14 ಮಾರ್ಚ್ 2024

ಚಿತ್ರ ವಿಮರ್ಶೆ೨ ಪೈಟರ್ ..

 

ಚಿತ್ರ ವಿಮರ್ಶೆ೨

ಪೈಟರ್ ..


ರಿಲೀಸ್ ಆದ ಮೊದಲ ದಿನ 

ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ಪೈಟರ್ ಚಲನಚಿತ್ರವನ್ನು ಐನಾಕ್ಸ್ 3 d ಚಿತ್ರಮಂದಿರದಲ್ಲಿ ನೋಡಿದೆ. 

ರಿತಿಕ್ ರೋಷನ್ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ರವರು ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಎರಡು ಗಂಟೆ 46 ನಿಮಿಷಗಳ ವೈಮಾನಿಕ ಯುದ್ಧದ ಕಥೆ ಮತ್ತು ಪ್ರಸ್ತುತ ಪಡಿಸಿದ ರೀತಿಯಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ.


ಕೋನಿಫೆರಸ್ ಮರಗಳಿಂದ ಕೂಡಿದ ಹಿಮಾಲಯದ ಹಿಮದಿಂದ ಆವೃತವಾದ ಪರ್ವತಗಳ ದೃಶ್ಯಗಳು ತ್ರಿಡಿ ನಲ್ಲಿ ಮುದ ನೀಡುತ್ತವೆ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನ ಮತ್ತು ಕಥೆ ಹೇಳುವಿಕೆಯು ಗಮನ ಸೆಳೆಯುತ್ತದೆ. 

ಕೆಲ ತಾಂತ್ರಿಕ ಅಂಶಗಳನ್ನು

 IAF ಅನುಭವಿಗಳು   ನೀಡಿದ ಸಲಹೆಯನ್ನು ಆಲಿಸಿದ್ದಾರೆ.

ಇಡೀ ಕಥೆಯು ಹೃತಿಕ್ ರೋಷನ್ ಅವರ ಪ್ಯಾಟಿ, ಗುಂಗ್-ಹೋ ಫೈಟರ್ ಪೈಲಟ್ ಮತ್ತು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಅನ್ನು ಹಾರಿಸುವ ಸುಂದರ ದೀಪಿಕಾ ಪಡುಕೋಣೆ ಅವರ  ಸುತ್ತ ಸುತ್ತುತ್ತದೆ.

 ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ವಿಶೇಷವಾಗಿ ಆಯ್ಕೆಯಾದ ವಾಯು ಯೋಧರ ತಂಡದಲ್ಲಿ.

ಅನಿಲ್ ಕಪೂರ್ ಲೀಡಿಂಗ್ ಆಫಿಸರ್ ಆಗಿ ಶತ್ರು ದೇಶದ ವಿಧ್ವಂಸಕ ಕೃತ್ಯಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

 

ಚಿತ್ರದ ಸಂಭಾಷಣೆಗಳು ಕೆಲವೆಡೆ ಕಚಗುಳಿಯಿಡುವ   ಹಾಸ್ಯದಿಂದ ಕೂಡಿದ್ದು  ನಗುವನ್ನು ತರುತ್ತದೆ.ಕೆಲವು ಭಾವುಕ ಸನ್ನಿವೇಶಗಳಲ್ಲಿ ಕಣ್ಣಲ್ಲಿ ನೀರು ಜಿನುಗುತ್ತವೆ.

ಚಿತ್ರದಲ್ಲಿ ಯುದ್ಧದಲ್ಲಿ ವಿಮಾನಗಳನ್ನು ತೋರಿಸಲು ಉತ್ತಮ ಪ್ರಯತ್ನದೊಂದಿಗೆ  ಫೋಟೋಗ್ರಫಿಯ ಕಣ್ಣಿಗೆ ಔತಣ ನೀಡುತ್ತದೆ.

