20 ಮಾರ್ಚ್ 2025

ಬಾಗ್ಡೋಗ್ರಾ ವಿಮಾನ ನಿಲ್ದಾಣ.

 ಭೂತಾನ್ ಪ್ರವಾಸ 

ಬಾಗ್ಡೋಗ್ರಾ ವಿಮಾನ ನಿಲ್ದಾಣ.




ಬಾಗ್ಡೋಗ್ರಾ ವಿಮಾನ ನಿಲ್ದಾಣ.    ಹೌದು ನನಗೂ ಮೊದಲು ಉಚ್ಚರಿಸಲು ಕಷ್ಟವಾದ ಹೆಸರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ ಹೊರಟ ನಮ್ಮ ಆಕಾಸ ಏರ್ಲೈನ್ ಪಶ್ಚಿಮ ಬಂಗಾಳದ  ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮುನ್ನ ಸಾವಿರಾರು ಕಿಲೋಮೀಟರ್ ಪಯಣ ಮಾಡಿದ್ದೆವು. ಭೂತಾನ್ ಪ್ರವಾಸ ಕೈಗೊಳ್ಳಲು ನಾವು ಈ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಹಸಿಮರ ಪುಟ್ಶಿಲಾಂಗ್ ಮೂಲಕ ಭೂತಾನ್ ಪ್ರವೇಶ ಮಾಡಲು ಪ್ಲಾನ್ ಮಾಡಿ ಹೊರಟಿದ್ದೆವು. ಬೆಳಗಿನ 8 ಗಂಟೆಗೆ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ನಾವು ಲ್ಯಾಂಡ್ ಆಗುತ್ತೇವೆ.ವಿಮಾನ ನಿಲ್ದಾಣದಲ್ಲಿ ಪೋಟೋ ವೀಡಿಯೋ ಮಾಡಬೇಡಿ ಎಂದು ಗಗನ ಸಖಿ ಹೇಳಿದರು.


ಬಾಗ್ಡೋಗ್ರಾ ವಿಮಾನ ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಗರಕ್ಕೆ ಸೇವೆ ಸಲ್ಲಿಸುವ ಕಸ್ಟಮ್ಸ್ ವಿಮಾನ ನಿಲ್ದಾಣವಾಗಿದೆ. ಇದು  ಭಾರತೀಯ ವಾಯುಪಡೆಯ ಬಾಗ್ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ನಾಗರಿಕ ಎನ್ಕ್ಲೇವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಕುರ್ಸಿಯೊಂಗ್, ಕಾಲಿಂಪಾಂಗ್, ಮಿರಿಕ್ ಮತ್ತು ಉತ್ತರ ಬಂಗಾಳ ಪ್ರದೇಶದ ಇತರ ಭಾಗಗಳು ಮತ್ತು ಈಶಾನ್ಯ ಬಿಹಾರದ ಗಿರಿಧಾಮಗಳಿಗೆ ಪ್ರವೇಶ ದ್ವಾರವಾಗಿದೆ. ಭಾರತ ಸರ್ಕಾರವು 2002 ರಲ್ಲಿ ಈ   ವಿಮಾನ ನಿಲ್ದಾಣಕ್ಕೆ ಸೀಮಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನವನ್ನು ನೀಡಿದೆ.  ಬ್ಯಾಂಕಾಕ್-ಸುವರ್ಣಭೂಮಿ ಮತ್ತು ಪಾರೋಗೆ ಸೀಮಿತ ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ  ಇದು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

 ಹಾಗೂ ಭಾರತದ 17 ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಇದು ವಾಯುಯಾನ ಟರ್ಬೈನ್ ಇಂಧನದ ಮೇಲೆ ಶೂನ್ಯ ಮಾರಾಟ ತೆರಿಗೆಯನ್ನು ಹೊಂದಿರುವ ಭಾರತದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.  ಈ ವಿಮಾನ ನಿಲ್ದಾಣವು 13 ವಿಮಾನ ನಿಲ್ದಾಣಗಳಿಗೆ ಮಾರ್ಗಗಳನ್ನು ಹೊಂದಿದೆ ಮತ್ತು 3 ದೇಶಗಳಿಗೆ ಭಾರತ , ಭೂತಾನ್ ಮತ್ತು ಥೈಲ್ಯಾಂಡ್ ಸಂಪರ್ಕ ಕಲ್ಪಿಸುತ್ತದೆ.  

