13 ಸೆಪ್ಟೆಂಬರ್ 2020

ಗಜಲ್ ವಿಮರ್ಶೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ


 

ಐದು ಹಾಯ್ಕುಗಳು


 *ಸಿಹಿಜೀವಿಯ  ಹಾಯ್ಕುಗಳು*



೯೬


ನಟಮಣಿಯೇ

ನಿನ್ನ ನೋಟ ಮಾದಕ

ನಶೆ ಬೇಕೇನು?


೯೭


ಊಸರವಳ್ಳಿ 

ಬಣ್ಣ ಬದಲಾಗಿದೆ

ಮತ್ತೇರಿಸಿದೆ 



೯೮


ಡ್ರಗ್ಗಿಣಿಗಳು 

ದಿನಕ್ಕೊಂದು ಕಥೆ

ಮರುಳು ಯಾರು?


೯೯


ಚಂದನವನ

ಮತ್ತೆ ಕಂಪು ಬೀರಲಿ

ಕಳೆ ಕೀಳೋಣ .


೧೦೦



ನಶೆಯ ನಂಟು

ಬಗೆದಷ್ಟೂ ಆಳವು

ಶಿಕ್ಷೆ ಯಾವಾಗ?



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಎರಡು ಟಂಕಾಗಳು

 ಟಂಕಾ೧ 


ನೆನಪ ಜಾತ್ರೆ

ಬಾಳಬುತ್ತಿ ತುಂಬಿದೆ 

ಸವಿಯಬೇಕು

ಮಧುರ ಅನುಭೂತಿ

ಮನ  ನಲಿಯಬೇಕು 


ಟಂಕಾ ೨


ಹಿಡಿ ಕೈತುತ್ತು

ಅಮೃತಕ್ಕೆ ಸಮಾನ 

ಅಮ್ಮನೇ ದೈವ

ಹೊರನಾಡ ದೇವಿಯು 

ಅನ್ನಪೂರ್ಣೇಶ್ವರಿಯು 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು