20 ಮಾರ್ಚ್ 2023

ಮೊಳೆಯಲಿ ಸದ್ಭಾವನೆ

 


*ಮೊಳೆಯಲಿ ಸದ್ಭಾವನೆ*


ಅಹರ್ನಿಶಿ ಭಜಿಸುವೆನು ದೇವ

ನೀಗು ಜಗದ ಜೀವಿಗಳ ನೋವ

ಅಳಿಯಲಿ ಎಲ್ಲೆಡೆ ದುರ್ಭಾವನೆ 

ಮೊಳೆಯಲಿ ಸರ್ವರಲಿ ಸದ್ಭಾವನೆ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


19 ಮಾರ್ಚ್ 2023

ತಾಳಿದವನು ಬಾಳಿಯಾನು...

 


ತಾಳಿದವನು ಬಾಳಿಯಾನು 


ಮದುವೆಯಾಗಲು ಹಾತೊರೆಯುವವನು

ಯೋಚಿಸುವುದೊಂದೆ

ತಾಳಿಕಟ್ಟಿದವನು ಬಾಳಿಯಾನು |

ಮದುವೆಯಾದವನು ಸಲಹೆ

ಕೊಡುವುದೊಂದೆ

ತಾಳಿದವನು ಬಾಳಿಯಾನು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

17 ಮಾರ್ಚ್ 2023

ಸ್ನೇಹ ಸಮ್ಮಿಲನ

 



*ಸ್ನೇಹ ಸಮ್ಮಿಲನ*


ಬೇಡವೆಂದರೂ ನೆನಪಾಗುತ್ತದೆ

ಬಾಲ್ಯದಿ ಗೆಳಯರೊಡಗೂಡಿ

ಆಡಿ ಹಾಡಿ ನಲಿದ ದಿನ |

ಹಾತೊರೆಯುತ್ತಿದೆ ಮನ 

ಎಂದು ಆಗುವುದೋ

ಸ್ನೇಹ ಸಮ್ಮಿಲನ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

14 ಮಾರ್ಚ್ 2023

ಕಾಡತಾವ ನೆನೆಪು...

 ನಿರಾಭರಣ ಸುಂದರಿಯಾದರೂ

ಕಡಿಮೆಯೇನಲ್ಲ ನಿ‌ನ್ನ

ವಯ್ಯಾರ ಒನಪು|

ಬ್ಯಾಡವೆಂದರೂ ಬಂದು

ಬಂದು ಕಾಡತಾವ ನೆನೆಪು||


ಸಿಹಿಜೀವಿ 


ಮದ್ಯ ಪ್ರದೇಶ

 ಮದ್ಯ ಪ್ರದೇಶ 


ಬಾರ್ ಗಳ ಮುಚ್ಚಲು 

ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |

ಮನೆ  ಮಾತ್ರ ಕುಡಿಯುವ ತಾಣ

ಅದುವೇ ಮದ್ಯ ಪ್ರದೇಶ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು  ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ)