18 ಫೆಬ್ರವರಿ 2018

ಗಜ಼ಲ್ ೨೬ (ಗೊತ್ತಿರಲಿಲ್ಲ)ಕವಿಬಳಗ ವಾಟ್ಸಪ್ ಗುಂಪಿನ ಗಜ಼ಲ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗಜ಼ಲ್

*ಗಜ಼ಲ್ ೨೬*

ಮಂದಹಾಸ ಮುಖವಾಡದಿ ಕಾರ್ಕೋಟಕ ವಿಷವಿರುವುದು ಗೊತ್ತಿರಲಿಲ್ಲ
ತಿಳಿಗೊಳದ ಆಳದಲಿ ಬಗ್ಗಡದ ಕೆಸರಿರುವುದು ಗೊತ್ತಿರಲಿಲ್ಲ

ಕೈಕುಲಕುವ ಹಸ್ತವು  ಬಗಲಲ್ಲಿಟ್ಟುಕೊಂಡಿದೆ ಬಾಕು
ಒಲವ ನಗೆ ಬರೀ ಹಲ್ಲಿನಿಂದ ಬಂದಿರುವುದು ಗೊತ್ತಿರಲಿಲ್ಲ

ಆಡಂಬರ,ಸ್ವಾರ್ಥ,ತೋರ್ಪಡಿಕೆಯ ಪೂಜೆ ಪುರಸ್ಕಾರಗಳು
ದಿಟದ ಜನಾರ್ದನ ಸೇವೆಯ ಮರೆಯವರೆಂಬುದು ಗೊತ್ತಿರಲಿಲ್ಲ

ನೀರು ,ಜಲ,ನೆಲ ಗಾಳಿ ಮಣ್ಣಿನ  ಬಗ್ಗೆ ಭಾಷಣದ ಪ್ರವರ
ಕಾಸಿಗಾಗಿ ಭೂತಾಯಿಯ ಮಾರಿ ಕೊಳ್ಳವರೆಂದು ಗೊತ್ತಿರಲಿಲ್ಲ


ಸೀಜೀವಿಗೆ ಸರ್ವೇ ಜನಾಃ ಸುಖಿನೋಭವಂತು ಆಸೆ
ಸ್ವಾರ್ಥಿಗಳ ಕೂಟಗಳು ಜಗವ ಕೆಡಿಸುವರೆಂದು ಗೊತ್ತಿರಲಿಲ್ಲ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