ಒಟ್ಟಾರೆ ಪೈಟರ್  ಎಲ್ಲಾ ವಯೋಮಾನದವರು ನೋಡಬೇಕಾದ ಚಿತ್ರವೆಂದರೆ ತಪ್ಪಾಗಲಾರದು. ಈ ಚಿತ್ರ ನೋಡಿ ಬಂದ ಮೇಲೆ   ಸೈನ್ಯದ ಬಗ್ಗೆ ಮತ್ತು ದೇಶದ ಬಗ್ಗೆ ಅಭಿಮಾನ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಶೂನ್ಯ ತಾರತಮ್ಯ ದಿನ

 


ಶೂನ್ಯ ತಾರತಮ್ಯ ದಿನ 


ಭಾರತೀಯ ಸಮಾಜದಲ್ಲಿ ಮತ್ತು ವಿಶ್ವದ ಎಲ್ಲಾ ದೇಶಗಳಲ್ಲಿ ಸಮ ಸಮಾಜ ನಿರ್ಮಾಣದಲ್ಲಿ ಹಲವು ಮಹಾನ್ ಪುರುಷರು ಪ್ರಯತ್ನ ಮಾಡಿದರೂ ಇಂದಿಗೂ ಅಲ್ಲಲ್ಲಿ ತಾರತಮ್ಯ ಇಣುಕಿ ನಮ್ಮನ್ನು ಅಣಕಿಸುತ್ತಿರುವುದು ವಿಪರ್ಯಾಸ.

ತಾರತಮ್ಯ ನಿವಾರಣೆ ದೃಷ್ಟಿಯಿಂದ  ವಿಶ್ವಸಂಸ್ಥೆ  ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರತಿ ವರ್ಷ ಮಾರ್ಚ್ 1 ರಂದು 

ಶೂನ್ಯ ತಾರತಮ್ಯ ದಿನವಾಗಿ ಆಚರಿಸಲಾಗುತ್ತದೆ.

  ವಿಶ್ವ ಸಂಸ್ಥೆಯ   ಎಲ್ಲಾ ಸದಸ್ಯ ರಾಷ್ಟ್ರಗಳಲ್ಲಿ ಕಾನೂನಿನ ಮುಂದೆ ಮತ್ತು ಆಚರಣೆಯಲ್ಲಿ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ . ಈ ದಿನವನ್ನು ಮೊದಲ ಬಾರಿಗೆ ಮಾರ್ಚ್ 1, 2014 ರಂದು ಆಚರಿಸಲಾಯಿತು ಮತ್ತು UNAIDS ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಸಿಡಿಬೆ ಅವರು ಆ ವರ್ಷದ ಫೆಬ್ರವರಿ 27 ರಂದು ಬೀಜಿಂಗ್‌ನಲ್ಲಿ ಪ್ರಮುಖ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದರು .



ಎಚ್‌ಐವಿ ಅಥವಾ ಏಡ್ಸ್‌ನೊಂದಿಗೆ ಜೀವಿಸುವ ಜನರ ವಿರುದ್ಧ ತಾರತಮ್ಯವನ್ನು ಎದುರಿಸುವ ಯುಎನ್‌ಎಐಡಿಎಸ್‌ನಂತಹ ಸಂಸ್ಥೆಗಳಿಂದ ಈ ದಿನವನ್ನು ವಿಶೇಷವಾಗಿ ಗುರುತಿಸಲಾಗಿದೆ. 


ಭಾರತವು ತಾರತಮ್ಯ ವಿರೋಧಿ ಧೋರಣೆಯನ್ನು ಕಾನೂನು ಮತ್ತು ನೈತಿಕ ನೆಲೆಗಟ್ಟಿನಲ್ಲಿ ಜಾರಿಗೊಳಿಸಿದೆ. ಅದರಲ್ಲಿ ಪ್ರಮುಖವಾದ ಅಂಶಗಳೆಂದರೆ 

ಭಾರತದ ಸಂವಿಧಾನದ 14, 15, 16, 17 ಮತ್ತು 18

ಸಮಾನ ಸಂಭಾವನೆ ಕಾಯಿದೆ, 1976 ರ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತರಿಪಡಿಸುತ್ತದೆ.

ಭಾರತೀಯ ದಂಡ ಸಂಹಿತೆ , 1860 (ವಿಭಾಗ 153 ಎ) - ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ, ಧರ್ಮ, ಲಿಂಗ ಗುರುತು, ಲೈಂಗಿಕ ದೃಷ್ಟಿಕೋನ ಅಥವಾ ಯಾವುದೇ ಇತರ ವರ್ಗದ ಆಧಾರದ ಮೇಲೆ ಜನರ ವಿರುದ್ಧ ತಾರತಮ್ಯ ಅಥವಾ ಹಿಂಸೆಯನ್ನು ಉತ್ತೇಜಿಸುವ ಭಾಷೆಯ ಬಳಕೆಯನ್ನು ಅಪರಾಧ ಮಾಡುತ್ತದೆ. 

