06 ಸೆಪ್ಟೆಂಬರ್ 2021

ಪಾಪ ಪುಣ್ಯ .ಲೇಖನ


 ಹೌದು ..

ಧರ್ಮ ,ಅದ್ಯಾತ್ಮ, ಒಳಿತು ಕೆಡುಕಿನ ಬಗ್ಗೆ ನಂಬಿಕೆ ಇರುವ ನಾನು ಪಾಪ ಪುಣ್ಯ ಗಳನ್ನು ನಂಬುತ್ತೇನೆ .

ಒಳಿತು ಮಾಡಿದರೆ ಪುಣ್ಯ ಸಂಪಾದನೆ ಕೆಡುಕುಗಳು ಪಾಪಕ್ಕೆ ಕಾರಣ ಎಂದು ನಂಬಿರುವ ಸನಾತನ ಪರಂಪರೆಯನ್ನು ನಾವು ಗೌರವಿಸಲೇಬೇಕು. ಅರಿಷಡ್ವರ್ಗಗಳ ನಿಯಂತ್ರಣ ದಲ್ಲಿ ಇಟ್ಟು ಕೊಂಡು ,ಧರ್ಮ ಅರ್ಥ ಕಾಮ ಮೋಕ್ಷ ಮಾರ್ಗ ಅನುಸರಿಸಿದರೆ ಪುಣ್ಯ ಸಂಪಾದನೆ ಸಾದ್ಯ.   ಇದಕ್ಕೆ ಪರೋಪಕಾರ   ದಾನ ಧರ್ಮ, ಸತ್ಸಂಗ ಮುಂತಾದವು ಸಹ ಸಹಕಾರಿ .


ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು, ಹಿಂಸೆ ,  ಪರಪೀಡನೆ, ಪರನಿಂದೆ ಮುಂತಾದವು ಪಾಪದ ಕೊಡ ತುಂಬಲು ಕಾರಣವಾಗುತ್ತವೆ.


ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಶಿಕ್ಷಕರು ನಾವು ಒಳ್ಳೆಯ ಕೆಲಸ ಮಾಡಿದರೆ ನಮ್ಮ ಬಲ ಭುಜ ದಲ್ಲಿ ಇರುವ ದೂತರು ‌ಲೆಕ್ಕ ಇಟ್ಟುಕೊಳ್ಳುವರು ಪಾಪಕಾರ್ಯ ಮಾಡಿದರೆ ಎಡಭುಜದ ದೂತರು ಲೆಕ್ಕ ಇಟ್ಟುಕೊಂಡು ಯಮನಿಗೆ ವರದಿ ನೀಡುವರು. ಪಾಪ ಜಾಸ್ತಿಯದರೆ ಕುದಿಯುವ ಎಣ್ಣೆ ಬಾಣಲೆಯಲ್ಲಿ ನಮ್ಮನ್ನು ತೇಲಿಸುವರು ಎಂದು ಹೇಳುತ್ತಿದ್ದುದು ನೆನಪಾಗುತ್ತದೆ.


ಜನರು ಅನೈತಿಕ ಚಟುವಟಿಕೆಗಳಲ್ಲಿ ಅಧರ್ಮದ ಕಾರ್ಯದಲ್ಲಿ ತೊಡುಗುವುದನ್ನು ತಡೆಯಲು ಇಂತಹ ಕಥೆಗಳು ಸ್ವಲ್ಪ ಮಟ್ಟಿಗಾದರೂ ಸಹಾಯಕ ಎಂಬುದರಲ್ಲಿ ಸಂದೇಹ ವಿಲ್ಲ. ಇತ್ತೀಚೆಗೆ ಅಧರ್ಮಿಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗಿ, ಪಾಪಕಾರ್ಯಗಳು ಹೆಚ್ಚಾಗುತ್ತಿವೆ ಎನಿಸುತ್ತದೆ. ಇದಕ್ಕೆ ಪೂರಕವಾಗಿ ನಾಸ್ತಿಕರ ವಾದ ಮುಗಿಲು ಮುಟ್ಟುತ್ತದೆ. ಅನ್ಯಾಯ ಅಕ್ರಮ ಮಾಡಿದವರು ಬಹಳ ಸುಖವಾಗಿರುವರು ಎಂಬ ಒಣ ಸಮರ್ಥನೆ ನೀಡುವರು. ಅದಕ್ಕೆ ಪ್ರತಿವಾದವಾಗಿ ಅವರು ಯಾವಾಗಲೋ ಮಾಡಿದ ಪುಣ್ಯ ಕಾರ್ಯಗಳು ಅವರ ಕಾಪಾಡುವವು ಎಂಬ  ಪ್ರತಿವಾದವೂ ಚಿಂತನಾರ್ಹ


ನಾಸ್ತಿಕರಿಗೆ ದೇವರು ಧರ್ಮ ಪಾಪ ಪುಣ್ಯ ದ  ಬಗ್ಗೆ  ನಂಬಿಕೆ ಇರದಿದ್ದರೆ 

ಸ್ವಾಮಿ ವಿವೇಕಾನಂದರ ವಾಣಿಯಂತೆ ಪರೋಪಕಾರವೇ ಪುಣ್ಯ ಪರಪೀಡನೆಯೇ ಪಾಪ  ಎಂಬ ಭಾವನೆ ಹೊಂದಿದರೆ ಸಮಾಜದ ಅಕ್ರಮಗಳು ಅನೈತಿಕ ಚಟುವಟಿಕೆಗಳು ಕಡಿಮೆಯಾಗಿ ಸರ್ವರೂ  ನೆಮ್ಮದಿಯ ಜೀವನ ನಡೆಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 ಸೆಪ್ಟೆಂಬರ್ 2021

