05 ಫೆಬ್ರವರಿ 2022

ಎನಗಿಂತ ಕಿರಿಯರಿಲ್ಲ.


 


ಎನಗಿಂತ ಕಿರಿಯರಿಲ್ಲ. 


ಕಾರ್ಯಕ್ರಮ ಆಯೋಜಕರಿಗೆ ಎರಡು ಪತ್ರಗಳು ಬಂದವು. ಮೊದಲನೇ ಪತ್ರದಲ್ಲಿ " ನಾನು ಐದು ಪುಸ್ತಕಗಳನ್ನು ಬರೆದು ಪ್ರಕಟಿಸಿರುವೆ. ಬಹುತೇಕ ಕಡೆ ನನಗೆ  ಕಾರ್ಯಕ್ರಮದ ಅಧ್ಯಕ್ಷತೆ ನೀಡಿ ಗೌರವಿಸಿದ್ದಾರೆ .ನೀವು ನನಗೆ ಮುಖ್ಯ ಅತಿಥಿಗಳ ಸ್ಥಾನ ನೀಡಿ ನನಗೆ ಅವಮಾನ ಮಾಡಿರುವಿರಿ. ನಾನು ನಿಮ್ಮ ಕಾರ್ಯಕ್ರಮಕ್ಕೆ ಬರುವುದಿಲ್ಲ." ಎಂದು ಆಕ್ರೋಶದ ಮಾತುಗಳನ್ನು ಓದಿ ಮತ್ತೊಂದು ಪತ್ರ ಕೈಗೆತ್ತಿಕೊಂಡರು

 " ನಮಸ್ಕಾರ... ನಿಮ್ಮ ಅಭಿಮಾನಕ್ಕೆ ಶರಣು .ನನ್ನನ್ನು ನಿಮ್ಮ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸುವಂತೆ ಕೋರಿದ್ದೀರಿ .ದಯವಿಟ್ಟು ಕ್ಷಮಿಸಿ ನಾನು ಕಾರ್ಯಕ್ರಮಕ್ಕೆ ಸಾಮಾನ್ಯ ಪ್ರೇಕ್ಷಕನಾಗಿ ಬರುವೆ . ಅಧ್ಯಕ್ಷತೆಯನ್ನು ಬೇರೆಯವರಿಗೆ ನೀಡಿ" ಈ ಪತ್ರ ಓದಿದ ಕಾರ್ಯಕ್ರಮ ಆಯೋಜಕರಿಗೆ ಅಚ್ಚರಿಯ ಜೊತೆಗೆ ಆ ಹಿರಿಯರ ಬಗ್ಗೆ ಇರುವ   ಗೌರವ ಇನ್ನೂ ಹೆಚ್ಚಾಯಿತು. ಅವರು ಮನದಲ್ಲೇ ಅಂದುಕೊಂಡರು " ಇನ್ನೂರಕ್ಕೂ ಹೆಚ್ಚು ಪುಸ್ತಕಗಳ ಬರೆದಿರುವ ತೊಂಭತ್ತು ದಾಟಿದ ಇಂತಹ ವ್ಯಕ್ತಿಗಳು ಈ ಪರಿ ಜ್ಞಾನವಂತರಾದರೂ ಕಿಂಚಿತ್ತೂ ಅಹಂಕಾರ ಇರದಿರುವುದಕ್ಕೆ ಎನಗಿಂತ ಕಿರಿಯರಿಲ್ಲ ಎಂಬ ಭಾವವೇ ಕಾರಣ ".


ಎನಗಿಂತ ಕಿರಿಯರಿಲ್ಲ ಎಂಬ ಭಾವವು ನಮ್ಮಲ್ಲಿ ಮೂಡಿದರೆ ನಮ್ಮ ಅಹಂ ಕಡಿಮೆಯಾಗಿ ವಿಧೇಯತೆ ಬೆಳೆಯುತ್ತದೆ .ಅದರ ಜೊತೆಯಲ್ಲಿ ನಮ್ಮ ವ್ಯಕ್ತಿತ್ವ ಶೋಭಿಸುವುದು. 

