*ಮೊಳೆಯಲಿ ಸದ್ಭಾವನೆ*
ಅಹರ್ನಿಶಿ ಭಜಿಸುವೆನು ದೇವ
ನೀಗು ಜಗದ ಜೀವಿಗಳ ನೋವ
ಅಳಿಯಲಿ ಎಲ್ಲೆಡೆ ದುರ್ಭಾವನೆ
ಮೊಳೆಯಲಿ ಸರ್ವರಲಿ ಸದ್ಭಾವನೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಮೊಳೆಯಲಿ ಸದ್ಭಾವನೆ*
ಅಹರ್ನಿಶಿ ಭಜಿಸುವೆನು ದೇವ
ನೀಗು ಜಗದ ಜೀವಿಗಳ ನೋವ
ಅಳಿಯಲಿ ಎಲ್ಲೆಡೆ ದುರ್ಭಾವನೆ
ಮೊಳೆಯಲಿ ಸರ್ವರಲಿ ಸದ್ಭಾವನೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ತಾಳಿದವನು ಬಾಳಿಯಾನು
ಮದುವೆಯಾಗಲು ಹಾತೊರೆಯುವವನು
ಯೋಚಿಸುವುದೊಂದೆ
ತಾಳಿಕಟ್ಟಿದವನು ಬಾಳಿಯಾನು |
ಮದುವೆಯಾದವನು ಸಲಹೆ
ಕೊಡುವುದೊಂದೆ
ತಾಳಿದವನು ಬಾಳಿಯಾನು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಸ್ನೇಹ ಸಮ್ಮಿಲನ*
ಬೇಡವೆಂದರೂ ನೆನಪಾಗುತ್ತದೆ
ಬಾಲ್ಯದಿ ಗೆಳಯರೊಡಗೂಡಿ
ಆಡಿ ಹಾಡಿ ನಲಿದ ದಿನ |
ಹಾತೊರೆಯುತ್ತಿದೆ ಮನ
ಎಂದು ಆಗುವುದೋ
ಸ್ನೇಹ ಸಮ್ಮಿಲನ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ನಿರಾಭರಣ ಸುಂದರಿಯಾದರೂ
ಕಡಿಮೆಯೇನಲ್ಲ ನಿನ್ನ
ವಯ್ಯಾರ ಒನಪು|
ಬ್ಯಾಡವೆಂದರೂ ಬಂದು
ಬಂದು ಕಾಡತಾವ ನೆನೆಪು||
ಸಿಹಿಜೀವಿ
ಮದ್ಯ ಪ್ರದೇಶ
ಬಾರ್ ಗಳ ಮುಚ್ಚಲು
ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |
ಮನೆ ಮಾತ್ರ ಕುಡಿಯುವ ತಾಣ
ಅದುವೇ ಮದ್ಯ ಪ್ರದೇಶ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ)