ಕೊರತೆ...
ಮಾತನಾಡುವಾಗ
ಹೇಗಿದ್ದರೂ ಜರಿಯುವರು ಜನ
ಕಡಿಮೆ ಮಾತನಾಡಿದರೆ ಕೊರತೆ|
ಎರಡು ಹೆಚ್ಚು ಆಡಿದರೆ
ಗೊನಗಿ ಹೇಳುವರು ಕೊರೆತ ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ದಿನ
ನಗುತಾ ಬರುವನು ನಮ್ಮನು
ಜಗವನ್ನು ಬೆಳಗಲು ಆ ದಿನ ||
ಕರಮುಗಿದು ಅವನಿಗೆ
ಆರಂಭಿಸಿಬಿಡು ನಿನ್ನ ದಿನ |
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
ಅಭಿಸಾರಿಕೆ..
ಲತಾಂಗಿ ಇವಳು ನೋಡಣ್ಣ
ಪೂರ್ಣ ಹುಣ್ಣಿಮೆಯ ಮೈಬಣ್ಣ
ಸೌಂದರ್ಯದಲಿ ಲಾವಣ್ಯವತಿ
ಮೃದು ಮನಸಿನ ಗುಣವತಿ.
ಮನ್ಮಥನ ಬಿಲ್ಲಿನ ಹುಬ್ಬುಗಳು
ದಾಳಿಂಬೆಯ ದಂತಪಂಕ್ತಿಗಳು
ಸಮುದ್ರದ ತೆರೆಯಂತಹ ಕೇಶರಾಶಿಗಳು
ವನರಾಜ ಸಿಂಹದ ನಡುವಿನವಳು.
ಹಾತೊರೆದೆನು ಅವಳ ಸಾಂಗತ್ಯಕೆ
ಬಳಿಸಾರುವಳೇ ನನ್ನ ಅಭಿಸಾರಿಕೆ
ರೂಪರಾಶಿಯಲಿ ಇವಳೇ ಮೇನಕೆ
ದಿನವೂ ಅವಳದೇ ಕನವರಿಕೆ
ಸನಿಹಕೆ ಬಂದು ನಿಂತಿಹಳು
ತೊಂಡೆ ಹಣ್ಣಿನ ತುಟಿಯವಳು
ಮಾದಕ ನಗೆಯನು ಬೀರಿಹಳು
ನನಗೀಗ ಅರಳು ಮರಳು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
ಮಂದಹಾಸ
ನನಗೆ ಬೇಕಿಲ್ಲ ನಗ, ನಾಣ್ಯ
ಬಂಗಲೆ, ಮಹಲುಗಳ ವಾಸ
ನನ್ನೊಂದಿಗಿದ್ದರೆ ಸಾಕು ನಿನ್ನ
ಬೆಲೆಕಟ್ಟಲಾಗದ ಮಂದಹಾಸ
ಸಿಹಿಜೀವಿ ವೆಂಕಟೇಶ್ವರ
ತುಮಕೂರು