ದೋತಿ!
ಸೀಡಿ, ಡೀವಿಡಿ ಪುರಾಣ
ನೋಡಿದ ಮೇಲೆಇ ಬೇಸರವಾಗಿ
ಜನರು ತೀರ್ಮಾನಿಸಿದ್ದರು ನೋಡಬಾರದೆಂದು
ರಾಜಕಾರಣಿಗಳ ಮೂತಿ|
ಸದನದಲ್ಲಾದರೂ ಗಂಭೀರವಾಗಿ
ಇರುವರೆಂದು ನಿರೀಕ್ಷೆ ಇತ್ತು
ಅಲ್ಲೂ ಉದುರಿಸಿಬಿಟ್ಟರು
ತಮ್ಮ ದೋತಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸೀಡಿ, ಡೀವಿಡಿ ಪುರಾಣ
ನೋಡಿದ ಮೇಲೆಇ ಬೇಸರವಾಗಿ
ಜನರು ತೀರ್ಮಾನಿಸಿದ್ದರು ನೋಡಬಾರದೆಂದು
ರಾಜಕಾರಣಿಗಳ ಮೂತಿ|
ಸದನದಲ್ಲಾದರೂ ಗಂಭೀರವಾಗಿ
ಇರುವರೆಂದು ನಿರೀಕ್ಷೆ ಇತ್ತು
ಅಲ್ಲೂ ಉದುರಿಸಿಬಿಟ್ಟರು
ತಮ್ಮ ದೋತಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ದುರ್ಗಾ ದೇವಿಯೆ ನಿನಗೆ
ನನ್ನ ನಮನ
ದಯಮಾಡಿ ನೀಡು
ನಮ್ಮೆಡೆಗೆ ಗಮನ.
ಮನದಲೇನೋ ಬೇಗೆ
ನಿಂತಲ್ಲೆ ತಲ್ಲಣ
ದುಷ್ಷರ ಹಿಂಸೆ, ದುರ್ಗುಣಕೆ
ತಳಮಳಿಸಿದೆ ಜನಗಣ.
ರಕ್ಕಸರ ತರಿದವಳೆ
ಶಿಷ್ಟರ ರಕ್ಷಿಪಳೆ
ತರಿದು ಬಿಡು ಖೂಳರ
ಸ್ವಚ್ಚವಾಗಲಿ ಇಳೆ .
ಅಜ್ಞಾನಿಗಳಲಿ ಜ್ಞಾನ
ಬೀಜವ ಬಿತ್ತಿ ಬಿಡು
ಜಗವಾಗಲಿ ಸುಖ
ಶಾಂತಿಯ ಬೀಡು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನಮ್ಮದು ಬಾಡಿಗೆ ಮನೆ ನೆಲ ಅಂತಸ್ತಿನ ಮನೆ ತಾರಸಿ ಲಭ್ಯವಿಲ್ಲ. ಮನೆ ಮುಂದೆ ಖಾಲಿ ಜಾಗವೂ ಇಲ್ಲ ಹಾಗಾಗಿ ತಾರಸಿ ತೋಟ ಮಾಡಲು ಅವಕಾಶ ಇಲ್ಲ .
ಜೊತೆಗೆ ಸ್ವಲ್ಪ ನಾನು ಸೋಮಾರಿ ಅದು ಕೂಡಾ ಕಾರಣ ಇರಬಹುದು .
ನನಗೂ ಆಸೆ
ಬೆಳೆಸಲು ಕೈತೋಟ
ಬಳಸಿಕೊಂಡು ಮನೆಯ
ಖಾಲಿ ಜಾಗ|
ಇದುವರೆಗೂ ಅದು
ಜಾರಿಗೆ ಬಂದಿಲ್ಲ
ಏಕೆಂದರೆ ನನಗಿದೆ ತುಸು
ಮುಂದೂಡುವ ರೋಗ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