25 ಅಕ್ಟೋಬರ್ 2020

ಆಯುಧಗಳು ( ಹನಿ)


 #ಸಿಹಿಜೀವಿಯ_ಚುಟುಕು


ಈಗಿನ ಕರೋನ

ಕಾಲದಲ್ಲಿ ಮಾಸ್ಕ್ ,ಗ್ಲಾಸ್, 

ಸ್ಯಾನಿಟೈಸರ್ ಗಳೆ 

ನಮ್ಮ ಆಯುಧಗಳು|

ಇವನ್ನು ಮರೆತರೆ 

ನಮ್ಮ ಪೋಟೋಗೆ

ಹಾರ ಹಾಕುವರು

ನಮ್ಮ ಸಂಬಂದಿಗಳು||


#ಸಿಹಿಜೀವಿ


ಸಿ ಜಿ ವೆಂಕಟೇಶ್ವರ

ತುಮಕೂರು

ಪ್ರಜಾಪ್ರಗತಿ ೨೫/೧೦/೨೦


 

ಪ್ರತಿನಿಧಿ ೨೦/೧೦/೨೦



 

ಸೆರಗು ( ಹನಿ)


 *ಸೆರಗು*


 ಖಂಡಿತವಾಗಿಯೂ 

ಅವನಿಗೆ ಕರೋನಾದ 

ಭಯವಿಲ್ಲ ಮನೆಯ

ಒಳಗೂ ಮತ್ತು

ಹೊರಗು|

ಏಕೆಂದರೆ ಯಾವಾಗಲೂ 

ಹಿಡಿದುಕೊಂಡಿರುವ

ಅವನ ಅರ್ಧಾಂಗಿಯ

ಸೆರಗು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

24 ಅಕ್ಟೋಬರ್ 2020

ದಸರಾ ಜಂಬೂಸವಾರಿ


 *ದಸರಾ ಜಂಬೂ ಸವಾರಿ*

ಚಂಡ ಮುಂಡರ ಕೊಂದ ಅಮ್ಮನ

ಉತ್ಸವಕೆ ಬನ್ನಿ ನೀವೆಲ್ಲ

ಚಾಮುಂಡೇಶ್ವರಿಯ ಭಜಿಸುತ

ದಸರೆಯ ಮಾಡೊಣ ನಾವೆಲ್ಲ.


ಮಹಿಷನ ಕೊಂದು ಮಹಿಯನು

ಕಾಪಾಡಿದ ಅಮ್ಮನ ನೆನೆಯೋಣ

ಮೈಸೂರಿನ ವಿಶ್ವ ಪ್ರಸಿದ್ಧ ದಸರಾ

ಮಹೋತ್ಸವದಲ್ಲಿ ಪಾಲ್ಗೊಳ್ಳೋಣ.


ಅರಮನೆ ದೀಪಾಲಂಕಾರ 

ಜಗಮಗಿಸತಿದೆ ನೋಡಿಲ್ಲಿ

ಕಣ್ಮನ ಸೆಳೆದಿದೆ ಸಂತಸ 

ಉಕ್ಕಿದೆ ನಮ್ಮಯ ಮನದಲ್ಲಿ.


ವಿಜಯ ದಶಮಿಯ ದಿನ 

ಅಮ್ಮ ಬಂದರು ಆನೆಯೇರಿ

ಸ್ತಬ್ದ ಚಿತ್ರಗಳೊಂದಿಗೆ ಸಾಗಿದೆ

ಅದುವೆ ಜಂಬೂ ಸವಾರಿ.


*ಸಿಹಿಜೀವಿ*

ಸಿ .ಜಿ .ವೆಂಕಟೇಶ್ವರ

ತುಮಕೂರು