ವಿಮಾನ ನಿಲ್ದಾಣ ತಲುಪಿ ಅಲ್ಲೇ ಪ್ರೇಶ್ ಅಪ್ ಆಗಿ ಹೊರಬಂದ ನಮ್ಮ ತಂಡವನ್ನು ನಮ್ಮ ಟೂರ್ ಮೇನೇಜರ್ ಪ್ರಕಾಶ್ ಸ್ವಾಗತಿಸಿ ತಿನ್ನಲು ಪುರಿ ಮತ್ತು ಸಾಗು ಕೊಟ್ಟರು.ಮುದ್ದೆ ಅನ್ನ ತಿನ್ನುವ ನಮಗೆ ಪುರಿ ಸಾಗು‌ ಅಷ್ಟು ‌ರುಚಿಸಲಿಲ್ಲ. ನಮಗಾಗಿ ಸಿದ್ದವಾಗಿದ್ದ ಎರಡು ಮಿನಿ ಬಸ್ ಏರಿ ಜೈಗಾನ್ ಕಡೆ ಪಯಣ ಮುಂದುವರೆಸಿದೆವು.




19 ಮಾರ್ಚ್ 2025

ಪ್ರೀತಿ ನಿವೇದನ .ಹನಿಗವನ


 


ಪ್ರೀತಿ ನಿವೇದನ 


ನೀನೇ ನನ್ನ ಪ್ರಾಣ,

ರಾಣಿಯಂಗೆ ನೋಡಿಕೊಳ್ಳುವೆ

ಒಪ್ಪಿಕೊಂಡು ಬಿಡು ನನ್ನ

ಪ್ರೀತಿಯನೆಂದು ಹುಡುಗ

ಮಾಡಿದನು ಪ್ರೀತಿ ನಿವೇದನ|

ಹುಡುಗಿ ಉತ್ತರಿಸಿದಳು 

ಪ್ರೀತಿಯ ಮಾತು ಆಮೇಲೆ

ಮೊದಲು ನಿನ್ನ ಬಳಿ

ಇದೆಯೋ ಇಲ್ಲವೋ ಹೇಳು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


18 ಮಾರ್ಚ್ 2025

ಭೂತಾನ್ ನ ಹೆಬ್ಬಾಗಿಲು ಫುಂಟ್‌ಶೋಲಿಂಗ್


 


ಭೂತಾನ್ ನ ಹೆಬ್ಬಾಗಿಲು 

ಫುಂಟ್‌ಶೋಲಿಂಗ್ 


  ಫುಂಟ್‌ಶೋಲಿಂಗ್! ಮೊದಲ ಬಾರಿ ಹೆಸರು ಕೇಳಿದರೆ ವಿಚಿತ್ರ ಎನಿಸಬಹುದು. ನಾವು ಭೂತಾನ್ ಪ್ರವಾಸ ಮಾಡಲು ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೈಗಾನ್ ತಲುಪಿ ಅದಕ್ಕೆ ಹೊಂದಿಕೊಂಡಿರುವ ಫುಂಟ್ ಶೋಲಿಂಗ್ ಸೇರಲು ಹೊರಟೆವು. ಇದು ದಕ್ಷಿಣ ಭೂತಾನ್‌ನ ಗಡಿ ಪಟ್ಟಣವಾಗಿದ್ದು ಚುಖಾ ಜಿಲ್ಲೆಯ ಆಡಳಿತ ಸ್ಥಾನವಾಗಿದೆ.

ಫ್ಯೂಯೆಂಟ್‌ಶೋಲಿಂಗ್ ಭಾರತದ ಜೈಗಾಂವ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಗಡಿಯಾಚೆಗಿನ ವ್ಯಾಪಾರವು ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ. ಥಿಂಫುಗೆ ಸ್ಥಳಾಂತರಗೊಳ್ಳುವ ಮೊದಲು ಈ ಪಟ್ಟಣವು ಬ್ಯಾಂಕ್ ಆಫ್ ಭೂತಾನ್‌ನ ಪ್ರಧಾನ ಕಚೇರಿಯನ್ನು ಹೊಂದಿತ್ತು . 


