28 ಫೆಬ್ರವರಿ 2022

ಅಂತರಂಗ


*ಅಂತರಂಗ*


ಹೀಗೀಗ ಹೆಚ್ಚಾಗುತ್ತಿದೆ ಅಂತರ ,

ಎಲ್ಲೋ ಒಂದೆಡೆ ಅನುಮಾನ.

ಪ್ರೀತಿಸುವನೇನು ನನ್ನನೇ

ನನ್ನ ಇನಿಯ ರಂಗ |

ತಾಳ್ಮೆಯಿಂದ ಕಾಯುವೆನು 

ಎಂದಾದರೂ ಅರಿತೇನು

ಅವನ ಅಂತರಂಗ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 

ಜನಮಿಡಿತ


 

ಹಾಸನ ವಾಣಿ. ೨೭/೨/೨೨


 

26 ಫೆಬ್ರವರಿ 2022

ಜನಮಿಡಿತ . ೨೬/೨/೨೨


 

ಅವಸಾನ .ಹನಿಗವನ


 

ಸಿಹಿಜೀವಿಯ ಹನಿಗಳು.

ಅವಸಾನ

ಶುರುವಾಗಿದೆ ಯದ್ದ ಎರಡು
ರಾಷ್ಟ್ರಗಳ ನಡುವೆ
ಹಾರಾಡುತ್ತಿವೆ ಕ್ಷಿಪಣಿ, ವಿಮಾನ |
ಹೀಗೇ ಪರಸ್ಪರ ಕಚ್ಚಾಡಿ
ಬಡಿದಾಡಿಕೊಂಡರೆ ತಪ್ಪಿದ್ದಲ್ಲ
ಜೀವಕುಲದ ಅವಸಾನ||

ಶೀರ್ಷಿಕೆಯಿರದ ಪುಟ.

ನನಗಾಸೆಯಿತ್ತು ಬರೆಯುವೆ
ನೀನು ನನ್ನ ಬಾಳಲಿ
ಸುಂದರ ಮುಖಪುಟ|
ಹುಸಿಯಾಯಿತು ನನ್ನ
ನಿರೀಕ್ಷೆ  ಬಿಟ್ಟು ಹೋದೆ
ಶೀರ್ಷಿಕೆಯಿರದ ಪುಟ||


*ಅಕಾಲಿಕ ಮಳೆ*

ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ತುಮಕೂರು
9900925529