ಶಿಕ್ಷಕನಾಗಿ ಮಕ್ಕಳಿಗೆ ಹತ್ತು ಸಲಹೆಗಳು


 



ಶಿಕ್ಷಕರ ದಿನದ ಶುಭಾಶಯಗಳು



ಶಿಕ್ಷಕನಾಗಿ ಮಧ್ಯಮ ವಯಸ್ಸಿನ ಹಿರಿಯನಾಗಿ 

ಮಕ್ಕಳಿಗೆ ನೀಡುವ ೧೦  ಸಲಹೆಗಳು 


೧ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ

೨ ಗುರು ಹಿರಿಯರ ಗೌರವಿಸಿ

೩ ಸುಲಭವಾಗಿ ಸೋಲು ಒಪ್ಪಬೇಡಿ

೪ ಯಶಸ್ವಿಯಾಗಿ ಮುಂದಡಿ ಇಡಿ

೫ ಯಶಸ್ಸಿಗೆ ಅಡ್ಡ ದಾರಿ ಇಲ್ಲ ಪರಿಶ್ರಮ ಮರೆಯದಿರಿ

೬ ನಿಮ್ಮಿಷ್ಟದ ಗುರಿ ಆರಿಸಿಕೊಂಡು ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಿ

೭ ಇತರರಿಂದ ಸ್ಪೂರ್ತಿ ಪಡೆಯಿರಿ ಆದರೆ ಹೋಲಿಕೆ ಮಾಡಿಕೊಳ್ಳಬೇಡಿ

೮ ನಾಡು ನುಡಿಯ ಬಗ್ಗೆ ಗೌರವವಿರಲಿ

೯ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆ ಗೆ ಮುಂದಾಗಿ

೧೦ ಜವಾಬ್ದಾರಿಯುತ ನಾಗರಿಕರಾಗಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮಹಾರಾಜ ಕಿರುಕಥೆ

 

ಮಹಾರಾಜ .


ಮಲ್ಲಪ್ಪ ಗಾಯತ್ರಮ್ಮ ದಂಪತಿಗಳು ಅನಕ್ಷರಸ್ಥ ರಾದರೂ ಹಳ್ಳಿಯಲ್ಲಿ ‌ಕೂಲಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 

ಬಹಳ ದಿನಗಳ ನಂತರ ದಂಪತಿಗೆ ಗಂಡು ಮಗುವಾಯಿತು . 

ಮಗನಿಗೆ ಮಹಾರಾಜ ಎಂದು ನಾಮಕರಣ ಮಾಡಿದರು.

ಮಗ ನಮ್ಮಂತೆ ಅನಕ್ಷರಸ್ಥರಾಗುವುದು ಬೇಡ ಅಕ್ಷರ ಕಲಿಯಲಿ ಎಂದು ಒಳ್ಳೆಯ ಶಾಲೆಗೆ ಸೇರಿಸಿದರು.

ಮಹಾರಾಜನಿಗೆ ವಿದ್ಯೆ ಹತ್ತಲಿಲ್ಲ ಎಸ್ಸೆಲ್ಸಿ ಪೇಲಾಗಿ ಊರಲ್ಲಿ ಅಲೆಯಲು ಶುರುಮಾಡಿದ .

ಸಹವಾಸ ದೋಷ, ಟೀನೇಜ್ ನ ವಯೋಸಹಜ ಕಾಮನೆಗಳ ಫಲವಾಗಿ ಲವ್ ನಲ್ಲಿ ಬಿದ್ದ ಮಗ ಅನ್ಯಜಾತಿಯ ಹುಡುಗಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಬಂದ.

ಒಲ್ಲದ ಮನಸ್ಸಿನಿಂದ ಒಪ್ಪಿ ಸೊಸೆ ಯನ್ನು ಮನೆತುಂಬಿಸಿಕೊಂಡ ಅತ್ತೆಗೆ ಒಂದು ತಿಂಗಳಲ್ಲೇ ಆಘಾತ ಕಾದಿತ್ತು.ಮಗನಿರದ ವೇಳೆ ಜಗಳ ತೆಗೆದ ಸೊಸೆ ಅತ್ತೆಯ ಮೇಲೆ ಕುಡುಗೋಲು ಹಿಡಿದು ಹೊಡೆಯಲು ಹೋದಳು .

ಮಗ ಅಸಹಾಯಕತೆ ವ್ಯಕ್ತ ಪಡಿಸಿ ಅಪ್ಪ ಅಮ್ಮನ ತೊರೆದು ನಗರಕ್ಕೆ ವಲಸೆ ಹೋಗಲು ತೀರ್ಮಾನಿಸಿದ.

ಹೆಂಡತಿಯಿಂದ ಅಪ್ಪ ಅಮ್ಮನ ತೊರೆದ ಬಗ್ಗೆ ಚಿಂತಿಸಿ ಮಹಾರಾಜ ಕುಡಿತದ ದಾಸನಾದ.

ಇತ್ತ ವೃದ್ದ ದಂಪತಿಗಳು ಮಗ ಬರುವನು ಎಂದು ಈಗಲೂ ಆಸೆಗಣ್ಣಿನಿಂದ ದಾರಿ ನೋಡುತ್ತಿರುವರು.....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