06 ಆಗಸ್ಟ್ 2024

ಜಯ


 ಸೋತೆನೆಂದು ಯೋಚಿಸುತಾ

ಪಡದಿರು ಎಂದಿಗೂ ಭಯ|

ಸತತ ಪ್ರಯತ್ನ ಮಾಡುತಲಿರು

ಕೊನೆಗೆ ನಿನ್ನದಾಗಲಿದೆ ಜಯ 

04 ಆಗಸ್ಟ್ 2024

ಮಹಲ್ಲು


 


ಮಹಲ್ಲು 


ಎಸೆಯುವರು ವಿರೋಧಿಗಳು ನಿನ್ನೆಡೆಗೆ ಆಳಿಗೊಂದು ಕಲ್ಲು। ಅವುಗಳನೇ ಬಳಸಿಕೊಂಡು ನಿರ್ಮಾಣಮಾಡು ಮಹಲ್ಲು||


©ಸಿಹಿಜೀವಿ ವೆಂಕಟೇಶ್ವರ

03 ಆಗಸ್ಟ್ 2024

ಸಂಕಷ್ಟ ಪರಿಹಾರ...


 



ಕಷ್ಟವ ನೆನಯುತ 

ಕೊರಗದಿರು ಇತರರು

ಮಾಡುತ್ತಿಲ್ಲ ಸಹಾಯ|

ದೃಢ ಚಿತ್ತದಿಂದಲಿ

ಕಾರ್ಯಪ್ರವೃತ್ತನಾಗು

ಸಂಕಷ್ಟಗಳೆಲ್ಲಾ ಮಾಯ||

02 ಆಗಸ್ಟ್ 2024

ಚಪ್ಪಾಳೆ.

 


ಚಪ್ಪಾಳೆ..


ಭಾರತಕ್ಕೆ ಮೂರನೇ

ಕಂಚು ತಂದಿದ್ದಾರೆ

ಸ್ವಪ್ನಿಲ್ ಕುಸಾಳೆ|

ಭಾರತೀಯರೆಲ್ಲರೂ 

ಸಂತಸದಿಂದದಲಿ

ತಟ್ಟೋಣ ಚಪ್ಪಾಳೆ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

31 ಜುಲೈ 2024

ಕಂಚಿನಮಿಂಚು

 

ಕಂಚಿನಮಿಂಚು


ಒಲಿಂಪಿಕ್ ಶೂಟಿಂಗ್ ನಲ್ಲಿ

ಪದೇ ಪದೇ ಕಾಣುತ್ತಿದೆ ಮಿಂಚು|

ಮನು ಸರಬ್ಜೋತ್ ಜೋಡಿ

ಭಾರತಕ್ಕೆ ತಂದಿದೆ 

ಮತ್ತೊಂದು ಕಂಚು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529