ಮಾನಸಿಕ ಆರೋಗ್ಯ ಕಾಯಿದೆ, 2017 - ಜನಾಂಗ, ಜಾತಿ, ಧರ್ಮ, ಹುಟ್ಟಿದ ಸ್ಥಳ, ಲಿಂಗ, ಲಿಂಗ ಗುರುತು, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ ಅಥವಾ ಯಾವುದೇ ಇತರ ವರ್ಗದ ಆಧಾರದ ಮೇಲೆ ಜನರಿಗೆ ಮಾನಸಿಕ ಆರೋಗ್ಯ ಸೌಲಭ್ಯಗಳು ಅಥವಾ ಸೇವೆಗಳನ್ನು ಪ್ರವೇಶಿಸಲು ನಿರಾಕರಣೆ ಅಥವಾ ನಿರಾಕರಣೆ ನಿಷೇಧಿಸುತ್ತದೆ. 

ಹಿಂದೂ ಉತ್ತರಾಧಿಕಾರ ಕಾಯಿದೆ, 1956   ಆಸ್ತಿಯನ್ನು ಹೊಂದಿದ್ದ ಮಹಿಳೆಯರ "ಸೀಮಿತ ಮಾಲೀಕ" ಸ್ಥಿತಿಯನ್ನು ರದ್ದುಗೊಳಿಸಲಾಯಿತು, 2004 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪುತ್ರಿಯರಿಗೆ ಪುತ್ರರೊಂದಿಗೆ ಸಮಾನ ಉತ್ತರಾಧಿಕಾರದ ಹಕ್ಕುಗಳನ್ನು ನೀಡಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯಗಳ ತಡೆ) ಕಾಯಿದೆ, 1989 ಇದು  ನಿರ್ದಿಷ್ಟವಾಗಿ ಜಾತಿಯ ಆಧಾರದ ಮೇಲೆ ಎಲ್ಲಾ ರೀತಿಯ ತಾರತಮ್ಯ ಮತ್ತು ದ್ವೇಷದ ಅಪರಾಧಗಳನ್ನು  ಕುರಿತು ಚರ್ಚಿಸುತ್ತದೆ.


ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 - ನಿರ್ದಿಷ್ಟವಾಗಿ ದೈಹಿಕ, ಮಾನಸಿಕ ವಿಕಲಾಂಗ ವ್ಯಕ್ತಿಗಳ ವಿರುದ್ಧ ತಾರತಮ್ಯ ಮತ್ತು ಹಿಂಸೆಯನ್ನು ನಿಷೇಧಿಸುತ್ತದೆ. 

ಇದರ ಜೊತೆಯಲ್ಲಿ ಕಾಲಕಾಲಕ್ಕೆ  ತಾರತಮ್ಯ ನಿವಾರಣೆಗೆ ಹಲವಾರು ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ ಆದರೆ ಸಮರ್ಪಕವಾಗಿ ಅವುಗಳ ಅನುಷ್ಠಾನದ ಅಗತ್ಯವಿದೆ. ಇದಕ್ಕೆ ಜನರ ಮತ್ತು ಸಮುದಾಯದ ಸಕಾರಾತ್ಮಕ ಸ್ಪಂದನೆಯೂ ಅಪೇಕ್ಷಣೀಯ.


ಸಿಹಿಜೀವಿ ವೆಂಕಟೇಶ್ವರ

ದವಸ...ಹನಿ

 



ದವಸ 


ಪ್ರೀತಿಯಿಂದ ನುಡಿದನವನು

ಪ್ರಿಯೆ ನನಗಿಷ್ಟದ ತಿಂಡಿ

ತಿನಿಸುಗಳನ್ನು ಮಾಡಿ ಬಿಡು

ಈ ದಿವಸ|

ನಗುತ್ತಲೇ ಉತ್ತರಿಸಿದಳವಳು

ಇನಿಯ ಈಗಲೆ ತಂದು

ಬಿಡು ದವಸ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಬಾಳೆ ಗರಿ ಸಾಹಿತ್ಯ!