ಸರ್ವರನೂ ಗೌರವಿಸುತಾ ಸರ್ವರೊಳಗೊಂದು ಒಳ್ಳೆಯ ಗುಣ ಪಡೆದು, ಪರಮಾತ್ಮನ ಚರಣದಲಿ ನಿಶ್ಕಲ್ಮಶ ಮನದಿಂದ ಶರಣಾಗಿ ,ನಮ್ಮ ಪಾಲಿನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡಿದರೆ ನೆಮ್ಮದಿಯ ಬದುಕು ನಮ್ಮದಾಗುವುದರಲ್ಲಿ ಸಂದೇಹವಿಲ್ಲ.


ನನಗೇನು ತಿಳಿದಿಲ್ಲ

ನಾನೇನು ದೊಡ್ಡವನಲ್ಲ

ನನ್ನ ಸಂಪಾದನೆಯೇನು ಹೆಚ್ಚಿಲ್ಲ

ಭಗವಂತನ ಅಂಶ ನನ್ನೆದುರಿಗಿರುವವರೆಲ್ಲ.

ಎನಗಿಂತ ಕಿರಿಯರು ಇಲ್ಲವೇ ಇಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ



04 ಫೆಬ್ರವರಿ 2022

ಪ್ರಿಯತಮೆ .


 


ಪ್ರಿಯತಮೆ.


ಅಂದು ನಾ ಕೇಳಿದಾಗಲೆಲ್ಲಾ

ಸಿಹಿಮುತ್ತನಿಡುತ್ತಿದ್ದಳು ಪ್ರಿಯತಮೆ|

ಮದುವೆಯ ನಂತರ ಮುತ್ತ ಕೇಳಿದರೆ

ಸಿಟ್ಟಾಗಿ ಬೈಯುತ್ತಾ ಕೇಳುವಳು  ಮಾಡಲೇನು ಇಲ್ಲವೆ ಕ್ಯಾಮೆ?  ||


ಸಿಹಿಜೀವಿ.


03 ಫೆಬ್ರವರಿ 2022

ಸಾಹಿತ್ಯಾಭಿಮಾನಿ ದೇವರುಗಳು. ಲೇಖನ


 


ಪಾಶ್ಚಾತ್ಯ ಕವಿ ಬಹರೇಸ್ ರವರು ನೂರಾರು ಮೌಲಿಕ ಪುಸ್ತಕಗಳನ್ನು ಬರೆದಿದ್ದರು ಅವುಗಳು ಪ್ರಕಟವೂ ಆದವು . ಪ್ರಕಾಶಕರಿಂದ ಬಂದ ಮಾಹಿತಿಯನ್ನು ಕೇಳಿದ  ಕವಿಗೆ ಅಚ್ಚರಿಯುಂಟಾಯಿತು. ಅವರ ಪುಸ್ತಕಗಳನ್ನು ಕೊಂಡು ಓದಿದವರು ಕೇವಲ ಇಪ್ಪತ್ತೇಳು ! ಇದರಿಂದ ಕೊಂಚ ವಿಚಲಿತರಾದ ಕವಿಯು ತಕ್ಷಣ ಆ ಪ್ರಕಾಶಕರಿಂದ ಎಲ್ಲಾ ಇಪ್ಪತ್ತೇಳು ಓದುಗರ ವಿಳಾಸ ಪಡೆದು ಪ್ರತಿಯೋರ್ವ ಸಾಹಿತ್ಯಾಭಿಮಾನಿಗಳನ್ನು ಭೇಟಿ ಮಾಡಿ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸಿ ಬಂದರು. ಮುಂದೆ ಕವಿಯ ಪುಸ್ತಕಗಳು ನೂರಾರು ಮುದ್ರಣ ಕಂಡು ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿವೆ.

ಸಾಹಿತ್ಯ ಕೃತಿಗಳು ಬರೆಯುವವರೆಗೆ ತಮ್ಮದು ನಂತರ ಓದುಗರದು ಎಂಬುದು ಅಷ್ಟೇ ಸತ್ಯ. ಲೇಖಕರು ಜನಸಾಮಾನ್ಯರ ಕಷ್ಟ ಸುಖಗಳ ಕುರಿತಾಗಿ ಬರೆದರೆ ಖಂಡಿತವಾಗಿಯೂ ಅದಕ್ಕೆ ಓದುಗರು ಇದ್ದೇ ಇರುವರು. ಇದು ಲೇಖಕರ ಮತ್ತು ಓದುಗರ ಮಧ್ಯ ಅವ್ಯಕ್ತ ಬಂಧ ಏರ್ಪಡಲು ಕಾರಣವಾಗುತ್ತದೆ.

