10 ಮೇ 2022

ಜಾಲಾರ ಹೂ ಪುಸ್ತಕ .ವಿಮರ್ಶೆ


 ವಿಮರ್ಶೆ ೩೩

ಜಾಲಾರ ಹೂ .


ಜಿ ವಿ ಆನಂದ ಮೂರ್ತಿ ರವರ ಜಾಲಾರ ಪ್ರಬಂಧಗಳನ್ನು ಓದಿದಾಗ ನಮ್ಮ ಹಳ್ಳಿಯ ಜೀವನ ನೆನಪುಗಳನ್ನು ಇವರ ಎಲ್ಲಾ ಪ್ರಬಂಧಗಳು ಕುತೂಹಲಕಾರಿ  ಹಾಗೂ ಓದಲು ಆಸಕ್ತಿಕರವಾಗಿವೆ.

ಜಾಲಾರ ಹೂವು,ಕೆರೆ ಕಟ್ಟೆ ಬಯಲಾಗಿ ಹೋಗುವಾಗ,

ಮಾಗಿಯ ದಿನಗಳು, ಪೂವಮ್ಮನ ಹೂತೋಟ,ನಾನ್ಯಾರಿಗಲ್ಲದವಳು,

ಅವ್ವ ಮತ್ತು ರಾಗಿರೊಟ್ಟಿ,ಕೇರಿಗೆ ಬಂದ ಯುಗಾದಿ,ಕವಿಯ ತೋಟದಲ್ಲಿ ಒಂದು ಯುಗಾದಿ,ಬೆಟ್ಟದ ದಾರಿಯಲ್ಲಿ,ತೊಗಲುಗೊಂಬೆಗಳೊಡನೆ ಒಂದು ದಿನ,ಮುಂತಾದ ಪ್ರಬಂಧಗಳು ನನಗೆ ಬಹಳ ಹಿಡಿಸಿದವು.

ಕನ್ನಡದಲ್ಲಿ ಅಪರೂಪವಾಗುತ್ತಿರುವ ಲಲಿತ ಪ್ರಬಂಧಗಳೆಂಬ ಪ್ರಕಾರಕ್ಕೆ ಉತ್ತಮ ಸೇರ್ಪಡೆಯಾಗಿ ರೂಪುಗೊಂಡಿವೆ. ಬೌದ್ಧಿಕತೆಯ ಭಾರವಿಲ್ಲದೆಯೂ ಚಿಂತನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿರುವ ಆನಂದಮೂರ್ತಿಯವರ ಬರವಣಿಗೆ ಓದುಗರ ನೆನಪನ್ನು ಉದ್ದೀಪಿಸಿ ಜೀವನೋತ್ಸಾಹವನ್ನು ಮೂಡಿಸುತ್ತದೆ. ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಆತ್ಮಕಥೆಯ ಆಪ್ತತೆ ಇದೆ. ಕೇವಲ ವ್ಯಕ್ತಿಗಳ ಕಥನವಾಗದೆ ಬದಲಾಗಿರುವ ಜೀವನಕ್ರಮದ ಬಗ್ಗೆ, ಕಳೆದು ಹೋಗುತ್ತಿರುವ ಹಳ್ಳಿಯ ಬದುಕಿನ ಒಟ್ಟಂದದ ಬಗ್ಗೆ ವಿಷಾದದ ಅಲೆಯನ್ನು ಎಬ್ಬಿಸುವಷ್ಟು ಶಕ್ತವಾಗಿಯೂ ಇದೆ. ಅನಂದಮೂರ್ತಿಯವರ ಬರವಣಿಗೆಯಲ್ಲಿ ಬೌದ್ಧಿಕತೆಯ ಸೋಗು ಇಲ್ಲ, ಬದಲಾಗುತ್ತಿರುವ ಜಗತ್ತಿನ ಬಗ್ಗೆ, ಕಳೆದು ಹೋಗುತ್ತಿರುವ ಬದುಕಿನ ಚೆಲುವಿನ ಬಗ್ಗೆ ನೆನಪಗಳು ಉದ್ದೀಪಿಸುವ 'ಇದು ಸರಿಯಲ್ಲ' ಎಂಬ ಭಾವವನ್ನು ಓದುಗರಿಗೆ ಆಪ್ತವಾಗಿ ಧಾಟಿಸುವ ಗೆಳೆಯರ ಮಾತಿನ ಗುಣ ಇದೆ. ನಮ್ಮನ್ನೆಲ್ಲ ಆವರಿಸಿಕೊಂಡಿರುವ ಆಧುನಿಕತೆಯಿಂದ ನಾವು ಪಡೆದದ್ದೆಷ್ಟು, ಕಳಕೊಂಡದ್ದೆಷ್ಟು ಅನ್ನುವ ಪರಿಶೀಲನೆಗೆ ತೊಡಗಿಸುವಂತಿದೆ.


ಈ ಪುಸ್ತಕಕ್ಕೆ ಸುಂದರವಾದ ಮುನ್ನುಡಿ ಬರೆದ ಓ ಎಲ್ ನಾಗಭೂಷಣ ಸ್ವಾಮಿ ರವರು ಪ್ರಬಂಧ ಸಂಕಲನದ ಬಗ್ಗೆ ಸಕಾರಾತ್ಮಕವಾಗಿ ಬರೆದಿರುವರು.

ಇಲ್ಲಿನ ಒಂದೊಂದು ಪ್ರಬಂಧದಲ್ಲೂ ಲೇಖಕರು ಮಾತ್ರವಲ್ಲದೆ ಅವರು ತಮ್ಮ ಬಾಲ್ಯದಲ್ಲಿ ಕಂಡ, ಅವರ ಮನಸ್ಸಿನಲ್ಲಿ ಉಳಿದ ಒಬ್ಬಿಬ್ಬರು ವ್ಯಕ್ತಿಗಳ ಚಿತ್ರಣವೂ ಬೆರೆತಿದೆ. 'ಜಾಲಾರ ಹೂವು' ಪ್ರಬಂಧದಲ್ಲಿ ಬರುವ ದಾಸಿ, ಸುಕಾಲಿಗರು, 'ಜಾತ್ರೆ'ಯಲ್ಲಿ ಸೇರುವ ಜನಸಂದಣಿಯ ಚಿತ್ರಣ, ಕೆರೆ ಕಟ್ಟೆ ಬಯಲಾಗಿ' ಪ್ರಬಂಧದಲ್ಲಿ ಬರುವ ಗಂಗಣ್ಣಮ್ಮ, 'ಅವ್ವ ಮತ್ತು ರಾಗಿರೊಟ್ಟಿ'ಯ ಆವ್ವ ಹೀಗೆ, ಹಾಗಾಗಿ ಇಲ್ಲಿನ ಬರವಣಿಗೆ ಕೇವಲ ಖಾಸಗಿ ನೆನಪಷ್ಟೇ ಆಗಿ ಉಳಿಯದೆ ಇಡೀ ಊರಿನ ಕಥೆಯಾಗುವ ಗುಣ ಪಡೆದುಕೊಂಡಿವೆ,

ಆನಂದಮೂರ್ತಿಯವರು 'ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ಹಾಕಿದ ಲೌಕಿಕದ ಎಲ್ಲ ಅನುಭವಗಳ ಕೈಸೆರೆಯಾಗಿದ್ದೇನೆ. ಅವುಗಳಿಂದ ಬಿಡುಗಡೆ ಹೊಂದುವುದೆಂದರೆ, ಮತ್ತೊಮ್ಮೆ ತಾಯಿಕರುಳಿನ ಸಂಬಂಧವನ್ನು ಹರಿದುಕೊಂಡು ಬಂದಂತೆ, ಇಂದಿನ ಯಾವ ಅನುಭವಗಳೂ ನನ್ನ ಎಳವೆಯ ದಿನಗಳ ಮುಗ್ಧ ಸೌಂದರ್ಯವನ್ನು, ಅದು ಕಲಿಸಿದ ಜೀವನದ ಪಾಠಗಳನ್ನು ಕಸಿದುಕೊಳ್ಳಲಾರವು. ಅಷ್ಟರಮಟ್ಟಿಗೆ ನಾನು ಇಂದಿನ ಅನುಭವಗಳ

ಮೇಲೆ ಜಯ ಸಾಧಿಸಿದ್ದೇನೆ' ಎನ್ನುತ್ತಾರೆ ಅವ್ರ ಮತ್ತು ರಾಗಿರೊಟ್ಟಿ, ಪ್ರಬಂಧದಲ್ಲಿ 'ತರ್ಕವಿಲ್ಲದ ಎಳವೆಯ ದಿನಗಳಲ್ಲಿ ನನ್ನ ತಿಳಿವಿಗೆ ಬಂದ ಸರಳ ವಿಚಾರಗಳಿವು! ನಮ್ಮ ಕುಟುಂಬವು ದಶಕಗಳಷ್ಟು ಕಾಲ ಸವೆಸಿದ ಹಾದಿಯನ್ನು ಹಿಂದಿರುಗಿ ನೋಡುತ್ತಾ, ಕಳೆದ ದಿನಗಳ ಅನುಭವಗಳನ್ನೆಲ್ಲ ಹೀಗೆ ಕವಳಿಗೆಯಂತೆ ಜೋಡಿಸಿಕೊಂಡು ನಿಮ್ಮ ಮುಂದಿಟ್ಟಿದ್ದೇನೆ. ಎನ್ನುತ್ತಾರೆ 'ನಾನ್ಯಾರಿಗಲ್ಲದವಳು' ಪ್ರಬಂಧದಲ್ಲಿ, ಈ ಎರಡು ಮಾತುಗಳು ಅವರ ಬರವಣಿಗೆಯ ಸ್ವರೂಪವನ್ನು ಸಮರ್ಪಕವಾಗಿ ವಿವರಿಸುತ್ತವೆ.

'ಹೂ ಪೇಟೆ' ಎಂಬಂಥ ಪದಗಳ ಪ್ರಯೋಗದಿಂದ ಹಿಡಿದು ಕೆರೆಯ ಅಲೆಗಳ ವರ್ಣನೆ 'ಮಾಗಿಯ ದಿನಗಳಲ್ಲಿ ನಮ್ಮ ಮುಖ, ತುಟಿ, ಅಂಗಾಲು ಇವುಗಳೆಲ್ಲ ಬಿರಿದು, ಉಂಡಿಗೆ ಹಾಕಿದ ಕಲ್ಲಂಗಡಿ ಹಣ್ಣಿನಂತೆ ಕಾಣುತ್ತಿದ್ದವು. ವತ್ತಿನಂಟೆ ಎದ್ದು ಮುಖಕ್ಕೆ ತಣ್ಣೀರು ಸೋಕಿಸಿದ. ಪ್ರಾಣವೇ ಹೋದಂತಾಗುತ್ತಿತ್ತು' ಅನ್ನುವ ಚಿತ್ರಣ, 'ಮಳೆ ಮತ್ತು ಬಿಸಿಲು ಪರಸ್ಪರ ಕೈ ಹಿಡಿದು ಬರುತ್ತಾ, ಹೋಗುತ್ತಾ ಆಟವಾಡುತ್ತಿದ್ದವು' 'ಎತ್ತ ನೋಡಿದರೂ ಸುತ್ತುವರೆದಿರುವ ಹೆಸರು ಕೋಟೆಯಂತಹ ಕಾಡು' ಅನ್ನುವಂಥ ನಿರೂಪಣೆಗಳು, ಸಂತೆಯ ವಿವರಗಳನ್ನು ಅವರು ಕಟ್ಟಿಕೊಡುವ ರೀತಿ ಇವೆಲ್ಲ ಆನಂದಮೂರ್ತಿಯವರಲ್ಲಿರುವ ಕವಿ ವ್ಯಕ್ತಿತ್ವದ ನಿದರ್ಶನಗಳಂತಿವೆ. ಶೇರು ಹರಿದ ನಂತರ ಜಾತ್ರೆಯು "ಕುಯಿಲು ಮಾಡಿದ ಹೊಲದಂತೆ ಬಣಗುಡುತ್ತಿರುತ್ತದೆ' ಎಂದು ಪುಟ್ಟ ವಾಕ್ಯದಲ್ಲಿ ಭಾವಪೂರ್ಣವಾಗಿ ವಿವರಿಸುವ ಆನಂದಮೂರ್ತಿಯವರು ಸಂತೆಯನ್ನು ವಿವರವಾಗಿ ವರ್ಣಿಸಲೂ ಬಲ್ಲರು, ಅವರ ಸಮತೆಯ ವರ್ಣನೆ, ಮನಸ್ಸನ್ನು ಸೆಳೆಯುತ್ತದೆ:

'ಸಂತೆಯೊಳಗೆ ನೀವೊಂದು ಸುತ್ತು ಕಣ್ಣಾಡಿಸುತ್ತಾ ಹೊರಟರೆ ಕಾಣುವ ಒಂದೊಂದೂ ಚಿತ್ರಗಳೂ ಒಂದೊಂದು ಪುಟ್ಟ ದ್ವೀಪಗಳಂತೆ ಆಕರ್ಷಿಸುತ್ತವೆ. ಒಂದೊಂದೂ ಒಂದು ಬಣ್ಣ ವಿನ್ಯಾಸ ಅಪರಿಮಿತ ಪರಿಮಳದ, ಬಿಡಿ ಬಿಡಿಯಾದ ಜೀವ ಇರುವ ತುಣುಕುಗಳೇ! ಇವುಗಳ ನಡುವೆ ಕಂಡೂ ಕಾಣದಂತಹ ಒಂದು ಒಳಹೆಣ್ಣಿಗೆ ಇತ್ತು. ಇವೆಲ್ಲವೂ ಕಲಾತ್ಮಕವಾಗಿ ಹೆಣೆದ ಕೌದಿಯಂತೆ ಕಣ್ಣಿಗೆ ಕಟ್ಟುತ್ತದೆ.

'ಸಂತ ಮೈದಾನದ ಒಂದು ಮೋಟುಮರದ ಕೆಳಗೆ ಚೌರ ಮಾಡುತ್ತಾ ಕುಳಿತಿರುವ ರಂಗಪ್ಪ, ಅದೇ ಸಾಲಿನಲ್ಲಿ ಕೋಳಿ ಮಾರುವ ಪೈಕಿಯವರು, ಅಲ್ಲಿನ ರಣಬಿಸಿಲಿಗೆ ಹೇಗೋ ತಲೆಮರೆಸಿಕೊಂಡು ಉಳಿದಿದ್ದ ತುಸು ನೆರಳಿನಲ್ಲಿ ಕುರಿ-ಮೇಕೆಗಳನ್ನು ಬಿಟ್ಟುಕೊಂಡು, ಕೈಯಲ್ಲಿ ಆಗಸ ಸೊಪ್ಪನ್ನು ಹಿಡಿದುಕೊಂಡು ನಿಂತಿರುತ್ತಿದ್ದ ಗೊಲ್ಲರು, ಅವರ ಕುರಿ ಪಟ್ಟಿಗಳನ್ನು ಎಳೆದಾಡುತ್ತಾ ಚೌಕಾಸಿ ಮಾಡುತ್ತಿದ್ದ ಕಟುಕರು, ಇತ್ತ ಇನ್ನೊಂದು ಸಾಲಿನಲ್ಲಿ ಸೀಗಡಿ-ಕರಿಮೀನು ಮಾರುವ ಜಮಾಲ್ ಸಾಬರು, ಅವರಿಂದ ತುಸು ದೂರಕ್ಕೆ ಮಡಕೆ ಕುಡಿಕೆ, ಬೋಗಣಿ, ಹರಿವೆ, ಮಗೆ, ಬಾಧ(ಗವಾಕ್ಷಿ), ಬಾನಿ, ಎಲೆ ಅಂಬುಗಳಿಗೆ ನೀರು ಹುಯ್ಯಲು ಬಳಸುವ ಗುಂಬಗಳು ಮತ್ತು ಮುಸುರಕೂನಿಗಳನ್ನು ತಮ್ಮ ಒಂಟೆತ್ತಿನ ಗಾಡಿಗಳ ಮುಂದೆ ಹರಡಿಕೊಂಡು ಕುಳಿತಿರುತ್ತಿದ್ದ ಕುಂಬಾರರು, ಸೀಗಡಿ-ಕರಿಮೀನು ಮಾರುವವರ ಹಿಂಭಾಗದಲ್ಲಿ ಎತ್ತುಗಳಿಗೆ ಲಯಬದ್ಧವಾಗಿ ಲಾಳ ಕಟ್ಟುತ್ತಿದ್ದ ಸಾಬರು, ಅವರ ಒತ್ತಿನಲ್ಲೇ

