*ದಸರಾ ಜಂಬೂ ಸವಾರಿ*
ಚಂಡ ಮುಂಡರ ಕೊಂದ ಅಮ್ಮನ
ಉತ್ಸವಕೆ ಬನ್ನಿ ನೀವೆಲ್ಲ
ಚಾಮುಂಡೇಶ್ವರಿಯ ಭಜಿಸುತ
ದಸರೆಯ ಮಾಡೊಣ ನಾವೆಲ್ಲ.
ಮಹಿಷನ ಕೊಂದು ಮಹಿಯನು
ಕಾಪಾಡಿದ ಅಮ್ಮನ ನೆನೆಯೋಣ
ಮೈಸೂರಿನ ವಿಶ್ವ ಪ್ರಸಿದ್ಧ ದಸರಾ
ಮಹೋತ್ಸವದಲ್ಲಿ ಪಾಲ್ಗೊಳ್ಳೋಣ.
ಅರಮನೆ ದೀಪಾಲಂಕಾರ
ಜಗಮಗಿಸತಿದೆ ನೋಡಿಲ್ಲಿ
ಕಣ್ಮನ ಸೆಳೆದಿದೆ ಸಂತಸ
ಉಕ್ಕಿದೆ ನಮ್ಮಯ ಮನದಲ್ಲಿ.
ವಿಜಯ ದಶಮಿಯ ದಿನ
ಅಮ್ಮ ಬಂದರು ಆನೆಯೇರಿ
ಸ್ತಬ್ದ ಚಿತ್ರಗಳೊಂದಿಗೆ ಸಾಗಿದೆ
ಅದುವೆ ಜಂಬೂ ಸವಾರಿ.
*ಸಿಹಿಜೀವಿ*
ಸಿ .ಜಿ .ವೆಂಕಟೇಶ್ವರ
ತುಮಕೂರು

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