ಮೊದಲು ಭೂತಾನ್ ನಲ್ಲಿ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲು ಅವಕಾಶವಿರಲಿಲ್ಲ.

ಭೂತಾನ್ ನ ದಿವಂಗತ ಪ್ರಧಾನಿ ಜಿಗ್ಮೆ ದೋರ್ಜಿ ಫುಂಟ್‌ಶೋಲಿಂಗ್ ನಿವಾಸಿಗಳಿಗೆ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಬಹುದು ಎಂದು ಆದೇಶ ಮಾಡಿದ ಪರಿಣಾಮವಾಗಿ ತಾಶಿ ಗ್ರೂಪ್ ಆಫ್ ಕಂಪನಿಗಳು ಮೊದಲ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದವು. ಇದರ ಪರಿಣಾಮವಾಗಿ ಈ ಪ್ರದೇಶ ಕ್ರಮೇಣವಾಗಿ ನಗರವಾಗಿ ಅಭಿವೃದ್ಧಿಯಾಯಿತು.


ಫಂಟ್‌ಶೋಲಿಂಗ್ ಒಂದು ಬಿಸಿ ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದ  ತಾಣವಾಗಿದ್ದು   ಸರಾಸರಿ ವಾರ್ಷಿಕ 3,953 ಮಿಲಿಮೀಟರ್  ಮಳೆಯನ್ನು ಪಡೆಯುತ್ತದೆ ಬೇಸಿಗೆಯು ದೀರ್ಘವಾಗಿರುತ್ತದೆ.ನಾವು ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಭೇಟಿ ನೀಡಿದರೂ ಬೆಳಗಿನ ಎಂಟು ಗಂಟೆಗಾಗಲೇ ಸೂರ್ಯನ ಕಿರಣಗಳು ನಮ್ಮ ನೆತ್ತಿಯನ್ನು ಸುಡಲಾರಂಬಿಸಿದ್ದವು.

  

ಭಾರತ-ಭೂತಾನ್ ಗಡಿಯು ಎರಡು ವಿಭಿನ್ನ ನಗರ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ. ಗಡಿಯಾಚೆಗಿನ ಜೈಗಾಂವ್ ದೊಡ್ಡದಾಗಿದೆ, ಗದ್ದಲ ಮತ್ತು ಜೋರಾಗಿದೆ, ಇದು ಪಶ್ಚಿಮ ಬಂಗಾಳದ ಇತರ ಅನೇಕ ವಾಣಿಜ್ಯ ಕೇಂದ್ರಗಳಂತೆಯೇ ಇದೆ, ಆದರೂ ಅನೇಕ ಭೂತಾನ್ ಖರೀದಿದಾರರನ್ನು ಹೊಂದಿದೆ. ಫಂಟ್‌ಶೋಲಿಂಗ್ ಭೂತಾನ್‌ನ ಆರ್ಥಿಕ, ಕೈಗಾರಿಕಾ ಮತ್ತು ವ್ಯಾಪಾರ ರಾಜಧಾನಿಯಾಗಿರುವುದರಿಂದ ಇತರ ಭೂತಾನ್ ಪಟ್ಟಣಗಳಿಗಿಂತ ವಿಶಿಷ್ಟವಾಗಿ ಹೆಚ್ಚು ನಗರವಾಗಿದೆ. 


ಭೂತಾನ್‌ಗೆ ವ್ಯಾಪಾರವಾಗುವ ಹೆಚ್ಚಿನ ಸರಕುಗಳು ಫುಂಟ್‌ಶೋಲಿಂಗ್ ಮೂಲಕ ಸಾಗಣೆಯಾಗುತ್ತವೆ. ಇದು ಭಾರತದೊಂದಿಗಿನ ವ್ಯಾಪಾರಕ್ಕಾಗಿ ಭೂತಾನ್‌ಗೆ ಪ್ರವೇಶ ದ್ವಾರವಾಗಿದೆ. 