ದನಗಳಿಗೆ ಕೊಂದರೆಯುತ್ತಿದ್ದ. ದಕ್ಕೇರು. ಇವರುಗಳ ಆಜುಬಾಜಿನಲ್ಲಿ ಹಳೆ ಕೆರಗಳಿಗೆ ಉಂಗುಷ್ಟ ಹಾಕುತ್ತಲೋ ಅಥವಾ ಅಟ್ಟೆಗೆ ಮಳೆಹೊಡೆಯುವಲ್ಲಿ ಧ್ಯಾನಾಸಕ್ತರಾಗಿರುತ್ತಿದ್ದ ಮೆಟ್ಟು ಹೊಲೆಯುವವರು. ಇಡೀ ಸಮಾಜವನ್ನೇ ಮೊರೆಯುವ ನೂರೆಂಟು ಜಾತಿಯಿಂದ ಬಂದ

ಹೋಗುತ್ತದೆ.' ಈ ವರ್ಣನೆಯನ್ನು ಓದುತ್ತಾ ಮಾಸ್ತಿಯವರ ಕಥೆಯೊಂದರಲ್ಲಿ ಸಂತೆ ಮುಗಿದ ಮೇಲೆ ಮನಸ್ಸಿನಲ್ಲಿ ಮೂಡಿಕೊಳ್ಳುವ ವರ್ಣನೆ ಬಂದಿರುವುದು

ಕೇವಲ ಚಲುವಾದ: ನೆನಪಿನ ಚಿತ್ರಗಳಷ್ಟೇ ಆಗಿದ್ದಿದ್ದರೆ, ಈ ಪ್ರಬಂಧಗಳು ಯಶಸ್ಸು ಸೀಮಿತವಾಗುತ್ತಿತ್ತು. ಚಾಲಾರದಂಥ ಹೂವು ಜಾನಪದದಲ್ಲಿ ಉಳಿದಿರುವ ಹೇಳುತ್ತಾರೆ. ಹಳ್ಳಿಯ ಮಗು ಪಾಡಿಗೆ ಸಂತೆಯಲ್ಲಿ ಸೊಪ್ಪು ಮಾರಲು ಹೋಗಲೇಬೇಕಾದ ಶಾಲೆಯ ಗೆಳೆಯರನ್ನು, ಮೇಷ್ಟರನ್ನು ಕಂಡು ಅವಮಾನ, ನಾಚಿಕೆಗಳಿಂದ ಕುಗ್ಗಿ ಹೋಗುವುದನ್ನು ಹೇಳುತ್ತ, ಆಧುನಿಕತೆಯನ್ನು ತರುವ ಶಿಕ್ಷಣ ಬೇರು ಬಿಟ್ಟಿರುವ ಮಗುವಿನಲ್ಲಿ ಸೃಷ್ಟಿಸುವ ಭಾವಗಳನ್ನು ಬಯಲಾಗಿರುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತ ಆಧುನೀಕರಣಗಳು ನಮ್ಮ ಮೇಲೆ ಪ್ರಭಾವಗಳ ಬಗ್ಗೆ ವಿಷಾದ ಮೂಡುವಂತೆ ಮಾಡುತ್ತಾರೆ. ಮಾಗಿಯ ಕಾಲದಲ್ಲಿ ರೊಪ್ಪದ ಸಣ್ಣತಿಮ್ಮಕ್ಕ ಆಗಸಗಿತ್ತಿಯು ಕುಲವನ್ನು ಉಳಿಸಿದ ಕಥೆಯಂಥ ಪ್ರಸಂಗಗಳಲ್ಲಿ ವರ್ಗವೈಷಮ್ಯ, ಜಾತಿಗಳ ಕಟ್ಟುಪಾಡುಗಳ ಬಾಳುವಿಕೆಯ ಗಟ್ಟಿ ನಮ್ಮ ಗ್ರಾಮಗಳ ಇಂದಿಗೂ ಉಸಿರಾಡುತ್ತಿದೆ' ಎನ್ನುತ್ತಾರೆ. ಇವೆಲ್ಲವೂ ನೆನಪಿನಿಂದ ಮೂಡುವ ಆಪ್ತವಾಗುತ್ತವೆ.

“ಕೇರಿಗೆ ಬಂದ 'ಯುಗಾದಿ' ಪ್ರಬಂಧದ ಕೊನೆಯಲ್ಲಿ ಎಲ್ಲಿ ಹೋದವೋ ಆ ಕಾಲ ಎಂಬ ಬರುತ್ತದೆ. ಇದು ನೆನಪಿನ ಹಳಹಳಿಕೆಯಾಗಿ ಕಾಣುವುದಷ್ಟೇ ಅಲ್ಲದೆ ನಾವೆಲ್ಲ ಒಪ್ಪಿಕೊಂಡಿರುವ ಮರುಕವಿಲ್ಲದ ಅಭಿವೃದ್ಧಿಯ ಕಲ್ಪನೆ ಬದುಕಿನ ಕ್ರಮಗಳನ್ನೆಲ್ಲ ನಿರ್ದಯವಾಗಿ ಅಳಿಸಿಬಿಡುತ್ತಿರುವುದರ ವ್ಯಾಖ್ಯಾನದಂತೆಯೂ ಕೇಳುತ್ತದೆ. ಅಭಿವೃದ್ಧಿಯನ್ನು ಮಾತ್ರ ಮುಖ್ಯವೆಂದು ಭ್ರಮಿಸುವುದಕ್ಕಿಂತ ವೈವಿಧ್ಯಮಯವಾದ ಬದುಕಿನಲ್ಲಿ ಸಂತೋಷವನ್ನೂ ಹೇಗೆ ಅನ್ನುವ, ಅದು ಎಂಬ ಆತಂಕವನ್ನೂ ಓದುಗರಲ್ಲಿ ಮೂಡಿಸುತ್ತದೆ.

ಕಥೆಗಳಾಗಿ ಹಿಗ್ಗಬಹುದಾದ, ಕಾದಂಬರಿಯಾಗಿ ವಿಸ್ತರಿಸಿಕೊಳ್ಳಬಹುದಾದ ಬೀಜಗಳು ಪ್ರಬಂಧಗಳಲ್ಲಿವೆ. ಆನಂದಮೂರ್ತಿಯವರು ಮತ್ತಷ್ಟು ಬರೆಯಲಿ ಎಂಬ ಆಸೆಯನ್ನು ಹುಟ್ಟಿಸುವಂತಿವೆ.

ಬನ್ನಿ ಜಾಲಾರ ಪುಸ್ತಕ ಓದುತ್ತಾ ಜಾಲಾರಾ ಸುಮದ ಘಮವನ್ನು ಆಘ್ರಾಣಿಸುತ್ತಾ ನಮ್ಮ ಬಾಲ್ಯ ಮತ್ತು ಹಳ್ಳಿಯ ಜೀವನದ ನೆನಪುಗಳೊಂದಿಗೆ ಮತ್ತೊಮ್ಮೆ ವಿಹರಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



09 ಮೇ 2022

ನನ್ನ ಪರಿಚಯ.ಅಗ್ರಹಾರ ಪ್ರಶಾಂತ್ ರವರಿಂದ


 


ಪರಿಚಯ ಶುದ್ಧ ಸಾಹಿತ್ಯ ಬಳಗ

ದಿನಾಂಕ ೦೯/೦೫/೨೦೨೨ ಸೋಮವಾರ

*ನಾವು - ನಮ್ಮವರು* ಪರಿಚಯ ಮಾಲಿಕೆ ೧

ಬಹುಮುಖ ಪ್ರತಿಭೆ - ಸಿ ಜಿ ವೆಂಕಟೇಶ್ವರ್

ನಾವು ಇಂದಿನ ಶುಭ ಸೋಮವಾರದಂದು *ನಾವು - ನಮ್ಮವರು* ಮಾಲಿಕೆಯಲ್ಲಿ  *ಸಿಹಿಜೀವಿ* ಯೆಂದೇ ಮನೆಮಾತಾಗಿರುವ ಬಹುಮುಖ ಪ್ರತಿಭೆಯ ಶಿಕ್ಷಕರೂ, ಕವಿಗಳೂ ಮತ್ತು ಕಲಾವಿದರಾಗಿರುವ ಸಿ ಜಿ ವೆಂಕಟೇಶ್ವರ್ ರವರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
   *ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ಸಿಹಿ ಜೀವಿಯಿರದ ಕ್ಷೇತ್ರವಿಲ್ಲ ಎಂಬ ನುಡಿಗೆ ಸರಿಹೊಂದುವಂತಿರುವ ಶ್ರೀಯುತರು ಕೀರ್ತಿಶೇಷ ಗೋವಿಂದಪ್ಪ ಮತ್ತು ಶ್ರೀದೇವಮ್ಮರವರ ಸುಪುತ್ರರಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವು ಚೌಡಗೊಂಡನಹಳ್ಳಿ, ಉಪ್ಪರಿಗೇನಹಳ್ಳಿ, ಯರಬಳ್ಳಿ, ಹಿರಿಯೂರು, ಮೈಸೂರುಗಳಲ್ಲಿ ನಡೆಯಿತು. ರಾಜ್ಯಶಾಸ್ತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿರುವ ಶ್ರೀಯುತರು ಕಥೆ, ಗಜಲ್, ಹನಿಗವನ, ಶಾಯರಿ, ಪರ್ದ್ ಬರೆಯುವುದನ್ನೇ ಮುಖ್ಯ ಹವ್ಯಾಸವಾಗಿ ಬೆಳಿಸಿಕೊಂಡು ಸುಮಾರು ಹತ್ತಕ್ಕೂ ಅಧಿಕ ಕವನ ಮತ್ತು ಲೇಖನಗಳನ್ನು ಒಳಗೊಂಡ ಪುಸ್ತಕಗಳು ಲೋಕಾರ್ಪಣೆಯಾಗಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಲೇಖನಗಳು  ನಾಡಿನ ಎಲ್ಲಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿಯನ್ನು ಹೊಂದಿರುವ ಇವರು ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತಾರೆ. ಜೊತೆಗೆ ವೃತ್ತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಾಜವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಾ ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಸಿಹಿಜೀವಿಯವರು ಎಲ್ಲದಕ್ಕಿಂತ ಹೆಚ್ಚಾಗಿ ಹವ್ಯಾಸಿ ಹಾಡುಗಾರ ಮಾತ್ರವಲ್ಲ, ಉತ್ತಮ ಛಾಯಾಚಿತ್ರಗಾರ ಮತ್ತು ಬ್ಲಾಗ್ ಸಹ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಇವರ ಬ್ಲಾಗ್ ನ್ನು ಜಗತ್ತಿನಾದ್ಯಂತ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಜನರು ಓದುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
        ಶ್ರೀಯುತರ *ಸಾಲು ದೀಪಾವಳಿ, ಸಿಹಿಜೀವಿಯ ಗಜಲ್, ಶಾಲಾ ಪ್ರಬಂಧ ಮತ್ತು ಪತ್ರ ಲೇಖನ, ನನ್ನಮ್ಮ ನಮ್ಮೂರಿನ ಫ್ಲಾರೆನ್ಸ ನೈಟಿಂಗೇಲ್ ಲಲಿತ ಪ್ರಬಂಧ, ರಂಗಣ್ಣನ ಗುಡಿಸಲು ಇವಿಷ್ಟು ಕೃತಿಗಳು ಲೋಕಾರ್ಪಣೆ ಗೊಂಡು ಓದುಗರ ಕೈ ಸೇರಿ ಪ್ರಶಂಸೆಗೆ ಪಾತ್ರವಾಗಿವೆ.
    ಇನ್ನು ಹೊರಬರಲು ಕಾಯ್ದು ಕುಳಿತಿರುವ ಕೃತಿಗಳೆಂದರೆ *ಉದಕದೊಳಗಿನ ಕಿಚ್ಚು*, *ಶಿಕ್ಷಣವೇ ಶಕ್ತಿ* , *ವಿದ್ಯಾರ್ಥಿಗಳಿಗಾಗಿ* *ಸಿಹಿಜೀವಿಯ ಹನಿಗಳು*, *ಬಹುಮುಖ*
   ಸಿ. ಜಿ. ವೆಂ ರವರು *ತಾಲ್ಲೂಕು ಮಟ್ಟದ ಕವಿಗೋಷ್ಠಿ,*, ಕವಿಬಳಗ, ಹನಿ ಹನಿ ಇಬ್ಬನಿ ಬಳಗ, ಸಾಧನಕೇರಿ ಬಳಗ, ಸಾಹಿತ್ಯ ಬಳಗ ಚಿಂತಾಮಣಿ, ಮುಂತಾದವರು ಆಯೋಜಿಸಿದ್ದ  *ರಾಜ್ಯ ಮಟ್ಟದ ಕವಿಗೋಷ್ಠಿ*, ತಾಲ್ಲೂಕು ಸಾಹಿತ್ಯ ಪರಿಷತ್ ಗೌರಿಬಿದನೂರು ಮುಂತಾದ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿ ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
     ಈ ಸಾಧಕರಿಗೆ ರಾಜ್ಯ ಮಟ್ಟದ *ಕಾವ್ಯ ಚಿಂತಾಮಣಿ*, ಜಿಲ್ಲಾ ಮಟ್ಟದ *ಅತ್ಯುತ್ತಮ ಶಿಕ್ಷಕ ಪ್ರಶಸ್ತಿ*, ಕೇಂದ್ರ ಸಾಹಿತ್ಯ ವೇದಿಕೆಯಿಂದ ರಾಜ್ಯ ಮಟ್ಟದ ಸಂಘಟನಾ ಚತುರ*, ರೋಟರಿ ಕ್ಲಬ್ ನಿಂದ ನೇಷನ್ ಬಿಲ್ಡರ್*  ಪ್ರಶಸ್ತಿ ಮುಂತಾದವು ಸಂದಿವೆ.

ಇನ್ನು ಸನ್ಮಾನದ ವಿಚಾರಕ್ಕೆ ಬಂದರಂತೂ ಅಪಾರ ಸಂಖ್ಯೆಯ ಗೌರವ ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದಿವೆ, ಪ್ರಮುಖವಾದವುಗಳೆಂದರೆ *ಬಿ ಎಂ ಕೆ ಸಿ ಕಬ್ಬಡಿ ಕ್ಲಬ್* ಗೌರೀಬಿದನೂರು, *ಸಾಹಿತ್ಯ ಪರಿಷತ್* ಗೌರಿಬಿದನೂರು, *ಲಯನ್ಸ್ ಕ್ಲಬ್* ಗೌರಿಬಿದನೂರು, *ಶಾರದಾ ದೇವಿ ರಾಮಕೃಷ್ಣ ಶಾಲೆ* ಗೌರಿಬಿದನೂರು, *ಬಿಜಿಎಸ್ ಶಾಲೆ ಅಲೀಪುರ*, *ಪಾಂಚಜನ್ಯ ಟ್ರಸ್ಟ್ ಗೌರಿಬಿದನೂರು*, ಸಿದ್ಧ ಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರಿಂದ ಶ್ರೀಯುತರ ಸಾಧನೆಗೆ ಗೌರವ ಸನ್ಮಾನಗಳು ಸಂದಿವೆ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ.
     ಶ್ರೀಯುತರ ಶೈಕ್ಷಣಿಕ ಸಾಧನೆಯ ಕಡೆಗೆ ಗಮನ ಹರಿಸಿದಾಗ  ಮೇಲೆ ತಿಳಿಸಿದಂತೆ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ, ದೀಕ್ಷಾ ಪೋರ್ಟಲ್ ನಲ್ಲಿ ೨೧ ಡಿಜಿಟಲ್ ಸಂಪನ್ಮೂಲ ರಚಿಸಿದ್ದಾರೆ. ಇದು ದೇಶದಾದ್ಯಂತ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ‌. ಶಾಲೆಯಲ್ಲಿ ಕಂಪ್ಯೂಟರ್ ಪ್ರೊಜೆಕ್ಟರ್ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
  ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವೀಡಿಯೋಗಳನ್ನು ಮಾಡಿ ಮಕ್ಕಳಿಗೆ ಹಂಚಿ ಕಲಿಕೆ ನಿರಂತರವಾಗಿ ನಡೆಯುವತ್ತ ಕಾಳಜಿ ವಹಿಸಿರುತ್ತಾರೆ.
ಇದೆಲ್ಲಕಿಂತ ಹೆಚ್ಚಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಸಂದೇಹಗಳನ್ನು  ನಿವಾರಿಸಲು  ಜಿಲ್ಲಾ ಹಂತದ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿರುತ್ತಾರೆ. ಅದಕ್ಕಾಗಿ ಸಿ ಜಿ ವೆಂ ರವರಿಗೆ ಹೃನ್ಮನದ ಅಭಿನಂದನೆಗಳು. ಜೊತೆಗೆ ದೂರದರ್ಶನದ ನೇರಪ್ರಸಾರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
     ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಹುದುಗಿರುವ ಅದಮ್ಯ ಪ್ರತಿಭೆಗಳನ್ನು ಹೆಕ್ಕಿ ಹೊರತರುವ ನಿಟ್ಟಿನಲ್ಲಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಶಾಲೆಯಲ್ಲಿ *ಭಿತ್ತಿ ಪತ್ರಿಕೆ*ಯನ್ನು ಪ್ರಾರಂಭಿಸಿ ಮಕ್ಕಳಿಂದಲೇ *ಕಥೆ, ಕವನ, ಹನಿಗವನ* ಬರೆಯಿಸಿ ತಿದ್ದಿ ಪ್ರೇರೇಪಿಸುವ ಮಹತ್ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.

    ಇಂತಹ ಸಾಧಕರು ನಮ್ಮ ಶುದ್ಧ ಸಾಹಿತ್ಯ ಬಳಗದಲ್ಲಿ ಇರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರವಾಗಿದೆ. ಇಂತಹ ಮಹನೀಯರನ್ನು *ನಾವು- ನಮ್ಮವರು* ಮಾಲಿಕೆಯಲ್ಲಿ ಅವರ ಸಾಧನೆಯನ್ನು ಪರಿಚಯ ಮಾಡಿಕೊಡುತ್ತಿರುವುದು ನಮಗೆ ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಸಾಧನೆ ಜಗದೆತ್ತರಕ್ಕೆ ಏರಿ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಲಿ ಎಂಬ ಹಾರೈಕೆಯೊಂದಿಗೆ ಇಂದಿಗೆ ಮಾಲಿಕೆಗೆ  ವಿರಾಮ ಹಾಕುತ್ತಿದ್ದೇನೆ.

ನಾಳೆ ಮತ್ತೊಬ್ಬ ಸಾಧಕರ ವಿವರದೊಂದಿಗೆ ನಿಮ್ಮ ಮುಂದೆ ಬರುವೆ

ಇಂತಿ

ಅಗ್ರಹಾರಪ್ರಶಾಂತ್

06 ಮೇ 2022

ವಜ್ರದ ಹರಳು .


ವಜ್ರದ ಹರಳು .


ಕಳವಳಗೊಂಡು ತಲ್ಲಣಿಸಿತ್ತು

ಮನ ಸಿಗುವಳೋ ಅಥವಾ

ಸಿಗದಿರುವಳೋ ಅವಳು|

ಅದೇ ಮನ ಸಮಾಧಾನ

ಪಡಿಸಲು ನನ್ನ ಪ್ರಶ್ನೆ ಮಾಡಿತು

ಹೇಗೆ ಕಳೆದುಕೊಳ್ಳುವಳು 

ನಿನ್ನಂತಹ ವಜ್ರದ ಹರಳು||



ಸಿಹಿಜೀವಿ 

 

03 ಮೇ 2022

ಮೇಧಾಶಕ್ತಿ.ಹನಿಗವನ

 


ಮೇಧಾಶಕ್ತಿ

ಕೊರಗದಿರು ನಾ ಬಲಹೀನ
ನಾ ಬುದ್ದಿವಂತನಲ್ಲ ಎಂದು
ಅಂದುಕೊಳ್ಳದಿರು ನನಗಿಲ್ಲ ಯುಕ್ತಿ|
ಜ್ಞಾನವ ಪಡೆಯುತ,ಹಂಚುತಾ
ವಿವೇಕದಿ ಕಾಯಕ ಮಾಡುತಿರು
ನಿನಗರಿವಿಲ್ಲದೇ ನಿನ್ನಲಿ
ಉದಯಿಸುವುದು ಮೇಧಾಶಕ್ತಿ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


02 ಮೇ 2022

ನಟರಾಜ .ಲೇಖನ


 *"ನಟರಾಜ "ಬಾಲ್ಯದ ನೆನಪಿನ ಲೇಖನ*


https://pratilipi.page.link/ThsAjAMtiN6HLYhp8


*ನಟರಾಜ*


ನಾನಾಗ  ನಮ್ಮೂರ  ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಶಿಕ್ಷಕರು ಪ್ರತಿವಾರ ನಮ್ಮನ್ನು ಹೊರಸಂಚಾರ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇನೂ ದೂರವಲ್ಲದಿದ್ದರೂ ಕನಿಷ್ಠ ಮೂರ್ನಾಲ್ಕು ಕಿಲೋಮೀಟರ್ ಹೊರಸಂಚಾರ  ಕರೆದುಕೊಂಡು ಹೋಗಿ ಯಾವುದಾದರೊಂದು ಕೆರೆ ಅಥವಾ ತೋಟದಲ್ಲಿ ನಾವು ನಮ್ಮ ಮನೆಯಿಂದ ಕಟ್ಟಿಕೊಂಡು ಹೋದ ಬುತ್ತಿ ಅನ್ನ, ಚಿತ್ರನ್ನ, ಪಕೋಡ, ರೊಟ್ಟಿ ಹೀಗೆ ವಿವಿಧ ತಿಂಡಿಗಳನ್ನು  ಪರಸ್ಪರ ಹಂಚಿಕೊಂಡು ತಿಂದ ನಂತರ  ಎಲ್ಲಾ ಮಕ್ಕಳ ಚಿತ್ತ ನನ್ನ ಕಡೆ ಹರಿಯುತ್ತಿತ್ತು. ಅವರು"  ಸಾ ವೆಂಕಟೇಶ್ ಹತ್ರ ಡ್ಯಾನ್ಸ್ ಮಾಡ್ಸಿ ಸಾ... " ಅಂದಾಗ ಆ... ಬಾರಾ ವೆಂಕಟೇಶ ಡ್ಯಾನ್ಸ್ ಮಾಡು ನಮ್ಮ ಶಿಕ್ಷಕರು ಕರೆಯುತ್ತಿದ್ದರು. ನಾನು ಹೋಗಿ ಆಗ ಪ್ರಚಲಿತದಲ್ಲಿದ್ದ "ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು...." ಹಾಡನ್ನು ನಾನೇ ಹೇಳಿಕೊಂಡು ಕುಣಿಯತೊಡಗಿದೆ. ಎಲ್ಲಾ ನನ್ನ ಸಹಪಾಠಿಗಳು ಮತ್ತು ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮತ್ತೊಮ್ಮೆ ಕುಣಿಯಲು ಹೇಳಿದರು .ಹೀಗೆ ಮೂರು ಬಾರಿ ಕುಣಿದ ಮೇಲೆ ಚೂರು ಚೂರು ತಿಂದ ವಿವಿಧ ಬಗೆಯ ತಿಂಡಿಗಳು ಯಾವಾಗಲೋ ಕರಗಿದ್ದವು. ನನ್ನ ಡ್ಯಾನ್ಸ್ ಆದ ಮೇಲೆ ಆನಂದ ಎಂಬ ನನ್ನ ಕ್ಲಾಸ್ ಮೇಟ್ ನನ್ನ ಕುಣಿಯಲು ಹೇಳಿದರು ಅವನು " ಒನ್ ಟೂ ತ್ರೀ ಪೋರ್ ಪಾನ್ ಪಟಾನ" ಎಂದು ಯಾರಿಗೂ ಅರ್ಥವಾಗದಿದ್ದರೂ ತೆಲುಗು ಹಾಡು ಹೇಳಿಕೊಂಡು ಕುಣಿಯುವಾಗ ನಾವೆಲ್ಲರೂ ಚಪ್ಪಾಳೆ ತಟ್ಟಿ ಅವನನ್ನು ಹುರಿದುಂಬಿಸಿ ಇನ್ನೂ ಕುಣಿಯುವಂತೆ ಮಾಡಿದೆವು. ಈ ರೀತಿಯಾಗಿ ಕುಣಿಯಲು ಆರಂಭ ಮಾಡಿದ  ನಮ್ಮನ್ನು ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನಮ್ಮ ಡ್ಯಾನ್ಸ್ ಖಾಯಂ ಆಗಿರುತ್ತಿತ್ತು. ಒಂದು ರೀತಿಯಲ್ಲಿ ನಾವು ನಮ್ಮ ಶಾಲೆಯ  ಅಧಿಕೃತ ನಟ ರಾಜರಾಗಿ ಗುರ್ತಿಸಿಕೊಂಡಿದ್ದೆವು. 

ನಂತರ ನನ್ನ ವಿದ್ಯಾಭ್ಯಾಸ ಮುಂದುವರೆದು ಟಿ ಸಿ ಹೆಚ್ ಓದುವಾಗ ಹಿರಿಯೂರಿನಲ್ಲಿ " ತೂ ಚೀಜ್ ಬಡೀ ಹೈ....." ಹಾಡಿಗೆ ಡ್ಯಾನ್ಸ್ ಮಾಡಿದ್ದೆ. ಮೈಸೂರಿನಲ್ಲಿ ಬಿ ಎಡ್ ಓದುವಾಗ ಸಿ ಟಿ ಸಿ ಕ್ಯಾಂಪ್ ನಲ್ಲಿ " ಸಂದೇಶ್ ಆತೇ ಐ ..... ಎಂಬ ಹಾಡಿಗೆ  ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದೆ. 

ಇತ್ತೀಚಿಗೆ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದ ನಿಮಿತ್ತವಾಗಿ  ಹೈದರಾಬಾದ್ ಗೆ ಹೋದಾಗ ರಾಮೋಜಿ   ಪಿಲಂ ಸಿಟಿಯಲ್ಲಿ ಕೃತಕ ಮಳೆ ನೀರಿನಲ್ಲಿ ಎಲ್ಲಾ ಭಾಷೆಗಳ ಹಾಡಿಗೆ   ರೈನ್ ಡ್ಯಾನ್ಸ್ ಮಾಡಿದ್ದು ನೆನಪಾಯಿತು . ವಯಸ್ಸಿನ ನಿರ್ಬಂಧವಿಲ್ಲದೇ ತಮಗಿಷ್ಟ ಬಂದ ಹಾಗೆ ಕುಣಿದ ಆ ಕ್ಷಣಗಳು ನಮ್ಮ ಜೀವನದಿ ಮರೆಯಲಾರದ ಕ್ಷಣಗಳೆಂದು  ಹೇಳಬಹುದು.

ಆದರೂ ಬಾಲ್ಯದಲ್ಲಿ ಕುಣಿದ "ಕಾಣದಂತೆ ಮಾಯವಾದನು ... ಹಾಡು ನೆನೆದರೆ ಏನೋ ಒಂತರ ಸಂತಸ .ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಿದ್ದ ಆ ಡ್ಯಾನ್ಸ್ ಜ್ಞಾಪಿಸಿದ ಮತ್ತೊಮ್ಮೆ ಆನಂದದಿಂದ ನಮ್ಮ ನೆನಪಿಗೆ ಜಾರಿ ಆನಂದಪಟ್ಟೆವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