ನಾನೇನು ಮಹಾನ್ ಸಾಹಿತಿ ಅಥವಾ ಲೇಖಕ ಎಂಬ ಭ್ರಮೆಯಿಲ್ಲ. ನಾನು ನನಗೆ ತೋಚಿದ್ದನ್ನು ಗೀಚುವ ಪ್ರಕ್ರೀಯೆ ಜಾರಿಯಲ್ಲಿದೆ. ನಾನು ಗೀಚಿದ ಕೆಲ ಸಾಲುಗಳನ್ನು ಬಹಳ ಖುಷಿಯಿಂದ ಓದಿ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಸಹೃದಯ ಓದುಗರು.  ಕೇವಲ ಬೆರಳೆಣಿಕೆಯಷ್ಟು ಪುಸ್ತಕ ಪ್ರಕಟವಾಗಿವೆ.  ನನ್ನ ಕೃತಿಗಳನ್ನು ಕೊಂಡು ಓದುತ್ತಿರುವ ಓದುಗ ಪ್ರಭುಗಳು ನಿಜಕ್ಕೂ ಸಾಹಿತ್ಯಾಭಿಮಾನಿಗಳು . ಅವರಿಗೆ ನನ್ನ ಕಡೆಯಿಂದ  ಕೃತಜ್ಞತೆಯ ಮಾತುಗಳ ಹೇಳುವ ಹೊರತು ಮತ್ತೇನು ಹೇಳಲಿ?

ನಾನು ಬರೆದ ಬರಹಗಳನ್ನು ಓದಿ ಸೂಕ್ತವಾದ ತಿದ್ದುಪಡಿ ನೀಡಿ ಸಲಹೆಗಳನ್ನು ನೀಡುತ್ತಾ ಈಗಲೂ ನಾನು ಬರೆದ ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಕನ್ನಡ ಬಾಷಾ ಶಿಕ್ಷಕರು ಹಾಗೂ ಉಪಪ್ರಾಂಶುಪಾಲರಾದ ಇಸಾಫುಲ್ಲರವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರಾದ ತಿಪ್ಪೇಸ್ವಾಮಣ್ಣ ರವರು ಮುಖಪುಟದಲ್ಲಿ ನನ್ನ ಬರೆಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿದ್ದಾರೆ ಅವರಿಗೆ ಧನ್ಯವಾದಗಳನ್ನು ಹೇಳದೇ ಹೇಗಿರಲಿ.
ಗೌರಿಬಿದನೂರಿನ ಎಸ್ಸೆಲ್ಲೆನ್ ಪೋಟೋ ಸ್ಟುಡಿಯೋದ ಮಾಲಿಕರು ಸಹೃದಯರಾದ ವಿಜಯಪ್ಪ ರವರು ನನ್ನ ಬರೆಹಗಳನ್ನು ಓದಿ ಪ್ರತಿ ದಿನ ಪ್ರತಿಕ್ರಿಯೆ ನೀಡೇ ನೀಡುವರು ನನ್ನ ಕವಿತೆಗಳು ಮತ್ತು ಸಾಹಿತ್ಯದ ಬಗ್ಗೆ ಅವರಿಗಿರುವ ಪ್ರೀತಿಗೆ ನನ್ನ ಕಡೆಯಿಂದ ನಮನಗಳು.
ಶಾಲೆಗೆ ಓದಿ ಕಲಿತದ್ದು ಕಡಿಮೆ ಜೀವನದಲ್ಲಿ ಕಲಿತದ್ದು ಹೆಚ್ಚು ಗಂಡನ ಹೂವಿನ ವ್ಯಾಪಾರದಲ್ಲಿ ನೆರವಾಗುವ ಸದ್ಗೃಹಿಣಿ ಅರುಣಾ ಗಂಗಾಧರ್  ರವರು ನನ್ನ ಬ್ಲಾಗ್ ಮತ್ತು ಅಂಕಣಗಳ ಖಾಯಂ ಓದುಗರು ಅವರ ಮುಕ್ತ ಅಭಿಪ್ರಾಯಗಳು ಪ್ರಭುದ್ದತೆಯಿಂದ ಕೂಡಿರುತ್ತವೆ.

