26 ಅಕ್ಟೋಬರ್ 2024

ಅಲಕ್ ಪಾಂಡೆ ,ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ.


 


ಅಲಕ್ ಪಾಂಡೆ, ಭಾರತ ಕಂಡ ಅತ್ಯಂತ ಶ್ರೀಮಂತ ಶಿಕ್ಷಕ! 


ಮಗಳು ಸಂದೇಹ ಪರಿಹಾರಕ್ಕಾಗಿ ಒಮ್ಮೆ ‌ಯೂಟೂಬ್ ನಲ್ಲಿ ಫಿಸಿಕ್ಸ್ ವಿಷಯದ ಬಗ್ಗೆ ವೀಡಿಯೋ ನೋಡುತ್ತಿದ್ದಳು. ಕುತೂಹಲದಿಂದ ಚಾನೆಲ್ ಬಗ್ಗೆ ಕೇಳಿದಾಗ ಫಿಸಿಕ್ಸ್ ವಾಲಾ ಎಂದಳು.ಆ ಚಾನೆಲ್ ಸ್ಥಾಪಿಸಿದ ಅಲಕ್ ಪಾಂಡೆಯವರ ಸಾಧನೆ ಕೇಳಿ ಬೆರಗಾದೆ. 

ಭಾರತದಲ್ಲಿ ಯಾವೆಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೋ ಅವರೆಲ್ಲರಿಗೂ ಅಲಕ್ ಪಾಂಡೆ ಎಂಬ ಶಿಕ್ಷಕನ ಹೆಸರು ಚಿರಪರಿಚಿತ. ಈ ವ್ಯಕ್ತಿ ದೇಶದ ಎಲ್ಲ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೂ ಒಂದು ಲೆಕ್ಕದಲ್ಲಿ ಸ್ಫೂರ್ತಿಯ ಸೆಲೆ. ಇವರನ್ನು ಭಾರತದಲ್ಲಿಯೇ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಗುರುತಿಸಲಾಗುತ್ತದೆ. ಆದ್ರೆ ನೆನಪಿರಲಿ ಇವರು ಜೆಇಇ ಹಾಗೂ ಐಐಟಿ ಫೇಲ್ ಆದವರು. ಆದರೂ ಈಗ ಜೆಇಇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಇವರು ಶುರು ಮಾಡಿರುವ ತರಬೇತಿ ಕೇಂದ್ರದ ಹೆಸರು ಪಿಸಿಕ್ಸ್ ವಲ್ಹಾ ಎಂದು. ಅಲಕ್ ಪಾಂಡೆ ಈ ಒಂದು ಸಂಸ್ಥೆಯನ್ನು ಏಕಾಂಗಿಯಾಗಿ ಕಟ್ಟಿದ್ದರು. ಸದ್ಯ ಅವರ ಸಂಸ್ಥೆ ಈಗ ಸಾವಿರಾರು ಕೋಟಿ ರೂಪಾಯಿ ತಂದುಕೊಡುತ್ತಿದೆ. ಅಲಕ್ ಪಾಂಡೆಯವರು ಈ ಒಂದು ತರಬೇತಿ ಕೇಂದ್ರದಿಂದ ಗಳಿಸಿದ ಒಟ್ಟು ಆಸ್ತಿ 4500 ಕೋಟಿ ರೂಪಾಯಿ.

1991ರಲ್ಲಿ ಉತ್ತರಪ್ರದೇಶದ ಅಲಹಾಬಾದ್​ನಲ್ಲಿ ಹುಟ್ಟಿದ ಅಲಕ್ ಪಾಂಡೆ, ಜೀವನ ಕಳೆದಿದ್ದು ಅತ್ಯಂತ ಮಧ್ಯಮ ವರ್ಗದ ಕುಟುಂಬದಲ್ಲಿ. ಅವರ ತಂದೆ ಖಾಸಗಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಥಿಕ ಪರಿಸ್ಥಿತಿ ಅವರನ್ನು ಹೇಗೆ ತಿಂದು ಹಾಕಿತ್ತು ಎಂದರೆ. ಅದರಿಂದ ಪಾರಾಗಲು ಅವರು ಸ್ವಂತ ಮನೆಯನ್ನೇ ಮಾರಿ, ಬಾಡಿಗೆ ಮನೆಗೆ ಬರಬೇಕಾಯ್ತು.

ಅಲೋಕ್ ಪಾಂಡೆ 6ನೇ ತರಗತಿಯಲ್ಲಿದ್ದಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುವ ಮೂಲಕ ಅವರ ಶಿಕ್ಷಕನ ವೃತ್ತಿ ಆರಂಭವಾಯತು. ಈ ವೇಳೆ ತಮ್ಮ ಊರಿನಿಂದ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಿ ತನ್ನ ಜೂನಿಯರ್​ಗಳಿಗೆ ಪಾಠ ಮಾಡುತ್ತಿದ್ದರು.

ತಮ್ಮ ಶಾಲಾ ದಿನಗಳು ಮುಗಿದ ಬಳಿಕ ಅಲಕ್ ಐಐಟಿ ಹಾಗೂ ಜೆಇಇ ಪರೀಕ್ಷೆಯನ್ನು ಎದುರಿಸಿ ವಿಫಲರಾಗಿದ್ದರು.  ತಮ್ಮ ಪ್ರಯಾಣವನ್ನು ಯೂಟ್ಯೂಬ್ ಚಾನೆಲ್​ನತ್ತ ಹೊರಳಿಸಿದ ಅಲೋಕ್ ಹಿಂತಿರುಗಿ ನೋಡಲಿಲ್ಲ.

2014ರಲ್ಲಿ ತಮ್ಮದೇ ಒಂದು ಪಿಜಿಕ್ಸ್ ವಲ್ಹಾ ಎಂಬ ಚಾನೆಲ್ ಶುರು ಮಾಡಿದ ಅಲಕ್ ಪಾಂಡೆ ಅವರ ಕಲಿಕಾ ಶೈಲಿಯಿಂದಲೇ ಫೇಮಸ್ ಆದರು. ಅವರ ವಿಡಿಯೋಗಳು ಎಲ್ಲೆಡೆ ಹರಿದಾಡಲು ಶುರುವಾದವು. ಇಲ್ಲಿಂದ ಅಲಕ್ ಪಾಂಡೆ ಅವರ ಲಕ್ ಸಂಪೂರ್ಣವಾಗಿ ಬದಲಾಯ್ತು. ಮುಂದೆ ಇದು ವೆಬ್​ಸೈಟ್ ರೂಪವನ್ನು ಪಡೆದುಕೊಂಡಿತು. ಅನೇಕ ಕಡೆ ಪಿಜಿಕ್ಸ್ ವಲ್ಹಾ ಕೋಚಿಂಗ್ ಸೆಂಟರ್​ಗಳನ್ನು ಶುರುವಾದವು.ಸದ್ಯ ಅಲಕ್ ಪಾಂಡೆ ಅವರ ಆಸ್ತಿ 4100 ಕೋಟಿ ರೂಪಾಯಿ ತಲುಪುತ್ತದೆ. ಇವರು ಭಾರತದ ಅತ್ಯಂತ ಕಿರಿಯ ಬಿಲಿಯೇನಿಯರ್​ಗಳಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ. ಇವರನ್ನು ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಕೂಡ ಗುರುತಿಸಲಾಗಿದೆ.


