ ಕೆಡಿಸಲು ಮಿಲನ/

ರತಿ ಮನ್ಮಥರಾಗಿ ಸುಖಿಸೋಣ
ಸರಸದಿ ಶೃಂಗಾರ ರಸ ಸುರಿಸೋಣ
ಇಂದೇ ಕೊನೆಯಂತೆ ಬಾಳೋಣ
ಮೈಮನದ ಹಬ್ಬ ಮಾಡೋಣ/

ಮನದಣಿಯೆ ಕಣಿದು ನಲಿಯೋಣ
ಅನ್ಯೋನ್ಯತೆ ಪಾಠವ  ಸಾರೋಣ
ಪ್ರೇಮಿಗಳಿಗೆ ಮಾರ್ಗ ತೋರೋಣ
ಕಟ್ಟೋಣ ನಾವು ಪ್ರೇಮತೋರಣ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ನವೆಂಬರ್ 2017

ನಾನೇಕೆ ಬರೆಯುತ್ತೇನೆ?(ಲೇಖನ)

ನಾನೇಕೆ ಬರೆಯುತ್ತೇನೆ

ಬರವಣಿಗೆಯು ಮಾನವನ ಅಭಿವ್ಯಕ್ತಿಯ ಮಾಧ್ಯಮ ಆಗಿರುವುದರಿಂದ ಹಲವರು ಈ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬರವಣಿಗೆ ಸಹಕಾರಿ
ನಾನು ಬರವಣಿಗೆ ಆರಂಭಿಸಲು ಪರೋಕ್ಷವಾಗಿ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಯುತ ಟಿ.ಎನ್ ತಿಪ್ಪೇಸ್ವಾಮಿ ರವರು ಕಾರಣ ನಾನು ನಾಲ್ಕನೇ ತರಗತಿ ಓದುತ್ತಿದ್ದಾಗಲೇ ನನಗೆ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ಅದನ್ನು ಪ್ರತ್ಯೇಕವಾದ ಪುಸ್ತಕ ಇಟ್ಟು ಬರೆಯಲು ಹೇಳಿದ್ದರು. ಆರಂಭದಲ್ಲಿ ಅವರನ್ನು ಬೈಯ್ದುಕೊಂಡು ಬರೆಯಲು ಆರಂಭ ಮಾಡಿದ ಆ ಕೆಲಸ ಕ್ರಮೇಣ ಇಚ್ಚೆ ಪಟ್ಟು ಒಳ್ಳೆಯ ಕಾರ್ಯ ಮಾಡುವ ಜೊತೆ ದಿನಚರಿಯ ಬರೆಯುವ ಅಭ್ಯಾಸ ಆಯಿತು.
ಮುಂದೆ ನಮ್ಮ ಗುರುಗಳು ನನಗೆ ಪತ್ರ ಬರೆಯಲು ಅವರ ಹಣದಲ್ಲಿ ಪೋಸ್ಟ್ ಕಾರ್ಡ್ ತಂದು ನಮ್ಮ ಸಂಬಂಧಿಗಳಿಗೆ ವಾರಕ್ಕೋಂದಾದರೂ ಪತ್ರ ಬರೆಸುತ್ತಿದ್ದರು ಈಗೆ ನನ್ನ ಮೊದಲ ಬರಹಗಳು ಆರಂಭವಾದರೆ
ಹೈಸ್ಕೂಲ್ ‌ಮತ್ತು ಪಿ.ಯು.ನಲ್ಲಿ ನನ್ನ ಬರಹ ಕಡಿಮೆಯಾಗಿ ಕೇವಲ ಪರೀಕ್ಷೆಗೆ ಸೀಮಿತವಾಗಿತ್ತು. ಪದವಿಯಲ್ಲಿ ವಿವಿಧ ಸಂಸ್ಥೆಯ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಂತರ ನನ್ನ ಬರವಣಿಗೆ ಪಯಣ ಮುಂದುವರೆಯಿತು .ಅಂದಿನ ಪ್ರಧಾನ ಮಂತ್ರಿಯಾದ ಮಾನ್ಯ ವಾಜಪೇಯಿ ಸರ್ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಾಚಕರ ವಾಣಿಯ ಲ್ಲಿ ಮೊದಲಿಗೆ ನಾನು ಬರೆದ ಬರಹ ಪ್ರಕಟವಾದಾಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿ  ಬರೆಯಲು ಮುಂದುವರೆಸಿದೆ ಅದುಇಂದಿಗೂ ನಾಡಿನ ಬಹುತೇಕ ಪತ್ರಿಕೆಯಲ್ಲಿ ಮತ್ತು ನಿಯತಕಾಲಿಕಗಳಲ್ಲಿ  ನನ್ನ ಬರಹಗಳು ಪ್ರಕಟವಾಗುವ ಮೂಲಕ ಮುಂದುವರೆದಿದೆ

*ಅಷ್ಟಕ್ಕೂ ನಾನು ಏಕೆ ಬರೆಯುವೆ*
ನಾನು ಸಮಾಜದಲ್ಲಿ ಕಾಣುವ ಒಳ್ಳೆಯ ಮತ್ತು ಕೆಟ್ಟ ಅಂಶಗಳ ಆಧಾರದ ಮೇಲೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬರವಣಿಗೆಯನ್ನು ಆರಂಬಿಸಿದೆ ಸರ್ಕಾರಿ ನೌಕರಿ ಸಿಗುವ ಮೊದಲು ಸರ್ಕಾರದ ತಪ್ಪು ನಿರ್ಧಾರಗಳನ್ನು ಮತ್ತು ರಾಜಕಾರಣಿಗಳ ಗುಣಾವಗುಣಗಳ ಬಗ್ಗೆ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು.
ಈಗ ನನ್ನ ಆತ್ಮ ಸಂತೋಷಕ್ಕಾಗಿ ಮತ್ತು ಸಹೃದಯರ ಓದಿಗಾಗಿ ಕವನ,ಹನಿಗವನ,ನ್ಯಾನೋ ಕಥೆ, ಗಜಲ್, ಮುಂತಾದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಬಿಡುವಿದ್ದಾಗ ನನ್ನ ಬರವಣಿಗೆಯನ್ನು ನಿಮ್ಮಂತಹ ಸಹೃದಯರೊಂದಿಗೆ ಹಂಚಿಕೊಂಡು ಸಲಹೆ ವಿಮರ್ಶೆ ಸ್ವೀಕರಿಸಿ ಬರವಣಿಗೆಯನ್ನು ಮುಂದುವರೆಸಿರುವೆನು.
ಒಟ್ಟಿನಲ್ಲಿ ಬರವಣಿಗೆ ನನಗೆ ಒಂದು ಆತ್ಮತೃಪ್ತಿ.ಆನಂದ ನೆಮ್ಮದಿ ನೀಡಿದೆ ಜೊತೆಗೆ ಓದುಗ ಮಿತ್ರರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿ ದಾಗ ಆಗುವ ಆನಂದ ವರ್ಣಿಸಲಸದಳ.
ಒಟ್ಟಿನಲ್ಲಿ ಬರವಣಿಗೆ ಈಗ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ನನ್ನ ನೋಡಿ ನನ್ನ ಮಕ್ಕಳು ಬರೆಯಲು ಆರಂಬಿಸಿರಿವುದು ಮತ್ತೊಂದು ಸಂತೋಷ.
ವಂದನೆಗಳೊಂದಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ನವೆಂಬರ್ 2017

ಗಜಲ್ ೭(ಹೇಗೆ ಮರೆಯಲಿ)

*ಗಜ಼ಲ್*

ಬಾಲ್ಯದ  ಲೀಲೆಗಳ ನೆನಪ ಹೇಗೆ ಮರೆಯಲಿ
ಆ ಬಂಗಾರದ ದಿನಗಳ ನೆನಪ  ಹೇಗೆ ಮರೆಯಲಿ

ಲಂಟಾನದ ಗಿಡದ ಅಂಟು ಜೇನ ಕೀಳಲು ಹೋಗಿ
ಎಂಟು ಕಡೆ ಕಚ್ಚಿಸಿಕೊಂಡರೂ ಸವಿಜೇನು ಸವಿದ ನೆನಪ ಹೇಗೆ ಮರೆಯಲಿ

ಸಲಿಲದಲಿ  ಗೆಳಯರೊಡನೆ ಈಜಾಡಿ
ಕದ್ದು  ಮಾವು ತಿಂದಾಗ ಸಿಟ್ಟಾದ  ಗೌಡರ ಪ್ರತಾಪ ಹೇಗೆ ಮರೆಯಲಿ

ಓತಿಕ್ಯಾತ ಹೊಡೆದು ಬಾಯಲಿ ಕಾಸಿಟ್ಟು
ಕಾಸು ಸಿಗುವುದೆಂದು ಹುಡುಕಿಹೊರಟ ಸವಿ ನೆನಪ ಹೇಗ ಮರೆಯಲಿ

ಬಣ್ಣದಲಿ ಕಪ್ಪಿದ್ದರೂ ಕಣ್ಣುಗಳಲೇ ಆಕರ್ಷಿಸಿದ
ಸುಲೋಚನೆಯ ಜೊತೆಯ ಸಲ್ಲಾಪ ಹೇಗೆ ಮರೆಯಲಿ

ಕೆರೆಯಮಣ್ಣಿನಿಂದ ಗಣಪನ ಮಾಡಿ ಪೂಜಿಸಿ
ಸೀಜೀವಿ ಜೊತೆ ಮೆರವಣಿಗೆ ಮಾಡಿದ ಭಕ್ತಿ  ನೆನಪ ಹೇಗೆ ಮರೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 ನವೆಂಬರ್ 2017

ಮಾದರಿ(ನ್ಯಾನೋ ಕಥೆ) ಕಿರು ಚಿತ್ರ ಆಗಲಿರುವ ಕಥೆ

*ನ್ಯಾನೋ ಕಥೆ*

ಸ್ವಚ್ಚಭಾರತ್ ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯತ್ ಅಧ್ಯಕ್ಷರು ,ಕಾರಿನಿಂದಿಳಿದು ಗುಟ್ಕಾ ಜಗಿದು ಪಂಚಾಯಿತಿ ಕಛೇರಿ ಕಾಂಪೌಂಡ್ ಗೋಡೆಗೆ ಉಗಿದು ಮುಂದೆ ಸಾಗಿ ,ಅಂದು ಸ್ವಚ್ಛತೆ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಬಂದ ಸಂಪತ್ ಕುಮಾರ್ ಕೈ ಕುಲುಕಿದರು. ಸಂಪತ್ ಕುಮಾರ್ ರವರು ತಮ್ಮ ಬ್ಯಾಗ್ ನಲ್ಲಿನ ನೀರಿನ ಬಾಟಲ್ ತೆಗೆದು ಕುಡಿದು ಖಾಲಿ ಬಾಟಲ್ ನ್ನು ಅಲ್ಲೇ ಎಸೆದು ,ಉಪನ್ಯಾಸ ಮಾಡಲು ಹೊರಟರು. ಇದನ್ನು ಗಮನಿಸಿದ ಸುನೀತಾ ಎಂಬ ಆರನೇ ತರಗತಿ ವಿದ್ಯಾರ್ಥಿನಿ ,ಅಲ್ಲಿ ಬಿಸಾಡಿದ್ದ ಖಾಲಿ ಬಾಟಲ್ ತೆಗೆದುಕೊಂಡು. ಅದರಲ್ಲಿ ನೀರು ತಂದು ಅದ್ಯಕ್ಷರು ಉಗುಳಿದ್ದ ಗುಟ್ಕಾ ಕೊಳೆ ತೊಳೆದು ಖಾಲಿ ಬಾಟಲ್ ನ್ನು ಡಸ್ಟ್ ಬಿನ್ ಗೆ ಎಸೆದು ಶಾಲೆಯ ಕಡೆ ಹೆಜ್ಜೆ ಹಾಕಿದಳು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ನವೆಂಬರ್ 2017

ಕಿರು ಕಥೆ ಜೀವನ ನಾವಂದುಕೊಂಡಂತಲ್ಲ

*ನ್ಯಾನೋ ಕಥೆ*
*ಜೀವನ ನಾವಂದುಕೊಂಡಂತಲ್ಲ*

ಪಟ್ಟಣದ ಜಂಜಡದ ಜೀವನಕ್ಕೆ ಒಗ್ಗಿ ಹೋಗಿದ್ದ ಸುರೇಶ ಹೊತ್ತು ಹೊತ್ತಿಗೆ ತುತ್ತಿನ ಚೀಲ ತುಂಬಿಸಲು ಆಟೋ ಓಡಿಸಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಜೀವನ ಸಾಗಿಸುತ್ತಿದ್ದನು.ನೀನು ಒಂದು ಮದುವೆ ಮಾಡಿಕೋ ನಮಗೂ ವಯಸ್ಸಾಯಿತು ಮೊಮ್ಮಕ್ಕಳ ನೋಡುವ ಸಆಸೆ ಎಂದು ಅವನ ಅಮ್ಮನ ಬೇಡಿಕೆಗೆ ನಗುತ್ತಲೇ ಕಾಲ ತಳ್ಳುತ್ತಿದ್ದ ಸುರೇಶನಿಗೆ ಒಳಗೊಳಗೇ ತನ್ನ ಅಕ್ಕನ ಮಗಳಾದ ದೀಪಾಳನ್ನು ಮದುವೆಯಾಗಲು ಆಸೆ ಪಟ್ಟಿದ್ದ ಆದರೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
ತನ್ನ ಅಕ್ಕ ಶಾರದಮ್ಮನನ್ನು ಮೈಸೂರಿನ ಒಂಟಿಕೊಪ್ಪಲ್ ನ  ರವಿಗೆ ಕೊಟ್ಟು ಮದವೆ ಮಾಡಿದ್ದರು ಚೆನ್ನಾಗಿ ದುಡಿಯುತ್ತಿದ್ದ ಭಾವ ದೀಪ ಒಂಬತ್ತನೇ ತರಗತಿಯಲ್ಲಿ ಓದುವಾಗ ಖಾಯಿಲೆಯಿಂದ ಮರಣಹೊಂದಿದರು. ಆ ಸಮಯದಲ್ಲಿ ಗಂಡನಮನೆಯ ಕಿರುಕುಳದಿಂದ ತಾಯಿಯ ಊರಿಗೆ ಬಂದರೂ ಸ್ವಾಭಿಮಾನಿ ಶಾರದಮ್ಮ ಟೈಲರಿಂಗ್ ಮಾಡಿ ಮಗಳನ್ನು ಬೆಂಗಳೂರಿನಲ್ಲಿ ಪದವಿ ಓದಿಸುತ್ತಿದ್ದಾಳೆ.
ಸುರೇಶ್ ನ ಪೋನ್ ರಿಂಗಾದಾಗ ಸುರೇಶ್ ಆಟೋ ರಸ್ತೆ ಬದಿಗೆ ನಿಲ್ಕಿಸಿದ ' ಸುರೇಶ ದೀಪಾ ಬೆಂಗಳೂರಿನಿಂದ ಬರ್ತಾ ಇದಾಳಂತೆ ಬಸ್ಟಾಂಡ್ಗೆ ಹೋಗಿ ಕರ್ಕೊಂಡು ಬಾರೋ' ಎಂದದ್ದೇ ತಡ ಆಯಿತು ಅಕ್ಕ ಎಂದು ಅತಿ ವೇಗವಾಗಿ ಆಟೋ ಬಸ್ಟಾಂಡ್ ಕಡೆಗೆ ಓಡಿಸಿದ .ಇವನಿಗಾಗಿಯೇ ಕಾಯುತ್ತಿದ್ದ ದೀಪಾ ಮುಗುಳ್ನಕ್ಕು ಆಟೋ ಏರಿ ಮನೆ ಸೇರಿದಳು .ಸುರೇಶ ಅಕ್ಕಾ ನಾನು ಬರುತ್ತೇನೆ ಎಂದು ಗೊರಡಲನುವಾದ ಆದರೆ ಶಾರದಮ್ಮ ಅವನನ್ನು ತಡೆದು 'ಟೀ ಕುಡಿದು ಹೋಗು "ಎಂದಳು .ಟೀ ಕುಡಿಯುತ್ತಾ ಮಗಳ ಮದುವೆಯ ಪ್ರಸ್ತಾಪವನ್ನು ಮಾಡಿ ತಮ್ಮನ ಮದುವೆಯಾಗಲು ಹೇಳಿದಾಗ ದೀಪ ಕಡ್ಡಿ ಮುರಿದಂತೆ ನಾನು ಆಟೋ ಒಡಿಸುವವನ ಮದುವೆಯಾಗಲ್ಲ ಎಂದಳು .ಸುರೇಶನ ಆಶಾಸೌಧ ಕುಸಿಯಿತು, ಶಾರದಮ್ಮನ ಕನಸು ಭಗ್ನವಾಯಿತು .
ಎಂಟು ವರ್ಷಗಳ ನಂತರ ಇಬ್ಬರು ದಂಪತಿಗಳು ಇದ್ದ ಕೆಲಸ ಕಳೆದುಕೊಂಡು ಬೆಂಗಳೂರಿನಲ್ಲಿ ಕೆಲಸ ಹುಡುಕಲು ಹೊರಟರೆ ಎಲ್ಲಾ ಕಡೆ ಕೆಲಸ ಖಾಲಿ ಇಲ್ಲ ಎಂಬ ಬೋರ್ಡ್ ನೋಡಿ ಬೇಸತ್ತರು ಕೊನೆಗೆ   ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೆಲಸ ಕೇಳಿಕೊಂಡು ಬಂದರು ಅವರಿಗೆ ಕೆಲಸ ಖಚಿತವಾದಾಗ ಗೊತ್ತಾಗುತ್ತದೆ ಆ ಕಂಪನಿಯು ಮಾಲಿಕ ಸುರೇಶ ಎಂದು ಕೆಲಸ ಕೇಳಿ ಕೊಂಡು ಬಂದ ದಂಪತಿಗಳು ದೀಪಾ ಮತ್ತು ಅವಳ ಗಂಡ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*