ಆಗಮಿಕರು ಅನ್ನಪೂರ್ಣೇಶ್ವರಿ ದೇವಿಯ ಉಪಾಸಕರಾದ ಚಂದನ್ ಶರ್ಮ ರವರು ನನ್ನ ಗಜಲ್ ಮತ್ತು ಲೇಖನದ ಅಭಿಮಾನಿಗಳು ಅವರಿಗೆ ಇಷ್ಟವಾದ ಗಜಲ್ ಮತ್ತು ಲೇಖನಗಳ ಬಗ್ಗೆ ಕರೆ ಮಾಡಿ ಮೆಚ್ಚುಗೆ ಸೂಚಿಸುವರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣ ಶಿಕ್ಷಕರು ಹಾಗೂ ಆತ್ಮೀಯರಾದ ಸದಾಶಿವರೆಡ್ಡಿ ಸರ್ ರವರಂತೂ ನನ್ನ ಎಲ್ಲಾ ಪುಸ್ತಕಗಳನ್ನು ಕೊಂಡು ಓದುತ್ತಾ ಆ ಪುಸ್ತಕಗಳ ಬಗ್ಗೆ ನಾಲ್ಕು ಸಾಲಿನ  ಅಭಿಪ್ರಾಯಗಳನ್ನು  ಬರೆದು ಹಂಚಿಕೊಳ್ಳುತ್ತಾರೆ. ಅವರಿಗೆ ನಮನಗಳು.ಸಮಾಜ ಸೇವಕರಾದ ಬಿ. ಎನ್ .  ಶ್ರೀನಿವಾಸ್ ರವರು ನನ್ನ ರಚನೆಯ ಖಾಯಂ ಓದುಗರು ಹಾಗೂ ನನ್ನ ಪುಸ್ತಕಗಳ ಪ್ರಕಟಿಸಲು ಧನಸಹಾಯ ಮಾಡಿರುವ ಸಹೃದಯರು ಅವರ ಸಾಹಿತ್ಯ ಪ್ರೀತಿಗೆ ಶರಣು.
ನನ್ನ ಗೆಳೆಯ ಜಬೀಉಲ್ಲಾ ವೃತ್ತಿಯಲ್ಲಿ ಪೋಲಿಸ್ ಆದರೂ ಸಾಹಿತ್ಯಾಭಿಮಾನಿ. ಉಚಿತವಾಗಿ ಅಥವಾ  ಡಿಸ್ಕೌಂಟದ ನನ್ನ ಎಲ್ಲಾ ಪುಸ್ತಕಗಳನ್ನು ಮುಖ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಓದಿ ಪ್ರೋತ್ಸಾಹ ನೀಡುತ್ತಲೇ ಇದ್ದಾನೆ.
ಇವರ ಜೊತೆಗೆ  ಗೌರೀಶ್ ವೀರಣ್ಣ,ಭಾನುಪ್ರಕಾಶ ಮಣಿವಾಲ ರವರು. ಕವಿಗಳು ಮತ್ತು ಲೇಖಕರಾದ ಜಿ ವೆಂಕಟೇಶ ರವರು, ಶಿಕ್ಷಕರಾದ ನರಸಿಂಹಮೂರ್ತಿ  ರವರು. ಉಪನ್ಯಾಸಕರಾದ ಸಿ ಎನ್ ಶಂಕರ ರೆಡ್ಡಿ ರವರು. ವರ್ತಕರಾದ ನವೀನ್ ರವರು, ವಿಕಲಚೇತನ ಉದ್ಯಮಿಯಾದ ಉದಯಕುಮಾರ್ ರವರು, ನನ್ನ  ವಿದ್ಯಾರ್ಥಿಗಳಾದ ಮಂಜುಳ, ಫಣೀಂದ್ರ, ವಿಶ್ವನಾಥ್,  ವೈಶಾಲಿ , ಸ್ವಾತಿ.  ಶಿಕ್ಷಕರಾದ ಸುರೇಶ್ ರವರು.ಶಿಕ್ಷಕರಾದ ಸಪ್ತಗಿರಿ ರವರು ಸಿಎಮ್ ಸಿ ಎ ದ ಮರುಳಪ್ಪ ರವರು,
ವಿದ್ಯಾಧರ ದುರ್ಗೇಕರ್ ರವರು, ನಿಖಿಲ್ ರವರು , ಸಂಘಟಕರಾದ
ಸಿದ್ದು ಮೂರ್ತಿ ರವರು . ಕವಿಗಳಾದ  ರವಿಕುಮಾರ್ ರವರು ,ಮುರಾರ್ಜಿ ಶಾಲೆಯ  ಪ್ರಾಂಶುಪಾಲರಾದ ಲೋಕೇಶ್ ರವರು .ಈವಿ ಕಂಪನಿಯ ಮಾಲಿಕರು ಮತ್ತು ಲೇಖಕರಾದ ಕಾಂತರಾಜು ರವರು .....
ಇನ್ನೂ ಪಟ್ಟಿ ಮುಂದುವರೆಯುತ್ತದೆ... ಕೆಲ ಹೆಸರುಗಳು ಸೇರುತ್ತವೆ... ರಾಜ್ಯಮಟ್ಟದ ಆಧಿಕಾರಿಗಳಾದ  ಟಿ‌ ಎಲ್ ಎಸ್ ಪ್ರೇಮ ರವರು ಮತ್ತು ಆತ್ಮೀಯ ಗೆಳೆಯ ಶಾಂತಕುಮಾರ್...ರವರು

ಹೀಗೆ ನನ್ನ ಬರೆಹಗಳನ್ನು ಓದುತ್ತಾ ಪ್ರೋತ್ಸಾಹ ಮಾಡುವ ಸಾಹಿತ್ಯಾಭಿಮಾನಿ ಸಹೃದಯರಿಗೆ ನನ್ನ ಮನದುಂಬಿದ ನಮನಗಳು .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.


01 ಫೆಬ್ರವರಿ 2022

ಅವಕಾಶವಾದಿಗಳು .ಕವನ



ಅವಕಾಶವಾದಿಗಳು.


ಅವಕಾಶವಾದಿಗಳು ಸ್ವಾಮಿ

ನಾವು ಅವಕಾಶವಾದಿಗಳು .


ದೇಶದ ಭದ್ರತೆಯ ಬಗ್ಗೆ 

ನೂರಾರು ಮಾತುಗಳು .

ಸೈನ್ಯಕ್ಕೆ ಸೇರಲು ಪಕ್ಕದ

ಮನೆಯ ಮಗನಿರಲಿ 

ಎಂಬ ಅವಕಾಶವಾದಿಗಳು.


ಮಾತೃಭಾಷೆಯೇ ಮೇಲು

ಎಂದು ಬೀದಿಯಲಿ ಭಾಷಣ 

ಬಿಗಿವ ಶೂರರು .ನಮ್ಮ ಮಕ್ಕಳು

ಮಾತ್ರ ಕಾನ್ವೆಂಟ್ ಕೂಸುಗಳಾಗಲಿ

ಎಂಬ ಅವಕಾಶವಾದಿಗಳು.


ನಾವು ಕಷ್ಟದಲಿದ್ದಾಗ ಇತರರ  ಸಹಾಯ ಬೇಡುತಾ ,ನಮಗೆ 

ಅನುಕೂಲತೆಯಿದ್ದಾಗ ಸಾವಕಾಶವಾಗಿ ಜಾಗ ಖಾಲಿ 

ಮಾಡುವ ಅವಕಾಶವಾದಿಗಳು.


ಮತದಾನದ ವೇಳೆ ದುಡ್ಡಿಗೆ ,ಹೆಂಡಕ್ಕೆ

ಮತವ ಮಾರಿಕೊಂಡವರು .

ಭ್ರಷ್ಟ ರಾಜಕಾರಣಿಗಳು ಲೂಟಿ

ಹೊಡೆಯುವಾಗ ಅವರ ಬೆನ್ನ ಹಿಂದೆ

ಬೈಯುತಾ ಸಾಗುವ ಅವಕಾಶವಾದಿಗಳು.


ಅವಕಾಶವಾದಿಗಳು ಸ್ವಾಮಿ

ನಾವು ಅವಕಾಶವಾದಿಗಳು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು.

 

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ಎಂ. ವಿ .ಶಂಕರಾನಂದ ರವರ ಕೃತಿ ವಿಮರ್ಶೆ*೧/೨/೨೨