This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
13 ಸೆಪ್ಟೆಂಬರ್ 2020
ಐದು ಹಾಯ್ಕುಗಳು
*ಸಿಹಿಜೀವಿಯ ಹಾಯ್ಕುಗಳು*
೯೬
ನಟಮಣಿಯೇ
ನಿನ್ನ ನೋಟ ಮಾದಕ
ನಶೆ ಬೇಕೇನು?
೯೭
ಊಸರವಳ್ಳಿ
ಬಣ್ಣ ಬದಲಾಗಿದೆ
ಮತ್ತೇರಿಸಿದೆ
೯೮
ಡ್ರಗ್ಗಿಣಿಗಳು
ದಿನಕ್ಕೊಂದು ಕಥೆ
ಮರುಳು ಯಾರು?
೯೯
ಚಂದನವನ
ಮತ್ತೆ ಕಂಪು ಬೀರಲಿ
ಕಳೆ ಕೀಳೋಣ .
೧೦೦
ನಶೆಯ ನಂಟು
ಬಗೆದಷ್ಟೂ ಆಳವು
ಶಿಕ್ಷೆ ಯಾವಾಗ?
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಎರಡು ಟಂಕಾಗಳು
ಟಂಕಾ೧
ನೆನಪ ಜಾತ್ರೆ
ಬಾಳಬುತ್ತಿ ತುಂಬಿದೆ
ಸವಿಯಬೇಕು
ಮಧುರ ಅನುಭೂತಿ
ಮನ ನಲಿಯಬೇಕು
ಟಂಕಾ ೨
ಹಿಡಿ ಕೈತುತ್ತು
ಅಮೃತಕ್ಕೆ ಸಮಾನ
ಅಮ್ಮನೇ ದೈವ
ಹೊರನಾಡ ದೇವಿಯು
ಅನ್ನಪೂರ್ಣೇಶ್ವರಿಯು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
11 ಸೆಪ್ಟೆಂಬರ್ 2020
ಪಾತರಗಿತ್ತಿ ಪೈಪೊಟಿ
ಏಳು ತಳಿಯ ಚಿಟ್ಟೆಗಳು ರಾಷ್ಟ್ರೀಯ ಪಾತರಗಿತ್ತಿ ಆಗಲು ನಡೆಸುತ್ತಿವೆ ಪೈಪೋಟಿ| ಯಾರೇ ಆಯ್ಕೆ ಆದರೂ ಅವರಿಗೆ ಗೌರವಿಸಲೇ ಬೇಕು ದೇಶದ ಜನಕೋಟಿ ||
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)