ಹಾಯ್ಕು
ಮನದರಸಿ
ಬದುಕಿನ ಸ್ಪೂರ್ತಿ ನೀ
ನನ್ನುಸಿರು ನೀ
ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಹಾಯ್ಕುಗಳು
೧
ಚಿಂತೆಯೇತಕೆ
ಚಿನ್ಮಯನಿರುವನು
ಅವನ ನಂಬು..
೨
ಬೇರೇನೂ ಇಲ್ಲ
ಒಂದೇ ಸೊನ್ನೆ ವ್ಯತ್ಯಾಸ
ಚಿಂತೆಯೇ ಚಿತೆ
೩
ಚಿಂತೆಯ ಬಿಡು
ಚಿಂತನೆಯ ಮಾಡು
ಚಿರ ಸಂತಸ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಸೂತ್ರಧಾರಿ...
ಎನೇ ಬಡಬಡಾಯಿಸಿದರೂ
ನಿನ್ನ ಇಚ್ಚೆಯಿರದೆ ತೃಣವೂ
ಚಲಿಸದು ಎನ್ನಪ್ಪ ಹರಿ |
ಈಗೀಗ ನನಗೆ ಅರಿವಾಗಿದೆ
ನೀ ಸೂತ್ರಧಾರಿ ನಾ ಪಾತ್ರಧಾರಿ|
ಸಿಹಿಜೀವಿ
ಅರ್ಥ...
ಜೀವಿಸಲು ಬರೀ ಹಣವೇ ಬೇಕಿಲ್ಲ
ಇರಲಿ ಗುಣದೊಂದಿಗೆ ಅರ್ಥ |
ಆಗ ನಮ್ಮ ಬದುಕಿಗೆ
ಬರುವುದು ಒಂದು ಹೊಸ ಅರ್ಥ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