13 ಅಕ್ಟೋಬರ್ 2017

ಸಮರಸವೇ ಜೀವನ (ಕವನ)

   

  *ಸಮರಸವೇ ಜೀವನ*


ಬಾಳ ಪಯಣದಲಿ ನೂರಾರು ತಿರುವುಗಳು
ಜೀವಿಸಬೇಕು  ನೀನು ಸಂತಸದಿ ಹಗಲಿರುಳು

ನಿಂದಕರಿಹರು ಹಂದಿಯಂತೆ ಜಗದಿ
ಅವರ ನಿಂದನೆ ಸ್ವೀಕರಿಸು ಮುದದಿ
ಕಾಲೆಳೆವರು ನೀ ಮೇಲೇರಿದರೆ ಇಲ್ಲಿ
ಸಾಧಿಸಿ ತೋರಿಸವರಿಗೆ  ಜೀವನದಲ್ಲಿ

ಕಷ್ಟ ಕೋಟಲೆಗಳು ನೂರು ಇರಲಿ
ಇಷ್ಟ ಪಟ್ಟು ಬದುಕುವುದು  ನೀ ಕಲಿ
ಎಲ್ಲರೊಳಗೊಂದಾಗಿ ಬಾಳಬೇಕು
ಸಮರಸವೇ ಜೀವನ ತಿಳಿಯಬೇಕು

ಮಿಡಿತವಿರಲಿ ಅಶಕ್ತ ಮನಗಳಿಗೆ
ತುಡಿತವಿರಲಿ ಹೊಸ ಕಲಿಕೆಗಳಿಗೆ
ದಯೆಯಿರಲಿ  ಸಕಲ ಜೀವಗಳಲಿ
ಪರಿಸರದ ಬಗ್ಗೆ ಕಾಳಜಿಯಿರಲಿ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಅಕ್ಟೋಬರ್ 2017

ನಾಲ್ಕು ಹನಿಗವನಗಳು.

               
              *ಹನಿಗವನಗಳು*

*೧*

*ತಾ*

ನನ್ನವಳೆಂದರೆ ನನಗೆ ಅದೇನೋ ಸೆಳೆತ
ನನ್ನವಳೆಂದಳು ಮೊದಲು ಎ.ಟಿ.ಎಮ್ ನಿಂದ ಹಣ ಸೆಳೆ
ನಂತರ ತಾ

*೨*

*ಇಳಿತ*

 ಮೊದಲು ನನ್ನವಳ ಕಂಡರೆ
ಆಯಸ್ಕಾತದಂತೆ ಸೆಳೆತ
ಈಗೀಗ ಏಕೋ ಆಕರ್ಷಣೆಯಲ್ಲಿ
ಬಹಳ ಇಳಿತ

*೩*

*ಅಲೆತ*


ಸರ್ಕಾರಿ ನೌಕರಿ ಪಡೆಯಲು
ಎಲ್ಲರ ಅಲೆತ
ಅವರಿಗೆ ಗೊತ್ತು ಮುಂದೆ ಇದ್ದೇಇದೆ
ಲಂಚದ ಸೆಳೆತ

*೪*

*ಬೇಕಿತ್ತಾ*

ಮೊದಲು
ಅವಳೆಂದರೆ ಇವನಿಗೆ ಸೆಳೆತ
ಇವಳೆಂದರೆ ಅವನಿಗೆ ಸೆಳೆತ
ನಂತರ
ಇವಳ ಮಾತು ಅವನಿಗೆ ಕೊರೆತ
ಅವನ ಮಾತು ಇವಳಿಗೆ ಕೊರೆತ
ಕೊನೆಗೆ
ಇದೆಲ್ಲಾ ನಮಗೆ ಬೇಕಿತ್ತಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 ಅಕ್ಟೋಬರ್ 2017

ಮೋಡಬಿತ್ತನೆ (ಹನಿ)

            *ಸಮಯಸಾಧಕತನ*

ಕರ್ನಾಟಕದ ಮಳೆಗೆ ಕಾರಣ
ನಮ್ಮ ಮೋಡ ಬಿತ್ತನೆ!
ನಾವಂತೂ ಕಾರಣವಲ್ಲ ರಸ್ತೆ
ಗುಂಡಿ ಬಿತ್ತನೆಗೆ !

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್

             

         *ಗಜಲ್*


ಪ್ರೀತಿ ಪ್ರೇಮದ ನಾಟಕವನ್ನು ನಂಬಿದ್ದು ನನ್ನ ತಪ್ಪೆ?
ಗೋಮುಖವ್ಯಾಘ್ರತನವನ್ನು ಗುರುತಿಸದಿದ್ದು ನನ್ನ ತಪ್ಪೆ?


ನಿನ್ನ ಕಷ್ಟಗಳಲಿ ಹೆಗಲು ಕೊಟ್ಟು ಇಷ್ಟ ಪಟ್ಟ ನಿನ್ನ
ಕಷ್ಟಸುಖದಲಿ ಜೊತೆಗಿರಲು ಆಣೆ ಮಾಡಿದ್ದು ನನ್ನ ತಪ್ಪೆ?


ಜೀವನವೆಲ್ಲಾ ಪ್ರೀತಿಸಿ ಒಲವ ಧಾರೆಯೆರೆದು
ಸಂಸಾರ ಸಾಗಿಸಲು ಕನಸ ಕಂಡಿದ್ದು ನನ್ನ ತಪ್ಪೆ?


ಸೋಲರಿಯದ ನನಗೆ ಸೋಲ ರುಚಿ ತೋರಿಸಿದೆ
ಜಾಲಿಯ ಮರದ ನೆರಳನ್ನು ನಂಬಿದ್ದು ನನ್ನ ತಪ್ಪೆ?


ವಂಚಕಿಯೆಂದು ತಿಳಿದು ನನ್ನ ಬಳಿ ಸಾರಲು ನಿನ್ನ ಕಳುಹಿಸಿ ಕೊಟ್ಟ ವೆಂಕಣ್ಣನು ಮಾಡಿದ್ದು ನನ್ನ ತಪ್ಪೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಅಕ್ಟೋಬರ್ 2017

ನಗು(ಚುಟುಕು ಗಳು)

              *೧*

*ಮಗು*

ಮರೆತು ಬಿಡಿ  ಕೆಟ್ಟಹಗೆ
ಬೀರಿ ಒಂದು ಪುಟ್ಟನಗೆ
ಮೂಡಲಿ ಮುಖದಲಿ ನಗು
ನಾವಾಗೋಣ ಮಗು

*೨*

*ನಗುತಿರಬೇಕು*

ಬಿಟ್ಟು ಬಿಡಿ ಮನದ ಬೇಗುದಿ
ಕೊಡಿ ನಗುವಿನ ಔಷಧಿ
ಆತಂಕ ನಮಗೆ ಏಕೆ ಬೇಕು?
ಸದಾಕಾಲವೂ ನಗುತಿರಬೇಕು

*೩*

*ನೊಗ ಮತ್ತು ನಗು*

ಸಂಸಾರದ  ಬಂಡಿಯ ನಾವಿಬ್ಬರು
ಎಳೆಯಲು ನೊಗವಿರಬೇಕು
ಸಂಸ್ಕಾರದ ಜೀವನದಿ ನಮ್ಮೆಲ್ಲರ
ಸೆಳೆಯಲು ನಗುವಿರಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*