ಸಿಹಿಜೀವಿ ವೆಂಕಟೇಶ್ವರ

25 ಅಕ್ಟೋಬರ್ 2024

ದುರ್ಗಮ ಚಾರಣ


 #ದುರ್ಗಮಚಾರಣ 


ನಮ್ಮಲ್ಲಿ ಕುಮಾರ ಪರ್ವತ ಚಾರಣ ದುರ್ಗಮ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದಕ್ಕಿಂತ ದುರ್ಗಮ ಮತ್ತು ಕಠಿಣ ವೆನುಜುಯೇಲ ದೇಶದ  ಟೆಪುಯಿ ಪರ್ವತಾರೋಹಣ!  ಅದು ಜೀವಮಾನದ ಸಾಹಸ!  ಈ ಸಾಹಸಕ್ಕೆ ಅತ್ಯುತ್ತಮ ದೈಹಿಕ ಸಾಮರ್ಥ್ಯದ ಅಗತ್ಯವಿದೆ.  ಹೃದಯರಕ್ತನಾಳದ ವ್ಯಾಯಾಮಗಳು, ಶಕ್ತಿ ತರಬೇತಿ ಮತ್ತು ಸಹಿಷ್ಣುತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಕಠಿಣವಾಗಿ ತರಬೇತಿಯೂ ಬೇಕು.

 ಗಟ್ಟಿಮುಟ್ಟಾದ ಹೈಕಿಂಗ್ ಬೂಟುಗಳು, ಕ್ರಾಂಪನ್‌ಗಳು, ಹಗ್ಗಗಳು, ಸರಂಜಾಮುಗಳು ಮತ್ತು ಕ್ಯಾರಬೈನರ್‌ಗಳು ಬೇಕೇ ಬೇಕು.ಪ್ರಥಮ ಚಿಕಿತ್ಸಾ ಕಿಟ್, ದಿಕ್ಸೂಚಿ, GPS ಸಾಧನ ಮತ್ತು ನಕ್ಷೆಗಳಿದ್ದರೆ ಒಳಿತು...

ನೀವೇನಾದರೂ ವೆನುಜುಯೇಲಾಗೆ ಹೋದರೆ ಒಮ್ಮೆ ಈ ಟ್ರಕ್ ಟ್ರೈ ಮಾಡಿ..

#sihijeeviVenkateshwara #tour #venezuela #trekking

23 ಅಕ್ಟೋಬರ್ 2024

ಟ್ರಿಸ್ಟಾನ್ ಡ ಕುನ್ಹಾ"...ದ್ವೀಪ

 

ಆ ದ್ವೀಪದಲ್ಲಿ   ಕೇವಲ 264 ಜನರು ವಾಸವಾಗಿದ್ದಾರೆ!.. ನೆಮ್ಮದಿ ಶಾಂತಿಯ ಬದುಕು ಅವರದಾಗಿದೆ...ಯಾವುದು ಆ ದ್ವೀಪ?..

ಅದೇ..

"ಟ್ರಿಸ್ಟಾನ್ ಡ ಕುನ್ಹಾ"...ದ್ವೀಪ

ಅಂಡಮಾನ್ ಭೂತಾನ್ ನೋಡಿ ಅಚ್ಚರಿಗೊಂಡ ನನಗೆ ಈ ದ್ವೀಪದ ಕುರಿತು ತಿಳಿದು ಇನ್ನೂ ಅಚ್ಚರಿಯಾಯಿತು.

ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿರುವ ದ್ವೀಪಸಮೂಹದ ಭಾಗವಾದ   ಈ ದ್ವೀಪವು ಹತ್ತಿರದ ಮಾನವ ವಾಸಿಸುವ ಜಾಗದಿಂದ  ಸುಮಾರು 2,400 ಕಿಲೋಮೀಟರ್  ದೂರದಲ್ಲಿದೆ, ಇದಕ್ಕೆ ಬಹಳ ಹತ್ತಿರದ ದ್ವೀಪ  ಸೇಂಟ್ ಹೆಲೆನಾ.

   ಟ್ರಿಸ್ಟಾನ್ ಡ ಕುನ್ಹಾದಲ್ಲಿನ ಜನರು   ಜೀವನಾಧಾರಕ್ಕೆ  ಕೃಷಿ ಮತ್ತು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕೆಲವರು  ಸೀಮಿತ ವ್ಯಾಪಾರ ಮತ್ತು ಪ್ರವಾಸೋದ್ಯಮದ ಮೇಲೆ ಜೀವನ ಸಾಗಿಸುತ್ತಿದ್ದಾರೆ.