ಗಡಿಯ ಜೈಗಾನ್ ನಿಂದ  ಭೂತಾನಿನ ಪ್ರವೇಶಕ್ಕೆ  ಸ್ಥಳೀಯರು ಕೆಲವೊಮ್ಮೆ ದಾಖಲೆಗಳನ್ನು ನೀಡದೆ  ದಾಟಬಹುದು. ಭಾರತ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನ ಪ್ರವಾಸಿಗರು ಭೂತಾನ್‌ಗೆ ಪ್ರವೇಶಿಸಲು ವೀಸಾ ಅಗತ್ಯವಿಲ್ಲ ಆದರೆ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಗುರುತಿನ ಪುರಾವೆಗಳನ್ನು ತೋರಿಸಬೇಕು ಮತ್ತು ಭೂತಾನ್‌ಗೆ ಪ್ರವೇಶಿಸಲು ಫಂಟ್‌ಶೋಲಿಂಗ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಇತರ ವಿದೇಶಿಯರಿಗೆ ಬಾಡಿಗೆ ನೋಂದಾಯಿತ ಪ್ರವಾಸ ಮಾರ್ಗದರ್ಶಿಯಿಂದ ಪ್ರಸ್ತುತಪಡಿಸಲಾದ ವೀಸಾ ಅಗತ್ಯವಿದೆ. ಪಟ್ಟಣದ ಪ್ರವೇಶ ದ್ವಾರವನ್ನು ಸಶಸ್ತ್ರ ಸೀಮಾ ಬಲದ  ಮತ್ತು ಭೂತಾನ್ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು.

ಈ ಪಟ್ಟಣವು ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಳಿದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣವು ವಿಮಾನ ನಿಲ್ದಾಣ ಸೌಲಭ್ಯಗಳನ್ನು ಅಥವಾ ನೇರ ರೈಲು ಮಾರ್ಗವನ್ನು ಹೊಂದಿಲ್ಲ.ಆದರೆ ಭಾರತೀಯ ರೈಲ್ವೆಯು ಹತ್ತಿರದಲ್ಲಿ ರೈಲು ನಿಲ್ದಾಣಗಳನ್ನು ಹೊಂದಿದೆ. ಉತ್ತರ ಬಂಗಾಳದ ಹತ್ತಿರದ ರೈಲ್ವೆ ಸ್ಟೇಷನ್  ಹಸಿಮಾರದಿಂದ ಫುಂಟ್‌ಶೋಲಿಂಗ್‌ಗೆ 20 ಕಿಮೀ  ಇದೆ. ಸಿಲಿಗುರಿ, ನ್ಯೂ ಜಲ್ಪೈಗುರಿ ಮತ್ತು ನ್ಯೂ ಅಲಿಪುರ್ದೂರ್ ಹತ್ತಿರದ ದೊಡ್ಡ ರೈಲ್ವೆ ಜಂಕ್ಷನ್‌ಗಳಾಗಿವೆ. ಉತ್ತರ ಬಂಗಾಳದ ಪಟ್ಟಣಗಳಿಂದ ಬಸ್‌ಗಳು ಲಭ್ಯವಿವೆ. ಭಾರತೀಯ ಮೂಲದ ಖಾಸಗಿ ಮತ್ತು ಭೂತಾನ್ ಸರ್ಕಾರದ ಬಸ್ ಗಳು ಹೀಗೆ ಎರಡೂ ರೀತಿಯ ಬಸ್‌ಗಳನ್ನು ನೋಡಬಹುದು. ನಾವು ಮೊದಲೇ ನಮ್ಮ ಟ್ರಾವೆಲ್ ಏಜೆನ್ಸಿ ಮೂಲಕ ಬಸ್ ಬುಕ್ ಮಾಡಿದ್ದರಿಂದ ಎರಡು ಮಿನಿ ಬಸ್ ಗಳು ನಮಗಾಗಿ ಕಾದಿದ್ದವು.

ಅವುಗಳನ್ನು ಏರಿ  ಪುಂಟ್ ಶಿಲಾಂಗ್ ಕಡೆಗೆ ತಲುಪುವ ಮುನ್ನ ಒಂದು ರಾತ್ರಿ ಅಲ್ಲೇ ತಂಗಿದ್ದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







ಕಲ್ಪನಾ ಚಾವ್ಲಾ..


