31 ಜುಲೈ 2021

ಮೊಮ್ಮೊಗಳ ಬಂಧನ


 


ಮೊಮ್ಮಗಳ ಬಂಧನ 


ನಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹವಾದ ಮಗಳು ಹಲವಾರು ಬಾರಿ ತವರು ಮನೆಗೆ ಬಂದಾಗ " ನೀನು ನಮ್ಮ ಪಾಲಿಗೆ ಎಂದೋ ಸತ್ತಿರುವೆ ತೊಲಗು" ಎಂದು ಅವಮಾನ ಮಾಡಿದ್ದರು ಹೆತ್ತವರು.

ಕರುಳಿನ ಸಂಬಂಧ ಕಡಿಯಾಲಾಗದು ಎಂದುಕೊಂಡು ತಾಯಿಯು ಗಂಡನ ಕಣ್ತಪ್ಪಿಸಿ ಮಗಳ ಮನೆಗೆ ಬಂದರು , ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳ ಕಂಡು ಬರಸೆಳೆದಪ್ಪಿ ಮುದ್ದಾಡಿದರು, ಹೊಸಲಿನ ಬಳಿ ನಿಂತಿದ್ದ ತಾಯಿಯ ಕಣ್ಣಲ್ಲಿ ತನಗರಿವಿಲ್ಲದೇ ನಾಲ್ಕು ಹನಿ ಉದುರಿದವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*31/7/21


 

30 ಜುಲೈ 2021

ಕಡಲಾಗಬೇಕು .ಹನಿ


 


ಕಡಲಾಗಬೇಕು


ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|

ಜಗದೆಲ್ಲ ಕಣ್ಣೀರನ್ನು ಒರೆಸಿ

ತನ್ನಲ್ಲಿ ಇಂಗಿಸಿಕೊಂಡು

ತಾನು ಉಪ್ಪಾದರೂ 

ಸರಿ ನೋಡುವವರಿಗೆ

ಬರೀ ಸೌಂದರ್ಯ

ತೋರಬೇಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


27 ಜುಲೈ 2021

ಜಯಂತಿಯವರಿಗೆ ಹನಿ ನಮನ

ಜಯಂತಿಯವರಿಗೆ ಎರಡು ಹನಿ ನಮನ 



ಅಭಿನಯ ಶಾರದೆ 

ಇನ್ನಿಲ್ಲ ಎಂದು

ಏಕೆ ಚಿಂತಿಸುತಿ|

ಅವರ ಚಿತ್ರಗಳು

ಜೀವಂತ ,ಅವರ

ಹೆಸರಲ್ಲೇ ಇದೆ

ಜಯಂತಿ||



ಐನೂರು ಚಿತ್ರಗಳಲ್ಲಿ

ಜಯಂತಿಯವರು 

ಅಭಿನಯಿಸಿದ 

ಪಾತ್ರಗಳ ಪಟ್ಟಿ

ಬೆಳೆಯುತ್ತದೆ,ನಾಯಕಿ, 

ಅಜ್ಜಿ, ಅವ್ವ |

ಇವುಗಳಲ್ಲೆಲ್ಲಾ ನಾವು

ಮರೆಯೋದಿಲ್ಲ

ನಾಗರಹಾವು ಚಿತ್ರದ

ಓಬವ್ಚ||




ಸಿಹಿಜೀವಿ

ಸಿ ಜಿ ವೆಂಕಟೇಶ್ವರ