ಟ್ರಿಸ್ಟಾನ್ ಡ ಕುನ್ಹಾ  ಜ್ವಾಲಾಮುಖಿಗೆ  ಹೆಸರುವಾಸಿಯಾಗಿದೆ, ದೊಡ್ಡ, ಕೇಂದ್ರ ಶಿಖರವು ಸಮುದ್ರ ಮಟ್ಟದಿಂದ 2,000 ಮೀಟರ್  ಎತ್ತರದಲ್ಲಿದೆ.  ದ್ವೀಪದ ಸೌಂದರ್ಯದ ಹೊರತಾಗಿಯೂ  ಕಠಿಣ ಹವಾಮಾನ ಮತ್ತು ಸೀಮಿತ ಮೂಲಸೌಕರ್ಯದಿಂದಾಗಿ ಅಲ್ಲಿನ ಜೀವನವು ಸವಾಲಿನದಾಗಿದೆ.  ದ್ವೀಪಕ್ಕೆ ಯಾವುದೇ ವಿಮಾನ ನಿಲ್ದಾಣವಿಲ್ಲ. ಆದ್ದರಿಂದ ಅದನ್ನು ತಲುಪಲು ಏಕೈಕ ಮಾರ್ಗವೆಂದರೆ ಸಮುದ್ರದ ಮೂಲಕ ಮಾತ್ರ  ಇದು ಹತ್ತಿರದ ಬಂದರಿನಿಂದ ಹಲವಾರು ದಿನಗಳ ಸಮುದ್ರ ಯಾನದ ಬಳಿಕ ಈ ದ್ವೀಪ ತಲುಪಬಹುದು. ತೆಗೆದುಕೊಳ್ಳಬಹುದು.

#sihijeeviVenkateshwara #island #cristenda #cunhã #tourist


14 ಅಕ್ಟೋಬರ್ 2024

ಸೆಲಾ ಪಾಸ್..ಅರುಣಾಚಲ ಪ್ರದೇಶ್..







ಸೆಲಾ ಟನಲ್


ಸೆಲಾ ಟನಲ್ , ಭಾರತ ಸರ್ಕಾರವು 2018-19 ಬಜೆಟ್‌ನಲ್ಲಿ ಎಲ್ಲಾ ಹವಾಮಾನ ರಸ್ತೆ ಸಾರಿಗೆ ಸುರಂಗ ನಿರ್ಮಾಣಕ್ಕೆ ಹಣವನ್ನು ಘೋಷಿಸಿತು  ಜನವರಿ 2019 ರಲ್ಲಿ ನಿರ್ಮಾಣ ಪ್ರಾರಂಭವಾಗಿ  

ಮಾರ್ಚ್ 09, 2024 ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ವಿಕಸಿತ್  ಭಾರತ್ ವಿಕಸಿತ್  ಈಶಾನ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಲಾ ಸುರಂಗ ಯೋಜನೆಯನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು.  ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತವಾಂಗ್‌ನಿಂದ ಅಸ್ಸಾಂನ ತೇಜ್‌ಪುರವನ್ನು ಸಂಪರ್ಕಿಸುವ ರಸ್ತೆಯಲ್ಲಿ 13,000 ಅಡಿ.  ಒಟ್ಟು 825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸುರಂಗವು ಬಲಿಪರಾ - ಚರಿದುವಾರ್ - ತವಾಂಗ್ ರಸ್ತೆಯಲ್ಲಿ ಸೆಲಾ ಪಾಸ್ ಮೂಲಕ ತವಾಂಗ್‌ಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುತ್ತದೆ, ಸಶಸ್ತ್ರ ಪಡೆಗಳ ಸನ್ನದ್ಧತೆಗೆ ಇದು ಸಹಕಾರಿ ಮತ್ತು ಗಡಿ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.  