 


ಶಾಲೆಯ ಅಂಗಳ ೧


ಬಾಳೆಗರಿ ಸಾಹಿತ್ಯ...

ಹತ್ತನೇ ತರಗತಿಯ ಪರೀಕ್ಷೆಗೆ ಹದಿನೈದು ದಿನ ಬಾಕಿ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾ ಮೇಡಂ ರವರು ಕಲಿತ ಕಲಿಕಾಂಶಗಳ  ಪುನರಾವರ್ತನೆ ಮಾಡುತ್ತಾ ಮಕ್ಕಳಿಗೆ  ಮಾರ್ಗದರ್ಶನ ಮಾಡುತ್ತಿದ್ದರು. 

ಒಳಗೆ ಬೇಸಿಗೆಯ ಬಿಸಿಲ ಝಳ ವೆಂದು ಕೈತೋಟದ ತಂಪನೆಯ ವಾತಾವರಣದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಓದಲು ಅವಕಾಶ ನೀಡಲಾಗಿತ್ತು.ಓರ್ವ ಬಾಲಕಿ ಬಾಳೆ ಗಿಡದ ಎಲೆಯನ್ನು ತೆಗೆದುಕೊಂಡು ಅದರಲ್ಲಿ ಕೆಲ ಸಾಲುಗಳನ್ನು ಬರೆಯುತ್ತಿದ್ದಳು.ಇದನ್ನು ಗಮನಿಸಿದ ಶಿಕ್ಷಕಿ ಓಲೆ ಗರಿಯಂತೆ ಬಾಳೆ ಗರಿಯಲ್ಲಿ ಬರೆಯುವೆ ಏಕೆ ಎಂದು ನೋಡಿದಾಗ ಆ ಬಾಳೆಗರಿಯಲ್ಲಿ ಬರೆದ ಪದಗಳು ಶಾಲಾ ಪಠ್ಯಕ್ಕೆ ಸಂಬಂಧಿಸಿರಲಿಲ್ಲ.ಯಾವುದೋ ಕವನದಂತೆ ಭಾಸವಾಯಿತು.ಈಗ ಕವನ ಬರೆಯುವ ಸಮಯವಲ್ಲ ಓದಿನ ಕಡೆ ಗಮನ ಇರಲಿ ಎಂದು ಬುದ್ದಿ ಹೇಳಿ ಬಾಳೆ ಗರಿಯನ್ನ ಸಹೋದ್ಯೋಗಿಗಳಿಗೆ ತೋರಿಸದರು.ಓರ್ವ ಸಹೋದ್ಯೋಗಿ ಈ ಪದಗಳನ್ನು ಎಲ್ಲೋ ನೋಡಿದ ಕೇಳಿದ ಹಾಗಿದೆಯಲ್ಲ ಎಂದು ಚೆಕ್ ಮಾಡಿದಾಗ ಅದು ಇತ್ತೀಚಿಗೆ ಬಿಡುಗಡೆಯಾದ  ಶಿವರಾಜ್ ಕುಮಾರ್ ರವರ ವೇದ ಚಿತ್ರದ ಗೀತೆ! ಮತ್ತೆ ಆ ಬಾಲಕಿ ಕರೆದು ವಿಚಾರಿಸಲಾಗಿ ಸುಮಾರು ಇನ್ನೂರು ಪುಟಗಳ ಪುಸ್ತಕದಲ್ಲಿ ಬರೀ ಸಿನಿಮಾ ಗೀತೆಗಳನ್ನು ಬರೆದಿದದ್ದು ಗಮನಕ್ಕೆ ಬಂತು.ಕುತೂಹಲಕ್ಕೆ ಎಲ್ಲಾ ವಿಷಯಗಳ ನೋಟ್ಸ ಕೇಳಿದರೆ ಎರಡು ವಿಷಯಗಳ ನೋಟ್ಸ್ ಕಂಪ್ಲೀಟ್ ಆಗಿರಲಿಲ್ಲ.ಯಾಕೆ ಹೀಗೆ ಮಾಡಿದೆ ಓದುವ ಬರೆಯುವ ಕಾಲದಲ್ಲಿ ಪರೀಕ್ಷೆ ಹತ್ತಿರವಿರುವ ಈ ಸಮಯದಲ್ಲಿ ಸಿನಿಮಾ ಗೀತೆ ಬರೆಯುತ್ತಿರುವೆ ಎಂದು ಕೇಳಿದರೆ ಅದಕ್ಕೆ ಸ್ಪೂರ್ತಿ ತಮ್ಮ ಪಕ್ಕದ ಮ‌ನೆಯ ಅಕ್ಕ!  ಅವಳು ಪಿ ಯು ಓದುತ್ತಿದ್ದು ಈಗಾಗಲೇ ಎರಡು ಇನ್ನೂರು ಪೇಜ್ ಪುಸ್ತಕದಲ್ಲಿ ಸಿನಿಮಾ ಹಾಡು ಬರೆದಿದ್ದಾರೆ ನಾನು ಮೂರು ಬರೆಯಲು ತೀರ್ಮಾನಕ್ಕೆ ಬಂದು ಹೀಗೆ ಮಾಡಿದೆ ಅಂದಳು ಮೇಡಂ ರವರು ಸಮಾಧಾನದಿಂದ ಆ ಬಾಲಕಿಗೆ ಕೌನ್ಸಿಲಿಂಗ್ ಮಾಡಿ ಹಾಡು ಮನರಂಜನೆ ತಪ್ಪಲ್ಲ ಆದರೆ ಪರೀಕ್ಷ ಸಮಯದಲ್ಲಿ ಅವು ಗೌಣವಾಗಿ ಓದಿನ ಕಡೆ ಗಮನ ಹರಿಸು ಎಂದು ಹೇಳಿ ಕಳಿಸಿದರು. 

ವಿದ್ಯಾರ್ಥಿಗಳೆ ನಿಮ್ಮ ಸಹ ಪಠ್ಯ ಚಟುವಟಿಕೆಗಳು ಖಂಡಿತವಾಗಿಯೂ ಬೇಕು. ಹಾಡು ಸಂಗೀತ ಕೆಲವೊಮ್ಮೆ ಓದಿನ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವು ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕ ಆದರೆ  ಪರೀಕ್ಷಾ  ಕಾಲದಲ್ಲ  ಮಿತಿಯಲ್ಲಿದ್ದರೆ ಒಳಿತಲ್ಲವೇ? 

12 ಮಾರ್ಚ್ 2024

ನೊಂದವರ ಪಾಲಿನ ದೇವರು ನೂರುನ್ನೀಸಾ*

 


*ನೊಂದವರ ಪಾಲಿನ ದೇವರು

ನೂರುನ್ನೀಸಾ*


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು| 

ನ್ಯಾಯಯುತ ತೀರ್ಪು ನೀಡುವ

ಮೂಲಕ ನೊಂದವರ ಪಾಲಿಗೆ ಆಗಿದ್ದಾರೆ ದೇವರು||


ಇವರು ಹಸನ್ಮುಖಿ ಸರಳ ಸಜ್ಜನ ನ್ಯಾಯಾಧೀಶರು|

ಇವರ ಕಣ್ಣಲಿ ಎಲ್ಲರ ಸಮಾನರೆ

ಬೇಧ ಮಾಡುವುದಿಲ್ಲ ಅವರು||


ಕಾನೂನುಗಳು ನಲಿದಾಡುತ್ತವೆ ಇವರ ನಾಲಿಗೆಯ ಮೇಲೆ|

 ಇವರಿಗೆ   ಕೃತಜ್ಞತೆ ಸಲ್ಲಿಸುತ್ತಿಹರು ನೂರಾರು ಜನ ಬರೆದು ಓಲೆ||


ಇವರು ನಮ್ಮಯ ಹೆಮ್ಮೆಯ ನ್ಯಾಯಾಧೀಶರು ನೂರುನ್ನಿಸಾ|

ಇವರಿಗೆ ಚಪ್ಪಾಳೆ ತಟ್ಟಿ ಬಿಡಿ

ಸುಮ್ಮನೆ ಯಾಕೆ ಎಣಿಸುವೆ ಮೀನಾ ಮೇಷ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು