22 ಅಕ್ಟೋಬರ್ 2017

ಸಾಲು ದೀಪಾವಳಿ

*ಸಾಲು ದೀಪಾವಳಿ*

ನೂರು ಹೆಜ್ಜೆ ದೂರದಲಿಹರು ನಮ್ಮ ಸ್ನೇಹಿತರು/
ಮೂರು ಚಿಕ್ಕ ಗುಡಿಸಲು ನಮ್ಮ ವಾಸದ ತಾಣವು/
ಕಾರು ಬಂಗಲೆ ಮಹಲು ಅವರೆ ಕುಬೇರರು/
ಗುಡಿಸಲು ಜೋಪಡಿಗಳೇ ನಮ್ಮ ಮಹಾಲಯವು/

ಹಬ್ಬದ ಸಡಗರಕೆ ತಂದರವರು ಪಟಾಕಿಯ /
ಕಾಯುತಿಹೆವು ನಾವು ನೋಡಲು ಚಟಾಕಿಯ/
ತಂದಿಹರು ಆನೆ ಪಟಾಕಿ ಸುರ್ ಸುರ್ ಬತ್ತಿ‌/
ಹಚ್ಚುವರು ಬೆಳಗುವರು ಸಾಲು ದೀಪಾವಳಿಯ /

ಅದೋ ಹಚ್ಚಿದರು ಆನೆ ಪಟಾಕಿಯ ನೋಡು/
ಡಂ ಎಂದಿತು ಬಂದು ನಮ್ಮ ಮನೆಯಂಗಳದಿ/
ಇದೋ ಬಂತು ಭೂಚಕ್ರ ಸುತ್ತುತ್ತಾ ಬೀದಿಯ /
ಸುತ್ತಿ ಸುಳಿದು ಬೆಳಕು ನೀಡಿತು ಹೃದಯದಾಳದಿ /

ಅವರ ರಾಕೆಟ್ ನಮ್ಮಂಗಳದಿ ನಿಲ್ಲುವುದು/
ಸೂರೆಗೊಳ್ಳುವುದು ನಮ್ಮ ಕಣ್ಣುಗಳ /
ಅವರ ಮನೆಯಲ್ಲಿ ಕಟ್ಟಿದ ಆಕಾಶ ಬುಟ್ಟಿ/
ಬೆಳಗುವುದು ನಮ್ಮ ಮನೆ ಮೈ  ಮನಗಳ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ಅಕ್ಟೋಬರ್ 2017

ಕೋರಿಕೆ (ನ್ಯಾನೋ ಕಥೆ)

       
*ನ್ಯಾನೋ ಕಥೆ*
*ಕೋರಿಕೆ*
ಕ್ಷುಲ್ಲಕ ಕಾರಣಕ್ಕೆ ರವಿಯ ಅತ್ತೆ ರವಿಯನ್ನು ಅಂದು ವಾಚಾಮಗೋಚರವಾಗಿ ಬೈದು ಹಬ್ಬಕ್ಕೆ ಬಂದ ಅಳಿಯ ಮಗಳನ್ನು ಮನೆಯಿಂದ ಓಡಿಸಿದ್ದರು .
ಅವರ ಊರಿಗೆ ಬಂದು,   ಅಂದು ಸಂಜೆ ಅದೇ ಬೇಸರ ದಲ್ಲಿ ರವಿ ಮತ್ತು ಚಂದ್ರಿಕಾ ಊಟವಾದ ಬಳಿಕ ಮನೆಯ ಅಂಗಳದಲ್ಲಿ ಆಕಾಶ ನೋಡುತ್ತ ಮಲಗಿದ್ದರು ಇದ್ದಕ್ಕಿದ್ದಂತೆ ಒಂದು ನಕ್ಷತ್ರ ದೂರದವರೆಗೆ ಚಲಿಸಿ ಬಿದ್ದು ಹೋಯಿತು "ನಕ್ಷತ್ರ ಬೀಳುವುದು ಅಶುಭ ಸೂಚನೆಯಂತೆ" ಎಂದಳು ಚಂದ್ರಿಕಾ .ಅವಳ ಮಾತನ್ನು ಅಲ್ಲಗಳೆದ ರವಿ ."ನಕ್ಷತ್ರಗಳು ಬೀಳುವುದು ನೋಡುವುದು ಶುಭವಂತೆ ಅವುಗಳು ಬೀಳುವಾಗ ನಾವೇನಾದರೂ ಕೋರಿಕೊಂಡರೆ ಅದು ಈಡೇರುವುದಂತೆ "ಎಂದನು
ಬೆಳಿಗ್ಗೆ ಯಾರೋ ಬಂದು ಮನೆಬಾಗಿಲ ಬಡಿದಾಗ ಎಚ್ಚರವಾದ ದಂಪತಿಗಳಿಗೆ ದೂರದೂರಿನಿಂದ ಬಂದ ಯುವಕ  ರವಿಯ ಅತ್ತೆಯ ಸಾವಿನ ವಿಷಯ ತಿಳಿಸಿದ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

20 ಅಕ್ಟೋಬರ್ 2017

ಬಂಧ (ಚಿತ್ರ ಕವನ)

         

*ಬಂಧ*

ನಮ್ಮ ಬದುಕು ನಮ್ಮದು
ಸುಂದರ ಲೋಕ ನಮ್ಮದು

ಅಪ್ಪ ಅಮ್ಮ ನಮಗಿಲ್ಲ
ತಪ್ಪು ಮಾಡೋದು ತಿಳಿದಿಲ್ಲ
ನಮ್ಮ ಬದುಕು ಬಣ್ಣದ ಚಿತ್ರ
ದೇವರಿಗೆ ಬರೆವೆವು ಪತ್ರ

ನಾವ್ಯಾರಿಗೂ ಕಡಿಮೆ ಇಲ್ಲ
ಅನ್ನಕೆ ಯಾರಿಗು ಕೈಯೊಡ್ಡಲ್ಲ
ಸ್ವಾಭಿಮಾನವ ಮರೆಯೋದಿಲ್ಲ
ನಮ್ಮಿಬ್ಬರ ಬಂಧ ಸಡಿಲವಾಗಲ್ಲ

ಶಾಲೆಯ ದಾರಿಯ ತುಳಿದಿಲ್ಲ
ಜೀವನ ಶಾಲೆಯ ಬಿಟ್ಟಿಲ್ಲ
ಕತ್ತಲೆ ಕೂಪದಿ  ನಾವಿಲ್ಲ
ಪ್ರತಿದಿನ ಬೆಳಕು ನಿಂತಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಆಸೆ (ನ್ಯಾನೋ ಕಥೆ)

             *  ನ್ಯಾನೊಕಥೆ*

*ಆಸೆ*


ಸಂಧ್ಯಾವಂದನೆ ಮುಗಿಸಿ ಊಟಕ್ಕೆ ಸಿದ್ದವಾದ ಸತೀಶ್ "ಎಲ್ಲಿ ಮಗಳು ಎರಡು ದಿನವಾದರೂ ಬರಲಿಲ್ಲ "ಎಂದು‌  ಮಮತಗೆ ಕೇಳಿದ ಈ ಪ್ರಶ್ನೆಗೆ ತಡವರಿಸಿ ಬರುವಳು ಸ್ನೇಹಿತೆ ಮನೆಗೆ ಹೋಗಿರುವುದಲ್ಲ  ಇನ್ನೇನು ಬರಬಹುದು ಎಂದಳು .
ಆದರೆ ಪೂಜಾಳ ಅಂದಿನ ದಿನಚರಿಯೇ ಬೇರೆಯಾಗಿರುತ್ತು ಸಾಂಪ್ರದಾಯಿಕ ಕುಟುಂಬದ ಹುಡುಗಿಯಾದ ಗೀತಳಿಗೆ ನಿರೀಕ್ಷೆಯಂತೆ ಮನೆಯಲ್ಲಿ ಕೆಲ ನಿರ್ಬಂಧಗಳನ್ನು ಹೇರಲಾಗಿತ್ತು ಅದು ಉಡುಗೆ ತೊಡುಗೆ ಆಚಾರ ವಿಚಾರಗಳಲ್ಲೂ ಮುಂದುವರೆದಿತ್ತು. ಹುಚ್ಚುಕೋಡಿ ಮನಸ್ಸು ಈ ನಿರ್ಬಂಧಗಳನ್ನು ದಾಟಲು ಕಾಯುತ್ತಿತ್ತು ಅವರ ಕಾಲೇಜಿನ ಕೆಲ ಯವಕ ಯವತಿಯರು ಗೋವಾ ಪ್ರವಾಸ ಗೊರಟಾಗ ಪೂಜಾಳ ಕನಸಿಗೆ ರೆಕ್ಕೆ ಮೂಡಿ ತಾನೂ ಗೋವಾ ಪ್ರವಾಸಕ್ಕೆ ಅಣಿಯಾದಳು ಆದರೆ ಅಪ್ಪ ಒಪ್ಪಬೇಕಲ್ಲ .ಇರುವುದೊಂದೇ ದಾರಿ ಅಮ್ಮನ ಮನವೊಲಿಸುವುದು .ಅಮ್ಮನಿಗೆ ವಿಷಯ ತಿಳಿದಾಗ ಕೆಂಡಾಮಂಡಲವಾದರೂ ಒಪ್ಪಿಗೆ ಸೂಚಿಸಿದಳು .ಕೊನೆಗೆ ಅಪ್ಪನಿಗೆ ತಿಳಿಯದಂತೆ ಗೋವಾ ಪ್ರವಾಸಕ್ಕೆ ನಡದೇ ಬಿಟ್ಟಳು .ಅವಳಿಗಿಷ್ಟದ ಉಡುಪು ಧರಿಸಿ. ಅವಳಿಷ್ಟದ ಸಂಗೀತವನ್ನು ಆಸ್ವಾದಿಸಿ ಮೈಮರೆತಿದ್ದಳು.
ಊಟ ಮುಗಿಸಿ ಹಜಾರದಲ್ಲಿ ಕುಳಿತ ಸತೀಶ್ ಮೊಬೈಲ್ "ತಿರುಮಲವಾಸ....ಶ್ರೀ ವೆಂಕಟೇಶ..." ಎಂದು ರಿಂಗಣಿಸಿತು .ಹಲೋ ಎಂದವನೆ ಒಂದು ಕ್ಷಣ ಮೌನವಾದ ಹೆಂಡತಿ ಏನೆಂದು ಕೇಳಿದರೆ ಮಾತನಾಡದೆ ಗಾಡಿ ಹತ್ತಿಸಿಕೊಂಡು ಹೊರಟೇಬಿಟ್ಟ .ಹತ್ತು ಕಿಲೋಮೀಟರ್ ಅಂತರದಲ್ಲಿ ರಸ್ತೆಯ ಮದ್ಯ ಜನಜಂಗುಳಿ. ಜನರ ಸರಿಸಿ ಮುಂದೆ ದಂಪತಿಗಳಿಗೆ ಕಂಡಿದ್ದು ಘೋರ ದೃಶ್ಯ. ಮಗಳು ಮಾಡ್ ಡ್ರೆಸ್ ನಲ್ಲಿ ಶವವಾಗಿ ಬಿದ್ದಿದ್ದಾಳೆ ಮಗಳ ಸ್ಥಿತಿ ನೋಡಿದ  ಸತೀಶ್ ಅಲ್ಲೇ ಕುಸಿದು ಕಣ್ಮುಚ್ಚಿದ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಅಕ್ಟೋಬರ್ 2017

ದಂತಭಗ್ನಂ (ಹನಿಗವನಗಳು)

*೧*
*ಚುಂಬನ*

ಉಲ್ಲಸಿತವಾಗುವುದು ನನ್ನ
ಮೈಮನ
ಕೇಳದೇ  ನೀ ನೀಡಿದರೆ
ಚುಂಬನ
*೨*

*ಬೆನ್ನುಡಿ*

ನಿನ್ನ ಚುಂಬನ ನಮ್ಮ ಪ್ರೇಮಕ್ಕೆ
ಮುನ್ನಡಿ
ಈಗಿರುವ ಇಬ್ಬರು ಮಕ್ಕಳು
ಬೆನ್ನುಡಿ

*೩*

*ದಂತಭಗ್ನಂ*

ನೀನಿತ್ತ ಮೊದಲ ಚುಂಬನದಿಂದ
ನಾನು ಪ್ರೀತಿಯಲಿ ಮಗ್ನ
ನೀನೆಂದು ತಿಳಿದು ಅದೇ ಹುರುಪಲ್ಲಿ
ಅವಳಿಗೆ ಚುಂಬಿಸಿದೆ ದ್ವಿತೀಯ ಚುಂಬನದಲ್ಲಿ
ಎರಡು ದಂತಭಗ್ನ

*೪*

*ಸ್ಯಾರಿ*

ಚುಂಬಿಸಲು‌ ಆತುರದಿ ಹೋದೆ
ನಲ್ಲೆಯ ಬಳಿಸಾರಿ
ಅವಳು ಕೇಳೇ ಬಿಟ್ಟಳು
ಎಲ್ಲಿ ಇಳಕಲ್ ಸ್ಯಾರಿ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*