 

11 ಅಕ್ಟೋಬರ್ 2024

ಪರೋಪಕಾರ ಮಾಡೋಣ


ಭಾರತದಲ್ಲಿ ಬ್ರಿಟಿಷ್ ರ ಆಳುವಿಕೆ ಇದ್ದಾಗ ಬ0ಗಾಲ ದೇಶದಲ್ಲಿ ನಡೆದ ಒ0ದು ಸತ್ಯ ಘಟನೆ-


ಅಲ್ಲಿ ಕೊಲ್ಕತ್ತಾ ಪಟ್ಟಣಕ್ಕೆ ತಲುಪುವ ದೊಡ್ಡ ರೈಲು ಮಾರ್ಗ ಹಾದಿದೆ. ಮಾರ್ಗ ಮಧ್ಯ ಇರುವ ಚಿಕ್ಕ ನದಿಗೆ ಸೇತುವೆಯನ್ನು ಕಟ್ಟಲಾಗಿದೆ. ಆ ಸೇತುವೆ ಸಮೀಪ ನದಿಯ ದಡದಲ್ಲಿ ಬಡವರ ಒ0ದು ಗುಡಿಸಲು. ಅದರಲ್ಲಿ ಒಬ್ಬ ತಾಯಿ ಮಗಳು ವಾಸವಾಗಿದ್ದರು.ಅದು ಅರಣ್ಯ ಪ್ರದೇಶ.ಸಮೀಪದಲ್ಲಿ ಯಾವ ಗ್ರಾಮವೂ ಇರಲಿಲ್ಲ. 


ಒ0ದು ರಾತ್ರಿ ಧಾರಾಕಾರ ಮಳೆ.ಒ0ದೆರಡು ತಾಸಿನ ನ0ತರ ಮಳೆ ಕಡಿಮೆಯಾಯ್ತು .ಅಷ್ಟೊತ್ತಿಗೆ ಗುಡಿಸಲೆಲ್ಲಾ ನೀರಾಯ್ತು .ಇರುವ ಒ0ದೆರಡು ಹಾಸಿಗೆ ಹೊದಿಕೆಗಳೂ ನೆನೆದವು.ಮಲಗುವಷ್ಟೂ ಒಣಗಿದ ಸ್ಥಳವಿರಲಿಲ್ಲ.ಮಧ್ಯದಲ್ಲಿ ಒ0ದು ಒಲೆಯನ್ನು  ಹೊತ್ತಿಸಿ ಅದರ ಸುತ್ತ ತಾಯಿ ಮಗಳು ಕೂತಲ್ಲೇ ತೂಕಡಿಸುತ್ತಿದ್ದರು.ಇದ್ದಕ್ಕಿದ್ದ0ತೆ ಹೊರಗೆ ಭಯಂಕರ ಸದ್ದಾಯಿತು.

ಇದೇನಿದು ಎಂದು ಮಗಳು ಹೊರಗೆ ಬಂದು ನೋಡಿದಳು.ಮಿಂಚಿನ ಬೆಳಕಿನಲ್ಲಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿದು ಬಿದ್ದದ್ದು ಕ0ಡಿತು !


ಮಗಳು ತಾಯಿಗೆ ಹೇಳಿದಳು, ಅಮ್ಮಾ ಇಷ್ಟರಲ್ಲೇ ಸಾವಿರಾರು ಜನರನ್ನು ತುಂಬಿಕೊ0ಡು ರೈಲು ಬರಲಿದೆ. ಈ ರಾತ್ರಿ ಅವರಿಗೆ ಸೇತುವೆ ಕುಸಿತದ್ದು ಕಾಣದೇ ಹೋದರೆ ಎ0ಥ ಭಯ0ಕರ ಅಪಘಾತವಾಗುತ್ತೆ ! ಇದನ್ನು ಹೇಗಾದರೂ ಮಾಡಿ ತಪ್ಪಿಸಲೇಬೇಕು.  ತಾಯಿ ಹೇಳಿದಳು, ಹೌದು ಮಗಳೇ ನಾವೇನು ಮಾಡಬಲ್ಲೆವು ?

ಒ0ದು ಕಟ್ಟಿಗೆಗೆ ಬಟ್ಟೆಯನ್ನು ದೀವಟಿಗೆ ಮಾಡಿ ತೋರಿಸಬಹುದಲ್ಲಾ ! ಅ0ದಳು ಮಗಳು.

ಸರಿ ಮಗಳೇ , ಒಣಗಿದ ಬಟ್ಟೆ ಎಲ್ಲಿದೆ ? ಎ0ದಳು ತಾಯಿ. 

ಅಮ್ಮಾ ನನ್ನ ಮೈಮೇಲಿರುವ ಬಟ್ಟೆಯು ಒಣದಾಗಿಯೇ ಇದೆಯಲ್ಲಾ ! ಎ0ದಳು ಮಗಳು


ಅವಳ ಹೃದಯ ಸಿರಿಗೆ ತಾಯಿ ತಕ್ಷಣ ಒಪ್ಪಿದಳು.ಮಗಳು ತನ್ನ ಮೈಮೇಲಿದ್ದ ಮಾನದ ಬಟ್ಟೆಯನ್ನು ಒ0ದು ಕಟ್ಟಿಗೆಗೆ ಕಟ್ಟಿ ಉರಿಸಿದಳು.ಆ ದೀವಟಿಗೆಯನ್ನು ಕೈಯಲ್ಲಿ ಹಿಡಿದು ತಾಯಿ ಮಗಳು ಕೂಡಿ ಕಾಣದ ಬ0ಧುಗಳ ಪ್ರಾಣವನ್ನು ಉಳಿಸಲು ರೈಲಿಗೆ ಎದುರಾಗಿ ದಾರಿಯನ್ನು ಹಿಡಿದು ನಡೆದರು.


ರೈಲು ಬರುವುದು ಒ0ದೆರಡು ನಿಮಿಷ ಉಳಿದಿತ್ತು.ಅಷ್ಟರಲ್ಲೇ ಕೈಯೊಳಗಿನ ದೀವಟಿಗೆ ನ0ದುವ0ತಾಯ್ತು .ತತ್ ಕ್ಷಣ ತಾಯಿ ತನ್ನ ಬಟ್ಟೆಯನ್ನೂ ದೀವಟಿಗೆಗೆ ಕಟ್ಟಿ ಉರಿಸಿ ಕೈಯಲ್ಲಿ ಹಿಡಿದು ಬೀಸಿದಳು.

ಚಾಲಕ ರೈಲು ನಿಲ್ಲಿಸಿದ. ಸೇತುವೆ ಬಿದ್ದು ಹೋಗಿರುವುದನ್ನು ನೋಡಿ ತಾಯಿ ಮಗಳ ತ್ಯಾಗಕ್ಕೆ ತಲೆಬಾಗಿದ.ರೈಲಿನಲ್ಲಿದ್ದ ಸಾವಿರ-ಸಾವಿರ ಜನರು ಆ ತಾಯಿ ಮಗಳಿಗೆ ಬಟ್ಟೆಯನ್ನು ಉಡಿಸಿ ಗೌರವಿಸಿದರು.ಹಾಡಿ ಹರಸಿದರು.ಆಗಿನ ಆ0ಗ್ಲ ಅಧಿಕಾರಿಗಳೂ ಆ ತಾಯಿ ಮಗಳನ್ನು ಸ0ತಸದಿ0ದ ಸತ್ಕರಿಸಿದರು..


ಎಂತಹ ತ್ಯಾಗ ಮತ್ತು ಸಹಕಾರದ ಮನೋಭಾವದ ಜನರು ನಮ್ಮ ದೇಶದಲ್ಲಿ ಇದ್ದರು ಎಂಬುದು ನಮ್ಮ ಹೆಮ್ಮೆ.