20 ಮಾರ್ಚ್ 2018

ಗಜ಼ಲ್ ೩೧ (ಕಳೆದುಕೊಂಡೆ ) ( ನನ್ನ ಬ್ಲಾಗ್ ನ ಮುನ್ನೂರನೇ300 ಪೋಸ್ಟ್ ಸಂಭ್ರಮ )


*ಗಜ಼ಲ್೩೧*

ಬನ್ನಪಡುತ ಈ ಕ್ಷುದ್ರ ಜೀವನದಿ ಸಂತಸವ ಕಳೆದುಕೊಂಡೆ
ಬೆಳೆದು ಬಲಿತು ದೊಡ್ಡವನಾಗಿ ಬಾಲ್ಯವ  ಕಳೆದುಕೊಂಡೆ

ಮತ್ಸರ ಸುಲಿಗೆ  ಕಾಲೆಳವ ಗುಣ ಸಾಮಾನ್ಯ ಎಲ್ಲೆಡೆ
ಎಲ್ಲ ಒಂದೇ  ಎನುವ ಮುಗ್ದ ಮಗುವಿನ ಮನವ ಕಳೆದುಕೊಂಡೆ

ಆಟಗಳೆಂದರೆ ಜೂಜು ಮೋಜು ಮೋಸ ವಂಚನೆಗಳ ಜಾಲ
ಗೆಳೆಯರ ಜೊತೆಗೂಡಿದ ಆಟ ಪಾಟವ ಕಳೆದುಕೊಂಡೆ

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆಯ ಜನರ ಜಗವಿದು
ನುಡಿದಂತೆ ನಡೆದ ಒಳ್ಳೆಯ ಮಾನವಕುಲವ  ಕಳೆದುಕೊಂಡೆ

ಐಶ್ವರ್ಯ ಸೌಂದರ್ಯಕೆ ಪ್ರಥಮ ಪ್ರಾಶಸ್ತ್ಯ ಎಲ್ಲೆಡೆ
ಸೀಜೀವಿಯ ಮುತ್ತಿನಂತಹ ಕಾಲವ ಕಳೆದುಕೊಂಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