 ಚಿಕ್ಕ ವಯಸ್ಸಿನಲ್ಲಿ ಹರ್ಯಾಣ ದ ಕರ್ನಾಲ್ ನಲ್ಲಿ ರಾತ್ರಿ ಅಂಗಳದಲ್ಲಿ ತನ್ನ ಕುಟುಂಬದ ಜೊತೆಯಲ್ಲಿ ಮಲಗಿದ್ದಾಗ ನಕ್ಷತ್ರ ಎಣಿಸುವ ಕೆಲಸ ಮಾಡದೇ ಆ ನಕ್ಷತ್ರಗಳಿರುವ ಕಡೆ ತನ್ನ ಗುರಿ ನೆಟ್ಟು ಅದರಲ್ಲಿ ಯಶಸ್ಸು ಕಂಡು ಬಾಹ್ಯಾಕಾಶಕ್ಕೆ ನೆಗೆದು ಸಾಹಸ ಮಾಡಿ‌ ಕೊನೆಗೆ ಬಾಹ್ಯಾಕಾಶದಲ್ಲೇ ಮರಣ ಹೊಂದಿ ನಕ್ಷತ್ರವಾದ ನಕ್ಷತ್ರವೇ ಕಲ್ಪನಾ ಚಾವ್ಲಾ! ಇಂದು ಅವರ ಹುಟ್ಟಿದ ದಿನ ಕೋಟ್ಯಾಂತರ ಬಾಹ್ಯಾಕಾಶ ಪ್ರಿಯರ ಸ್ಪೂರ್ತಿ ನಮ್ಮ ಕಲ್ಪನಾ ಚಾವ್ಲ.


ಕಲ್ಪನಾ ಚಾವ್ಲಾ ಮಾರ್ಚ್ 17 ರ 1962ರಲ್ಲಿ ಜನಿಸಿದ ಅವರು   ಗಗನಯಾತ್ರಿಯಾಗಿ ಬಾಹ್ಯಾಕಾಶ ಎಂಜಿನಿಯರ್ ಆಗಿ ಅವರು ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಚಾವ್ಲಾ ಚಿಕ್ಕ ವಯಸ್ಸಿನಿಂದಲೂ ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಭಾರತದ ದಯಾಳ್ ಸಿಂಗ್ ಕಾಲೇಜು ಮತ್ತು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು   ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ತಮ್ಮ ಎಂಎಸ್ಸಿ ಮತ್ತು ಪಿಎಚ್‌ಡಿ ಗಳಿಸಿದರು, ೧೯೯೦ ರ ದಶಕದ ಆರಂಭದಲ್ಲಿ ನೈಸರ್ಗಿಕ ಯುನೈಟೆಡ್ ಸ್ಟೇಟ್ಸ್ ನಾಗರಿಕರಾದರು.

ನಾಸಾ ಸೇರಿ ಮೊದಲ ಗಗನಯಾನ ಯಶಸ್ವಿಯಾಗಿ ಪೂರೈಸಿ ಎರಡನೇ ಗಗನಯಾನದಲ್ಲಿ ತನ್ನ ಆರು ಜನ ಸಹ ಯಾತ್ರಿಗಳೊಂದಿಗೆ ಅಕಾಲ ಮರಣ ಹೊಂದಿದರು.

ಕಲ್ಪನಾ ರ ಸಾಧನೆಯನ್ನು ಎಲ್ಲರೂ ಪ್ರಶಂಸಿಸೋಣ.

#ಕಲ್ಪನಾ #ಚಾವ್ಲಾ #kalpana @highlight CgVenkateshwara Cg #KalpanaChawla #kalpanachavla #NASA #NasaSpaceAppsChallenge

16 ಮಾರ್ಚ್ 2025

ನಮ್ಮ ಪೂರ್ವಜರಿಗೆ ನಮನಗಳು

 


ನಮ್ಮ ಪೂರ್ವಜರಿಗೆ  ನಮನಗಳು.


