18 ಫೆಬ್ರವರಿ 2018

ಯಾವಾಗ (ಕವನ)

*ಯಾವಾಗ*

ಅವಳೊಬ್ಬಳು ಮುಚ್ಚಿದಳು
ಒಂದು ಕಣ್ಣು
ಮಾದ್ಯಮ ದಲ್ಲಿ
ಅದೇ ಸುದ್ದಿ

ಲಕ್ಷಾಂತರ ಮಂದಿ ಬಾಳುತ್ತಿದ್ದಾರೆ
ಎರಡೂ ಕಣ್ಣು ಮುಚ್ಚಿ
ಮಾದ್ಯಮದವರಿಗೆ ಕಾಣಲೇ ಇಲ್ಲ
ಅದೇ ಅವರ ಬುದ್ದಿ

ಯುದ್ಧಗಳಲ್ಲಿ ಯೋಧರು
ಶಾಶ್ವತವಾಗಿ ಮುಚ್ಚುತ್ತಿದ್ದಾರೆ
ತಮ್ಮ ಕಣ್ಣುಗಳ
ಎಲ್ಲೂ ಇಲ್ಲ ಅದರ ಸದ್ದು

ಮನರಂಜನೆಯೇ ಇವರ
ಪ್ರಥಮ ಪ್ರಾಶಸ್ತ್ಯ
ಮಾನವೀಯತೆ
ಕೆಲವರಿಗೆ ಮಾತ್ರ ಸ್ವಂತ


ಟಿ ಆರ್ ಪಿ ಲೈಕುಗಳಿಂದ
ಹೊರಬರುವುದು ಯಾವಾಗ
ಮನರಂಜನೆಗಿಂತ  ಮಾನವತೆಗೆ
ಬೆಲೆಕೊಡುವುದು ಯಾವಾಗ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