ನಾವು ಭೂಮಿಗೆ ಬರಲು 

2 ಪೋಷಕರು

4 ಅಜ್ಜ-ಅಜ್ಜಿಯರು

8 ಮುತ್ತಜ್ಜಿಯರು

16 ಮುತ್ತಜ್ಜಿಯರು

32  3 ನೇ ಪೀಳಿಗೆ ತಾತ ಅಜ್ಜಿಯರು 

64 4 ನೇ ಪೀಳಿಗೆ ತಾತ ಅಜ್ಜಿಯರು

128 5 ನೇ ಪೀಳಿಗೆಯ ತಾತ ಅಜ್ಜಿಯರು

256 6 ನೇ ಪೀಳಿಗೆಯ ಪುರ್ವಜರು

512 7 ನೇ ಪೀಳಿಗೆಯ ಪೂರ್ವಜರು

1024 8 ನೇ ಪೀಳಿಗೆಯ ಪೂರ್ವಜರು

2048 9 ನೆಯ ಪೀಳಿಗೆಯ ಪೂರ್ವಜರು ಹೀಗೆ  ಮುಂದುವರೆಯುತ್ತದೆ..... ಇಲ್ಲಿಗೆ ಈ ಉದಾಹರಣೆ ನಿಲ್ಲಿಸಿ ನೋಡಿದರೆ.

ನಾವು ಭುವಿಗೆ ಬರಲು 

ಕಳೆದ 11 ತಲೆಮಾರುಗಳಲ್ಲಿ 4,094 ಪೂರ್ವಜರು ಬೇಕು.   ನೀವು ಅಥವಾ ನಾನು ಹುಟ್ಟುವ ಸುಮಾರು 300 ವರ್ಷಗಳ ಮೊದಲು!

ನಮ್ಮ ಪೂರ್ವಜರು ಎಷ್ಟು ಯುದ್ಧಗಳನ್ನು ಮಾಡಿದರು?

ಅವರು ಎಷ್ಟು ಹಸಿವನ್ನು ಸಹಿಸಿಕೊಂಡರು?

ನಮ್ಮ ಪೂರ್ವಜರು ಎಷ್ಟು ಕಷ್ಟಗಳನ್ನು ಅನುಭವಿಸಿದರು?

ಮತ್ತೊಂದೆಡೆ ಅವರು ನಮಗೆ ಎಷ್ಟು ಪ್ರೀತಿ, ಶಕ್ತಿ, ಸಂತೋಷ ಮತ್ತು ಪ್ರೋತ್ಸಾಹವನ್ನು ನೀಡಿದರು? 

ಅವರಲ್ಲಿ ಪ್ರತಿಯೊಬ್ಬರೂ ನಮ್ಮಲ್ಲಿ ಎಷ್ಟರ ಮಟ್ಟಿಗೆ ಬದುಕುವ ಇಚ್ಛೆಯನ್ನು ಬಿಟ್ಟು ಹೋಗಿದ್ದಾರೆ, ನಾವು ಇಂದು ಜೀವಂತವಾಗಿರಲು ಅವಕಾಶ ಮಾಡಿಕೊಟ್ಟಿದ್ದಾರೆ?


ಅದ್ದರಿಂದ ಅವರನ್ನು ಗೌರವಿಸುವ ಸಲುವಾಗಿ  ಜಗತ್ತಿನ ಎಲ್ಲಾ ದೇಶಗಳಲ್ಲಿ ಜನರು ತಮ್ಮ ಪೂರ್ವಜರನ್ನು ಆರಾಧಿಸುವ ವಿವಿಧ ಆಚರಣೆಗಳಲ್ಲಿ ತೊಡಗಿರುವುದನ್ನು  ಕಾಣುತ್ತೇವೆ.

ಇಂತಹ ಪರಂಪರೆಯನ್ನು ಹೊಂದಿರುವ ನಾವು ನಮ್ಮ ಪೂರ್ವಜರನ್ನು ಗೌರವಿಸುತ್ತಾ ಸಂಸ್ಕಾರಯುತ ಸಶಕ್ತ  ಮುಂದಿನ  ಪೀಳಿಗೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮದಾಗಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು